Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನಿಟ್ರ್ಯಾಪ್ ಹೆಸರಿನಲ್ಲಿ ಮುನಿರತ್ನ ಬ್ಲ್ಯಾಕ್ ಮೇಲ್ ಮಾಡುತ್ತಾರೆ: ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಗಂಭೀರ ಆರೋಪ

ಹನಿಟ್ರ್ಯಾಪ್ ಹೆಸರಿನಲ್ಲಿ ಮಾಜಿ ಸಚಿವ ಎನ್ ಮುನಿರತ್ನ ಅವರು ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂದು ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆ ಮುನಿರತ್ನ ಅವರು ಅಧಿಕಾರಿಗಳ ಮೇಲೆ ಹನಿಟ್ರ್ಯಾಪ್ ಮಾಡಿದ್ದರು. ಮುಖಗವಸು ಹಾಕಿಕೊಂಡು ಮುನಿರತ್ನ ವಿರುದ್ಧ ಆರೋಪ ಮಾಡಿದ ಸಂತ್ರಸ್ಥೆ ಯಾರೆಂದು ಗೊತ್ತಿಲ್ಲ. ಒಂದೊಮ್ಮೆ ಗೊತ್ತಾದರೆ ಅವರ ಪರ ನಿಲ್ಲುತ್ತೇನೆ ಎಂದರು.

ಹನಿಟ್ರ್ಯಾಪ್ ಹೆಸರಿನಲ್ಲಿ ಮುನಿರತ್ನ ಬ್ಲ್ಯಾಕ್ ಮೇಲ್ ಮಾಡುತ್ತಾರೆ: ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಗಂಭೀರ ಆರೋಪ
ಎನ್ ಮುನಿರತ್ನ
Follow us
Poornima Agali Nagaraj
| Updated By: Rakesh Nayak Manchi

Updated on: Oct 09, 2023 | 3:21 PM

ಬೆಂಗಳೂರು, ಅ.9: ಹನಿಟ್ರ್ಯಾಪ್ (Honeytrap) ಹೆಸರಿನಲ್ಲಿ ಮಾಜಿ ಸಚಿವ ಎನ್. ಮುನಿರತ್ನ (N.Munirathna) ಅವರು ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂದು ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆ ಮುನಿರತ್ನ ಅವರು ಅಧಿಕಾರಿಗಳ ಮೇಲೆ ಹನಿಟ್ರ್ಯಾಪ್ ಮಾಡಿದ್ದರು. ಮುಖಗವಸು ಹಾಕಿಕೊಂಡು ಮುನಿರತ್ನ ವಿರುದ್ಧ ಆರೋಪ ಮಾಡಿದ ಸಂತ್ರಸ್ಥೆ ಯಾರೆಂದು ಗೊತ್ತಿಲ್ಲ. ಒಂದೊಮ್ಮೆ ಗೊತ್ತಾದರೆ ಅವರ ಪರ ನಿಲ್ಲುತ್ತೇನೆ ಎಂದಿದ್ದಾರೆ.

ಮಾಜಿ ಸಚಿವ ಮುನಿರತ್ನ ವಿರುದ್ಧ ಓರ್ವ ಮಹಿಳೆ ಮಾತಾಡಿರುವ ವೀಡಿಯೋ ವಿಷಯ ಗಮನಕ್ಕೆ ಬಂದಿದೆ. ಖಾಸಗಿ ಚಾನೆಲ್ ಒಬ್ಬರು ಇದರ ಬಗ್ಗೆ ಕೇಳಿದರು. ನನಗೇನು‌ ಗೊತ್ತಿಲ್ಲ ಎಂದಿದ್ದೇನೆ. ಮುನಿರತ್ನ ಅವರು ಹನಿಟ್ರ್ಯಾಪ್ ಹೆಸರಿನಲ್ಲಿ ಹೆದರಿಸಿ, ಬೆದರಿಸುತ್ತಾರೆ. ಈ ರೀತಿ ಸಾಕಷ್ಟು ಸಲ ಮಾಡಿದ್ದಾರೆ. ಮುನಿರತ್ನ ಅವರಿಂದ ಅನ್ಯಾಯವಾದ ಸಂತ್ರಸ್ಥರ ಪರ ನಾನು ನಿಲ್ಲುತ್ತೇನೆ ಎಂದರು.

