AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲೇ ಉಚಿತ ಬಸ್ ಪ್ರಯಾಣ ಖಚಿತ​​! ಅಂಥಾದ್ದರಲ್ಲಿ KSRTC ಬಸ್ ಕಂಡಕ್ಟರ್ 5 ಪಟ್ಟು ಹೆಚ್ಚು ದರದ ಟಿಕೆಟ್ ಕೊಟ್ರೆ ಪ್ರಯಾಣಿಕರ ಗತಿಯೇನು!? ​

ಮೊದಲೇ ಉಚಿತ ಬಸ್ ಪ್ರಯಾಣ ಖಚಿತ​​! ಅಂಥಾದ್ದರಲ್ಲಿ KSRTC ಬಸ್ ಕಂಡಕ್ಟರ್ 18 ಮಂದಿಗೆ 5 ಪಟ್ಟು ಹೆಚ್ಚು ದರದ ಟಿಕೆಟ್ ಕೊಟ್ರೆ ಹೆಂಗಾಗಬೇಡ!?

ಸಾಧು ಶ್ರೀನಾಥ್​
|

Updated on: Jun 08, 2023 | 11:31 AM

ಚಿಕ್ಕಮಗಳೂರು: ಮೊದಲೇ ನಮ್ಮ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಖಚಿತ​​! ಅಂಥಾದ್ದರಲ್ಲಿ KSRTC ಬಸ್ ಕಂಡಕ್ಟರ್ 5 ಪಟ್ಟು ಹೆಚ್ಚು ದರದ ಟಿಕೆಟ್ ಕೊಟ್ರೆ ಪ್ರಯಾಣಿಕರಿಗೆ (Passenger) ಹೆಂಗಾಗಬೇಡ!? KSRTC ಬಸ್ ಕಂಡಕ್ಟರ್ ಮಾಡಿರುವ ಈ  ಅಚಾತುರ್ಯದಿಂದ ಪ್ರವಾಸಿಗರು ಕಂಗಾಲಾಗಿದ್ದಾರೆ. ಜೊತೆಗೆ, ಅವರು ಆಂಧ್ರ ಮೂಲದ ಪ್ರವಾಸಿಗರು (Andhra Pradesh). ಬಸ್ ಟಿಕೆಟ್ ದರ ನೋಡಿ ಕಂಗಾಲಾಗಿದ್ದಾರೆ.

ಚಿಕ್ಕಮಗಳೂರು: ಮೊದಲೇ ನಮ್ಮ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಖಚಿತ​​! ಅಂಥಾದ್ದರಲ್ಲಿ KSRTC ಬಸ್ ಕಂಡಕ್ಟರ್ 5 ಪಟ್ಟು ಹೆಚ್ಚು ದರದ ಟಿಕೆಟ್ ಕೊಟ್ರೆ ಪ್ರಯಾಣಿಕರಿಗೆ (Passenger) ಹೆಂಗಾಗಬೇಡ!? KSRTC ಬಸ್ ಕಂಡಕ್ಟರ್ ಮಾಡಿರುವ ಈ ಅಚಾತುರ್ಯದಿಂದ ಪ್ರವಾಸಿಗರು ಕಂಗಾಲಾಗಿದ್ದಾರೆ. ಜೊತೆಗೆ, ಅವರು ಆಂಧ್ರ ಮೂಲದ ಪ್ರವಾಸಿಗರು (Andhra Pradesh). ಬಸ್ ಟಿಕೆಟ್ ದರ ನೋಡಿ ಕಂಗಾಲಾಗಿದ್ದಾರೆ.

1 / 5
ಪರ ರಾಜ್ಯಗಳ ಪ್ರಯಾಣಿಕರಿಗೆ ಉಚಿತ ಬಸ್​​ ಪ್ರಯಾಣ ಅನ್ವಯವಾಗೋಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆಯೇನೋ ಸರಿ. ಆದರೆ ಕಂಡಕ್ಟರ್​​ ಮಹಾಶಯ ಐದು ಪಟ್ಟು ದುಬಾರಿಯ ಟಿಕೆಟ್​ ನೀಡಿಬಿಟ್ಟರೆ ಗತಿಯೇನು? ಅಷ್ಟಕ್ಕೂ ಕಂಡಕ್ಟರ್ ಮಾಡಿರುವ ಯಡವಟ್ಟು ಕೆಲಸ ಏನೆಂದರೆ ಚಿಕ್ಕಮಗಳೂರು (Chikkamagalur) ಬದಲು ಮಂಗಳೂರಿಗೆ ಟಿಕೆಟ್ ನೀಡಿ ಕೈತೊಳೆದುಕೊಂಡಿದ್ದಾರೆ. 45 ರೂಪಾಯಿ ಟಿಕೆಟ್ ಬದಲು 202 ರೂಪಾಯಿ ಟಿಕೆಟ್ ನೀಡಿಬಿಟ್ಟಿದ್ದಾನೆ ಪುಣ್ಯಾತ್ಮ.

