AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟೀಲ್‌ ಪಾತ್ರೆಗಳಲ್ಲಿ ಈ ಕೆಲವು ಆಹಾರಗಳನ್ನು ಸಂಗ್ರಹಿಸಿಡಲೇಬಾರದು; ಏಕೆ ಗೊತ್ತಾ?

ಬಹುತೇಕ ಹೆಚ್ಚಿನವರ ಮನೆಯಲ್ಲಿ ಸ್ಟೀಲ್‌ ಪಾತ್ರೆಗಳು ಇದ್ದೇ ಇರುತ್ತದೆ. ಊಟದ ಡಬ್ಬಿಯಿಂದ ಹಿಡಿದು, ಬೇಳೆಕಾಳು, ಸಕ್ಕರೆ ಸೇರಿದಂತೆ ಇತ್ಯಾದಿ ದಿನಸಿ ಸಾಮಾಗ್ರಿಗಳನ್ನು ಸಂಗ್ರಹಿಸಿಡಲು ಇದೇ ಸ್ಟೀಲ್‌ ಪಾತ್ರೆಗಳನ್ನು ಬಳಕೆ ಮಾಡುತ್ತಾರೆ. ಆದ್ರೆ ಕೆಲವೊಂದಿಷ್ಟು ಆಹಾರ ಪದಾರ್ಥಗಳನ್ನು ಈ ಸ್ಟೀಲ್‌ ಪಾತ್ರೆಯಲ್ಲಿ ಸಂಗ್ರಹಿಸಿಡುವುದರಿಂದ ಆ ಆಹಾರದ ರುಚಿ ಹಾಳಾಗುವುದಲ್ಲದೆ, ಅದರ ಪೌಷ್ಠಿಕಾಂಶ ಮೌಲ್ಯವೂ ಕೂಡಾ ಕುಂಠಿತಗೊಳ್ಳುತ್ತದೆ. ಹಾಗಾದ್ರೆ ಯಾವೆಲ್ಲಾ ಆಹಾರಗಳನ್ನು ಸ್ಟೀಲ್‌ ಪಾತ್ರೆಯಲ್ಲಿ ಸಂಗ್ರಹಿಸಬಾರದು ಎಂಬುದನ್ನು ನೋಡೋಣ ಬನ್ನಿ.

ಮಾಲಾಶ್ರೀ ಅಂಚನ್​
|

Updated on: Jul 09, 2025 | 4:12 PM

Share
ಉಪ್ಪಿನಕಾಯಿ:  ಉಪ್ಪಿನಕಾಯಿಯನ್ನು ಯಾವುದೇ ಕಾರಣಕ್ಕೂ ಸ್ಟೀಲ್‌ ಪಾತ್ರೆಯಲ್ಲಿ ಸಂಗ್ರಹಿಸಬಾರದು. ಉಪ್ಪು, ಹುಳಿ, ಎಣ್ಣೆ ಇವೆಲ್ಲದರ ಮಿಶ್ರಣವಾದ ಉಪ್ಪಿನಕಾಯಿ ನೈಸರ್ಗಿಕ ಆಮ್ಲದಿಂದ ತುಂಬಿರುತ್ತದೆ. ಇವುಗಳು ಲೋಹದೊಂದಿಗೆ ಪ್ರತಿಕ್ರಿಯಿಸುವ ಸಾಧ್ಯತೆ ಇರುತ್ತದೆ. ಇದರಿಂದ ಉಪ್ಪಿನಕಾಯಿ ಬೇಗ ಕೆಡಬಹುದು ಮತ್ತು ಅದರ ರುಚಿ ಕೂಡ ಹಾಳಾಗಬಹುದು. ಹಾಗಾಗಿ ಉಪ್ಪಿನಕಾಯಿಯನ್ನು ಗಾಜಿನ ಅಥವಾ ಪಿಂಗಾಣಿ ಜಾಡಿಯಲ್ಲಿ ಸಂಗ್ರಹಿಸಿಡುವುದು ಸೂಕ್ತ.

