AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋವಾದಲ್ಲಿ ಜರ್ಮನ್ ಮಹಿಳೆಯೊಬ್ಬಳ ಮೃತದೇಹ ಪತ್ತೆ

53 ವರ್ಷ ವಯಸ್ಸಿನ ಜರ್ಮನ್ ಮಹಿಳೆಯೊಬ್ಬರ ಮೃತದೇಹ ಅವರು ವಾಸವಾಗಿದ್ದ ದಕ್ಷಿಣ ಗೋವಾದ ಕಾನಾಕೊನಾ ಫ್ಯಾಟ್​ನಲ್ಲಿ ದೊರಕಿದೆ. ಮೃತ ಮಹಿಳೆಯನ್ನು ಸ್ಟಿಫಾನಿ ಹಿಸ್ಸರ್ ಎಂದು ಗುರುತಿಸಲಾಗಿದ್ದು ಆಕೆಯ ಮಗಳು ಜರ್ಮನಿಯಿಂದ ಗೋವಾಗೆ ಬಂದಾಗಲೇ ಆಕೆ ಸತ್ತಿರುವುದು ಬೆಳಕಿಗೆ ಬಂದಿದೆ. ಹಿಸ್ಸರ್ ತಮ್ಮ ಪ್ಲ್ಯಾಟ್​ನಲ್ಲಿ ಒಬ್ಬರೇ ತಂಗಿದ್ದರಂತೆ. ಸ್ಟಿಫಾನಿಯೊಂದಿಗೆ ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಸಂಪರ್ಕದಲ್ಲಿದ್ದ ಮಗಳು ಹಿಮಾನಿ ಹಿಸ್ಸರ್​ಗೆ ತನ್ನ ತಾಯಿ ಫೋನ್ ಕೆಲ ದಿನಗಳಿಂದ ಕರೆಗಳನ್ನು ರಿಸೀವ್ ಮಾಡದೇ ಹೋಗಿದ್ದರಿಂದ ಗೋವಾಗೆ ಆಗಮಿಸಿದ್ದರು. ಆಕೆ ಮನೆ […]

ಗೋವಾದಲ್ಲಿ ಜರ್ಮನ್ ಮಹಿಳೆಯೊಬ್ಬಳ ಮೃತದೇಹ ಪತ್ತೆ
ಸಾಂದರ್ಭಿಕ ಚಿತ್ರ
ಅರುಣ್​ ಕುಮಾರ್​ ಬೆಳ್ಳಿ
|

Updated on: Sep 18, 2020 | 7:53 PM

Share

53 ವರ್ಷ ವಯಸ್ಸಿನ ಜರ್ಮನ್ ಮಹಿಳೆಯೊಬ್ಬರ ಮೃತದೇಹ ಅವರು ವಾಸವಾಗಿದ್ದ ದಕ್ಷಿಣ ಗೋವಾದ ಕಾನಾಕೊನಾ ಫ್ಯಾಟ್​ನಲ್ಲಿ ದೊರಕಿದೆ. ಮೃತ ಮಹಿಳೆಯನ್ನು ಸ್ಟಿಫಾನಿ ಹಿಸ್ಸರ್ ಎಂದು ಗುರುತಿಸಲಾಗಿದ್ದು ಆಕೆಯ ಮಗಳು ಜರ್ಮನಿಯಿಂದ ಗೋವಾಗೆ ಬಂದಾಗಲೇ ಆಕೆ ಸತ್ತಿರುವುದು ಬೆಳಕಿಗೆ ಬಂದಿದೆ.

ಹಿಸ್ಸರ್ ತಮ್ಮ ಪ್ಲ್ಯಾಟ್​ನಲ್ಲಿ ಒಬ್ಬರೇ ತಂಗಿದ್ದರಂತೆ. ಸ್ಟಿಫಾನಿಯೊಂದಿಗೆ ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಸಂಪರ್ಕದಲ್ಲಿದ್ದ ಮಗಳು ಹಿಮಾನಿ ಹಿಸ್ಸರ್​ಗೆ ತನ್ನ ತಾಯಿ ಫೋನ್ ಕೆಲ ದಿನಗಳಿಂದ ಕರೆಗಳನ್ನು ರಿಸೀವ್ ಮಾಡದೇ ಹೋಗಿದ್ದರಿಂದ ಗೋವಾಗೆ ಆಗಮಿಸಿದ್ದರು. ಆಕೆ ಮನೆ ತಲುಪಿದಾಗ ಅದು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡುಕೊಂಡಿದ್ದಾಳೆ.

20 ವರ್ಷ ವಯಸ್ಸಿನ ಹಿಮಾನಿ, ತನ್ನ ಒಬ್ಬ ಸ್ನೇಹಿತನ ಸಹಾಯದಿಂದ ಸ್ಟಿಫಾನಿಯ ಮನೆ ಬಾಗಿಲನ್ನು ಒಡೆದು ಒಳಪ್ರವೇಶಿಸಿದಾಗ ಆಕೆ ಸತ್ತು ಬಿದ್ದಿರುವುದು ಪತ್ತೆಯಾಗಿದೆ. ಪೊಲೀಸರಿಗೆ ವಿಷಯ ಗೊತ್ತಾಗಿ ಅವರು ಸ್ಥಳಕ್ಕೆ ಬಂದು ಮಹಜರ್ ನಡೆಸಿದ್ದಾರೆ.

ಹಿಮಾನಿ ಪೊಲೀಸರಿಗೆ ತಿಳಿಸಿರುವ ಮಾಹಿತಿಯ ಪ್ರಕಾರ, ಸ್ಟಿಫಾನಿ ಖಿನ್ನತೆ ಮತ್ತು ಅಸ್ತಮಾ ಸಮಸ್ಯೆಗಳಿಂದ ಬಳಲುತ್ತಿದ್ದಳು ಮತ್ತು ಈ ಅನಾರೋಗ್ಯಗಳಿಗೆ ಔಷಧಿಯನ್ನು ಸಹ ತೆಗೆದುಕೊಳ್ಳುತ್ತಿದ್ದಳು. ಪೊಲೀಸರು ಅಸಹಜ ಸಾವು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

 

Follow Us
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