Dharmendra Pradhan: ಒಡಿಶಾದ ಬಾರಗಡ್​ನಲ್ಲಿ ಬಿಪಿಸಿಎಲ್ 2ಜಿ ಎಥೆನಾಲ್ ಬಯರಿಫೈನರಿಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭೇಟಿ

Updated on: Jun 11, 2023 | 7:07 PM

ಭುನವೇಶ್ವರ್: ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ದಿಮೆದಾರಿಕೆ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಜೂನ್ 11ರಂದು ಒಡಿಶಾದ ಬಾರಗಡ್ (Bargarh) ಜಿಲ್ಲೆಯಲ್ಲಿರುವ ಬಿಪಿಸಿಎಲ್ 2ಜಿ ಬಯೋರಿಫೈನರಿ (2G Biorefinery) ಘಟಕಕ್ಕೆ ಭೇಟಿ ನೀಡಿದರು.

1 / 7
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 9 ವರ್ಷದ ಆಡಳಿತದ ಯಶಸ್ಸಿನ ಆಚರಣೆಯ ಭಾಗವಾಗಿ ವಿಕಾಸತೀರ್ಥ ಯಾತ್ರೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಒಡಿಶಾದ ಬಾರಗಡ್ ಜಿಲ್ಲೆಯಲ್ಲಿರುವ ಬಿಪಿಸಿಎಲ್​ನ 2ಜಿ ಎಥನಾಲ್ ಬಯೋರಿಫೈನರಿ ಘಟಕಕ್ಕೆ ಭೇಟಿ ನೀಡಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 9 ವರ್ಷದ ಆಡಳಿತದ ಯಶಸ್ಸಿನ ಆಚರಣೆಯ ಭಾಗವಾಗಿ ವಿಕಾಸತೀರ್ಥ ಯಾತ್ರೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಒಡಿಶಾದ ಬಾರಗಡ್ ಜಿಲ್ಲೆಯಲ್ಲಿರುವ ಬಿಪಿಸಿಎಲ್​ನ 2ಜಿ ಎಥನಾಲ್ ಬಯೋರಿಫೈನರಿ ಘಟಕಕ್ಕೆ ಭೇಟಿ ನೀಡಿದರು.

2 / 7

ಭಾನುವಾರ (ಜೂನ್ 11) ಬೆಳಗ್ಗೆ ಒಡಿಶಾಗೆ ಆಗಮಿಸಿದ ಧರ್ಮೇಂದ್ರ ಪ್ರಧಾನ್ ಅವರನ್ನು ರಾಜ್ಯದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಬರಮಾಡಿಕೊಂಡರು. ಬಳಿಕ ಕೇಂದ್ರ ಸಚಿವರು ಬಾರಗಡ್​ನಲ್ಲಿರುವ ಬಿಪಿಸಿಎಲ್ 2ಜಿ ಎಥನಾಲ್ ಜೈವಿಕ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಅಧಿಕಾರಿಗಳಿಗೆ ಒಂದಷ್ಟು ಸಲಹೆಗಳನ್ನೂ ನೀಡಿದರು.

3 / 7

ಬಾರಗಡ್ 2ಜಿ ಬಯೋ ರಿಫೈನರಿಯಿಂದ ದೇಶದ ಹಸಿರು ಪ್ರಗತಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಈ ಜೈವಿಕ ಸಂಸ್ಕರಣ ಘಟಕ ಉತ್ತಮವಾಗಿ ಬೆಳವಣಿಗೆ ಹೊಂದುತ್ತಿದೆ ಎಂದು ಧರ್ಮೇಂದ್ರ ಪ್ರಧಾನ್ ಶ್ಲಾಘಿಸಿದರು.

4 / 7

2ಜಿ ಬಯೋ-ರಿಫೈನರಿಯಿಂದ ಆರ್ಥಿಕತೆಗೆ ಪುಷ್ಟಿ ಸಿಗುತ್ತದೆ. ರೈತರಿಗೆ ಒಳಿತಾಗುತ್ತದೆ. ಅವರ ಆದಾಯ ಹೆಚ್ಚುತ್ತದೆ. ಹಸಿರು ಶಕ್ತಿ ಉತ್ಪಾದನೆ ಹೆಚ್ಚುತ್ತದೆ. ದೊಡ್ಡ ಮಟ್ಟದಲ್ಲಿ ಉದ್ಯೋಗಸೃಷ್ಟಿ ಆಗುತ್ತದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅಭಿಪ್ರಾಯಪಟ್ಟರು.

5 / 7

ಪ್ರಧಾನಿ ನರೇಂದ್ರ ಮೋದಿ ಅವರ ಆಲೋಚನೆಗಳು ಮತ್ತು ಚಿಂತನೆಗಳು ಒಡಿಶಾದ ಅಭಿವೃದ್ಧಿಗೆ ಅನುವು ಮಾಡಿಕೊಡುತ್ತದೆ. ರಾಜ್ಯವನ್ನು ಸ್ವಾವಲಂಬನೆಗೆ ಕರೆದೊಯ್ಯುತ್ತದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದರು.

6 / 7

ಒಡಿಶಾ, ಹಾಗೂ ಅದರ ನೆರೆಯ ರಾಜ್ಯಗಳಾದ ಛತ್ತೀಸ್​ಗಡ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಹಸಿರು ಪ್ರಗತಿ ಕಾಣಲಿವೆ. ಸ್ಥಳೀಯ ಯುವಕರನ್ನು ಈ ಕಾರ್ಯಗಳಲ್ಲಿ ಬಳಸಿಕೊಳ್ಳುವತ್ತ ಪ್ರಯತ್ನಗಳಾಗುತ್ತಿವೆ ಎಂದು ಸ್ಥಳೀಯ ಉದ್ಯೋಗಸೃಷ್ಟಿ ಬಗ್ಗೆ ಸಚಿವರು ಮಾಹಿತಿ ನೀಡಿದರು.

7 / 7

ಸ್ಥಳೀಯ ಭಾಷೆಯಲ್ಲಿ ಎಥನಾಲ್ ಎಂಜಿನಿಯರಿಂಗ್, ಎಕನಾಮಿಕ್ಸ್ ಮತ್ತು ತಂತ್ರಜ್ಞಾನ ವಿಷಯಗಳ ಬಗ್ಗೆ ಸರ್ಕಾರಿ ಐಟಿಐ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಕೋರ್ಸ್​ಗಳನ್ನು ರೂಪಿಸುವಂತೆ ಸಲಹೆ ಬಂದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಕೌಶಲ್ಯಭರಿತ ಉದ್ಯೋಗಿಗಳನ್ನು ರೂಪಿಸಲು ಸಿದ್ಧವಾಗಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.

Loading...
Unable to load recommendations.
Follow Us