ಪರ ರಾಜ್ಯಗಳ ಪ್ರಯಾಣಿಕರಿಗೆ ಉಚಿತ ಬಸ್​​ ಪ್ರಯಾಣ ಅನ್ವಯವಾಗೋಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆಯೇನೋ ಸರಿ. ಆದರೆ ಕಂಡಕ್ಟರ್​​ ಮಹಾಶಯ ಐದು ಪಟ್ಟು ದುಬಾರಿಯ ಟಿಕೆಟ್​ ನೀಡಿಬಿಟ್ಟರೆ ಗತಿಯೇನು? ಅಷ್ಟಕ್ಕೂ ಕಂಡಕ್ಟರ್ ಮಾಡಿರುವ ಯಡವಟ್ಟು ಕೆಲಸ ಏನೆಂದರೆ ಚಿಕ್ಕಮಗಳೂರು (Chikkamagalur) ಬದಲು ಮಂಗಳೂರಿಗೆ ಟಿಕೆಟ್ ನೀಡಿ ಕೈತೊಳೆದುಕೊಂಡಿದ್ದಾರೆ. 45 ರೂಪಾಯಿ ಟಿಕೆಟ್ ಬದಲು 202 ರೂಪಾಯಿ ಟಿಕೆಟ್ ನೀಡಿಬಿಟ್ಟಿದ್ದಾನೆ ಪುಣ್ಯಾತ್ಮ.

2 / 5
 ಆಂಧ್ರ ಮೂಲದ ಒಟ್ಟು 18 ಜನ ಪ್ರವಾಸಿಗರು ಆಂಧ್ರದಿಂದ ರೈಲಿನ ಮೂಲಕ ಕಡೂರಿಗೆ ಬಂದಿಳಿದಿದ್ದರು. ಚಿಕ್ಕಮಗಳೂರಿನ ಬಾಬಾ ಬುಡನ್​ ಗಿರಿ ಬೆಟ್ಟಕ್ಕೆ (Baba Budangiri Hills) ಹೋಗುವುದು ಅವರ ಗಮ್ಯವಾಗಿತ್ತು. ನೀವು ಹೋಗಬೇಕಿರುವುದು ಚಿಕ್ಕಮಗಳೂರಿಗೆ, ಅಲ್ಲಿಗೇ ಬಿಡುವುದಾಗಿ ಹೇಳಿ ಬಸ್ ಹತ್ತಿಸಿಕೊಂಡಿದ್ದಾನೆ ಕಂಡಕ್ಟರ್. ಆದರೆ ಚಿಕ್ಕಮಗಳೂರು ಬದಲು ಮಂಗಳೂರಿಗೆ ಟಿಕೆಟ್ ನೀಡಿ ಪ್ರವಾಸಿಗರಿಗೆ ನೇರ ವಂಚನೆ ಎಸಗಿದ್ದಾನೆ.

ಆಂಧ್ರ ಮೂಲದ ಒಟ್ಟು 18 ಜನ ಪ್ರವಾಸಿಗರು ಆಂಧ್ರದಿಂದ ರೈಲಿನ ಮೂಲಕ ಕಡೂರಿಗೆ ಬಂದಿಳಿದಿದ್ದರು. ಚಿಕ್ಕಮಗಳೂರಿನ ಬಾಬಾ ಬುಡನ್​ ಗಿರಿ ಬೆಟ್ಟಕ್ಕೆ (Baba Budangiri Hills) ಹೋಗುವುದು ಅವರ ಗಮ್ಯವಾಗಿತ್ತು. ನೀವು ಹೋಗಬೇಕಿರುವುದು ಚಿಕ್ಕಮಗಳೂರಿಗೆ, ಅಲ್ಲಿಗೇ ಬಿಡುವುದಾಗಿ ಹೇಳಿ ಬಸ್ ಹತ್ತಿಸಿಕೊಂಡಿದ್ದಾನೆ ಕಂಡಕ್ಟರ್. ಆದರೆ ಚಿಕ್ಕಮಗಳೂರು ಬದಲು ಮಂಗಳೂರಿಗೆ ಟಿಕೆಟ್ ನೀಡಿ ಪ್ರವಾಸಿಗರಿಗೆ ನೇರ ವಂಚನೆ ಎಸಗಿದ್ದಾನೆ.

