AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Madhya Pradesh Congress crisis: ನಕುಲ್ ನಾಥ್ ನಂತರ ಎಕ್ಸ್​​ ಪ್ರೊಫೈಲ್‌ನಿಂದ ಕಾಂಗ್ರೆಸ್ ಲೋಗೋ ತೆಗೆದು ಹಾಕಿದ ಸಜ್ಜನ್ ಸಿಂಗ್ ವರ್ಮಾ

ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ನಂತರ, ಸಜ್ಜನ್ ಸಿಂಗ್ ವರ್ಮಾ ಅವರು ತಮ್ಮ ಎಕ್ಸ್ ಪ್ರೊಫೈಲ್‌ನಿಂದ ಕಾಂಗ್ರೆಸ್ ಲೋಗೋವನ್ನು ತೆಗೆದುಹಾಕಿದ್ದಾರೆ. ನಕುಲ್ ನಾಥ್ ಶೀಘ್ರದಲ್ಲೇ ಬಿಜೆಪಿ ಸೇರಬಹುದು ಎಂಬ ಊಹಾಪೋಹಗಳಿವೆ. ಶನಿವಾರ ಮಧ್ಯಾಹ್ನ ಕಮಲ್ ನಾಥ್ ದೆಹಲಿಗೆ ಬಂದಿಳಿದಿದ್ದು, ಮುಂದೇನಾಗುತ್ತದೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ.

Madhya Pradesh Congress crisis: ನಕುಲ್ ನಾಥ್ ನಂತರ ಎಕ್ಸ್​​ ಪ್ರೊಫೈಲ್‌ನಿಂದ ಕಾಂಗ್ರೆಸ್ ಲೋಗೋ ತೆಗೆದು ಹಾಕಿದ ಸಜ್ಜನ್ ಸಿಂಗ್ ವರ್ಮಾ
ಸಜ್ಜನ್ ಸಿಂಗ್ ವರ್ಮಾ
ರಶ್ಮಿ ಕಲ್ಲಕಟ್ಟ
|

Updated on:Feb 17, 2024 | 3:50 PM

Share

ಭೋಪಾಲ್ ಫೆಬ್ರುವರಿ 17: ಮಧ್ಯಪ್ರದೇಶದ (Madhya Pradesh)ಮಾಜಿ ಸಿಎಂ ಮತ್ತು ಮಧ್ಯಪ್ರದೇಶ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಕಮಲ್ ನಾಥ್ (Kamal Nath) ಜೊತೆಗೆ ಅವರ ಮಗ ನಕುಲ್ ನಾಥ್ ಬಿಜೆಪಿ (BJP) ಸೇರುತ್ತಾರೆ ಎಂಬ ವದಂತಿಗಳ ನಡುವೆಯೇ, ಮಾಜಿ ಸಚಿವ ಮತ್ತು ಸೋನ್‌ಕುಚ್‌ನ ಮಾಜಿ ಶಾಸಕ ಮತ್ತು ದೇವಾಸ್‌ನ ಮಾಜಿ ಸಂಸದ ಸಜ್ಜನ್ ಸಿಂಗ್ ವರ್ಮಾ (Sajjan Singh Verma)  ಕೂಡ ಎಕ್ಸ್ ಪ್ರೊಫೈಲ್‌ನಿಂದ ಕಾಂಗ್ರೆಸ್ ಲೋಗೋ ತೆಗೆದುಹಾಕಿದ್ದಾರೆ. ಈ ಹಿಂದೆ ಕಾಂಗ್ರೆಸ್  ಚಿಹ್ನೆಯ ಫೋಟೋ ಇತ್ತು. ಆದರೆ ಈಗ ಯಾವುದೇ ಪಕ್ಷದ ಲೋಗೋ ಇಲ್ಲ. ಜೊತೆಗೆ ಇಂದೋರ್‌ನ ಇಬ್ಬರು ಮಾಜಿ ಶಾಸಕರ ಹೆಸರು ಕೂಡ ಚರ್ಚೆಗೆ ಬಂದಿದೆ. ಇದರಲ್ಲಿ ಮಾಜಿ ಇಂದೋರ್ ಅಸೆಂಬ್ಲಿ 1 ಸಂಜಯ್ ಶುಕ್ಲಾ ಮತ್ತು ದೇಪಾಲ್‌ಪುರದ ಮಾಜಿ ಶಾಸಕ ವಿಶಾಲ್ ಪಟೇಲ್ ಅವರ ಹೆಸರುಗಳು ಸೇರಿವೆ. ಇವರಿಬ್ಬರೂ ಕಮಲ್ ನಾಥ್ ಅವರಿಗೆ ಅತ್ಯಂತ ಹತ್ತಿರವಿರುವ ನಾಯಕರು.

