ಮಂಜುಗಡ್ಡೆಯಲ್ಲಿ ಮೂಡಿಬಂದ ಕಲಾಕೃತಿಗಳು; ಬೇಸಿಗೆಯ ಬೇಗೆಯ ನಡುವೆ ತಂಪನ್ನೆರೆಯುತ್ತಿದೆ ಸ್ನೋ ಸಿಟಿ

Poornima Agali Nagaraj Edited By: ಆಯೇಷಾ ಬಾನು

Updated on: Mar 28, 2024 | 10:13 AM

ಬೆಂಗಳೂರಿನಲ್ಲಿರುವ ಸ್ನೋ ಸಿಟಿಯಲ್ಲಿ ಮಂಜುಗಡ್ಡೆಗಳ ಸಹಾಯದಿಂದ ಕಲಾಕೃತಿಗಳನ್ನು ನಿರ್ಮಿಸಲಾಗಿದ್ದು ಜನರು ಫಿದಾ ಆಗಿದ್ದಾರೆ. ಸ್ನೋ ಸಿಟಿಗೆ ಬರುವವರ ಸಂಖ್ಯೆ ಕೂಡ ಹೆಚ್ಚಾಗಿದ್ದು ನಗರದ ಬಿಸಿಲಿನ ಬೇಗೆಗೆ ತಂಪಾಗಿ ಎಂಜಾಯ್ ಮಾಡ್ತಿದ್ದಾರೆ. 5 ರಿಂದ 8 ಡಿಗ್ರಿ ಉಷ್ಣಾಂಶವಿರುವ ಮಂಜುಗಡ್ಡೆಯಲ್ಲಿ ಕೆತ್ತನೆ ಕೆಲಸ‌ ಮಾಡಿ ಮಾಯಾ ಲೋಕವನ್ನೇ ಸೃಷ್ಟಿಸಲಾಗಿದೆ.

1 / 7
ಇಷ್ಟು ದಿನ ಕಲ್ಲಿನ ಕೆತ್ತನೆ, ಮರದ ಕೆತ್ತನೆ, ಬಿದರಿನ ಕೆತ್ತನೆ‌ ನೋಡುತಿದ್ವಿ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಮಂಜುಗಡ್ಡೆಯಿಂದ ವಿಶೇಷ ಕೆತ್ತನೆಗಳನ್ನ ಮಾಡಲಾಗಿದೆ. ಸುಡುಬಿಸಿಲಿನಲ್ಲಿ ಮಂಜುಗಡ್ಡೆಯಲ್ಲಿ ಅರಳಿದ ಕಲಾಕೃತಿಗೆ ಜನ ಫಿದಾ ಆಗಿದ್ದಾರೆ.

ಇಷ್ಟು ದಿನ ಕಲ್ಲಿನ ಕೆತ್ತನೆ, ಮರದ ಕೆತ್ತನೆ, ಬಿದರಿನ ಕೆತ್ತನೆ‌ ನೋಡುತಿದ್ವಿ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಮಂಜುಗಡ್ಡೆಯಿಂದ ವಿಶೇಷ ಕೆತ್ತನೆಗಳನ್ನ ಮಾಡಲಾಗಿದೆ. ಸುಡುಬಿಸಿಲಿನಲ್ಲಿ ಮಂಜುಗಡ್ಡೆಯಲ್ಲಿ ಅರಳಿದ ಕಲಾಕೃತಿಗೆ ಜನ ಫಿದಾ ಆಗಿದ್ದಾರೆ.

2 / 7
ಸಿಲಿಕಾನ್‌‌‌ ಸಿಟಿಯಲ್ಲಿ ಬಿಸಿಲಿನಿಂದಾಗಿ ಜನರು ಮೊದಲೇ‌ ರೋಸಿ ಹೋಗ್ತಿದ್ದಾರೆ.‌ ಮತ್ತೊಂದೆಡೆ ಮಂಜುಗಡ್ಡೆಯಲ್ಲಿ ವಿವಿಧ ಕಲಾಕೃತಿಗಳು ಮೂಡಿ ಬಂದಿದ್ದು ಜನ ಫಿದಾ ಆಗಿದ್ದಾರೆ. ಕೈ ಮರಗಟ್ಟುವ ಮಂಜಿನ ಗಡ್ಡೆಯಲ್ಲಿ ಸುಂದರವಾದ ಹಿಮದ ಶಿಲೆಗಳು ಅರಳಿದ್ದು, 5 ರಿಂದ 8 ಡಿಗ್ರಿ ಉಷ್ಣಾಂಶವಿರುವ ಮಂಜುಗಡ್ಡೆಯಲ್ಲಿ ಕೆತ್ತನೆ ಕೆಲಸ‌ ಮಾಡಿ ಮಾಯಾ ಲೋಕವನ್ನೇ  ಸೃಷ್ಟಿಸಲಾಗಿದೆ.

