AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಲಪಾತಗಳಿಗೆ ಜೀವ ಕಳೆ ತಂದ ಮುಂಗಾರು: ಪ್ರವಾಸಿಗರನ್ನ ಸೆಳೆಯುತ್ತಿದೆ ಮಾಗೋಡು ಫಾಲ್ಸ್

ಉತ್ತರ ಕನ್ನಡದ ಮಾಗೋಡು ಜಲಪಾತವು ಮುಂಗಾರು ಮಳೆಯಿಂದ ತುಂಬಿ ಹರಿಯುತ್ತಿದೆ. 600 ಅಡಿ ಆಳದ ಕಂದಕದಲ್ಲಿ ಹರಿಯುವ ಬೆಡ್ತಿ ನದಿಯ ಎರಡು ಹಂತದ ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕಣ್ಣಿಗೆ ಕಾಣುವ ಕೆಲವೇ ಮೀಟರ್ ಬೆಡ್ತಿ ನದಿಯ ಪಥ ಮಾತ್ರ ನಯನ ಮನೋಹರ. ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಭೇಟಿ ನೀಡಲು ಸೂಕ್ತ ಸ್ಥಳವಾಗಿದೆ.

ಸೂರಜ್​, ಮಹಾವೀರ್​ ಉತ್ತರೆ
| Updated By: ಗಂಗಾಧರ​ ಬ. ಸಾಬೋಜಿ

Updated on: May 30, 2025 | 11:16 AM

ಕರ್ನಾಟಕದಲ್ಲಿ ಸುರಿಯುತ್ತಿರುವ ಪೂರ್ವ ಮುಂಗಾರು ಮಳೆ ಕೆಲವು ಕಡೆ ಭಾರೀ ಅವಾಂತರ ಸೃಷ್ಟಿಸುತ್ತಿದ್ದರೆ, ಅತ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ ಬತ್ತಿದ ಜಲಪಾತಗಳಿಗೆ ಜೀವ ಕಳೆ ಬಂದಿದೆ. ಮೇ ತಿಂಗಳಲ್ಲಿ ತುಂಬಿ ಉಕ್ಕಿ ಹರಿಯುತ್ತಿರುವ ಜೀವ ಜಲ ಪ್ರವಾಸಿಗರನ್ನು ಸೆಳೆಯುತ್ತಿದೆ.

ಕರ್ನಾಟಕದಲ್ಲಿ ಸುರಿಯುತ್ತಿರುವ ಪೂರ್ವ ಮುಂಗಾರು ಮಳೆ ಕೆಲವು ಕಡೆ ಭಾರೀ ಅವಾಂತರ ಸೃಷ್ಟಿಸುತ್ತಿದ್ದರೆ, ಅತ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ ಬತ್ತಿದ ಜಲಪಾತಗಳಿಗೆ ಜೀವ ಕಳೆ ಬಂದಿದೆ. ಮೇ ತಿಂಗಳಲ್ಲಿ ತುಂಬಿ ಉಕ್ಕಿ ಹರಿಯುತ್ತಿರುವ ಜೀವ ಜಲ ಪ್ರವಾಸಿಗರನ್ನು ಸೆಳೆಯುತ್ತಿದೆ.

1 / 7
ದಟ್ಟ ಅರಣ್ಯ ಹೊತ್ತುಕೊಂಡಿರುವ 600 ಅಡಿ ಆಳವಾದ ಕಂದಕ, ಕಂದಕದ ಮಧ್ಯೆ ಎರಡು ಹಂತದ ಜಲಪಾತ, ಇನ್ನೊಂದು ಕಡೆ ಎರಡು ಗುಡ್ಡಗಳ ಮಧ್ಯ ಹಾದು ಹೋಗುತ್ತಿರುವ ಬೆಡ್ತಿ ನದಿ. ಈ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪೂರ ತಾಲೂಕಿನ ಮಾಗೋಡು ಫಾಲ್ಸ್​ನಲ್ಲಿ.

ದಟ್ಟ ಅರಣ್ಯ ಹೊತ್ತುಕೊಂಡಿರುವ 600 ಅಡಿ ಆಳವಾದ ಕಂದಕ, ಕಂದಕದ ಮಧ್ಯೆ ಎರಡು ಹಂತದ ಜಲಪಾತ, ಇನ್ನೊಂದು ಕಡೆ ಎರಡು ಗುಡ್ಡಗಳ ಮಧ್ಯ ಹಾದು ಹೋಗುತ್ತಿರುವ ಬೆಡ್ತಿ ನದಿ. ಈ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪೂರ ತಾಲೂಕಿನ ಮಾಗೋಡು ಫಾಲ್ಸ್​ನಲ್ಲಿ.

