AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದ ವಿರುದ್ಧ ಸಮರಸಾರಬೇಕಿದ್ದ ಬಿಜೆಪಿಯಲ್ಲೇ ಬಿರುಕು: ಅಧಿವೇಶದನಲ್ಲಿ ಆಗಿದ್ದೇನು ಗೊತ್ತಾ?

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ನಾಯಕರ ನಡುವೆಯೆ ಬಿರುಕು ಕಾಣಿಸಿಕೊಂಡಿದೆ. ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ಸಮರಸಾರಬೇಕಾದ ಬಿಜೆಪಿ ನಾಯಕರು ಅದ್ಯಾಕೋ ಗೊಂದಲದಲ್ಲಿ ಮುಳುಗಿದಂತೆ ಕಾಣಿಸಿದೆ. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ವಿವರ.

ಸರ್ಕಾರದ ವಿರುದ್ಧ ಸಮರಸಾರಬೇಕಿದ್ದ ಬಿಜೆಪಿಯಲ್ಲೇ ಬಿರುಕು: ಅಧಿವೇಶದನಲ್ಲಿ ಆಗಿದ್ದೇನು ಗೊತ್ತಾ?
ಕಿರಣ್​ ಹನಿಯಡ್ಕ
| Edited By: |

Updated on: Dec 08, 2023 | 8:04 AM

Share

ಬೆಳಗಾವಿ, (ಡಿಸೆಂಬರ್ 08): ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ (Belagavi Winter Session) ಸರ್ಕಾರದ ವಿರುದ್ಧ ಹೋರಾಟಕ್ಕೆ ನಿಂತ ಬಿಜೆಪಿಯಲ್ಲಿ ಹೊಂದಾಣಿಕೆ ಕೊರತೆ ಸೃಷ್ಟಿಯಾದಂತೆ ಕಾಣುತ್ತಿದೆ. ನಿನ್ನೆ (ಡಿಸೆಂಬರ್ 07) ಸದನದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಸಭಾತ್ಯಾಗ ಮಾಡಿದ್ರೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಂ ಕಲಾಪದಲ್ಲೇ ನಿಂತು ಚರ್ಚೆ ಮಾಡಿತು. ಇನ್ನು ಒಬ್ಬರು ಧರಣಿ ಮಾಡೋಣ ಎಂದು ಹೇಳಿದ್ರೆ, ಮತ್ತೊಬ್ಬರು ಸಭಾತ್ಯಾಗ ಮಾಡೋಣ ಅಂತಾ ಗೊಂದಲ ಎದ್ದಿರುವುದು ಬಹಿರಂಗವಾಗಿದೆ. ಇದರೊಂದಿಗೆ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಬೆಳಗಾವಿ ಕಾರ್ಪೊರೇಟರ್ ರಮೇಶ್ ಪಾಟೀಲ್ ಪ್ರಕರಣವನ್ನ ಶಾಸಕ ಅಭಯ್ ಪಾಟೀಲ್ ಪ್ರಸ್ತಾಪಿಸಿದ್ರು. ಬಳಿಕ ಎದ್ದು ನಿಂತ ಸುನಿಲ್ ಕುಮಾರ್, ಪೃಥ್ವಿ ಸಿಂಗ್ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ಈ ರಾಜ್ಯದ ಪೊಲೀಸರಿಗೆ ತಾಕತ್ ಇಲ್ಲ, ರಮೇಶ್ ಪಾಟೀಲ್ ಪ್ರಕರಣದಲ್ಲಿ ಆಸ್ಪತ್ರೆಗೆ ಹೋಗಿ ಬಂಧಿಸುವಷ್ಟು ಆತುರತೆ ಏನಿತ್ತು ಅಂತಾ ಕಿಡಿಕಾರಿದ್ರು. ಆಗ ಆಡಳಿತ ಪಕ್ಷ ಮತ್ತು ವಿಪಕ್ಷದ ನಡುವೆ ಮಾತಿಗೆ ಮಾತು ಬೆಳೆದು R.ಅಶೋಕ್ ಸಭಾತ್ಯಾಗಕ್ಕೆ ಕರೆ ನೀಡಿದ್ರು. ಆದ್ರೆ ಸಭಾತ್ಯಾಗ ಬೇಡ ಎಂದು, ಅಭಯ್ ಪಾಟೀಲ್ ಮತ್ತು S.R.ವಿಶ್ವಾನಾಥ್ ಅಲ್ಲೇ ನಿಂತ್ರು.. ವಿಜಯೇಂದ್ರರತ್ತ ತೆರಳಿ ಸಭಾತ್ಯಾಗ ಬೇಡ, ಧರಣಿ ಮಾಡೋಣ ಅಂತಾ ಹೇಳ್ತಿದ್ರು. ಅಶೋಕ್ ನೇತೃತ್ವದಲ್ಲಿ ಅರ್ಧ ಶಾಸಕರು ಸದನದಿಂದ ಹೊರ ಬಂದ್ರೆ, ವಿಜಯೇಂದ್ರ ಜೊತೆ ಸದನದೊಳಗೆ ಮತ್ತೊಂದಿಷ್ಟು ಶಾಸಕರು ಉಳಿದುಕೊಂಡಿದ್ರು. ಸದನದಿಂದ ಹೊರ ಬಂದ ಬಳಿಕ ಆರ್​.ಅಶೋಕ್, ಉಳಿದವರನ್ನು ಹೊರಗೆ ಕರೆಯಿರಿ ಎಂದ ವಿಜಯೇಂದ್ರ ಶಾಸಕರೊಂದಿಗೆ ಹೊರನಡೆದ್ರು.