ಸಿಲಿಕಾನ್‌‌‌ ಸಿಟಿಯಲ್ಲಿ ಬಿಸಿಲಿನಿಂದಾಗಿ ಜನರು ಮೊದಲೇ‌ ರೋಸಿ ಹೋಗ್ತಿದ್ದಾರೆ.‌ ಮತ್ತೊಂದೆಡೆ ಮಂಜುಗಡ್ಡೆಯಲ್ಲಿ ವಿವಿಧ ಕಲಾಕೃತಿಗಳು ಮೂಡಿ ಬಂದಿದ್ದು ಜನ ಫಿದಾ ಆಗಿದ್ದಾರೆ. ಕೈ ಮರಗಟ್ಟುವ ಮಂಜಿನ ಗಡ್ಡೆಯಲ್ಲಿ ಸುಂದರವಾದ ಹಿಮದ ಶಿಲೆಗಳು ಅರಳಿದ್ದು, 5 ರಿಂದ 8 ಡಿಗ್ರಿ ಉಷ್ಣಾಂಶವಿರುವ ಮಂಜುಗಡ್ಡೆಯಲ್ಲಿ ಕೆತ್ತನೆ ಕೆಲಸ‌ ಮಾಡಿ ಮಾಯಾ ಲೋಕವನ್ನೇ ಸೃಷ್ಟಿಸಲಾಗಿದೆ.

3 / 7
ಈ ಮಂಜುಗಡ್ಡೆಯ ಮಾಯಾನಗರಿ ನಗರದ ಸ್ನೋ ಸಿಟಿಯಲ್ಲಿ ನಿರ್ಮಾಣವಾಗಿದೆ. ಕಲ್ಲಿನಲ್ಲಿ ಕೆತ್ತುವುದಕ್ಕಿಂತ ಸೂಕ್ಷ್ಮವಾಗಿರುವ ಮಂಜುಗಡ್ಡೆಯ ಕೆತ್ತನೆಯನ್ನ ಮಾಡಿದ್ದಾರೆ. ಇನ್ನು, ಈ ಮಂಜುಗಡ್ಡೆಯಿಂದ ಸುಂದರವಾದ ಏಳು ಅದ್ಭುತಗಳು ನಿರ್ಮಾಣವಾಗಿದ್ದು ಈ ಕೆತ್ತನೆಗೆ ಸಿಲಿಕಾನ್ ಸಿಟಿ ಮಂದಿ ಖುಷ್ ಆಗಿದ್ದಾರೆ.

ಈ ಮಂಜುಗಡ್ಡೆಯ ಮಾಯಾನಗರಿ ನಗರದ ಸ್ನೋ ಸಿಟಿಯಲ್ಲಿ ನಿರ್ಮಾಣವಾಗಿದೆ. ಕಲ್ಲಿನಲ್ಲಿ ಕೆತ್ತುವುದಕ್ಕಿಂತ ಸೂಕ್ಷ್ಮವಾಗಿರುವ ಮಂಜುಗಡ್ಡೆಯ ಕೆತ್ತನೆಯನ್ನ ಮಾಡಿದ್ದಾರೆ. ಇನ್ನು, ಈ ಮಂಜುಗಡ್ಡೆಯಿಂದ ಸುಂದರವಾದ ಏಳು ಅದ್ಭುತಗಳು ನಿರ್ಮಾಣವಾಗಿದ್ದು ಈ ಕೆತ್ತನೆಗೆ ಸಿಲಿಕಾನ್ ಸಿಟಿ ಮಂದಿ ಖುಷ್ ಆಗಿದ್ದಾರೆ.

4 / 7
ಇನ್ನು ಈ ಕಲಾಕೃತಿಗಳನ್ನ ಮಾಡಲು 22 ದಿನಗಳ ಸಮಯ ತೆಗೆದುಕೊಂಡಿದ್ದು, ಇವು ಎಂತವರನ್ನೂ ಬೆರಗಾಗಿಸುವಂತಿವೆ. ತಮ್ಮ ಕಲಾಕೃತಿಗಳು ಅದ್ಭುತವಾಗಿ ಮೂಡಿ ಬಂದಿದ್ದು ಜನರನ್ನು ಸೆಳೆಯುತ್ತಿರುವ ಬಗ್ಗೆ ಕಲಾಕಾರರು ಸಂತೋಷ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಕಲಾಕೃತಿಗಳನ್ನ ಮಾಡಲು 22 ದಿನಗಳ ಸಮಯ ತೆಗೆದುಕೊಂಡಿದ್ದು, ಇವು ಎಂತವರನ್ನೂ ಬೆರಗಾಗಿಸುವಂತಿವೆ. ತಮ್ಮ ಕಲಾಕೃತಿಗಳು ಅದ್ಭುತವಾಗಿ ಮೂಡಿ ಬಂದಿದ್ದು ಜನರನ್ನು ಸೆಳೆಯುತ್ತಿರುವ ಬಗ್ಗೆ ಕಲಾಕಾರರು ಸಂತೋಷ ವ್ಯಕ್ತಪಡಿಸಿದ್ದಾರೆ.