2 / 7
ಹುಬ್ಬಳ್ಳಿ ತಾಲೂಕಿನ ಉಣಕಲ್ ಗ್ರಾಮದಲ್ಲಿ ಜನ್ಮ ತಾಳುವ ಬೆಡ್ತಿ ನದಿ, ಪಶ್ಚಿಮ ಘಟ್ಟಗಳನ್ನು ಸೀಳಿ ಅರಬ್ಬಿ ಸಮುದ್ರ ಸೇರುವ ದಾರಿ ಮಾತ್ರ ಅತಿ ಆಕರ್ಷಣೀಯ. ರಾಜ್ಯದ ಅತಿ ಚಿಕ್ಕ ನದಿಗಳಲ್ಲಿ ಒಂದಾದ ಬೆಡ್ತಿ ನದಿ, ಯಲ್ಲಾಪುರ ತಾಲೂಕಿನ ಮಾಗೋಡು ಗ್ರಾಮದಲ್ಲಿನ ಸುಮಾರು 600 ಅಡಿ ಆಳವಾದ ಕಂದಕದ ಮಧ್ಯ ಹೋದಾಗ ಎರಡು ಹಂತದ ಜಲಪಾತಗಳನ್ನು ಸೃಷ್ಟಿಸುತ್ತೆ.

ಹುಬ್ಬಳ್ಳಿ ತಾಲೂಕಿನ ಉಣಕಲ್ ಗ್ರಾಮದಲ್ಲಿ ಜನ್ಮ ತಾಳುವ ಬೆಡ್ತಿ ನದಿ, ಪಶ್ಚಿಮ ಘಟ್ಟಗಳನ್ನು ಸೀಳಿ ಅರಬ್ಬಿ ಸಮುದ್ರ ಸೇರುವ ದಾರಿ ಮಾತ್ರ ಅತಿ ಆಕರ್ಷಣೀಯ. ರಾಜ್ಯದ ಅತಿ ಚಿಕ್ಕ ನದಿಗಳಲ್ಲಿ ಒಂದಾದ ಬೆಡ್ತಿ ನದಿ, ಯಲ್ಲಾಪುರ ತಾಲೂಕಿನ ಮಾಗೋಡು ಗ್ರಾಮದಲ್ಲಿನ ಸುಮಾರು 600 ಅಡಿ ಆಳವಾದ ಕಂದಕದ ಮಧ್ಯ ಹೋದಾಗ ಎರಡು ಹಂತದ ಜಲಪಾತಗಳನ್ನು ಸೃಷ್ಟಿಸುತ್ತೆ.

3 / 7
ವಿಶೇಷ ಎಂದರೆ ತನ್ನ ಪಥವನ್ನ ಪೂರ್ತಿಯಾಗಿ ಪಶ್ಚಿಮ ಘಟ್ಟಗಳಲ್ಲಿ ಮುಚ್ಚಿಕೊಂಡಿರುವ ಬೆಡ್ತಿ ನದಿ, ಕೆಲವೇ ಮೀಟರ್ ಪಥ ಮಾತ್ರ ಕಣ್ಣಿಗೆ ಬಿಳುತ್ತೆ. ಆದರೆ ಕಣ್ಣಿಗೆ ಕಾಣುವ ಕೆಲವೇ ಮೀಟರ್ ಬೆಡ್ತಿ ನದಿಯ ಪಥ ಮಾತ್ರ ನಯನ ಮನೋಹರ.

ವಿಶೇಷ ಎಂದರೆ ತನ್ನ ಪಥವನ್ನ ಪೂರ್ತಿಯಾಗಿ ಪಶ್ಚಿಮ ಘಟ್ಟಗಳಲ್ಲಿ ಮುಚ್ಚಿಕೊಂಡಿರುವ ಬೆಡ್ತಿ ನದಿ, ಕೆಲವೇ ಮೀಟರ್ ಪಥ ಮಾತ್ರ ಕಣ್ಣಿಗೆ ಬಿಳುತ್ತೆ. ಆದರೆ ಕಣ್ಣಿಗೆ ಕಾಣುವ ಕೆಲವೇ ಮೀಟರ್ ಬೆಡ್ತಿ ನದಿಯ ಪಥ ಮಾತ್ರ ನಯನ ಮನೋಹರ.

