‘ಸರಿಗಮಪ ಸೀಸನ್ 21’ ವಿನ್ನರ್ ಆದ ಶಿವಾನಿ ಸ್ವಾಮಿ; ಉಳಿದವರಿಗೆ ಎಷ್ಟನೇ ಸ್ಥಾನ?

Updated on: Jun 06, 2025 | 12:02 PM

ವಿವಿಧ ಹಂತಗಳಲ್ಲಿ ‘ಸರಿಗಮಪ’ ಅಂತಿಮ ಸುತ್ತಿಗೆ ಬಂದಿದೆ. ಈ ಮೊದಲು ‘ಟಿಕೆಟ್ ಟು ಫಿನಾಲೆ’ ನಡೆಸಲಾಯಿತು. ಆ ಬಳಿಕ ಸೆಮಿಫೈನಲ್ ನಡೆಯಿತು. ‘ಸರಿಗಮಪ’ ಫಿನಾಲೆಯಲ್ಲಿ ಶಿವಾನಿ ಸ್ವಾಮಿ ಅವರು ಗೆದ್ದು ಬೀಗಿದ್ದಾರೆ. ಉಳಿದವರಿಗೆ ಯಾವ ಸ್ಥಾನ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

1 / 5
‘ಸರಿಗಮಪ ಸೀಸನ್ 21’ರ ವಿನ್ನರ್ ಸ್ಥಾನ ಬೀದರ್​ನ ಶಿವಾನಿ ಸ್ವಾಮಿಗೆ ಸಿಕ್ಕಿದೆ . ಅದ್ಭುತ ಕಂಠದ ಮೂಲಕ ಎಲ್ಲರ ಗಮನ ಸೆಳೆದ ಅವರಿಗೆ ವಿಜಯದ ಕಿರೀಟ ಸಿಕ್ಕಿದೆ. ಜೀ5 ಒಟಿಟಿಯಲ್ಲಿ ಜೂನ್ 5ರಂದು ಎಪಿಸೋಡ್ ಪ್ರಸಾರ ಕಂಡಿದೆ.

‘ಸರಿಗಮಪ ಸೀಸನ್ 21’ರ ವಿನ್ನರ್ ಸ್ಥಾನ ಬೀದರ್​ನ ಶಿವಾನಿ ಸ್ವಾಮಿಗೆ ಸಿಕ್ಕಿದೆ . ಅದ್ಭುತ ಕಂಠದ ಮೂಲಕ ಎಲ್ಲರ ಗಮನ ಸೆಳೆದ ಅವರಿಗೆ ವಿಜಯದ ಕಿರೀಟ ಸಿಕ್ಕಿದೆ. ಜೀ5 ಒಟಿಟಿಯಲ್ಲಿ ಜೂನ್ 5ರಂದು ಎಪಿಸೋಡ್ ಪ್ರಸಾರ ಕಂಡಿದೆ.

2 / 5

ಶಿವಾನಿ ಸ್ವಾಮಿ ಕಷ್ಟದಿಂದ ಮೇಲೆ ಬಂದವರು. ಅವರ ಪ್ರತಿಭೆಯನ್ನು ಗುರುತಿಸಿ ಜೀ ಕನ್ನಡ ‘ಸರಿಗಮಪ’ ಶೋಗೆ ಅವಕಾಶ ನೀಡಿತು. ಈ ಅವಕಾಶವನ್ನು ಅವರು ಉತ್ತಮವಾಗಿ ಬಳಸಿಕೊಂಡು ವಿನ್ ಆದರು. ಅವರು ವಿನ್ನರ್ ಪಟ್ಟ ಅಲಂಕರಿಸಿದ್ದಾರೆ.

3 / 5

ಶಿವಾನಿ ಸ್ವಾಮಿಗೆ ಅಭಿಮಾನಿಗಳು ಹಾಗೂ ಆಪ್ತರು ಅಭಿನಂದನೆ ತಿಳಿಸಿದ್ದಾರೆ. ಈ ವಿಜಯವು ಅವರ ಸಂಗೀತ ಜೀವನಕ್ಕೆ ಮತ್ತಷ್ಟು ಮೈಲೇಜ್ ನೀಡುವ ಸಾಧ್ಯತೆ ಇದೆ. ಜೀ ಕನ್ನಡದಲ್ಲಿ ಜೂನ್ 7ರಂದು ಎಪಿಸೋಡ್ ಪ್ರಸಾರ ಕಾಣಲಿದೆ.

4 / 5

ಇನ್ನು, ಆರಾಧ್ಯಾ ರಾವ್ ಅವರು ಮೊದಲ ರನ್ನರ್ ಅಪ್ ಆಗಿದ್ದಾರೆ. ಶಿವಾನಿ ಜೊತೆ ಇವರಿಗೂ ನೇರವಾಗಿ ಫಿನಾಲೆ ಟಿಕೆಟ್ ಸಿಕ್ಕಿತ್ತು. ಅವರು ರನ್ನರ್ ಅಪ್ ಸ್ಥಾನಕ್ಕೆ ಖಷಿಪಟ್ಟುಕೊಂಡಿದ್ದಾರೆ. ಇವರೇ ವಿನ್ ಆಗಬೇಕು ಎಂಬುದು ಅನೇಕರ ಆಸೆ ಆಗಿತ್ತು.

5 / 5

ಎರಡನೇ ರನ್ನರ್ ಅಪ್ ಆಗಿ ರಶ್ಮಿ ಇದ್ದಾರೆ. ಈ ಬಾರಿ ಟಾಪ್ ಮೂರರಲ್ಲಿ ಇದ್ದವರು ಮಹಿಳಾ ಸ್ಪರ್ಧಿಗಳೇ ಆಗಿದ್ದರು ಅನ್ನೋದು ವಿಶೇಷ. ಫಿನಾಲೆಯಲ್ಲಿ ಒಟ್ಟೂ ಆರು ಮಂದಿ ಇದ್ದರು.

Published On - 11:35 am, Fri, 6 June 25

Loading...
Unable to load recommendations.
Follow Us