AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಗವದ್ಗೀತೆಯ ಈ ಪಾಠಗಳು ಸಂಬಂಧವನ್ನು ಬಲಪಡಿಸಲು ಸಹಕಾರಿ

ಇಂದಿನ ಕಾಲದಲ್ಲಿ, ಪ್ರೀತಿ ಆಗಿರಲಿ ಅಥವಾ ದಾಂಪತ್ಯ ಜೀವನವೇ ಆಗಿರಲಿ ಸಂಬಂಧವನ್ನು ಕಾಪಾಡಿಕೊಳ್ಳುವುದು ತುಂಬಾನೇ ಕಷ್ಟಕರವಾಗಿದೆ. ಸಂಗಾತಿಗಳ ನಡುವೆ ಜಗಳ, ಅಪನಂಬಿಕೆ ಮನಸ್ತಾಪಗಳ ಕಾರಣದಿಂದಾಗಿ ಸಂಬಂಧಗಳು ಮುರಿದು ಬೀಳುತ್ತಿವೆ. ಹೀಗಿರುವಾಗ ಭಗವದ್ಗೀತೆಯ ಈ ಕೆಲವೊಂದು ಉಪದೇಶಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ನಿಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಬಹುದು. ಹೌದು ಭಗವದ್ಗೀತೆಯಲ್ಲಿ ನಾವು ಯಾವ ರೀತಿ ಯಶಸ್ವಿ ಜೀವನವನ್ನು ನಡೆಸಬೇಕು, ಸವಾಲುಗಳನ್ನು ಯಾವ ರೀತಿ ಎದುರಿಸಬೇಕು ಹೀಗೆ ನಮ್ಮ ಜೀವನಕ್ಕೆ ಬೇಕಾದ ಅನೇಕ ಒಳ್ಳೆಯ ವಿಷಯಗಳಿವೆ. ಅದೇ ರೀತಿ ಭಗವದ್ಗೀತೆಯ ಈ ಕೆಲವು ಉಪದೇಶಗಳನ್ನು ಪಾಲಿಸುವ ಮೂಲಕ ಸಂಬಂಧವನ್ನು ಮತ್ತಷ್ಟು ಬಲಪಡಿಸಬಹುದು.

ಮಾಲಾಶ್ರೀ ಅಂಚನ್​
|

Updated on: May 14, 2025 | 8:13 PM

Share
ನಂಬಿಕೆ: ಸಂಬಂಧಗಳ ಅಡಿಪಾಯವೇ ನಂಬಿಕೆ. ಹೀಗಿರುವಾಗ ಸಂಗಾತಿಗಳ ನಡುವೆ ಪರಸ್ಪರ ನಂಬಿಕೆ ಇಲ್ಲದೆ ಹೋದರೆ ಆ ಸಂಬಂಧ ಎನ್ನುವಂತಹದ್ದು ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಹಾಗಾಗಿ ಒಂದು ಬಂಧ ಬಿಗಿಯಾಗಬೇಕೆಂದರೆ ಅಲ್ಲಿ ನಂಬಿಕೆ ಅನ್ನೋದು ತುಂಬಾನೇ ಮುಖ್ಯ.

ನಂಬಿಕೆ: ಸಂಬಂಧಗಳ ಅಡಿಪಾಯವೇ ನಂಬಿಕೆ. ಹೀಗಿರುವಾಗ ಸಂಗಾತಿಗಳ ನಡುವೆ ಪರಸ್ಪರ ನಂಬಿಕೆ ಇಲ್ಲದೆ ಹೋದರೆ ಆ ಸಂಬಂಧ ಎನ್ನುವಂತಹದ್ದು ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಹಾಗಾಗಿ ಒಂದು ಬಂಧ ಬಿಗಿಯಾಗಬೇಕೆಂದರೆ ಅಲ್ಲಿ ನಂಬಿಕೆ ಅನ್ನೋದು ತುಂಬಾನೇ ಮುಖ್ಯ.

1 / 6
ನಿರ್ಧಾರಗಳಿಗೆ ಗೌರವಕೊಡಿ: ನಿಮ್ಮ ಸಂಗಾತಿಯನ್ನು ಕಟ್ಟಿ ಹಾಕುವಂತಹ ಪ್ರಯತ್ನ ಮಾಡಬೇಡಿ. ಬದಲಿಗೆ ನಿಮ್ಮ ಸಂಗಾತಿ ಅವರ ಇಷ್ಟಾನಿಷ್ಟಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡಿ. ಇಬ್ಬರೂ ಒಟ್ಟಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಿ.  ಹೀಗೆ ಒಬ್ಬರಿಗೊಬ್ಬರು ಪ್ರಾಮುಖ್ಯತೆ ನೀಡಿದಾಗ, ಸಂಬಂಧದ ಬಂಧವು ಇನ್ನಷ್ಟು ಬಲಗೊಳ್ಳುತ್ತದೆ.