ಇದನ್ನೂ ಓದಿ: Belgavi Session: ಸದನದಲ್ಲಿ ಮಾರ್ದನಿಸಿದ ಬಿಜೆಪಿ ಮುಖಂಡನ ಹಲ್ಲೆ ಪ್ರಕರಣ; ಸರ್ಕಾರ, ಬಿಜೆಪಿ ಜಟಾಪಟಿ

ಸದನದಿಂದ ಹೊರ ಬಂದ ಬಳಿಕ ಎರಡೆರೆಡು ನಿರ್ಧಾರದ ಬಗ್ಗೆ, ಬಿಜೆಪಿ ಶಾಸಕರು ಏರುಧ್ವನಿಯಲ್ಲಿ ಮೊಗಸಾಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ರು. ಇಂಟ್ರೆಸ್ಟಿಂಗ್ ಅಂದ್ರೆ, ಕೆಲ ಹೊತ್ತಿನ ಬಳಿಕ ವಿಪಕ್ಷ ನಾಯಕ ಆರ್​.ಅಶೋಕ್ ಮತ್ತು ಹಲವು ಬಿಜೆಪಿ ಶಾಸಕರು ಸದನಕ್ಕೆ ಹಾಜರಾದ್ರು. ಆದ್ರೆ, ಶಾಸಕ ವಿಜಯೇಂದ್ರ, ಎಸ್.ಆರ್‌. ವಿಶ್ವನಾಥ್ ಸೇರಿ ಕೆಲ ಬಿಜೆಪಿ ಶಾಸಕರು ಸದನಕ್ಕೆ ಬರಲೇ ಇಲ್ಲ. ಇನ್ನು ಶಾಸಕ ಅಭಯ್ ಪಾಟೀಲ್ ಅಂತೂ ಸ್ವಪಕ್ಷ ಬಿಜೆಪಿ ಸದಸ್ಯರ ವಿರುದ್ಧವೇ ಹರಿಹಾಯ್ದರು.

ಒಟ್ಟಿನಲ್ಲಿ ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ಸಮರಸಾರಬೇಕಾದ ಬಿಜೆಪಿ ನಾಯಕರು ಅದ್ಯಾಕೋ ಗೊಂದಲದಲ್ಲಿ ಮುಳುಗಿದಂತೆ ಕಾಣುತ್ತಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