AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆದ್ದು ತೋರಿಸಲಿ: ಸವಾಲೆಸೆದ ಸಚಿವ ಮುನಿರತ್ನ

ಪ್ರಧಾನಿ ಗೌರವಿಸಿದಂತ ವ್ಯಕ್ಯಿ ಯಾರಾದರು ಇದ್ದರೆ ಅದು ಯಡಿಯೂರಪ್ಪ ಮಾತ್ರ. ಅವರನ್ನ ಅತ್ಯಂತ ಗೌರವಯುತವಾಗಿ ನಡೆಸುಕೊಳ್ಳಲಾಗುತ್ತಿದೆ. ಯಡಿಯೂರಪ್ಪ ಅವರಿಗೆ ಮೋದಿ ಅವರು ಹೃದಯದಲ್ಲಿ ಸ್ಥಾನ ಕೊಟ್ಟಿದ್ದಾರೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆದ್ದು ತೋರಿಸಲಿ: ಸವಾಲೆಸೆದ ಸಚಿವ ಮುನಿರತ್ನ
ಮುನಿರತ್ನ ಮತ್ತು ಸಿದ್ದರಾಮಯ್ಯ
Follow us
Rakesh Nayak Manchi
|

Updated on:Mar 11, 2023 | 10:12 PM

ಕೋಲಾರ: ಸಿದ್ದರಾಮಯ್ಯ (Siddaramaiah) ಇದು ನನ್ನ ಕೊನೆಯ ಚುನಾವಣೆ ಎಂದು ಹೇಳುತ್ತಾರೆ. ಕಳೆದ ಚುನಾವನೆ ಸಂದರ್ಭದಲ್ಲಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದಾಗಲೂ ಹೀಗೆ ಹೇಳಿದ್ದರು. ನಾವು ಸಿದ್ದರಾಮಯ್ಯ ಸೋಲಿಸಲು ನಾವು 10 ಪಟ್ಟು ಯೋಚಿಸಿದರೆ ಅವರ ಜೊತೆಗಿರುವವರು 20 ಪಟ್ಟು ಯೋಚನೆ ಮಾಡುತ್ತಿದ್ದಾರೆ. ಅವರ ವರ್ಚಸ್ಸಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದು ತೋರಿಸಲಿ, ಆಗ ಅವರ ಶಕ್ತಿ ಒಪ್ಪುತ್ತೇವೆ ಎಂದು ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ (N.Munirathna) ಹೇಳಿದರು. ಕೋಲಾರದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ (DK Shivakumar) ಹಾಗೂ ಸಿದ್ದರಾಮಯ್ಯ ಬಗ್ಗೆ ಮಾತನಾಡಲ್ಲ. ಗ್ಯಾರೆಂಟಿ ಕಾರ್ಡ್ ಮೂಲಕ ಅವರೆ ಹೇಳುತ್ತಿದ್ದಾರೆ, ಈ ಭಾರಿ ಬರಲ್ಲ ಎಂದು ಅವರೇ‌ ಹೇಳುತ್ತಿದ್ದಾರೆ. ನಾವು ಸರ್ಕಾರ ಮಾಡುತ್ತೇವೆ ಯಾವುದೇ ಅನುಮಾನ‌ ಬೇಡ. ಈಗಾಗಲೆ ಸಮೀಕ್ಷೆಗಳು ಒಂದೊಂದು ಪಕ್ಷದ ಪರವಾಗಿ ಕೊಡುತ್ತಾರೆ. ನಾವು ಬಿಜೆಪಿ ಸಿಂಗಲ್ ಮೆಜಾರಿಟಿ ಮೇಲೆ ಸರ್ಕಾರ ಮಾಡುತ್ತೇವೆ ಎಂದರು.

ಯಡಿಯೂರಪ್ಪ ನಮ್ಮ ಪಕ್ಷದ ನಾಯಕರು ಅವರನ್ನ ಜೊತೆಯಾಗಿಟ್ಟುಕೊಂಡೆ ಚುನಾವಣೆ ಎದುರಿಸುತ್ತೇವೆ. ಪ್ರಧಾನಿ ಗೌರವಿಸಿದಂತ ವ್ಯಕ್ಯಿ ಯಾರಾದರು ಇದ್ದರೆ ಅದು ಯಡಿಯೂರಪ್ಪ ಮಾತ್ರ. ಯಡಿಯೂರಪ್ಪ ಅವರನ್ನು ಅತ್ಯಂತ ಗೌರವಯುತವಾಗಿ ನಡೆಸುಕೊಳ್ಳಲಾಗುತ್ತಿದೆ. ಯಡಿಯೂರಪ್ಪ ಅವರಿಗೆ ಮೋದಿ ಅವರು ಹೃದಯದಲ್ಲಿ ಸ್ಥಾನ ಕೊಟ್ಟಿದ್ದಾರೆ. ಅವರನ್ನ ಪಕ್ಷದಿಂದ ಬಿಡುವ ಉದ್ದೇಶ ಇಲ್ಲ. ನಮ್ಮ ಜೊತೆಗೆ ಇದ್ದಾರೆ. ಎಲ್ಲಾ‌ ಸಮುದಾಯಗಳು ನಮ್ಮ ಪಕ್ಷದ ಜೊತೆ ಇದೆ ಎಂದರು.

