300 ವರ್ಷಗಳಿಂದ ನಡೆಯುತ್ತಾ ಬಂದಿದೆ ದಾಯಾದಿ ಕಲಹ! ದ್ವೇಷದ ಹಿನ್ನೆಲೆಯಲ್ಲಿ ಬಡಿಗೆಗಳಿಂದ ಬಡಿದಾಡುತ್ತಾರೆ ಗ್ರಾಮಸ್ಥರು! ಎಲ್ಲಿ? ಏನೀ ವಿಚಿತ್ರ?

ಬದಾಮಿ ಅಮಾವಾಸ್ಯೆಯ ಮೂರು ದಿನ ಮುಂಚೆ ಆಚರಿಸಲ್ಪಡುವ ರೇವಣಸಿದ್ದನ ಜಾತ್ರೆಯೂ ಸಹ ಅಣ್ಣ ತಮ್ಮಂದಿರ ನಡುವಿನ ದ್ವೇಷದ ಹಿನ್ನೆಲೆಯನ್ನು ಹೊಂದಿದೆ.

|

Updated on: May 18, 2023 | 1:38 PM

ಬದಾಮಿ ಅಮಾವಾಸ್ಯೆಯ ಮೂರು ದಿನ ಮುಂಚೆ ಆಚರಿಸಲ್ಪಡುವ ರೇವಣಸಿದ್ದನ ಜಾತ್ರೆಯೂ ಸಹ ಅಣ್ಣ ತಮ್ಮಂದಿರ ನಡುವಿನ ದ್ವೇಷದ ಹಿನ್ನೆಲೆಯನ್ನು  ಹೊಂದಿದೆ.

ಬದಾಮಿ ಅಮಾವಾಸ್ಯೆಯ ಮೂರು ದಿನ ಮುಂಚೆ ಆಚರಿಸಲ್ಪಡುವ ರೇವಣಸಿದ್ದನ ಜಾತ್ರೆಯೂ ಸಹ ಅಣ್ಣ ತಮ್ಮಂದಿರ ನಡುವಿನ ದ್ವೇಷದ ಹಿನ್ನೆಲೆಯನ್ನು ಹೊಂದಿದೆ.

1 / 9
ಅಲ್ಲಿ ಗೌಜು ಗದ್ದಲಾ ಮನೆ ಮಾಡಿತ್ತು. ಗ್ರಾಮದ ಒಂದು ಕೋಮಿನ ಯುವಕರೆಲ್ಲಾ ಕೈಯ್ಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು, ಕುಣಿದಾಡುತ್ತಿದ್ದರು. ಮಹಿಳೆ ಮಕ್ಕಳಾದಿಯಾಗಿ ಎಲ್ಲರೂ ಈ ದೃಶ್ಯವನ್ನು ಬಲು ಉತ್ಸಾಹದಿಂದಲೇ ನೋಡುತ್ತಿದ್ದರು. ನೋಡ ನೋಡುತ್ತಿದ್ದಂತೆ ಇನ್ನೊಂದೆಡೆ ದೇವರ ವೇಷವನ್ನು ಹಾಕಿಕೊಂಡ ವ್ಯಕ್ತಿಯೊಬ್ಬ ತನ್ನ ಕೈಯ್ಯಲ್ಲಿ ಬಡಿಗೆಯನ್ನು ಹಿಡಿದುಕೊಂಡು,  ಯುವಕರ  ಗುಂಪಿನ ಮೇಲೆ ಮುಗಿ ಬೀಳುತ್ತಾ ಹೊಡೆಯಲು ಪ್ರಾರಂಭಿಸುತ್ತಾನೆ. ಯುವಕರೂ ಅಷ್ಟೇ ಕೈಯ್ಯಲ್ಲಿರುವ ಬಡಿಗೆಗಳಿಂದಲೇ ರಕ್ಷಣೆ ಮಾಡಿಕೊಳ್ಳುತ್ತಾ, ಆತನನ್ನು  ಕೆಣಕುತ್ತಾರೆ. ಇದೆಲ್ಲಾ ಕಂಡು ಬಂದಿದ್ದು ವಿಜಯಪುರ ತಾಲೂಕಿನ ಕನ್ನೂರು ಗ್ರಾಮದ ರೇವಣಸಿದ್ದನ ಜಾತ್ರೆಯಲ್ಲಿ. ಜಾತ್ರೆಯ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.

