AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ajit Pawar: ಅಜಿತ್ ಪವಾರ್ ಬಣದ ಎನ್​​ಸಿಪಿ ಟ್ವಿಟರ್​​ ಖಾತೆ ಅಮಾನತು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಬಣದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ X (ಟ್ವಿಟರ್​) ಖಾತೆಯನ್ನು ಅಮಾನತುಗೊಳಿಸಲಾಗಿದೆ. ಶರದ್ ಪವಾರ್ ಬಣದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಟ್ವಿಟರ್​​ ಖಾತೆಯು ಅಜಿತ್​​ ಪವಾರ್ ಅವರು ಟ್ವಿಟರ್​​ ಖಾತೆ ನಮ್ಮ ಪಕ್ಷದ ಹೆಸರನ್ನು ಹೊಂದಿದ್ದು, ಇದು ನಕಲು ಖಾತೆ ಎಂದು X (ಟ್ವಿಟರ್​)ಗೆ ದೂರು ನೀಡಿದೆ.

Ajit Pawar: ಅಜಿತ್ ಪವಾರ್ ಬಣದ ಎನ್​​ಸಿಪಿ ಟ್ವಿಟರ್​​ ಖಾತೆ ಅಮಾನತು
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Sep 13, 2023 | 6:43 PM

Share

ಪುಣೆ, ಸೆ.13: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಬಣದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ X (ಟ್ವಿಟರ್​) ಖಾತೆಯನ್ನು ಅಮಾನತುಗೊಳಿಸಲಾಗಿದೆ. ಶರದ್ ಪವಾರ್ ಬಣದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಟ್ವಿಟರ್​​ ಖಾತೆಯು ಅಜಿತ್​​ ಪವಾರ್ ಅವರು ಟ್ವಿಟರ್​​ ಖಾತೆ ನಮ್ಮ ಪಕ್ಷದ ಹೆಸರನ್ನು ಹೊಂದಿದ್ದು, ಇದು ನಕಲು ಖಾತೆ ಎಂದು X (ಟ್ವಿಟರ್​)ಗೆ ದೂರು ನೀಡಿದೆ. X ಈ ದೂರಿನ ಆಧಾರ ಮೇಲೆ ಅಜಿತ್​​ ಪವಾರ್​ ಬಣ್ಣದ ಟ್ವಿಟರ್​​ ಖಾತೆಯನ್ನು ಅಮಾನತುಗೊಳಿಸಿದೆ. ಜುಲೈನಲ್ಲಿ ಅಜಿತ್​​ ಪವಾರ್​ ಅವರು ಬಿಜೆಪಿ ಮತ್ತು ಶಿಂಧೆ ಬಣ ಶಿವಸೇನೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಒಂದೇ ಹೆಸರಿನ ಪಕ್ಷವು ಎರಡು ಭಾಗವಾಗಿತ್ತು. ಇದರ ಜತೆಗೆ X ಖಾತೆಯು ಕೂಡ ವಿಭಜನೆಯಾಗಿದೆ. @NCPSpeaks ಶರದ್ ಪವಾರ್ ಅವರ NCP ಗುಂಪಿನ ಅಧಿಕೃತ X ಖಾತೆಯಾಗಿದ್ದರೆ, @NCPSpeaks1 ಅಜಿತ್ ಪವಾರ್ ಬಣದ ಅಧಿಕೃತ X ಹ್ಯಾಂಡಲ್ ಆಗಿತ್ತು.

ಇದೀಗ @NCPSpeaks1 ಅಜಿತ್ ಪವಾರ್ ಬಣ ಖಾತೆಯು ಟ್ವಿಟರ್​​ ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂದು ಈ ಖಾತೆಯನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಟ್ವಿಟರ್​​ (X) ಮೊದಲೇ @NCPSpeaks1 ಅಜಿತ್ ಪವಾರ್ ಬಣ ಖಾತೆಗೆ ಎಚ್ಚರಿಕೆಯನ್ನು ನೀಡಿತ್ತು. ಆದರೆ ಈ ಎಚ್ಚರಿಕೆಗೆ @NCPSpeaks1 ಖಾತೆಯು ಈ ಕುರಿತು ಯಾವುದೇ ಪ್ರಕ್ರಿಯೆ ನೀಡಿಲ್ಲ. ಇಷ್ಟು ದಿನದ ಒಳಗೆ ವರದಿ ಮಾಡುವಂತೆ ಟ್ವಿಟರ್​​ ತಿಳಿಸಿತ್ತು. ಆದರೆ ಈ ಬಗ್ಗೆ @NCPSpeaks1 ಖಾತೆಯಿಂದ ಯಾವುದೇ ವರದಿ ಬರದ ಕಾರಣ ಈ ಖಾತೆಯನ್ನು ಬ್ಲಾಕ್​​​ ಮಾಡಲಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಜಿತ್ ಪವಾರ್, ಟ್ವಿಟರ್​​ನಲ್ಲಿ ಒಂದೇ ರೀತಿ ಹೆಸರನ್ನು ಬಳಸಿದಕ್ಕಾಗಿ ಚಿಕ್ಕಪ್ಪನ ಬಣದಿಂದ ದೂರು ನೀಡಲಾಗಿದೆ. ಆ ಕಾರಣದಿಂದ ನಮ್ಮ X ಖಾತೆಯನ್ನು ಟ್ವಿಟರ್​​​ ನಿರ್ಬಂಧಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಯಾರು ಹೆಚ್ಚು ಶಾಸಕರನ್ನು ಹೊಂದಿದ್ದಾರೆ ಎಂಬುದನ್ನು ನಿರೂಪಿಸಲು ಎನ್​ಸಿಪಿಯ ಎರಡು ಬಣಗಳ ಸಭೆ

ಶರದ್ ಪವಾರ್ ಮತ್ತು ಅಜಿತ್ ಪವಾರ್ ಬಣಗಳ ವಿಭಜನೆಯ ನಂತರ ಇಂತಹ ಅನೇಕ ಉದ್ವಿಗ್ನತೆಯ ಘಟನೆಗಳು ಈ ಎರಡು ಬಣಗಳ ನಡುವೆ ನಡೆದಿದೆ. ಶರದ್ ಪವಾರ್ ನೇತೃತ್ವದ ಎನ್​​ಸಿಪಿ ಪಕ್ಷದಿಂದ ವಿಭಜನೆಗೊಂಡ ನಂತರ ಆಡಳಿತಾರೂಢ ಬಿಜೆಪಿ ಮತ್ತು ಶಿವಸೇನೆ (ಶಿಂಧೆ ಬಣ) ಜೊತೆಗೆ ಕೈಜೋಡಿಸಿ, ಆ ಸರ್ಕಾರದಲ್ಲಿ ಅಜಿತ್ ಪವಾರ್ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಇನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸೋಮವಾರ ಮರಾಠಾ ಮೀಸಲಾತಿ ಕುರಿತು ಸರ್ವಪಕ್ಷ ಸಭೆ ನಡೆಸಿ ಮರಾಠರಿಗೆ ಮೀಸಲಾತಿ ನೀಡಲು ಮತ್ತು ಪ್ರತಿಭಟನಾಕಾರರ ಇತರ ಬೇಡಿಕೆಗಳನ್ನು ಸ್ವೀಕರಿಸಲು ನಿರ್ಧರಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!