ಉಪ್ಪಿನಕಾಯಿ: ಉಪ್ಪಿನಕಾಯಿಯನ್ನು ಯಾವುದೇ ಕಾರಣಕ್ಕೂ ಸ್ಟೀಲ್‌ ಪಾತ್ರೆಯಲ್ಲಿ ಸಂಗ್ರಹಿಸಬಾರದು. ಉಪ್ಪು, ಹುಳಿ, ಎಣ್ಣೆ ಇವೆಲ್ಲದರ ಮಿಶ್ರಣವಾದ ಉಪ್ಪಿನಕಾಯಿ ನೈಸರ್ಗಿಕ ಆಮ್ಲದಿಂದ ತುಂಬಿರುತ್ತದೆ. ಇವುಗಳು ಲೋಹದೊಂದಿಗೆ ಪ್ರತಿಕ್ರಿಯಿಸುವ ಸಾಧ್ಯತೆ ಇರುತ್ತದೆ. ಇದರಿಂದ ಉಪ್ಪಿನಕಾಯಿ ಬೇಗ ಕೆಡಬಹುದು ಮತ್ತು ಅದರ ರುಚಿ ಕೂಡ ಹಾಳಾಗಬಹುದು. ಹಾಗಾಗಿ ಉಪ್ಪಿನಕಾಯಿಯನ್ನು ಗಾಜಿನ ಅಥವಾ ಪಿಂಗಾಣಿ ಜಾಡಿಯಲ್ಲಿ ಸಂಗ್ರಹಿಸಿಡುವುದು ಸೂಕ್ತ.

1 / 6
ಮೊಸರು: ಮೊಸರು ನೈಸರ್ಗಿಕವಾಗಿ ಆಮ್ಲೀಯ ಅಂಶವನ್ನು ಹೊಂದಿರುವ ಕಾರಣ ಇದನ್ನು ವಿಶೇಷವಾಗಿ ದೀರ್ಘ ಗಂಟೆಗಳ ಕಾಲ ಸ್ಟೀಲ್‌ ಪಾತ್ರೆಯಲ್ಲಿ ಸಂಗ್ರಹಿಸಿದಾಗ, ಮೊಸರಿನ ರುಚಿ ಕೆಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೊಸರು ರುಚಿಕರವಾಗಿರಬೇಕೆಂದರೆ ಅವುಗಳನ್ನುಸೆರಾಮಿಕ್ ಅಥವಾ ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಿಡಿ.

ಮೊಸರು: ಮೊಸರು ನೈಸರ್ಗಿಕವಾಗಿ ಆಮ್ಲೀಯ ಅಂಶವನ್ನು ಹೊಂದಿರುವ ಕಾರಣ ಇದನ್ನು ವಿಶೇಷವಾಗಿ ದೀರ್ಘ ಗಂಟೆಗಳ ಕಾಲ ಸ್ಟೀಲ್‌ ಪಾತ್ರೆಯಲ್ಲಿ ಸಂಗ್ರಹಿಸಿದಾಗ, ಮೊಸರಿನ ರುಚಿ ಕೆಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೊಸರು ರುಚಿಕರವಾಗಿರಬೇಕೆಂದರೆ ಅವುಗಳನ್ನುಸೆರಾಮಿಕ್ ಅಥವಾ ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಿಡಿ.

2 / 6
ನಿಂಬೆ ಮಿಶ್ರಿತ ಆಹಾರಗಳು: ನಿಂಬೆ ಹಣ್ಣಿನಂತಹ ಸಿಟ್ರಸ್‌ ಹಣ್ಣುಗಳು ಸ್ಟೀಲ್‌ ಪಾತ್ರೆಗಳಲ್ಲಿ ಹೊಂದಿಕೊಳ್ಳುವುದಿಲ್ಲ. ಹೀಗಿರುವಾಗ ಈ ಸಿಟ್ರಸ್‌ ಹಣ್ಣುಗಳ ಭಕ್ಷ್ಯವನ್ನು ಸ್ಟೀಲ್‌ ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟಾಗ ಅವುಗಳ ರುಚಿ ನಕಾರಾತ್ಮಕವಾಗಿ ಬದಲಾಗಬಹುದು. ಮತ್ತು ಇವುಗಳ ಆಮ್ಲೀಯತ ಪಾತ್ರೆಯ ಕರಗುವಿಕೆಗೂ ಕಾರಣವಾಗಬಹುದು. ಹಾಗಾಗಿ ಸಿಟ್ರಸ್‌ ಹಣ್ಣುಗಳಾಗಿರಬಹುದು, ನಿಂಬೆ ರಸ ಸೇರಿದಂತೆ ಇತರೆ ಖಾದ್ಯಗಳೇ ಆಗಿರಬಹುದು. ಇವುಗಳನ್ನು ಗಾಜಿನ ಅಥವಾ ಉತ್ತಮ ದರ್ಜೆಯ ಪ್ಲಾಸ್ಟಿಕ್‌ ಡಬ್ಬಗಳಲ್ಲಿ ಸಂಗ್ರಹಿಸಿಡಬೇಕು.

