‘ಭೂಮಿಯ ಮೇಲಿನ ಅದೃಷ್ಟಶಾಲಿ ವ್ಯಕ್ತಿ ಎನಿಸುತ್ತಿದೆ’; ಚಿಯಾನ್ ವಿಕ್ರಮ್ ಭೇಟಿ ಮಾಡಿದ ರಿಷಬ್

Updated on: Aug 07, 2024 | 7:50 AM

ನಟ ರಿಷಬ್ ಶೆಟ್ಟಿ ಅವರು ಕಾಲಿವುಡ್ ನಟ ಚಿಯಾನ್ ವಿಕ್ರಮ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದಾರೆ. ವಿಕ್ರಮ್ ಅವರು ವಿವಿಧ ಪಾತ್ರಗಳ ಮೂಲಕ ಅನೇಕರಿಗೆ ಸ್ಫೂರ್ತಿ. ರಿಷಬ್ ಶೆಟ್ಟಿ ಅವರಿಗೂ ವಿಕ್ರಮ್ ಸ್ಫೂರ್ತಿ ನೀಡಿದ್ದಾರೆ. ಹೀಗಾಗಿ ರಿಷಬ್​ಗೆ ಈ ಭೇಟಿ ವಿಶೇಷ ಎನಿಸಿಕೊಂಡಿದೆ.

1 / 6
ರಿಷಬ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ಚಿಯಾನ್ ವಿಕ್ರಮ್ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಭೇಟಿ ಏಕೆ ಮುಖ್ಯ ಎಂಬುದನ್ನು ಅವರು ವಿವರಿಸಿದ್ದಾರೆ.

ರಿಷಬ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ಚಿಯಾನ್ ವಿಕ್ರಮ್ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಭೇಟಿ ಏಕೆ ಮುಖ್ಯ ಎಂಬುದನ್ನು ಅವರು ವಿವರಿಸಿದ್ದಾರೆ.

2 / 6

ಸಿನಿಮಾ ಬಗ್ಗೆ ಪ್ರೀತಿ ಮೂಡಿದಾಗಿನಿಂದಲೂ ರಿಷಬ್ ಶೆಟ್ಟಿ ಅವರಿಗೆ ಚಿಯಾನ್ ವಿಕ್ರಮ್ ಅವರೇ ಮಾದರಿ. ಅವರ ಸಿನಿಮಾಗಳನ್ನು ನೋಡಿ ಬೆಳೆದವರು ರಿಷಬ್. ಈ ಕಾರಣಕ್ಕೆ ರಿಷಬ್ ಅವರಿಗೆ ವಿಕ್ರಮ್ ಅವರನ್ನು ಭೇಟಿ ಮಾಡಬೇಕು ಎಂಬ ಆಸೆ ಇತ್ತು.

3 / 6

‘ತಂಗಲಾನ್’ ಸಿನಿಮಾದ ಪ್ರೆಸ್​ಮೀಟ್ ಬೆಂಗಳೂರಲ್ಲಿ ಆಗಸ್ಟ್​ 6ರಂದು ನಡೆದಿದೆ. ಈ ಸಿನಿಮಾದಲ್ಲಿ ವಿಕ್ರಮ್ ನಟಿಸಿದ್ದಾರೆ. ಅವರು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ರಿಷಬ್ ಹಾಗೂ ವಿಕ್ರಮ್ ಭೇಟಿ ಆಗಿದೆ.

4 / 6

ಕಳೆದ 24 ವರ್ಷಗಳಿಂದ ವಿಕ್ರಮ್ ಅವರನ್ನು ಭೇಟಿ ಆಗಬೇಕು ಎಂಬುದು ರಿಷಬ್ ಕನಸಾಗಿತ್ತು. ಆ ಕನಸು ಕೊನೆಗೂ ಈಡೇರಿದೆ. ಖುಷಿಯ ಕ್ಷಣಗಳ ಫೋಟೋಗಳನ್ನು ರಿಷಬ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

5 / 6

‘24 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ನಿಮ್ಮನ್ನು ಭೇಟಿ ಆದೆ. ನಾನು ಭೂಮಿಯ ಮೇಲಿನ ಅದೃಷ್ಟಶಾಲಿ ವ್ಯಕ್ತಿ ಎಂದು ಭಾವಿಸುತ್ತೇನೆ. ನನ್ನಂತಹ ನಟರನ್ನು ಪ್ರೇರೇಪಿಸಿದಕ್ಕಾಗಿ ಧನ್ಯವಾದಗಳು’ ಎಂದು ರಿಷಬ್ ಬರೆದುಕೊಂಡಿದ್ದಾರೆ.

6 / 6

ರಿಷಬ್ ಶೆಟ್ಟಿ ಅವರು ಸದ್ಯ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾದ ಶೂಟಿಂಗ್ ಕುಂದಾಪುರದ ಸಮೀಪ ನಡೆಯುತ್ತಿದೆ.

Loading...
Unable to load recommendations.
Follow Us