AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮದೊಂದು ಟೀಮನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಕಳಿಸುತ್ತಿದ್ದೇವೆ, ಸ್ಥಿತಿ ಮೇಲೆ ಹತೋಟಿ ಸಾಧಿಸುತ್ತೇವೆ: ಡಿಕೆ ಶಿವಕುಮಾರ್

ನಮ್ಮದೊಂದು ಟೀಮನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಕಳಿಸುತ್ತಿದ್ದೇವೆ, ಸ್ಥಿತಿ ಮೇಲೆ ಹತೋಟಿ ಸಾಧಿಸುತ್ತೇವೆ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: May 30, 2025 | 2:59 PM

ದಕ್ಷಿಣ ಕನ್ನಡ ಜಿಲ್ಲೆಗೆ ಒಂದು ಟೀಮನ್ನು ಕಳಿಸುತ್ತಿದ್ದೇವೆ, ಅಧಿಕಾರಿಗಳಳು ಯೋಚನೆ ಮಾಡುವ ರೀತಿ ಬೇರೆಯಾಗಿರುತ್ತದೆ, ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುವುದಿಲ್ಲ ಅಂತೇನೂ ಇಲ್ಲ, ಅದರೆ ಅವರು ತೆಗೆದುಕೊಳ್ಳುವ ತೀರ್ಮಾನಗಳು ಭಿನ್ನವಾಗಿರುತ್ತವೆ, ಕರಾವಳಿ ಭಾಗದ ಅಲ್ಪಸಂಖ್ಯತರು ಕೂಡ ಅತಂಕದಲ್ಲಿದ್ದಾರೆ, ಪಕ್ಷದ ಒಂದು ಟೀಮ್ ನಾಳೆಯೇ ಅಲ್ಲಿಗೆ ಹೋಗಲಿದೆ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು, ಮೇ 30: ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ (Progress Review Meeting) ನಂತರ ಮಾಧ್ಯಮಗಳೊಡನೆ ಮಾತಾಡಿದ ಡಿಕೆ ಶಿವಕುಮಾರ್ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಮಾನಗಳ ಮೇಲೆ ಸರ್ಕಾರ ಹತೋಟಿ ಸಾಧಿಸಲಿದೆ, ಬಿಜೆಪಿ ಮತ್ತು ಇತರ ಸಂಘಟನೆಗಳು ರಾಜ್ಯದ ಜನರನ್ನು ತುಂಬಾ ಪ್ರಚೋದನೆ ಮಾಡುತ್ತ್ತಿವೆ, ಇದರಿಂದ ಹಾನಿ ಯಾರಿಗೆ ಅನ್ನೋದನ್ನು ಅವರು ಅರ್ಥಮಾಡಿಕೊಳ್ಳಬೇಕು, ಜನ ಆತಂಕದಲ್ಲಿದ್ದಾರೆ ಮತ್ತು ಬೇರೆ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ, ಉದ್ಯೋಗಗಳನ್ನು ಸೃಷ್ಟಿಸುವ ಪ್ರಯತ್ನದಲ್ಲಿ ನಾವಿದ್ದೇವೆ, ಅದರೆ ಎಲ್ಲವೂ ಬೇಗನೇ ಹತೋಟಿಗೆ ಬರಲಿದೆ ಎಂದು ಹೇಳಿದರು.

ಇದನ್ನೂ ಓದಿ:   ಅವರ ಜಮೀನುಗಳಿಗೆ ಬೆಲೆ ಏರಬಹುದು: ರಾಮನಗರ ಹೆಸರು ಬದಲಾವಣೆಗೆ ಡಿಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಕಿಡಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