3 / 5
ಒಂದು ಟಿಕೆಟ್ ಗೆ 202 ರಂತೆ 3,636 ರೂಪಾಯಿಯ ಟಿಕೆಟ್ ನೀಡಿಬಿಟ್ಟಿದ್ದಾನೆ ಕಂಡಕ್ಟರ್. ಜೊತೆಗೆ ಕಿಲಾಡಿ ಕಂಡಕ್ಟರ್ ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಆ ಹದಿನೆಂಟೂ ಮಂದಿ ಇಳಿಯುತ್ತಿದ್ದಂತೆ ದಡಾಬಢಾ ಅಂತಾ ಅವರ ಬಳಿಗೆ ತೆರಳಿ ನಯವಾದ ಮಾತಿನಲ್ಲಿ ಅವರಿಂದ ಟಿಕೆಟ್ ವಾಪಸ್ ಕೇಳಿದ್ದಾನೆ. ಕಡೂರಿನಿಂದ 40 ಕಿ.ಮೀ. ದೂರದ ಚಿಕ್ಕಮಗಳೂರಿಗೆ 202 ರೂಪಾಯಿ ಯಾಕೆ? ಎಂದು ಪ್ರವಾಸಿಗರು ಆಗ ಪ್ರಶ್ನೆ ಮಾಡಿದ್ದಾರೆ.

ಒಂದು ಟಿಕೆಟ್ ಗೆ 202 ರಂತೆ 3,636 ರೂಪಾಯಿಯ ಟಿಕೆಟ್ ನೀಡಿಬಿಟ್ಟಿದ್ದಾನೆ ಕಂಡಕ್ಟರ್. ಜೊತೆಗೆ ಕಿಲಾಡಿ ಕಂಡಕ್ಟರ್ ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಆ ಹದಿನೆಂಟೂ ಮಂದಿ ಇಳಿಯುತ್ತಿದ್ದಂತೆ ದಡಾಬಢಾ ಅಂತಾ ಅವರ ಬಳಿಗೆ ತೆರಳಿ ನಯವಾದ ಮಾತಿನಲ್ಲಿ ಅವರಿಂದ ಟಿಕೆಟ್ ವಾಪಸ್ ಕೇಳಿದ್ದಾನೆ. ಕಡೂರಿನಿಂದ 40 ಕಿ.ಮೀ. ದೂರದ ಚಿಕ್ಕಮಗಳೂರಿಗೆ 202 ರೂಪಾಯಿ ಯಾಕೆ? ಎಂದು ಪ್ರವಾಸಿಗರು ಆಗ ಪ್ರಶ್ನೆ ಮಾಡಿದ್ದಾರೆ.

4 / 5
ಚಿಕ್ಕಮಗಳೂರು ಜಿಲ್ಲೆಯ ಕಡೂರು ಡಿಪೋಗೆ ಸೇರಿದ ಸದರಿ KSRTC ಬಸ್ ಕಡೂರಿನಿಂದ ಮಂಗಳೂರಿಗೆ ತೆರಳುತ್ತಿತ್ತು. ಈ ಪ್ರವಾಸಿಗರು ಚಿಕ್ಕಮಗಳೂರಿನ‌ ಬಾಬಾ ಬುಡನ್​ ಗಿರಿ ಬೆಟ್ಟಕ್ಕೆ ಹೋಗುವ ಬಗ್ಗೆ ಬಸ್ಸಿನ ಮಾಹಿತಿ ಕೇಳಿದ್ದರು. ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ಬಿಡುವುದಾಗಿ ಬಸ್ ಹತ್ತಿಸಿಕೊಂಡಿದ್ದ ಕಂಡಕ್ಟರ್. ರಾತ್ರಿ ಪ್ರಯಾಣಿಸುವ ಹೊರ ರಾಜ್ಯದ ಪ್ರವಾಸಿಗರಿಗೆ ನಿರಂತರವಾಗಿ ಇಂತಹ ವಂಚನೆಗಳು ಮಾಡುತ್ತಿರುವ ಆರೋಪ ಸದಾ ಕೇಳಿಬರುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ಡಿಪೋಗೆ ಸೇರಿದ ಸದರಿ KSRTC ಬಸ್ ಕಡೂರಿನಿಂದ ಮಂಗಳೂರಿಗೆ ತೆರಳುತ್ತಿತ್ತು. ಈ ಪ್ರವಾಸಿಗರು ಚಿಕ್ಕಮಗಳೂರಿನ‌ ಬಾಬಾ ಬುಡನ್​ ಗಿರಿ ಬೆಟ್ಟಕ್ಕೆ ಹೋಗುವ ಬಗ್ಗೆ ಬಸ್ಸಿನ ಮಾಹಿತಿ ಕೇಳಿದ್ದರು. ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ಬಿಡುವುದಾಗಿ ಬಸ್ ಹತ್ತಿಸಿಕೊಂಡಿದ್ದ ಕಂಡಕ್ಟರ್. ರಾತ್ರಿ ಪ್ರಯಾಣಿಸುವ ಹೊರ ರಾಜ್ಯದ ಪ್ರವಾಸಿಗರಿಗೆ ನಿರಂತರವಾಗಿ ಇಂತಹ ವಂಚನೆಗಳು ಮಾಡುತ್ತಿರುವ ಆರೋಪ ಸದಾ ಕೇಳಿಬರುತ್ತಿದೆ.