ನಿರ್ಧಾರಗಳಿಗೆ ಗೌರವಕೊಡಿ: ನಿಮ್ಮ ಸಂಗಾತಿಯನ್ನು ಕಟ್ಟಿ ಹಾಕುವಂತಹ ಪ್ರಯತ್ನ ಮಾಡಬೇಡಿ. ಬದಲಿಗೆ ನಿಮ್ಮ ಸಂಗಾತಿ ಅವರ ಇಷ್ಟಾನಿಷ್ಟಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡಿ. ಇಬ್ಬರೂ ಒಟ್ಟಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಿ. ಹೀಗೆ ಒಬ್ಬರಿಗೊಬ್ಬರು ಪ್ರಾಮುಖ್ಯತೆ ನೀಡಿದಾಗ, ಸಂಬಂಧದ ಬಂಧವು ಇನ್ನಷ್ಟು ಬಲಗೊಳ್ಳುತ್ತದೆ.

2 / 6
ಯಾವುದಕ್ಕೂ ಅಡ್ಡಿಪಡಿಸಬೇಡಿ:  ನೀವು ನಿಮ್ಮ ಸಂಗಾತಿಗೆ ಅಡ್ಡಿಪಡಿಸುತ್ತಲೇ ಇದ್ದರೆ ಮತ್ತು ಅವರು ಮುಕ್ತವಾಗಿ ಮತ್ತು ಸ್ವತಂತ್ರವಾಗಿ ಕೆಲಸಗಳನ್ನು ಮಾಡಲು ಬಿಡದಿದ್ದರೆ, ಅದು ಅವರಿಗೆ ಸಂಬಂಧದಲ್ಲಿ ಉಸಿರುಗಟ್ಟಿದ ಭಾವನೆಯನ್ನು ಮೂಡಿಸುತ್ತದೆ. ಹಾಗಾಗಿ ನಿಮ್ಮ ಸಂಗಾತಿಯನ್ನು ಅವರ ಆಯ್ಕೆಯ ಪ್ರಕಾರ ಬದುಕಲು ಬಿಡಿ. ಅದು ಮಾಡಬೇಡ, ಈ ಕೆಲಸ ಮಾಡಬೇಡ ಎಂದು ಅವರಿಗೆ ಯಾವತ್ತೂ ಅಡ್ಡಿಪಡಿಸಬೇಡಿ.

ಯಾವುದಕ್ಕೂ ಅಡ್ಡಿಪಡಿಸಬೇಡಿ: ನೀವು ನಿಮ್ಮ ಸಂಗಾತಿಗೆ ಅಡ್ಡಿಪಡಿಸುತ್ತಲೇ ಇದ್ದರೆ ಮತ್ತು ಅವರು ಮುಕ್ತವಾಗಿ ಮತ್ತು ಸ್ವತಂತ್ರವಾಗಿ ಕೆಲಸಗಳನ್ನು ಮಾಡಲು ಬಿಡದಿದ್ದರೆ, ಅದು ಅವರಿಗೆ ಸಂಬಂಧದಲ್ಲಿ ಉಸಿರುಗಟ್ಟಿದ ಭಾವನೆಯನ್ನು ಮೂಡಿಸುತ್ತದೆ. ಹಾಗಾಗಿ ನಿಮ್ಮ ಸಂಗಾತಿಯನ್ನು ಅವರ ಆಯ್ಕೆಯ ಪ್ರಕಾರ ಬದುಕಲು ಬಿಡಿ. ಅದು ಮಾಡಬೇಡ, ಈ ಕೆಲಸ ಮಾಡಬೇಡ ಎಂದು ಅವರಿಗೆ ಯಾವತ್ತೂ ಅಡ್ಡಿಪಡಿಸಬೇಡಿ.

3 / 6
ನಿಷ್ಠೆ ತುಂಬಾ ಮುಖ್ಯ: ಸಂಗಾತಿ ಮತ್ತು ನಿಮ್ಮ ಪ್ರೀತಿಗೆ ಯಾವಾಗಲೂ ನಿಷ್ಠರಾಗಿರಿ. ಯಾವುದೇ ಕಾರಣಕ್ಕೂ ಸಂಗಾತಿಗೆ ಮೋಸ ಮಾಡುವಂತಹದ್ದು ಅಥವಾ ಸುಳ್ಳು ಹೇಳುವಂತಹದ್ದು ಮಾಡಲು ಹೋಗಬೇಡಿ. ಈ ನಡವಳಿಕೆ ಖಂಡಿತವಾಗಿಯೂ ಸಂಬಂಧವನ್ನು ಹಾಳು ಮಾಡುತ್ತದೆ. ಹಾಗಾಗಿ ನೀವು ಸಂಗಾತಿಯೊಂದಿಗೆ ನಿಷ್ಠೆಯಿಂದ ಇರುವುದು ಬಹಳ ಮುಖ್ಯ.

