
ವಿಜಯ್ ದೇವರಕೊಂಡಗೆ ಸೋಲಿನ ಮೇಲೆ ಸೋಲುಗಳು ಎದುರಾಗುತ್ತಲೇ ಇವೆ. ಆದರೆ ಅವಕಾಶಗಳು ಸಹ ಕಡಿಮೆ ಆಗುತ್ತಿಲ್ಲ ಇದೀಗ ಹೊಸ ಸಿನಿಮಾದ ಮುಹೂರ್ತ ನಡೆದಿದೆ.

ವಿಜಯ್ ದೇವರಕೊಂಡ ನಟನೆಯ ‘ರೌಡಿ ಜನಾರ್ದನ್’ ಸಿನಿಮಾದ ಮುಹೂರ್ತ ಇಂದು (ಅಕ್ಟೋಬರ್ 11) ನೆರವೇರಿದ್ದು, ಕೀರ್ತಿ ಸುರೇಶ್ ಈ ಸಿನಿಮಾದ ನಾಯಕಿ.

‘ರೌಡಿ ಜನಾರ್ದನ್’ ಸಿನಿಮಾಕ್ಕೆ ದಿಲ್ ರಾಜು ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್.

ಕೀರ್ತಿ ಸುರೇಶ್ ಹಾಗೂ ವಿಜಯ್ ದೇವರಕೊಂಡ ಒಟ್ಟಿಗೆ ನಟಿಸುತ್ತಿರುವ ಎರಡನೇ ಸಿನಿಮಾ ಇದು. ಆದರೆ ಮೊದಲ ಬಾರಿ ನಾಯಕ-ನಾಯಕಿ ಆಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಕೀರ್ತಿ ಸುರೇಶ್ಗೆ ರಾಷ್ಟ್ರಪ್ರಶಸ್ತಿ ದೊರೆತ ‘ಮಹಾನಟಿ’ ಸಿನಿಮಾನಲ್ಲಿ ವಿಜಯ್ ದೇವರಕೊಂಡ ಸಮಂತಾ ಜೊತೆಗೆ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಈಗ ನಾಯಕ-ನಾಯಕಿಯಾಗಿ ನಟಿಸಲಿದ್ದಾರೆ.

ವಿಜಯ್ ದೇವರಕೊಂಡ ನಟಿಸಿರುವ ಬರೋಬ್ಬರಿ ಎಂಟು ಸಿನಿಮಾಗಳು ಒಂದರ ಹಿಂದೊಂದರಂತೆ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿವೆ. ಕೀರ್ತಿ ಸುರೇಶ್ ಆದರೂ ಅದೃಷ್ಟ ತರುತ್ತಾರಾ ಕಾದು ನೋಡಬೇಕಿದೆ.
Published On - 4:05 pm, Sat, 11 October 25