5 / 7
ಕಲ್ಲಿನಲ್ಲಿ,‌ ಮರದಲ್ಲಿ ಕೆತ್ತನೆ ಮಾಡುವುದೇ ಕಷ್ಟ. ‌ಅದರಲ್ಲೂ ಕರಗಿ ನೀರಾಗುವ ಮಂಜುಗಡ್ಡೆಯಲ್ಲಿ ಮೈನಸ್ 5 ಡಿಗ್ರಿಯಲ್ಲಿ ಕಲಾಕೃತಿಗಳನ್ನ ಮಾಡಿರುವುದು ತುಂಬ ಖುಷಿ ಕೊಡುತ್ತಿದೆ. ಈ ಬೇಸಿಗೆಗೆ ಸ್ನೋ ಸಿಟಿ ಹೇಳಿ ಮಾಡಿಸಿದಂಗಿದೆ ಎಂದು ಜನರು ಖುಷಿ ವ್ಯಕ್ತಪಡಿಸಿದ್ರು.

ಕಲ್ಲಿನಲ್ಲಿ,‌ ಮರದಲ್ಲಿ ಕೆತ್ತನೆ ಮಾಡುವುದೇ ಕಷ್ಟ. ‌ಅದರಲ್ಲೂ ಕರಗಿ ನೀರಾಗುವ ಮಂಜುಗಡ್ಡೆಯಲ್ಲಿ ಮೈನಸ್ 5 ಡಿಗ್ರಿಯಲ್ಲಿ ಕಲಾಕೃತಿಗಳನ್ನ ಮಾಡಿರುವುದು ತುಂಬ ಖುಷಿ ಕೊಡುತ್ತಿದೆ. ಈ ಬೇಸಿಗೆಗೆ ಸ್ನೋ ಸಿಟಿ ಹೇಳಿ ಮಾಡಿಸಿದಂಗಿದೆ ಎಂದು ಜನರು ಖುಷಿ ವ್ಯಕ್ತಪಡಿಸಿದ್ರು.

6 / 7
ಒಟ್ನಲ್ಲಿ, ಹಿಮದಿಂದ ಏಳು ಅದ್ಭುತಗಳು ಅರಳಿದ್ದು, ಇವುಗಳನ್ನ ನೋಡಲು ಸಿಲಿಕಾನ್ ಮಂದಿ ಫ್ಯಾಮಿಲಿ ಸಮೇತ ಬರುತ್ತಿದ್ದಾರೆ. ಕೆತ್ತನೆಯ ವಿಶೇಷತೆಯ ಬಗ್ಗೆ ಎಂಜಾಯ್ ಮಾಡ್ತಿದ್ದಾರೆ. ‌

ಒಟ್ನಲ್ಲಿ, ಹಿಮದಿಂದ ಏಳು ಅದ್ಭುತಗಳು ಅರಳಿದ್ದು, ಇವುಗಳನ್ನ ನೋಡಲು ಸಿಲಿಕಾನ್ ಮಂದಿ ಫ್ಯಾಮಿಲಿ ಸಮೇತ ಬರುತ್ತಿದ್ದಾರೆ. ಕೆತ್ತನೆಯ ವಿಶೇಷತೆಯ ಬಗ್ಗೆ ಎಂಜಾಯ್ ಮಾಡ್ತಿದ್ದಾರೆ. ‌

7 / 7
ಸುಡುವ ಬಿಸಿಲಿಗೆ ಬೇಸತ್ತವರಿಗೆ ಸ್ನೋ ಸಿಟಿ ತೆಂಪನೆರಿಯುತ್ತಿದೆ. ಅದರಲ್ಲೂ ಮಂಜುಗಡ್ಡೆಯಲ್ಲಿ ಮೂಡಿಬಂದ ಕಲಾಕೃತಿಗಳು ಮನಸ್ಸಿಗೆ ಮತ್ತಷ್ಟು ಆನಂದವನ್ನೀಡುತ್ತಿದೆ. ಸದ್ಯ ಸ್ನೋ ಸಿಟಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.

ಸುಡುವ ಬಿಸಿಲಿಗೆ ಬೇಸತ್ತವರಿಗೆ ಸ್ನೋ ಸಿಟಿ ತೆಂಪನೆರಿಯುತ್ತಿದೆ. ಅದರಲ್ಲೂ ಮಂಜುಗಡ್ಡೆಯಲ್ಲಿ ಮೂಡಿಬಂದ ಕಲಾಕೃತಿಗಳು ಮನಸ್ಸಿಗೆ ಮತ್ತಷ್ಟು ಆನಂದವನ್ನೀಡುತ್ತಿದೆ. ಸದ್ಯ ಸ್ನೋ ಸಿಟಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.

Poornima Agali Nagaraj
Follow Us