ಈ ಹಿಂದೆ ಮುನಿರತ್ನ ಅವರು ಎಫ್​​ಎಸ್​ಎಲ್​ ಅಧಿಕಾರಿ ಮೇಲೆ ಹನಿಟ್ರ್ಯಾಪ್ ಮಾಡಿಸಿದ್ದರು. ಸದ್ಯ ಮುಖಗವಸು ಹಾಕಿಕೊಂಡು ಮುನಿರತ್ನ ವಿರುದ್ಧ ಆರೋಪ ಮಾಡಿದ ಸಂತ್ರಸ್ಥೆ ಯಾರೆಂದು ಗೊತ್ತಿಲ್ಲ. ಅವರ ಸ್ವರ ಕೇಳಿದ ರೀತಿ ಅನಿಸುತ್ತಿದೆ. ಅವರು ಮುಖಗವಸು ಇಲ್ಲದೆ ಮುಂದೆ ಬಂದರೆ ಯಾರಂತ ಗೊತ್ತಾಗಲಿದೆ. ಅವರು ನನ್ನ ಬಳಿ ಬಂದು ಸಹಾಯ ಕೇಳಿದರೆ ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದರು.

ಇದನ್ನೂ ಓದಿ: ಮನೆಗೆ ಬರುವ ಅತಿಥಿಗಳನ್ನು ಬಿಕಿನಿಯಲ್ಲಿ ಸ್ವಾಗತಕೋರುವ ಹನಿಟ್ರ್ಯಾಪ್ ಸುಂದರಿ ಲಾಕ್​, ಮಾಡೆಲ್​ ರಂಗಿನಾಟ ಅಬ್ಬಬ್ಬಾ.!

ಯಾರೇ ಸಂತ್ರಸ್ಥರು ಬಂದು ನನ್ನ ಬೆಂಬಲ ಕೇಳಿದರು ನೆರವಿಗೆ ದಾವಿಸುತ್ತೇನೆ. ಮುನಿರತ್ನ ಅವರು ನಾನು ಅಕ್ರಮ ಎಸಗಿಲ್ಲ ಅಂತಾರೆ. ಡಿಕೆ ಶಿವಕುಮಾರ್, ಡಿಕೆ ಸುರೇಶ್ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಆರ್ ಆರ್ ನಗರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ ಅಂತಾರೆ. ಆದರೆ 9 ವಾರ್ಡ್​ಗೆ ಅನುದಾನ ತಡೆ ಹಿಡಿದಿರುವುದು ಸ್ವತಃ ಮುನಿರತ್ನ ಅವರೇ. ಈ ಕುರಿತು ತನಿಖೆ ನಡೆಯುತ್ತಿದೆ ಎಂದರು.

ಕುಮಾರಸ್ವಾಮಿ ಕಾರಿನಲ್ಲಿ ಕಾಣಿಸಿದ್ದಕ್ಕೆ ಈ ದ್ವೇಷ ಅಂತ ಮುನಿರತ್ನ ಅವರು ಹೇಳಿದ್ದರು. ಮಾಜಿ ಸಚಿವರಾಗಿರುವ ಮುನಿರತ್ನ ಸಣ್ಣ ಮರಿ. ಬಿಜೆಪಿ ನಾಯಕರಾಗಿ ನೀವು ಏನು ಮಾಡುತ್ತಿದ್ದೀರಿ? ಕುಮಾರಣ್ಣ ವೆಲ್ ಕಮ್‌ ಮಾಡಲು ನೀನು ಯಾಕೆ ಹೋದೆ? ಮುನಿರತ್ನ ಎಲ್ಲಿ ಕಾಲಿಟ್ಟಿದ್ದಾರೋ ಅಲ್ಲಿ ಸರ್ವ ನಾಶವಾಗಿದೆ. ಬಿಜೆಪಿ ಸೇರಿದರು, ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿತು. ಅಣ್ಣಾಮಲೈ ರಾಜ್ಯ ಉಸ್ತುವಾರಿ ಕೊಟ್ಟಿದ್ದರು. ಪಕ್ಷ ಸೋತು ಸುಣ್ಣ ಆಯಿತು. ನಿಖಿಲ್ ಕುಮಾರಸ್ವಾಮಿ ರಾಜಕೀಯವಾಗಿ ಬೆಳೆಯಬೇಕು. ಮುನಿರತ್ನ ಐರನ್ ಲೆಗ್, ಅವರ ಜೊತೆ ಇರಬೇಡಿ ಎಂದು ಮನವಿ ಮಾಡಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