Shivarajkumar: ಮೊದಲ ಹಂತದ ಶೂಟಿಂಗ್​ ಮುಗಿಸಿದ ‘ಘೋಸ್ಟ್​’; ಶಿವಣ್ಣ-ಶ್ರೀನಿ ಸೂಪರ್​ ಫಾಸ್ಟ್​

| Updated By: ಮದನ್​ ಕುಮಾರ್​

Updated on: Nov 23, 2022 | 11:43 AM

Ghost Kannada Movie: ಐದು ಸಾಹಸ ಸನ್ನಿವೇಶಗಳು ‘ಘೋಸ್ಟ್​’ ಚಿತ್ರದಲ್ಲಿ ಇರಲಿವೆ. ಶಿವರಾಜ್​ಕುಮಾರ್ ನಟನೆಯ ಈ ಚಿತ್ರಕ್ಕೆ ಶ್ರೀನಿ ನಿರ್ದೇಶನ ಮಾಡುತ್ತಿದ್ದಾರೆ.

1 / 5
ನಟ ಶಿವರಾಜ್​ಕುಮಾರ್​ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಪೈಕಿ ‘ಘೋಸ್ಟ್​’ ಸಿನಿಮಾ ಕೂಡ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಬಗ್ಗೆ ಒಂದು ಅಪ್​ಡೇಟ್​ ಸಿಕ್ಕಿದೆ.

ನಟ ಶಿವರಾಜ್​ಕುಮಾರ್​ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಪೈಕಿ ‘ಘೋಸ್ಟ್​’ ಸಿನಿಮಾ ಕೂಡ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಬಗ್ಗೆ ಒಂದು ಅಪ್​ಡೇಟ್​ ಸಿಕ್ಕಿದೆ.

2 / 5
‘ಘೋಸ್ಟ್​’ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. 2ನೇ ಹಂತದ ಚಿತ್ರೀಕರಣ ಡಿಸೆಂಬರ್​ನಲ್ಲಿ ನಡೆಯಲಿದೆ. ನಟ-ನಿರ್ದೇಶಕ ಶ್ರೀನಿ ಅವರು ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ‘ಘೋಸ್ಟ್​’ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ.

‘ಘೋಸ್ಟ್​’ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. 2ನೇ ಹಂತದ ಚಿತ್ರೀಕರಣ ಡಿಸೆಂಬರ್​ನಲ್ಲಿ ನಡೆಯಲಿದೆ. ನಟ-ನಿರ್ದೇಶಕ ಶ್ರೀನಿ ಅವರು ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ‘ಘೋಸ್ಟ್​’ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ.

3 / 5
‘ಸಂದೇಶ್ ಪ್ರೊಡಕ್ಷನ್ಸ್’ ಮೂಲಕ ಸಂದೇಶ್ ಎನ್. ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬೆಂಗಳೂರಿನ ಮಿನರ್ವ ಮಿಲ್​ನಲ್ಲಿ 15ಕ್ಕೂ ಹೆಚ್ಚು ಸೆಟ್​ಗಳನ್ನು ನಿರ್ಮಿಸಿ, 28 ದಿನಗಳ ಕಾಲ ಮೊದಲ ಹಂತದ ಶೂಟಿಂಗ್​ ಮಾಡಲಾಗಿದೆ.

‘ಸಂದೇಶ್ ಪ್ರೊಡಕ್ಷನ್ಸ್’ ಮೂಲಕ ಸಂದೇಶ್ ಎನ್. ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬೆಂಗಳೂರಿನ ಮಿನರ್ವ ಮಿಲ್​ನಲ್ಲಿ 15ಕ್ಕೂ ಹೆಚ್ಚು ಸೆಟ್​ಗಳನ್ನು ನಿರ್ಮಿಸಿ, 28 ದಿನಗಳ ಕಾಲ ಮೊದಲ ಹಂತದ ಶೂಟಿಂಗ್​ ಮಾಡಲಾಗಿದೆ.

4 / 5
ನಿರ್ದೇಶಕ ಶ್ರೀನಿ ಅವರೇ ಕಥೆ-ಚಿತ್ರಕಥೆ ಬರೆದಿದ್ದಾರೆ. ಮಾಸ್ತಿ ಹಾಗೂ ಪ್ರಸನ್ನ ಅವರು ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣದಲ್ಲಿ ‘ಘೋಸ್ಟ್‌’ ಚಿತ್ರ ಮೂಡಿಬರುತ್ತಿದೆ.

ನಿರ್ದೇಶಕ ಶ್ರೀನಿ ಅವರೇ ಕಥೆ-ಚಿತ್ರಕಥೆ ಬರೆದಿದ್ದಾರೆ. ಮಾಸ್ತಿ ಹಾಗೂ ಪ್ರಸನ್ನ ಅವರು ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣದಲ್ಲಿ ‘ಘೋಸ್ಟ್‌’ ಚಿತ್ರ ಮೂಡಿಬರುತ್ತಿದೆ.

5 / 5
ಐದು ಸಾಹಸ ಸನ್ನಿವೇಶಗಳು ‘ಘೋಸ್ಟ್​’ ಚಿತ್ರದಲ್ಲಿ ಇರಲಿವೆ. ಶಿವರಾಜ್​ಕುಮಾರ್ ಜೊತೆ ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ನಟಿಸುತ್ತಿದ್ದಾರೆ.

ಐದು ಸಾಹಸ ಸನ್ನಿವೇಶಗಳು ‘ಘೋಸ್ಟ್​’ ಚಿತ್ರದಲ್ಲಿ ಇರಲಿವೆ. ಶಿವರಾಜ್​ಕುಮಾರ್ ಜೊತೆ ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ನಟಿಸುತ್ತಿದ್ದಾರೆ.