ಪ್ರೀತಿಸಿದ ಯುವಕನ ಜೊತೆ ಒಂದುವರೆ ವರ್ಷದ ಹಿಂದೆ ಅಷ್ಟೇ ಸಪ್ತಪದಿ ತುಳಿದಿದ್ದ 21 ವರ್ಷ ದರ್ಶಿನಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ,
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪತಿ ಸೂರ್ಯ ತನ್ನ ಪತ್ನಿ ದರ್ಶಿನಿಯನ್ನು ತಂದು ಕೆಆರ್.ಆಸ್ಪತ್ರೆಗೆ ಸೇರಿಸಿ ಬಳಿಕ ಮನೆಯವರಿಗೆ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ದರ್ಶಿನಿ ಸಾವಿನ ಸುತ್ತ ಅನುಮಾನಗಳು ವ್ಯಕ್ತವಾಗುತ್ತಿವೆ.
ಇನ್ನು ಗಂಡ ಸೂರ್ಯನೇ ಕೊಲೆ ಮಾಡಿರುವುದಾಗಿ ದರ್ಶಿನಿ ಕುಟುಂಬಸ್ಥರ ಆರೋಪಿಸುತ್ತಿದ್ದಾರೆ.
ಮನೆಯವರ ವಿರೋಧದ ನಡುವೆಯೂ ಸೂರ್ಯ, ದರ್ಶಿನಿ ಒಂದುವರೆ ವರ್ಷದ ಹಿಂದೆ ಮದುವೆಯಾಗಿದ್ದರು.
ಮದುವೆಯಾದ 4 ತಿಂಗಳಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ವರದಕ್ಷಿಣೆ ತರುವಂತೆ ಮಗಳನ್ನ ಹಿಂಸಿಸುತ್ತಿದ್ದ. ಇದೀಗ ನನ್ನ ಮಗಳನ್ನ ಕೊಲೆ ಮಾಡಿ ನಮ್ಮ ಮೇಲು ಹಲ್ಲೆ ಮಾಡಿದ್ದಾನೆ ಎಂದು ದರ್ಶನಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಸಂಬಂಧ ಕೆಆರ್ ಎಸ್ ಪೊಲೀಸ್ ಠಾಣೆಯಲ್ಲಿ ಸೂರ್ಯ ಹಾಗೂ ಆತನ ಮನೆಯವರ ವಿರುದ್ಧ ದೂರು ದರ್ಶಿನಿ ಕುಟುಂಬಸ್ಥರು ದೂರು ನೀಡಿದ್ದಾರೆ.
ಒಟ್ಟಿನಲ್ಲಿ ಪ್ರೀತಿಸಿದವನ್ನೇ ಕೈ ಹಿಡಿದು ಇನ್ನೇನು ಸಂಸಾದ ಬಂಡಿ ಸಾಗಿಸಬೇಕು ಎನ್ನುವಷ್ಟರಲ್ಲೇ ದರ್ಶಿನಿ ಮೃತಪಟ್ಟಿದ್ದು, ದುರಂತ. ಇನ್ನು ಈ ಸಾವಿನ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ಹಾಗೂ ಪೊಲಿಸರ ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬರಲಿದೆ.
ಒಟ್ಟಿನಲ್ಲಿ ಪ್ರೀತಿಸಿದವನ್ನೇ ಕೈ ಹಿಡಿದು ಇನ್ನೇನು ಸಂಸಾದ ಬಂಡಿ ಸಾಗಿಸಬೇಕು ಎನ್ನುವಷ್ಟರಲ್ಲೇ ದರ್ಶಿನಿ ಮೃತಪಟ್ಟಿದ್ದು, ದುರಂತ. ಇನ್ನು ಈ ಸಾವಿನ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ಹಾಗೂ ಪೊಲಿಸರ ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬರಲಿದೆ.
Published On - 12:50 pm, Fri, 11 August 23