ಕಮಲ್ ನಾಥ್ ಅವರ ಪುತ್ರ ನಕುಲ್ ಅವರು ತಮ್ಮ ‘ಎಕ್ಸ್’ ಬಯೋದಿಂದ ‘ಕಾಂಗ್ರೆಸ್’ ಎಂಬ ಪದವನ್ನು ತೆಗೆದು ಹಾಕಿದ್ದರು. ಮಧ್ಯಪ್ರದೇಶದ ಬಿಜೆಪಿ ಮುಖ್ಯಸ್ಥ ವಿಡಿ ಶರ್ಮಾ  ಪಕ್ಷವನ್ನು ಬದಲಾಯಿಸಲು ಬಯಸುವ ಕಾಂಗ್ರೆಸ್ ಸದಸ್ಯರನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದು ಘೋಷಿಸಿದ್ದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗಳು ಕಾಂಗ್ರೆಸ್ ನಾಯಕರ ಪಕ್ಷಾಂತರವಾಗುತ್ತಾರೆಯೇ ಎಂಬ ಕುತೂಹಲವನ್ನು ಹುಟ್ಟಿಸಿದೆ

ಕಾಂಗ್ರೆಸ್ ನಾಯಕರಿಗೆ ಶರ್ಮಾ ಅವರ ಆಹ್ವಾನದ ನಂತರ ನಕುಲ್ ಅವರ ಸಾಮಾಜಿಕ ಮಾಧ್ಯಮ ಅಪ್‌ಡೇಟ್‌ ನೋಡಿದರೆ ಅವರೂ ಬಿಜೆಪಿಗೆ ಸೇರುವ ಸಾಧ್ಯತೆಯನ್ನು ಸೂಚಿಸುತ್ತದೆ. ಇದಲ್ಲದೆ, ಕಮಲ್ ನಾಥ್ ಮತ್ತು ಅವರ ಮಗ ತಮ್ಮ ನಿಗದಿತ ಐದು ದಿನಗಳ ಚಿಂದ್ವಾರಾ ಭೇಟಿಯಿಂದ ಹಠಾತ್ತನೆ ನಿರ್ಗಮಿಸಿ ದೆಹಲಿಗೆ ತೆರಳಿದರು. ಯೋಜನೆಗಳಲ್ಲಿನ ಈ ಹಠಾತ್ ಬದಲಾವಣೆಯು ಮಧ್ಯ ಪ್ರದೇಶದಲ್ಲಿ  ಮಹತ್ವದ ರಾಜಕೀಯ ಬೆಳವಣಿಗೆಗಳ ಸುಳಿವು ನೀಡುತ್ತದೆ.

ಕಮಲ್ ನಾಥ್ ಅಥವಾ ನಕುಲ್ ಬಿಜೆಪಿಗೆ ಸೇರುವ ಯಾವುದೇ ಉದ್ದೇಶಗಳನ್ನು ಸ್ಪಷ್ಟವಾಗಿ ಘೋಷಿಸದಿದ್ದರೂ, ಅವರ ಕ್ರಮಗಳು ರಾಜಕೀಯ ವಲಯಗಳಲ್ಲಿ ಊಹಾಪೋಹಗಳಿಗೆ ಕಾರಣವಾಗಿವೆ.