ಸೋಮಣ್ಣ ಬಿಜೆಪಿ ಬಿಡುವುದಿಲ್ಲ ಎಂದ ಮುನಿರತ್ನ

ಸಚಿವ ಸೋಮಣ್ಣ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುವ ವದಂತಿ ಬಗ್ಗೆ ಪ್ರಶ್ನಿಸಿದಾಗ, ಯಾವುದೇ ಕಾರಣಕ್ಕೂ ವಸತಿ ಸಚಿವ ವಿ.ಸೋಮಣ್ಣ ಬಿಜೆಪಿ ಬಿಡುವುದಿಲ್ಲ ಎಂದು ಮುನಿರತ್ನ ಅವರು ಸ್ಪಷ್ಟನೆ ನೀಡಿದರು. ಜಾಮೀನು ಸಿಕ್ಕ ನಂತರ ಶಾಸಕ ಮಾಡಾಳ್‌ ಮೆರವಣಿಗೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿಮಾನ ನಿಲ್ದಾಣದಿಂದಲೇ ವಿಜಯೋತ್ಸವ ಮಾಡಿದವರೂ ಇದ್ದಾರೆ. ಅಂತಹದರಲ್ಲಿ ಮಗ ಮಾಡಿದ ತಪ್ಪಿಗೆ ಅಪ್ಪ ಹೇಗೆ ಹೊಣೆ ಆಗುತ್ತಾರೆ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ನಾನು ನಿಂತ ನೀರಲ್ಲ, ಹರಿಯುವ ನೀರು: ಕಾಂಗ್ರೆಸ್​ ಸೇರುವ ಸುಳಿವು ನೀಡಿದ ವಿ ಸೋಮಣ್ಣ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಕ್ರೆಡಿಟ್‌ ವಾರ್‌ ವಿಚಾರವಾಗಿ ಪ್ರತಿಕ್ರಿಯಿಸಿದ ಮುನಿರತ್ನ, ನಮ್ಮ ಸರ್ಕಾರದಲ್ಲೇ ಭೂಮಿ ಪೂಜೆ ಮಾಡಿದ್ದೆವು, ಈಗ ಉದ್ಘಾಟನೆ ಮಾಡುತ್ತಿದ್ದೇವೆ. ಕಾಂಗ್ರೆಸ್​ ನಾಯಕರು ವಿಧಾನಸೌಧ, ಹೈಕೋರ್ಟ್ ಕಟ್ಟಡ ನಾವೇ ಕಟ್ಟಿದ್ದು ಅಂತಾರೆ. ಸದ್ಯ ಕೆಆರ್​ಎಸ್ ಕೂಡ ನಾವೇ ಮಾಡಿದ್ದು ಎಂದಿಲ್ಲ, ನೀರು ಕುಡಿಯುತ್ತಾ ಇದ್ದೇವೆ ಎಂದು ವ್ಯಂಗ್ಯವಾಡಿದರು.

ಮಾ.15 ರಂದು ಕೋಲಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನ ಜನರಿಗೆ ತಲಿಪಿಸುವ ಕಾರ್ಯಕ್ರಮ ನಡೆಸಲಾಗುವುದು. ಆ ಮೂಲಕ ಉಳಿಕೆ ಅನುದಾನ ಹಾಗೂ ಫಲಾನುಭವಿಗಳಿಗೆ ಸರ್ಕಾರದ ಯೋಜನೆ ತಲುಪಿಸುವ ಉದ್ದೇಶ ಹೊಂದಲಾಗಿದೆ. ಸುಮಾರು 31 ಇಲಾಖೆಗಳ ಫಲಾನುಭವಿಗಳ ಸಮಾವೇಶದಲ್ಲಿ 50 ಸಾವಿರ ಜನರನ್ನ ಸೇರಿಸಿ ವಿತರಣೆ ಮಾಡಲಿದ್ದೇವೆ. ಸಿಎಂ ಬೊಮ್ಮಾಯಿ ಅವರು ಕೂಡ ಭಾಗವಹಿಸುವಂತೆ ಮನವಿ‌ ಮಾಡಲಾಗುವುದು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:12 pm, Sat, 11 March 23