ನಿಷ್ಠೆ ತುಂಬಾ ಮುಖ್ಯ: ಸಂಗಾತಿ ಮತ್ತು ನಿಮ್ಮ ಪ್ರೀತಿಗೆ ಯಾವಾಗಲೂ ನಿಷ್ಠರಾಗಿರಿ. ಯಾವುದೇ ಕಾರಣಕ್ಕೂ ಸಂಗಾತಿಗೆ ಮೋಸ ಮಾಡುವಂತಹದ್ದು ಅಥವಾ ಸುಳ್ಳು ಹೇಳುವಂತಹದ್ದು ಮಾಡಲು ಹೋಗಬೇಡಿ. ಈ ನಡವಳಿಕೆ ಖಂಡಿತವಾಗಿಯೂ ಸಂಬಂಧವನ್ನು ಹಾಳು ಮಾಡುತ್ತದೆ. ಹಾಗಾಗಿ ನೀವು ಸಂಗಾತಿಯೊಂದಿಗೆ ನಿಷ್ಠೆಯಿಂದ ಇರುವುದು ಬಹಳ ಮುಖ್ಯ.

4 / 6
ಸಂಗಾತಿಯನ್ನು ಗೌರವಿಸಿ: ಯಾವುದೇ ಕಾರಣಕ್ಕೂ ನಿಮ್ಮ ಸಂಗಾತಿಯನ್ನು ಕೀಳಾಗಿ ಕಾಣಬೇಡಿ. ಅವರಿಗೆ ಗೌರವ ಕೊಡಿ. ಸಂಗಾತಿಗೆ ಹಾಗೂ ಪ್ರೀತಿ ಗೌರವ ಕೊಟ್ಟರೆ ಮಾತ್ರ ಆ ಸಂಬಂಧ ಎನ್ನುವಂತಹದ್ದು ಶಾಶ್ವತವಾಗಿರುತ್ತದೆ.

ಸಂಗಾತಿಯನ್ನು ಗೌರವಿಸಿ: ಯಾವುದೇ ಕಾರಣಕ್ಕೂ ನಿಮ್ಮ ಸಂಗಾತಿಯನ್ನು ಕೀಳಾಗಿ ಕಾಣಬೇಡಿ. ಅವರಿಗೆ ಗೌರವ ಕೊಡಿ. ಸಂಗಾತಿಗೆ ಹಾಗೂ ಪ್ರೀತಿ ಗೌರವ ಕೊಟ್ಟರೆ ಮಾತ್ರ ಆ ಸಂಬಂಧ ಎನ್ನುವಂತಹದ್ದು ಶಾಶ್ವತವಾಗಿರುತ್ತದೆ.

5 / 6
ಅಹಂಕಾರ: ಸಂಬಂಧದಲ್ಲಿ ಅಹಂಕಾರದ ಭಾವನೆ ಬಂದರೆ  ಸಂಬಂಧವು ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಹೌದು ನೀವು ನಾನೇ ಶ್ರೇಷ್ಠ, ನನ್ನಿಂದಲೇ ಎಲ್ಲ  ಎಂಬ ಅಹಂಕಾರದ ಭಾವನೆಯನ್ನು ಇಟ್ಟುಕೊಂಡರೆ ಇದು ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ. ಆದ್ದರಿಂದ ನಾವಿಬ್ಬರು ಸಮಾನರು ಎಂಬುದನ್ನು ನೆನಪಿಟ್ಟುಕೊಳ್ಳಿ.

ಅಹಂಕಾರ: ಸಂಬಂಧದಲ್ಲಿ ಅಹಂಕಾರದ ಭಾವನೆ ಬಂದರೆ ಸಂಬಂಧವು ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಹೌದು ನೀವು ನಾನೇ ಶ್ರೇಷ್ಠ, ನನ್ನಿಂದಲೇ ಎಲ್ಲ ಎಂಬ ಅಹಂಕಾರದ ಭಾವನೆಯನ್ನು ಇಟ್ಟುಕೊಂಡರೆ ಇದು ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ. ಆದ್ದರಿಂದ ನಾವಿಬ್ಬರು ಸಮಾನರು ಎಂಬುದನ್ನು ನೆನಪಿಟ್ಟುಕೊಳ್ಳಿ.

6 / 6
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!