ನಿಂಬೆ ಮಿಶ್ರಿತ ಆಹಾರಗಳು: ನಿಂಬೆ ಹಣ್ಣಿನಂತಹ ಸಿಟ್ರಸ್‌ ಹಣ್ಣುಗಳು ಸ್ಟೀಲ್‌ ಪಾತ್ರೆಗಳಲ್ಲಿ ಹೊಂದಿಕೊಳ್ಳುವುದಿಲ್ಲ. ಹೀಗಿರುವಾಗ ಈ ಸಿಟ್ರಸ್‌ ಹಣ್ಣುಗಳ ಭಕ್ಷ್ಯವನ್ನು ಸ್ಟೀಲ್‌ ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟಾಗ ಅವುಗಳ ರುಚಿ ನಕಾರಾತ್ಮಕವಾಗಿ ಬದಲಾಗಬಹುದು. ಮತ್ತು ಇವುಗಳ ಆಮ್ಲೀಯತ ಪಾತ್ರೆಯ ಕರಗುವಿಕೆಗೂ ಕಾರಣವಾಗಬಹುದು. ಹಾಗಾಗಿ ಸಿಟ್ರಸ್‌ ಹಣ್ಣುಗಳಾಗಿರಬಹುದು, ನಿಂಬೆ ರಸ ಸೇರಿದಂತೆ ಇತರೆ ಖಾದ್ಯಗಳೇ ಆಗಿರಬಹುದು. ಇವುಗಳನ್ನು ಗಾಜಿನ ಅಥವಾ ಉತ್ತಮ ದರ್ಜೆಯ ಪ್ಲಾಸ್ಟಿಕ್‌ ಡಬ್ಬಗಳಲ್ಲಿ ಸಂಗ್ರಹಿಸಿಡಬೇಕು.

3 / 6
ಟೊಮೆಟೊ ಮಿಶ್ರಿತ ಭಕ್ಷ್ಯಗಳು: ಟೊಮೆಟೊ ಆಗಿರಬಹುದು ಅಥವಾ ಟೊಮೆಟೊ ಮಿಶ್ರಿತ ಭಕ್ಷ್ಯಗಳೇ ಆಗಿರಬಹುದು ಇವುಗಳನ್ನು ಸ್ಟೀಲ್‌ ಪಾತ್ರೆಗಳಲ್ಲಿ ಸಂಗ್ರಹಿಸುವುದು ಸೂಕ್ತವಲ್ಲ. ಏಕೆಂದರೆ ಟೊಮೆಟೊ ಆಮ್ಲೀಯ ಅಂಶವನ್ನು ಹೊಂದಿರುವ ಕಾರಣ ಖಾದ್ಯದ ರುಚಿ ಮತ್ತು ಪೌಷ್ಠಿಕಾಂಶ ಎರಡೂ ಹಾಳಾಗಬಹುದು. ಹಾಗಾಗಿ ಇಂತಹ ಭಕ್ಷ್ಯಗಳನ್ನು ಸೆರಾಮಿಕ್‌ ಮತ್ತು ಗಾಜಿನ ಬೌಲ್‌ಗಳಲ್ಲಿ ಸಂಗ್ರಹಿಸಿ.

ಟೊಮೆಟೊ ಮಿಶ್ರಿತ ಭಕ್ಷ್ಯಗಳು: ಟೊಮೆಟೊ ಆಗಿರಬಹುದು ಅಥವಾ ಟೊಮೆಟೊ ಮಿಶ್ರಿತ ಭಕ್ಷ್ಯಗಳೇ ಆಗಿರಬಹುದು ಇವುಗಳನ್ನು ಸ್ಟೀಲ್‌ ಪಾತ್ರೆಗಳಲ್ಲಿ ಸಂಗ್ರಹಿಸುವುದು ಸೂಕ್ತವಲ್ಲ. ಏಕೆಂದರೆ ಟೊಮೆಟೊ ಆಮ್ಲೀಯ ಅಂಶವನ್ನು ಹೊಂದಿರುವ ಕಾರಣ ಖಾದ್ಯದ ರುಚಿ ಮತ್ತು ಪೌಷ್ಠಿಕಾಂಶ ಎರಡೂ ಹಾಳಾಗಬಹುದು. ಹಾಗಾಗಿ ಇಂತಹ ಭಕ್ಷ್ಯಗಳನ್ನು ಸೆರಾಮಿಕ್‌ ಮತ್ತು ಗಾಜಿನ ಬೌಲ್‌ಗಳಲ್ಲಿ ಸಂಗ್ರಹಿಸಿ.

