AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋವಾದಲ್ಲಿ ಜರ್ಮನ್ ಮಹಿಳೆಯೊಬ್ಬಳ ಮೃತದೇಹ ಪತ್ತೆ

53 ವರ್ಷ ವಯಸ್ಸಿನ ಜರ್ಮನ್ ಮಹಿಳೆಯೊಬ್ಬರ ಮೃತದೇಹ ಅವರು ವಾಸವಾಗಿದ್ದ ದಕ್ಷಿಣ ಗೋವಾದ ಕಾನಾಕೊನಾ ಫ್ಯಾಟ್​ನಲ್ಲಿ ದೊರಕಿದೆ. ಮೃತ ಮಹಿಳೆಯನ್ನು ಸ್ಟಿಫಾನಿ ಹಿಸ್ಸರ್ ಎಂದು ಗುರುತಿಸಲಾಗಿದ್ದು ಆಕೆಯ ಮಗಳು ಜರ್ಮನಿಯಿಂದ ಗೋವಾಗೆ ಬಂದಾಗಲೇ ಆಕೆ ಸತ್ತಿರುವುದು ಬೆಳಕಿಗೆ ಬಂದಿದೆ. ಹಿಸ್ಸರ್ ತಮ್ಮ ಪ್ಲ್ಯಾಟ್​ನಲ್ಲಿ ಒಬ್ಬರೇ ತಂಗಿದ್ದರಂತೆ. ಸ್ಟಿಫಾನಿಯೊಂದಿಗೆ ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಸಂಪರ್ಕದಲ್ಲಿದ್ದ ಮಗಳು ಹಿಮಾನಿ ಹಿಸ್ಸರ್​ಗೆ ತನ್ನ ತಾಯಿ ಫೋನ್ ಕೆಲ ದಿನಗಳಿಂದ ಕರೆಗಳನ್ನು ರಿಸೀವ್ ಮಾಡದೇ ಹೋಗಿದ್ದರಿಂದ ಗೋವಾಗೆ ಆಗಮಿಸಿದ್ದರು. ಆಕೆ ಮನೆ […]

ಗೋವಾದಲ್ಲಿ ಜರ್ಮನ್ ಮಹಿಳೆಯೊಬ್ಬಳ ಮೃತದೇಹ ಪತ್ತೆ
ಸಾಂದರ್ಭಿಕ ಚಿತ್ರ
ಅರುಣ್​ ಕುಮಾರ್​ ಬೆಳ್ಳಿ
|

Updated on: Sep 18, 2020 | 7:53 PM

Share

53 ವರ್ಷ ವಯಸ್ಸಿನ ಜರ್ಮನ್ ಮಹಿಳೆಯೊಬ್ಬರ ಮೃತದೇಹ ಅವರು ವಾಸವಾಗಿದ್ದ ದಕ್ಷಿಣ ಗೋವಾದ ಕಾನಾಕೊನಾ ಫ್ಯಾಟ್​ನಲ್ಲಿ ದೊರಕಿದೆ. ಮೃತ ಮಹಿಳೆಯನ್ನು ಸ್ಟಿಫಾನಿ ಹಿಸ್ಸರ್ ಎಂದು ಗುರುತಿಸಲಾಗಿದ್ದು ಆಕೆಯ ಮಗಳು ಜರ್ಮನಿಯಿಂದ ಗೋವಾಗೆ ಬಂದಾಗಲೇ ಆಕೆ ಸತ್ತಿರುವುದು ಬೆಳಕಿಗೆ ಬಂದಿದೆ.

ಹಿಸ್ಸರ್ ತಮ್ಮ ಪ್ಲ್ಯಾಟ್​ನಲ್ಲಿ ಒಬ್ಬರೇ ತಂಗಿದ್ದರಂತೆ. ಸ್ಟಿಫಾನಿಯೊಂದಿಗೆ ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಸಂಪರ್ಕದಲ್ಲಿದ್ದ ಮಗಳು ಹಿಮಾನಿ ಹಿಸ್ಸರ್​ಗೆ ತನ್ನ ತಾಯಿ ಫೋನ್ ಕೆಲ ದಿನಗಳಿಂದ ಕರೆಗಳನ್ನು ರಿಸೀವ್ ಮಾಡದೇ ಹೋಗಿದ್ದರಿಂದ ಗೋವಾಗೆ ಆಗಮಿಸಿದ್ದರು. ಆಕೆ ಮನೆ ತಲುಪಿದಾಗ ಅದು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡುಕೊಂಡಿದ್ದಾಳೆ.

20 ವರ್ಷ ವಯಸ್ಸಿನ ಹಿಮಾನಿ, ತನ್ನ ಒಬ್ಬ ಸ್ನೇಹಿತನ ಸಹಾಯದಿಂದ ಸ್ಟಿಫಾನಿಯ ಮನೆ ಬಾಗಿಲನ್ನು ಒಡೆದು ಒಳಪ್ರವೇಶಿಸಿದಾಗ ಆಕೆ ಸತ್ತು ಬಿದ್ದಿರುವುದು ಪತ್ತೆಯಾಗಿದೆ. ಪೊಲೀಸರಿಗೆ ವಿಷಯ ಗೊತ್ತಾಗಿ ಅವರು ಸ್ಥಳಕ್ಕೆ ಬಂದು ಮಹಜರ್ ನಡೆಸಿದ್ದಾರೆ.

ಹಿಮಾನಿ ಪೊಲೀಸರಿಗೆ ತಿಳಿಸಿರುವ ಮಾಹಿತಿಯ ಪ್ರಕಾರ, ಸ್ಟಿಫಾನಿ ಖಿನ್ನತೆ ಮತ್ತು ಅಸ್ತಮಾ ಸಮಸ್ಯೆಗಳಿಂದ ಬಳಲುತ್ತಿದ್ದಳು ಮತ್ತು ಈ ಅನಾರೋಗ್ಯಗಳಿಗೆ ಔಷಧಿಯನ್ನು ಸಹ ತೆಗೆದುಕೊಳ್ಳುತ್ತಿದ್ದಳು. ಪೊಲೀಸರು ಅಸಹಜ ಸಾವು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

 

ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