4 / 7
ಮಳೆಯ ಅಬ್ಬರ ಹೆಚ್ಚಾದ ಹಿನ್ನೆಲೆ, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲಾ ಫಾಲ್ಸ್​ಗಳಿಗೆ ನಿರ್ಬಂಧ ಹೇರಲಾಗತ್ತೆ. ಆದರೆ ಅತ್ಯಂತ ಸೇಫ್ ಆಗಿರುವ ಮಾಗೋಡ್ ಫಾಲ್ಸ್​ಗೆ ನಿರ್ಬಂಧ ಮಾಡುವುದು ಭಾರೀ ವಿರಳ. ಏಕೆಂದರೆ ಈ ಜಲಪಾತದಲ್ಲಿ ಆಟ ಆಡಲು ಹಾಗೂ ಬಂಡೆ ಕಲ್ಲು ಹತ್ತಿ ಫೋಟೋ ತೆಗೆದುಕೊಳ್ಳಲು ಇಲ್ಲಿ ಅವಕಾಶ ಕಡಿಮೆ. ಹಾಗಾಗಿ ಇಲ್ಲಿಗೆ ಕುಟುಂಬ ಸಮೇತ ಬಂದು ಪ್ರಕೃತಿ ಸೌಂದರ್ಯವನ್ನ ಕಣ್ತುಂಬಿಕೊಳ್ಳಬಹುದು.

ಮಳೆಯ ಅಬ್ಬರ ಹೆಚ್ಚಾದ ಹಿನ್ನೆಲೆ, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲಾ ಫಾಲ್ಸ್​ಗಳಿಗೆ ನಿರ್ಬಂಧ ಹೇರಲಾಗತ್ತೆ. ಆದರೆ ಅತ್ಯಂತ ಸೇಫ್ ಆಗಿರುವ ಮಾಗೋಡ್ ಫಾಲ್ಸ್​ಗೆ ನಿರ್ಬಂಧ ಮಾಡುವುದು ಭಾರೀ ವಿರಳ. ಏಕೆಂದರೆ ಈ ಜಲಪಾತದಲ್ಲಿ ಆಟ ಆಡಲು ಹಾಗೂ ಬಂಡೆ ಕಲ್ಲು ಹತ್ತಿ ಫೋಟೋ ತೆಗೆದುಕೊಳ್ಳಲು ಇಲ್ಲಿ ಅವಕಾಶ ಕಡಿಮೆ. ಹಾಗಾಗಿ ಇಲ್ಲಿಗೆ ಕುಟುಂಬ ಸಮೇತ ಬಂದು ಪ್ರಕೃತಿ ಸೌಂದರ್ಯವನ್ನ ಕಣ್ತುಂಬಿಕೊಳ್ಳಬಹುದು.

5 / 7
ಇನ್ನು ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿ ಇರುವುದರಿಂದ, ಬೈಕ್ ಅಥವಾ ಕಾಲ್ನಡಿಗೆಯಲ್ಲಿ ಹೋಗಬೇಕಾಗುತ್ತೆ. ಹಾಗಾಗಿ ಬಹಳಷ್ಟು ಪ್ರವಾಸಿಗರು ಈ ವರ್ಷ ಬರಲು ಹಿಂದೇಟು ಹಾಕುತ್ತಿದ್ದಾರೆ.

ಇನ್ನು ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿ ಇರುವುದರಿಂದ, ಬೈಕ್ ಅಥವಾ ಕಾಲ್ನಡಿಗೆಯಲ್ಲಿ ಹೋಗಬೇಕಾಗುತ್ತೆ. ಹಾಗಾಗಿ ಬಹಳಷ್ಟು ಪ್ರವಾಸಿಗರು ಈ ವರ್ಷ ಬರಲು ಹಿಂದೇಟು ಹಾಕುತ್ತಿದ್ದಾರೆ.

6 / 7
ಒಟ್ಟಾರೆಯಾಗಿ ಅವಧಿ ಪೂರ್ವ ಅಬ್ಬರದಿಂದ ಸುರಿಯುತ್ತಿರುವ ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯ ಪ್ರಕೃತಿಯ ಸೌಂದರ್ಯಕ್ಕೆ ಜೀವ ಕಳೆ ಬಂದಿದೆ. ಆಮೆ ಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಬೇಗ ಮುಗಿದರೆ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಇನ್ನಷ್ಟು ಇಂಬು ಸಿಗಲಿದೆ.

ಒಟ್ಟಾರೆಯಾಗಿ ಅವಧಿ ಪೂರ್ವ ಅಬ್ಬರದಿಂದ ಸುರಿಯುತ್ತಿರುವ ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯ ಪ್ರಕೃತಿಯ ಸೌಂದರ್ಯಕ್ಕೆ ಜೀವ ಕಳೆ ಬಂದಿದೆ. ಆಮೆ ಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಬೇಗ ಮುಗಿದರೆ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಇನ್ನಷ್ಟು ಇಂಬು ಸಿಗಲಿದೆ.

7 / 7
Follow us
Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