4 / 6
ಹಣ್ಣುಗಳು ಮತ್ತು  ಸಲಾಡ್‌ಗಳು: ಕತ್ತರಿಸಿದ ಹಣ್ಣುಗಳಾಗಿರಬಹುದು ಅಥವಾ ಹಣ್ಣಿನ ಸಲಾಡ್‌ಗಳಾಗಿರಬಹುದು ಇವುಗಳನ್ನು ಸ್ಟೀಲ್‌ ಡಬ್ಬದಲ್ಲಿ ಸಂಗ್ರಹಿಸಬಾರದು. ಹೌದು ಇದರಿಂದ ಹಣ್ಣಿನಲ್ಲಿರುವ ನೀರಿನ ಅಂಶ ಹೊರ ಬರಬಹುದು ಮತ್ತು ಹಣ್ಣಿನ ರುಚಿ ಕೆಡುವ ಸಾಧ್ಯತೆಯೂ ಇದೆ. ಹಾಗಾಗಿ ಇವುಗಳನ್ನು ಗಾಜಿನ ಅಥವಾ ಉತ್ತಮ ಗುಣಮಟ್ಟದ ಪ್ಲಾಸ್ಟಿಕ್‌, ಸೆರಾಮಿಕ್‌ ಬೌಲ್‌ಗಳಲ್ಲಿ ಇಡಬೇಕು.

ಹಣ್ಣುಗಳು ಮತ್ತು ಸಲಾಡ್‌ಗಳು: ಕತ್ತರಿಸಿದ ಹಣ್ಣುಗಳಾಗಿರಬಹುದು ಅಥವಾ ಹಣ್ಣಿನ ಸಲಾಡ್‌ಗಳಾಗಿರಬಹುದು ಇವುಗಳನ್ನು ಸ್ಟೀಲ್‌ ಡಬ್ಬದಲ್ಲಿ ಸಂಗ್ರಹಿಸಬಾರದು. ಹೌದು ಇದರಿಂದ ಹಣ್ಣಿನಲ್ಲಿರುವ ನೀರಿನ ಅಂಶ ಹೊರ ಬರಬಹುದು ಮತ್ತು ಹಣ್ಣಿನ ರುಚಿ ಕೆಡುವ ಸಾಧ್ಯತೆಯೂ ಇದೆ. ಹಾಗಾಗಿ ಇವುಗಳನ್ನು ಗಾಜಿನ ಅಥವಾ ಉತ್ತಮ ಗುಣಮಟ್ಟದ ಪ್ಲಾಸ್ಟಿಕ್‌, ಸೆರಾಮಿಕ್‌ ಬೌಲ್‌ಗಳಲ್ಲಿ ಇಡಬೇಕು.

5 / 6
ಉಪ್ಪು: ಉಪ್ಪನ್ನು ಸಹ ಸ್ಟೀಲ್‌ ಪಾತ್ರೆಗಳಲ್ಲಿ ಸಂಗ್ರಹಿಸಿಡಬಾರದು. ಇದು ಲೋಹದೊಂದಿಗೆ ಪ್ರತಿಕ್ರಿಯಿಸುವುದಿಲ್ಲವಾದರೂ, ಲೋಹದ ಪಾತ್ರೆಗಳಲ್ಲಿ ಉಪ್ಪನ್ನು ದೀರ್ಘಕಾಲ ಸಂಗ್ರಹಿಸುವುದರಿಂದ ಉಪ್ಪಿನಲ್ಲಿ ತೇವಾಂಶ ಕಾಣಿಸುತ್ತದೆ, ಉಪ್ಪಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆ ಪಾತ್ರೆ ತುಕ್ಕು ಹಿಡಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಉಪ್ಪನ್ನು ಯಾವಾಗಲೂ ಗಾಳಿಯಾದಡ ಗಾಜಿನ ಮತ್ತು ಸೆರಾಮಿಕ್‌ ಡಬ್ಬಗಳಲ್ಲಿ ಸಂಗ್ರಹಿಸಿಡುವುದು ಸೂಕ್ತ.

ಉಪ್ಪು: ಉಪ್ಪನ್ನು ಸಹ ಸ್ಟೀಲ್‌ ಪಾತ್ರೆಗಳಲ್ಲಿ ಸಂಗ್ರಹಿಸಿಡಬಾರದು. ಇದು ಲೋಹದೊಂದಿಗೆ ಪ್ರತಿಕ್ರಿಯಿಸುವುದಿಲ್ಲವಾದರೂ, ಲೋಹದ ಪಾತ್ರೆಗಳಲ್ಲಿ ಉಪ್ಪನ್ನು ದೀರ್ಘಕಾಲ ಸಂಗ್ರಹಿಸುವುದರಿಂದ ಉಪ್ಪಿನಲ್ಲಿ ತೇವಾಂಶ ಕಾಣಿಸುತ್ತದೆ, ಉಪ್ಪಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆ ಪಾತ್ರೆ ತುಕ್ಕು ಹಿಡಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಉಪ್ಪನ್ನು ಯಾವಾಗಲೂ ಗಾಳಿಯಾದಡ ಗಾಜಿನ ಮತ್ತು ಸೆರಾಮಿಕ್‌ ಡಬ್ಬಗಳಲ್ಲಿ ಸಂಗ್ರಹಿಸಿಡುವುದು ಸೂಕ್ತ.

6 / 6
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!