ಅಲ್ಲಿ ಗೌಜು ಗದ್ದಲಾ ಮನೆ ಮಾಡಿತ್ತು. ಗ್ರಾಮದ ಒಂದು ಕೋಮಿನ ಯುವಕರೆಲ್ಲಾ ಕೈಯ್ಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು, ಕುಣಿದಾಡುತ್ತಿದ್ದರು. ಮಹಿಳೆ ಮಕ್ಕಳಾದಿಯಾಗಿ ಎಲ್ಲರೂ ಈ ದೃಶ್ಯವನ್ನು ಬಲು ಉತ್ಸಾಹದಿಂದಲೇ ನೋಡುತ್ತಿದ್ದರು. ನೋಡ ನೋಡುತ್ತಿದ್ದಂತೆ ಇನ್ನೊಂದೆಡೆ ದೇವರ ವೇಷವನ್ನು ಹಾಕಿಕೊಂಡ ವ್ಯಕ್ತಿಯೊಬ್ಬ ತನ್ನ ಕೈಯ್ಯಲ್ಲಿ ಬಡಿಗೆಯನ್ನು ಹಿಡಿದುಕೊಂಡು, ಯುವಕರ ಗುಂಪಿನ ಮೇಲೆ ಮುಗಿ ಬೀಳುತ್ತಾ ಹೊಡೆಯಲು ಪ್ರಾರಂಭಿಸುತ್ತಾನೆ. ಯುವಕರೂ ಅಷ್ಟೇ ಕೈಯ್ಯಲ್ಲಿರುವ ಬಡಿಗೆಗಳಿಂದಲೇ ರಕ್ಷಣೆ ಮಾಡಿಕೊಳ್ಳುತ್ತಾ, ಆತನನ್ನು ಕೆಣಕುತ್ತಾರೆ. ಇದೆಲ್ಲಾ ಕಂಡು ಬಂದಿದ್ದು ವಿಜಯಪುರ ತಾಲೂಕಿನ ಕನ್ನೂರು ಗ್ರಾಮದ ರೇವಣಸಿದ್ದನ ಜಾತ್ರೆಯಲ್ಲಿ. ಜಾತ್ರೆಯ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.

2 / 9
ಹುಟ್ಟುತ್ತಾ ಅಣ್ಣತಮ್ಮಂದಿರರು ಬೆಳೆಯುತ್ತಾ ದಾಯಾದಿಗಳು ಎಂಬ ಮಾತು  ಕನ್ನೂರು ಗ್ರಾಮದಲ್ಲಿ  ನಡೆಯುತ್ತಿರುವ ಜಾತ್ರೆಗೆ ಹೇಳಿ ಮಾಡಿಸಿದಂತಿದೆ.  ಬದಾಮಿ ಅಮಾವಾಸ್ಯೆಯ ಮೂರು ದಿನ ಮುಂಚೆ ಆಚರಿಸಲ್ಪಡುವ ರೇವಣಸಿದ್ದನ ಜಾತ್ರೆಯೂ ಸಹ ಅಣ್ಣ ತಮ್ಮಂದಿರ ನಡುವಿನ ದ್ವೇಷದ ಹಿನ್ನೆಲೆಯನ್ನು  ಹೊಂದಿದೆ. ಜಾತ್ರೆಯ ನಿಮಿತ್ಯ ರೇವಣಸಿದ್ದ ದೇವರು ಹಾಗೂ ಅನ್ಯಕೋಮಿನ ಯುವಕರ ನಡುವೆ ಬಡಿಗೆಗಳಿಂದ ಹೊಡೆದಾಡುವ  ಸಂಪ್ರದಾಯ ಸುಮಾರು 300 ವರ್ಷಗಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. (ವರದಿ: ಅಶೋಕ ಯಡಳ್ಳಿ,‌ ಟಿವಿ 9, ವಿಜಯಪುರ)

