- Kannada News Photo gallery Maharashtra CM Eknath Shinde unveils Shivaji Maharaj statue in Jammu Kashmir Kupwada
Shivaji Maharaj Statue: ಭಾರತ-ಪಾಕ್ ಗಡಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೋಹಿ ಪ್ರತಿಮೆ ಅನಾವರಣ
ಭಾರತ-ಪಾಕ್ ಗಡಿಯಲ್ಲಿ ಸ್ಥಾಪಿಸಲಾದ ಛತ್ರಪತಿ ಶಿವಾಜಿಯ ಮೊದಲ ಅಶ್ವಾರೋಹಿ ಪ್ರತಿಮೆಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಉದ್ಘಾಟಿಸಿದರು.
Updated on: Nov 07, 2023 | 5:01 PM

ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೋಹಿ ಪ್ರತಿಮೆ ಅನಾವರಣ ಸಮಾರಂಭ ಇಂದು(ನ.07) ನಡೆದಿದೆ.

ಭಾರತ-ಪಾಕ್ ಗಡಿಯಲ್ಲಿ ಸ್ಥಾಪಿಸಲಾದ ಛತ್ರಪತಿ ಶಿವಾಜಿಯ ಮೊದಲ ಅಶ್ವಾರೋಹಿ ಪ್ರತಿಮೆಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಉದ್ಘಾಟಿಸಿದರು.

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಭಾರತ-ಪಾಕ್ ಗಡಿಯಲ್ಲಿ ಸ್ಥಾಪಿಸಲಾದ ಛತ್ರಪತಿ ಶಿವಾಜಿಯ ಮೊದಲ ಪ್ರತಿಮೆ ಇದಾಗಿದ್ದು, ಇದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದ ಮುಖ್ಯಮಂತ್ರಿ ಏಕನಾಥ್ ಶಿಂಧೆ.

ರಾಷ್ಟ್ರೀಯ ರೈಫಲ್ಸ್-41 ರ ಸೈನಿಕರು ಈ ಕಾರ್ಯಕ್ರಮಕ್ಕಾಗಿ ಕೆಲ ದಿನಗಳಿಂದಲೇ ಬಹಳ ಉತ್ಸುಕರಾಗಿದ್ದು, ಕಳೆದ ವಾರ ಕುಪ್ವಾರಕ್ಕೆ ಶಿವಾಜಿಯ ಪ್ರತಿಮೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿತ್ತು.

ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಕುದುರೆ ಸವಾರಿ ಮಾಡುತ್ತಿರುವ ಮಾದರಿಯ ಕಾಶ್ಮೀರದ ಕುಪ್ವಾರದಲ್ಲಿರುವ ಪ್ರತಿಮೆ ಇದೀಗಾ ಎಲ್ಲರ ಗಮನಸೆಳೆದಿದೆ.



















