ಮುಯ್ಯಿಗೆ ಮುಯ್ಯಿ: ಶರದ್ ಪವಾರ್ ಬಣದ ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದ ಅಜಿತ್ ಪವಾರ್ ಬಣ

|

Updated on: Sep 22, 2023 | 2:45 PM

Ajit Pawar Vs Sharad Pawar: ಶರದ್ ಪವಾರ್ ಬಣದ ಎನ್​​ಸಿಪಿ ಶಾಸಕರನ್ನು ಅನರ್ಹ ಮಾಡಲು ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್​ಗೆ ಅಜಿತ್ ಪವಾರ್ ಬಣವು ಅರ್ಜಿಯನ್ನು ಸಲ್ಲಿಸಿದೆ. ಈ ಹಿಂದೆ ಶರದ್ ಪವಾರ್ ಬಣ, ಅಜಿತ್ ಪವಾರ್ ಬಣದ ಶಾಸಕರನ್ನು ಅನರ್ಹ ಮಾಡಬೇಕು ಎಂದು ಸ್ಪೀಕರ್​​ಗೆ ಮನವಿ ಸಲ್ಲಿಸಿದ್ದರು. ಇದೀಗ ಅಜಿತ್ ಪವಾರ್ ಬಣವು ಕೂಡ ಅದೇ ಕ್ರಮವನ್ನು ಕೈಗೊಂಡಿದೆ.

ಮುಯ್ಯಿಗೆ ಮುಯ್ಯಿ: ಶರದ್ ಪವಾರ್ ಬಣದ ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದ ಅಜಿತ್ ಪವಾರ್ ಬಣ
ಶರದ್ ಪವಾರ್ ಮತ್ತು ಅಜಿತ್ ಪವಾರ್
Follow us on

ಮುಂಬೈ, ಸೆ.22: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್​​ಸಿಪಿ) ಎರಡು ಬಣಗಳಾಗಿ ವಿಭಜನೆಯಾದ ಬಳಿಕ ಒಬ್ಬರ ಮೇಲೆ ಒಬ್ಬರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಹೇಳಲಾಗುತ್ತಿದೆ. ಅವರ ಚಟುವಟಿಕೆಗಳು ಕೂಡ ಅದೇ ರೀತಿಯಲ್ಲಿದೆ. ಹೌದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಎರಡು ಬಣಗಳ ನಡುವೆ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಶರದ್ ಪವಾರ್ ( Sharad Pawar) ಬಣದ ಎನ್​​ಸಿಪಿ ಶಾಸಕರನ್ನು ಅನರ್ಹ ಮಾಡಲು ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್​ಗೆ ಅಜಿತ್ ಪವಾರ್ (Ajit Pawar) ಬಣವು ಅರ್ಜಿಯನ್ನು ಸಲ್ಲಿಸಿದೆ. ಈ ಹಿಂದೆ ಶರದ್ ಪವಾರ್ ಬಣ, ಅಜಿತ್ ಪವಾರ್ ಬಣದ ಶಾಸಕರನ್ನು ಅನರ್ಹ ಮಾಡಬೇಕು ಎಂದು ಸ್ಪೀಕರ್​​ಗೆ ಮನವಿ ಸಲ್ಲಿಸಿದ್ದರು. ಇದೀಗ ಅಜಿತ್ ಪವಾರ್ ಬಣವು ಕೂಡ ಅದೇ ಕ್ರಮವನ್ನು ಕೈಗೊಂಡಿದೆ.

ಶರದ್ ಪವಾರ್ ಪಾಳಯವನ್ನು ಬೆಂಬಲಿಸುತ್ತಿರುವ ಶಾಸಕರನ್ನು ಅನರ್ಹಗೊಳಿಸುವಂತೆ ಈ ಮನವಿಯಲ್ಲಿ ತಿಳಿಸಲಾಗಿದೆ. ಈ ಹಿಂದೆ ಅಜಿತ್ ಪವಾರ್ ಬಣವನ್ನು ಬೆಂಬಲಿಸುತ್ತಿರುವ ಸುಮಾರು 41 ಶಾಸಕರ ವಿರುದ್ಧ ಶರದ್ ಪವಾರ್ ಬಣ ಅನರ್ಹತೆ ಅರ್ಜಿ ಸಲ್ಲಿಸಿತ್ತು. ಈ ಮನವಿಯಲ್ಲಿ ಜಯಂತ್ ಪಾಟೀಲ್, ಜಿತೇಂದ್ರ ಅವ್ಹಾದ್, ರೋಹಿತ್ ಪವಾರ್, ರಾಜೇಶ್ ಟೋಪೆ, ಅನಿಲ್ ದೇಶಮುಖ್, ಸಂದೀಪ್ ಕ್ಷೀರಸಾಗರ, ಮಾನಸಿಂಗ್ ನಾಯ್ಕ್, ಪ್ರಜಕ್ತ ತನ್‌ಪುರೆ, ರವೀಂದ್ರ ಭೂಸಾರ, ಬಾಳಾಸಾಹೇಬ್ ಪಾಟೀಲ್ ಅವರ ಹೆಸರನ್ನು ತಿಳಿಸಲಾಗಿತ್ತು.

ಈ ರಾಜಕೀಯ ಕಲಹ ಸೃಷ್ಟಿಯಾಗುವ ಎರಡು ದಿನದ ಹಿಂದೆ ಎರಡು ಬಣಗಳು ಹಿರಿಯರ ನಾಯಕ ಪಕ್ಷದಲ್ಲಿ ಯಾವುದೇ ಒಡಕು ಇಲ್ಲ ಎಂದು ಹೇಳಿದ್ದಾರೆ. ಇನ್ನು ಅಜಿತ್​​ ಪವಾರ್​ ಬಣವು ಎರಡು ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಇರುವ ಹೊತ್ತಿಲ್ಲೇ ಶರದ್​​ ಪವಾರ್​ ಬಣವು ಎನ್​​ಸಿಪಿಯ ರಾಷ್ಟ್ರೀಯ ಅಧ್ಯಕ್ಷರ ನೇಮಕಾ ಮಾಡಲಾಗಿದೆ ಎಂದು ಚುನಾವಣಾ ಆಯೋಗಕ್ಕೆ ಶರದ್​​ ಪವಾರ್​ ಬಣದ ವಿರುದ್ಧ ದೂರು ನೀಡಿದ್ದರು. ಈ ಬಗ್ಗೆ ಶರದ್​​ ಪವಾರ್​ ಬಣದ ನಾಯಕರನ್ನು ಅಕ್ಟೋಬರ್ 6 ರಂದು ವೈಯಕ್ತಿಕ ವಿಚಾರಣೆ ಬರುವಂತೆ ಚುನಾವಣಾ ಆಯೋಗವು ತಿಳಿಸಿದೆ.

ಇದನ್ನೂ :ಚಿಕ್ಕಮ್ಮನ್ನು ನೋಡಲು ಶರದ್​ ಪವಾರ್​ ಮನೆಗೆ ಬಂದ ಬಂಡಾಯ ನಾಯಕ ಅಜಿತ್​ ಪವಾರ್

ಅಜಿತ್​​ ಪವಾರ್​ ತನ್ನ ಚಿಕ್ಕಪ್ಪ ಶರದ್​​ ಪವಾರ್​ ವಿರುದ್ಧ ಬಂಡಾಯವೆದ್ದು, ಏಕಾನಾಥ್​​​ ಶಿಂಧೆ ಬಣದ ಶಿವಸೇನೆ ಮತ್ತು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ನಂತರ ಅದೇ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 12:58 pm, Fri, 22 September 23