ಹುಟ್ಟುತ್ತಾ ಅಣ್ಣತಮ್ಮಂದಿರರು ಬೆಳೆಯುತ್ತಾ ದಾಯಾದಿಗಳು ಎಂಬ ಮಾತು ಕನ್ನೂರು ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರೆಗೆ ಹೇಳಿ ಮಾಡಿಸಿದಂತಿದೆ. ಬದಾಮಿ ಅಮಾವಾಸ್ಯೆಯ ಮೂರು ದಿನ ಮುಂಚೆ ಆಚರಿಸಲ್ಪಡುವ ರೇವಣಸಿದ್ದನ ಜಾತ್ರೆಯೂ ಸಹ ಅಣ್ಣ ತಮ್ಮಂದಿರ ನಡುವಿನ ದ್ವೇಷದ ಹಿನ್ನೆಲೆಯನ್ನು ಹೊಂದಿದೆ. ಜಾತ್ರೆಯ ನಿಮಿತ್ಯ ರೇವಣಸಿದ್ದ ದೇವರು ಹಾಗೂ ಅನ್ಯಕೋಮಿನ ಯುವಕರ ನಡುವೆ ಬಡಿಗೆಗಳಿಂದ ಹೊಡೆದಾಡುವ ಸಂಪ್ರದಾಯ ಸುಮಾರು 300 ವರ್ಷಗಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. (ವರದಿ: ಅಶೋಕ ಯಡಳ್ಳಿ,‌ ಟಿವಿ 9, ವಿಜಯಪುರ)

3 / 9
ಇದಕ್ಕೊಂದು ಹಿನ್ನೆಲೆ ಕೂಡಾ ಇದೆ. ಕನ್ನೂರು ಗ್ರಾಮದ  ನಂದಗೊಂಡಗೌಡ  ಎಂಬುವವರು ಮಕ್ಕಳಾಗಲಿಲ್ಲಾ ಎಂಬ ಕಾರಣಕ್ಕೆ 2 ನೇ ಮದುವೆಯನ್ನು ಮಾಡಿಕೊಳ್ಳುತ್ತಾರೆ. ನಂತರ ಮೊದಲನೇಯ ಹೆಂಡತಿಗೆ   ರೇವಣಸಿದ್ದ  ಎಂಬ ಮಗುವಿನ ಜನನವಾಗುತ್ತದೆ. ಹಾಗೂ ಎರಡನೇಯ ಹೆಂಡತಿಗೆ 7 ಗಂಡು ಮಕ್ಕಳು ಜನ್ಮ ತಾಳುತ್ತಾರೆ. ಮೊದಲ ಹೆಂಡತಿ ಪದ್ಮಾವತಿ ಬೀಸುವಾಗ ಹಾಡುತ್ತಾ ತನ್ನ ಮಗನಿಗೆ 7 ಬಂಡಿ ಬಂಗಾರದ  ಐಶ್ವರ್ಯ ಸಿಗಲಿ ಎಂದು ಹಾಡುತ್ತಾ ಪ್ರಾರ್ಥನೆ ಮಾಡುತ್ತಾಳೆ.

ಇದಕ್ಕೊಂದು ಹಿನ್ನೆಲೆ ಕೂಡಾ ಇದೆ. ಕನ್ನೂರು ಗ್ರಾಮದ ನಂದಗೊಂಡಗೌಡ ಎಂಬುವವರು ಮಕ್ಕಳಾಗಲಿಲ್ಲಾ ಎಂಬ ಕಾರಣಕ್ಕೆ 2 ನೇ ಮದುವೆಯನ್ನು ಮಾಡಿಕೊಳ್ಳುತ್ತಾರೆ. ನಂತರ ಮೊದಲನೇಯ ಹೆಂಡತಿಗೆ ರೇವಣಸಿದ್ದ ಎಂಬ ಮಗುವಿನ ಜನನವಾಗುತ್ತದೆ. ಹಾಗೂ ಎರಡನೇಯ ಹೆಂಡತಿಗೆ 7 ಗಂಡು ಮಕ್ಕಳು ಜನ್ಮ ತಾಳುತ್ತಾರೆ. ಮೊದಲ ಹೆಂಡತಿ ಪದ್ಮಾವತಿ ಬೀಸುವಾಗ ಹಾಡುತ್ತಾ ತನ್ನ ಮಗನಿಗೆ 7 ಬಂಡಿ ಬಂಗಾರದ ಐಶ್ವರ್ಯ ಸಿಗಲಿ ಎಂದು ಹಾಡುತ್ತಾ ಪ್ರಾರ್ಥನೆ ಮಾಡುತ್ತಾಳೆ.