ದೆಹಲಿ ತಲುಪಿದ ಕಮಲ್ ನಾಥ್

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಬಿಜೆಪಿ ಸೇರುವ ಸಾಧ್ಯತೆಯ ವದಂತಿಗಳ ನಡುವೆ ದೆಹಲಿ ತಲುಪಿದ್ದಾರೆ.

ಬಿಜೆಪಿ ಸೇರಲು ಶುಕ್ಲಾಗೆ ಆಫರ್

ಇದಕ್ಕೂ ಮುನ್ನ ಬಿಜೆಪಿ ಸೇರಲು ಶುಕ್ಲಾಗೆ ನಿರಂತರವಾಗಿ ಆಫರ್‌ಗಳು ಬರುತ್ತಿದ್ದವು. ಮೇಯರ್ ಚುನಾವಣೆ ಸಂದರ್ಭದಲ್ಲೂ ಅವರಿಗೆ ಬಿಜೆಪಿ ಸೇರುವ ಆಫರ್ ಬಂದಿದ್ದು, ವಿಧಾನಸಭೆ ಚುನಾವಣೆಗೂ ಮುನ್ನವೇ ಅವರ ಹಾಗೂ ಕೆಲ ಬಿಜೆಪಿ ನಾಯಕರ ನಡುವೆ ಚರ್ಚೆ ಮುಂದುವರಿದಿತ್ತು. ಆದರೆ ಆ ವೇಳೆ ಕಮಲ್ ನಾಥ್ ಅವರು ನೇರವಾಗಿ ಶುಕ್ಲಾ ಅವರಿಗೆ ಕರೆ ಮಾಡಿ ಬಿಜೆಪಿ ಸೇರದಂತೆ ತಡೆದಿದ್ದರು.

ಇದನ್ನೂ ಓದಿ: ಇನ್ನು ಆರು ದಿನ ಉಳಿದಿದೆ, ಯಾರನ್ನೂ ಬಿಡುವುದಿಲ್ಲ: ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಕಮಲ್ ನಾಥ್

ಶುಕ್ಲಾ ಮತ್ತು ಪಟೇಲ್ ಇಬ್ಬರೂ ಪರಸ್ಪರ ಆಪ್ತರಾಗಿದ್ದಾರೆ. ಇಬ್ಬರೂ ಶ್ರೀಮಂತರೇ. ಶುಕ್ಲಾ 200 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯ ಒಡೆಯರಾಗಿದ್ದರೆ, ಪಟೇಲ್ 140 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯ ಒಡೆಯರಾಗಿದ್ದಾರೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಭೇಟಿಯಾಗಿರಬಹುದು ಅಥವಾ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸ್ಟಾರ್ ಪ್ರಚಾರಕರ ವೆಚ್ಚವಾಗಲೀ ಅವರಿಬ್ಬರೂ ಅನೇಕ ಕಾಂಗ್ರೆಸ್ ಕಾರ್ಯಕ್ರಮಗಳಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಶುಕ್ಲಾ ಮತ್ತು ಪಟೇಲ್ ನಡುವಿನ ಪರಸ್ಪರ ಸಂಬಂಧವೂ ತುಂಬಾ ನಿಕಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಲ್ಲಿ ಭಾರೀ ಒಡಕು ಉಂಟಾಗಿ ಕಮಲ್ ನಾಥ್ ಬಿಜೆಪಿ ಸೇರಿದರೆ ಇಂದೋರ್ ನ ಈ ಇಬ್ಬರು ಮಾಜಿ ಶಾಸಕರು ಬಿಜೆಪಿ ಸೇರುವ ಸಾಧ್ಯತೆ ಇರುತ್ತದೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:24 pm, Sat, 17 February 24

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್