5 / 5
Follow us
RCB ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು: ಅಶೋಕ್ ಲೇವಡಿ
RCB ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು: ಅಶೋಕ್ ಲೇವಡಿ
ಮಕ್ಕಳಿದ್ದ ಆಟೋ ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿ ಬಿಟ್ಟ ಯುವಕ!
ಮಕ್ಕಳಿದ್ದ ಆಟೋ ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿ ಬಿಟ್ಟ ಯುವಕ!
ದರ್ಶನ್ ಸಂಪರ್ಕಿಸುತ್ತಾರೆ ಎಂಬ ನಂಬಿಕೆ ಇಲ್ಲ: ರೇಣುಕಾಸ್ವಾಮಿ ತಂದೆ
ದರ್ಶನ್ ಸಂಪರ್ಕಿಸುತ್ತಾರೆ ಎಂಬ ನಂಬಿಕೆ ಇಲ್ಲ: ರೇಣುಕಾಸ್ವಾಮಿ ತಂದೆ
ಸಸ್ಪೆಂಡ್ ಆದ ಕಮಿಷನರ್ ದಯಾನಂದ್ ದಕ್ಷತೆ, ಪ್ರಮಾಣಿಕತೆ: ವಿಡಿಯೋ ವೈರಲ್
ಸಸ್ಪೆಂಡ್ ಆದ ಕಮಿಷನರ್ ದಯಾನಂದ್ ದಕ್ಷತೆ, ಪ್ರಮಾಣಿಕತೆ: ವಿಡಿಯೋ ವೈರಲ್
ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು
ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು
ಬೆಂಗಳೂರು ಕಾಲ್ತುಳಿತ: ಅಶೋಕ್ ತುರ್ತು ಸುದ್ದಿಗೋಷ್ಠಿಯ ನೇರಪ್ರಸಾರ
ಬೆಂಗಳೂರು ಕಾಲ್ತುಳಿತ: ಅಶೋಕ್ ತುರ್ತು ಸುದ್ದಿಗೋಷ್ಠಿಯ ನೇರಪ್ರಸಾರ
ರೇಣುಕಾಸ್ವಾಮಿ ಹತ್ಯೆಗೆ 1ವರ್ಷ;ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಕುಟುಂಬಸ್ಥರು
ರೇಣುಕಾಸ್ವಾಮಿ ಹತ್ಯೆಗೆ 1ವರ್ಷ;ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಕುಟುಂಬಸ್ಥರು
ರ್‍ಯಾಲಿ ವೇಳೆ ಕೊಲಂಬಿಯಾದ ಅಧ್ಯಕ್ಷೀಯ ಅಭ್ಯರ್ಥಿ ಟರ್ಬೆಗೆ ಗುಂಡೇಟು
ರ್‍ಯಾಲಿ ವೇಳೆ ಕೊಲಂಬಿಯಾದ ಅಧ್ಯಕ್ಷೀಯ ಅಭ್ಯರ್ಥಿ ಟರ್ಬೆಗೆ ಗುಂಡೇಟು
ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗಿರಿ: ವಿಡಿಯೋ ವೈರಲ್
ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗಿರಿ: ವಿಡಿಯೋ ವೈರಲ್
ಐತಿಹಾಸಿಕ ಪ್ರವಾಸಿತಾಣ ನಂದಿಗಿರಿಧಾಮ ಫುಲ್ ಟ್ರಾಫಿಕ್ ಜಾಮ್..!
ಐತಿಹಾಸಿಕ ಪ್ರವಾಸಿತಾಣ ನಂದಿಗಿರಿಧಾಮ ಫುಲ್ ಟ್ರಾಫಿಕ್ ಜಾಮ್..!