4 / 9
ಇದನ್ನು ಕೇಳಿದ 2  ನೇ ಹೆಂಡತಿ ಲಕ್ಕವ್ವಾ ತನ್ನ ಮಕ್ಕಳಿಗೆ ಐಶ್ವರ್ಯ ಸಿಗಲಾರದು ಎಂದು ತಿಳಿದು ತನ್ನ ಸವತಿಯ ಮಗನನ್ನು ಕೊಲೆ ಮಾಡಲು ಅನ್ಯ ಕೋಮಿನ ಜನರಿಗೆ ಹೇಳುತ್ತಾಳೆ. ನಂತರ ಅನ್ಯಕೋಮಿನ ಜನ ಮೊದಲ ಹೆಂಡತಿಯ ಮಗನನ್ನು ಕೊಲೆ ಮಾಡುತ್ತಾರೆ. ಮಗಾ ಕೊಲೆಯಾಗಿದ್ದನ್ನು ಕನಸಿನಲ್ಲಿಯೇ ಕಂಡ ಪದ್ಮಾವತಿ ದುಖಃತಪ್ತಳಾಗುತ್ತಾಳೆ.  ನಂತರ ಗ್ರಾಮದಲ್ಲಿ ಕಾದಾಟಗಳು ಪ್ರಾರಂಭವಾಗುತ್ತವೆ.

ಇದನ್ನು ಕೇಳಿದ 2 ನೇ ಹೆಂಡತಿ ಲಕ್ಕವ್ವಾ ತನ್ನ ಮಕ್ಕಳಿಗೆ ಐಶ್ವರ್ಯ ಸಿಗಲಾರದು ಎಂದು ತಿಳಿದು ತನ್ನ ಸವತಿಯ ಮಗನನ್ನು ಕೊಲೆ ಮಾಡಲು ಅನ್ಯ ಕೋಮಿನ ಜನರಿಗೆ ಹೇಳುತ್ತಾಳೆ. ನಂತರ ಅನ್ಯಕೋಮಿನ ಜನ ಮೊದಲ ಹೆಂಡತಿಯ ಮಗನನ್ನು ಕೊಲೆ ಮಾಡುತ್ತಾರೆ. ಮಗಾ ಕೊಲೆಯಾಗಿದ್ದನ್ನು ಕನಸಿನಲ್ಲಿಯೇ ಕಂಡ ಪದ್ಮಾವತಿ ದುಖಃತಪ್ತಳಾಗುತ್ತಾಳೆ. ನಂತರ ಗ್ರಾಮದಲ್ಲಿ ಕಾದಾಟಗಳು ಪ್ರಾರಂಭವಾಗುತ್ತವೆ.

5 / 9
 ಪ್ರತಿ ವರ್ಷ ರೇವಣಸಿದ್ದನ ಜಾತ್ರೆಯನ್ನು ಮಾಡಿದರೆ ಎಲ್ಲಾ ತೊಂದರೆಗಳು ಪರಿಹಾರವಾಗುತ್ತವೆ   ಎಂದು ತಿಳಿದು ಬರುತ್ತದೆ. ಈ ಕಾರಣದಿಂದ ಗ್ರಾಮದಲ್ಲಿ ಪ್ರತಿ ವರ್ಷ ರೇವಣಸಿದ್ದನ ಜಾತ್ರೆಯನ್ನು ಆಚರಣೆ  ಮಾಡಿಕೊಂಡು ಬರಲಾಗುತ್ತಿದೆ. ಜಾತ್ರೆಯಂದು ರೇವಣಸಿದ್ದನನ್ನು ಕೊಲೆ ಮಾಡಿರುವ ಅನ್ಯಕೋಮಿನ ಜನರು ಬಡಿಗೆಗಳನ್ನು ಹಿಡಿದುಕೊಂಡು ಬಂದು ರೇವಣಸಿದ್ದನನ್ನು ಕೆಣಕುತ್ತಾರೆ. ರೇವಣಸಿದ್ದ ದೇವರ ವೇಷಧಾರಿ ಎಲ್ಲರನ್ನು ಅಟ್ಟಾಡಿಸಿಕೊಂಡು ಬಡಿಗೆಯಿಂದ ಹೊಡೆಯುತ್ತಾ ಹಿಮ್ಮೆಟಿಟ್ಟಿಸುತ್ತಾ ಸಾಗುತ್ತಾನೆ.

ಪ್ರತಿ ವರ್ಷ ರೇವಣಸಿದ್ದನ ಜಾತ್ರೆಯನ್ನು ಮಾಡಿದರೆ ಎಲ್ಲಾ ತೊಂದರೆಗಳು ಪರಿಹಾರವಾಗುತ್ತವೆ ಎಂದು ತಿಳಿದು ಬರುತ್ತದೆ. ಈ ಕಾರಣದಿಂದ ಗ್ರಾಮದಲ್ಲಿ ಪ್ರತಿ ವರ್ಷ ರೇವಣಸಿದ್ದನ ಜಾತ್ರೆಯನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಜಾತ್ರೆಯಂದು ರೇವಣಸಿದ್ದನನ್ನು ಕೊಲೆ ಮಾಡಿರುವ ಅನ್ಯಕೋಮಿನ ಜನರು ಬಡಿಗೆಗಳನ್ನು ಹಿಡಿದುಕೊಂಡು ಬಂದು ರೇವಣಸಿದ್ದನನ್ನು ಕೆಣಕುತ್ತಾರೆ. ರೇವಣಸಿದ್ದ ದೇವರ ವೇಷಧಾರಿ ಎಲ್ಲರನ್ನು ಅಟ್ಟಾಡಿಸಿಕೊಂಡು ಬಡಿಗೆಯಿಂದ ಹೊಡೆಯುತ್ತಾ ಹಿಮ್ಮೆಟಿಟ್ಟಿಸುತ್ತಾ ಸಾಗುತ್ತಾನೆ.

6 / 9
 ಈ  ರೀತಿಯಾಗಿ ಬಡಿಗೆಗಳಿಂದ ಪರಸ್ಪರ ಹೊಡೆದಾಡುತ್ತಾ,  ಸಾಗುವಾಗ ರೇವಣಸಿದ್ದನ ಹೊಡೆತದಿಂದ ಅನ್ಯಕೋಮಿನವರ ರಕ್ತ ತರ್ಪಣವಾಗಬೇಕೆಂಬ ಸಂಪ್ರದಾಯವೂ ಇದೆ. ಹೀಗೆ ಬಡಿಗೆಗಳಿಂದ ಹೊಡೆದಾಡುತ್ತಾ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಈ ಕಾದಾಟ ನಡೆಯುತ್ತದೆ. ಬಡಿಗೆಗಳಿಂದ ಹೊಡೆದಾಡುವಾಗ ಭಂಡಾರವನ್ನು ತೂರಲಾಗುತ್ತದೆ. ಪರಸ್ಪರರು ಭಂಡಾರದಲ್ಲಿ ಮಿಂದೇಳುತ್ತಾರೆ. ನಂತರ  ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಎಲ್ಲರೂ ಗ್ರಾಮದ ಹಳ್ಳದ ಹತ್ತಿರ ಹೋಗುತ್ತಾರೆ. ಅಲ್ಲಿ  ರೇವಣಸಿದ್ದನಿಗೆ ಜೋಳದ ಗುಗ್ಗರಿ ಹಾಗೂ ಇನ್ನಿತರ  ಪದಾರ್ಥಗಳನ್ನು ನೈವೇಧ್ಯ ಮಾಡಲಾಗುತ್ತದೆ. ಅಲ್ಲಿಗೆ ಜಾತ್ರೆಯು ಮುಕ್ತಾಯವಾಗುತ್ತದೆ.

ಈ ರೀತಿಯಾಗಿ ಬಡಿಗೆಗಳಿಂದ ಪರಸ್ಪರ ಹೊಡೆದಾಡುತ್ತಾ, ಸಾಗುವಾಗ ರೇವಣಸಿದ್ದನ ಹೊಡೆತದಿಂದ ಅನ್ಯಕೋಮಿನವರ ರಕ್ತ ತರ್ಪಣವಾಗಬೇಕೆಂಬ ಸಂಪ್ರದಾಯವೂ ಇದೆ. ಹೀಗೆ ಬಡಿಗೆಗಳಿಂದ ಹೊಡೆದಾಡುತ್ತಾ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಈ ಕಾದಾಟ ನಡೆಯುತ್ತದೆ. ಬಡಿಗೆಗಳಿಂದ ಹೊಡೆದಾಡುವಾಗ ಭಂಡಾರವನ್ನು ತೂರಲಾಗುತ್ತದೆ. ಪರಸ್ಪರರು ಭಂಡಾರದಲ್ಲಿ ಮಿಂದೇಳುತ್ತಾರೆ. ನಂತರ ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಎಲ್ಲರೂ ಗ್ರಾಮದ ಹಳ್ಳದ ಹತ್ತಿರ ಹೋಗುತ್ತಾರೆ. ಅಲ್ಲಿ ರೇವಣಸಿದ್ದನಿಗೆ ಜೋಳದ ಗುಗ್ಗರಿ ಹಾಗೂ ಇನ್ನಿತರ ಪದಾರ್ಥಗಳನ್ನು ನೈವೇಧ್ಯ ಮಾಡಲಾಗುತ್ತದೆ. ಅಲ್ಲಿಗೆ ಜಾತ್ರೆಯು ಮುಕ್ತಾಯವಾಗುತ್ತದೆ.

7 / 9

ಕನ್ನೂರಿನ ಹೆಣ್ಣು ಮಕ್ಕಳು  ಜಾತ್ರೆಯ ಪ್ರಯುಕ್ತ ತವರಿಗೆ ಆಗಮಿಸುವ ವಾಡಿಕೆ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ದಾಯಾದಿ ಮತ್ಸರ, ಆಸ್ತಿಯಾಸೆ ಒಳ್ಳೆಯದಲ್ಲಾ ಎಂಬುದಕ್ಕೆ ರೇವಣಸಿದ್ದ ಸ್ವಾಮಿಯ ಜಾತ್ರೆಯೇ ಸಾಕ್ಷಿಯಾಗಿದೆ ಎಂದು ಹೇಳಬಹುದು.

ಕನ್ನೂರಿನ ಹೆಣ್ಣು ಮಕ್ಕಳು ಜಾತ್ರೆಯ ಪ್ರಯುಕ್ತ ತವರಿಗೆ ಆಗಮಿಸುವ ವಾಡಿಕೆ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ದಾಯಾದಿ ಮತ್ಸರ, ಆಸ್ತಿಯಾಸೆ ಒಳ್ಳೆಯದಲ್ಲಾ ಎಂಬುದಕ್ಕೆ ರೇವಣಸಿದ್ದ ಸ್ವಾಮಿಯ ಜಾತ್ರೆಯೇ ಸಾಕ್ಷಿಯಾಗಿದೆ ಎಂದು ಹೇಳಬಹುದು.

8 / 9
ಒಟ್ಟಿನಲ್ಲಿ ರಾಜ್ಯದಲ್ಲಿ ನಡೆಯುವ ಇನ್ನಿತರ ಜಾತ್ರೆಗಳಿಗಿಂದ ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿ  ನಡೆಯುವ ರೇವಣಸಿದ್ದ ಜಾತ್ರೆಯು ಅತ್ಯಂತ  ವಿಶೇಷವಾಗಿದೆ. ಈ ಜಾತ್ರೆಯ ವೀಕ್ಷಣೆಗೆ ನೆರೆಯ ಮಹಾರಾಷ್ಟ್ರ ಹಾಗೂ ಆಂಧ್ಯಪ್ರದೇಶಗಳಿಂದಲೂ ಜನರು ಬರುತ್ತಾರೆ.

ಒಟ್ಟಿನಲ್ಲಿ ರಾಜ್ಯದಲ್ಲಿ ನಡೆಯುವ ಇನ್ನಿತರ ಜಾತ್ರೆಗಳಿಗಿಂದ ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿ ನಡೆಯುವ ರೇವಣಸಿದ್ದ ಜಾತ್ರೆಯು ಅತ್ಯಂತ ವಿಶೇಷವಾಗಿದೆ. ಈ ಜಾತ್ರೆಯ ವೀಕ್ಷಣೆಗೆ ನೆರೆಯ ಮಹಾರಾಷ್ಟ್ರ ಹಾಗೂ ಆಂಧ್ಯಪ್ರದೇಶಗಳಿಂದಲೂ ಜನರು ಬರುತ್ತಾರೆ.

9 / 9
Follow us