AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾರ್ ರೋಡ್ ಆದ್ರೂ ಸೈ.. ಕಲ್ಲು ಮಣ್ಣಿನ ರಸ್ತೆಗೂ ಸೈ.. ಮಲೆನಾಡ್ ಬೀದಿಗಳಲ್ಲಿ ಗ್ರೇಟ್ ಮಲ್ನಾಡ್ ಚಾಲೆಂಜ್​ನ ಸೈಕಲ್ ಸವಾರಿ

ಬೈಕ್ ಱಲಿ. ಜೀಪ್ ಱಲಿ.. ಕಾರ್ ಱಲಿಗಳನ್ನ ನೋಡಿ ಇರ್ತಿರಾ.. ಹಾಗೇ ಸೈಕಲ್ ಱಲಿ, ರೇಸ್ ಕೂಡ ನೋಡಿ ಇರ್ತಿರಾ.. ನೂರಾರು ಕೀಲೋಮೀಟರ್ ಸೈಕಲ್ ಹೊಡೆಯೋ ಸೈಕಲ್ ಚಾಲೆಂಜ್‌ ನೋಡಿದ್ದೀರಾ, ಮಲೆನಾಡಿನ ಬೆಟ್ಟ-ಗುಡ್ಡ, ನದಿ-ಝರಿ, ಗದ್ದೆ-ಕಾಫಿತೋಟಗಳ ಮಧ್ಯೆ ಸಾಗೋ ಸೈಕಲ್ ಸವಾರಿ ನಿಜಕ್ಕೂ ರೋಮಾಂಚನಕಾರಿ.

ಟಾರ್ ರೋಡ್ ಆದ್ರೂ ಸೈ.. ಕಲ್ಲು ಮಣ್ಣಿನ ರಸ್ತೆಗೂ ಸೈ.. ಮಲೆನಾಡ್ ಬೀದಿಗಳಲ್ಲಿ ಗ್ರೇಟ್ ಮಲ್ನಾಡ್ ಚಾಲೆಂಜ್​ನ ಸೈಕಲ್ ಸವಾರಿ
ಮಲೆನಾಡ್ ಬೀದಿಗಳಲ್ಲಿ ಗ್ರೇಟ್ ಮಲ್ನಾಡ್ ಚಾಲೆಂಜ್​ನ ಸೈಕಲ್ ಸವಾರಿ
ಆಯೇಷಾ ಬಾನು
ಆಯೇಷಾ ಬಾನು|

Updated on: Dec 01, 2020 | 7:01 AM

Share

ಚಿಕ್ಕಮಗಳೂರು: ಹಸಿರು ಹೊದ್ದು ಮಲಗಿರೋ ಕಾಫಿ ತೋಟದ ಮಧ್ಯದ ದಾರಿಯಲ್ಲಿ ಸಾಗ್ತಿರೋ ಸೈಕಲ್ ಸವಾರಿ. ಎಷ್ಟೇ ಸುಸ್ತಾದ್ರೂ ನಿಲ್ಸೋ ಮಾತೇ ಇಲ್ಲ, ಪೆಡಲ್‌ ತುಳೀತಾ ಇರೋದೇ, ಗುರಿಯ ಕಡೆ ಸಾಗ್ತಾ ಹೋಗ್ತಾ ಇರೋದೇ. ಪ್ಯಾಟೇ ರೋಡ್ ಆದ್ರೂ ಸರಿ, ಹಳ್ಳಿ ರೋಡ್ ಆದ್ರೂ ಸರಿ ಸವಾರಿ ಮಾಡ್ತಾ ಇರೋದೇ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇಂತಹ ರೋಮಾಂಚನಕಾರಿ ಸೈಕಲ್ ಪಯಣ ಕಂಡುಬಂದಿದೆ.

ಬೆಂಗಳೂರಿನ ಮಂದಿಯಿಂದ ಗ್ರೇಟ್ ಮಲ್ನಾಡ್ ಚಾಲೆಂಜ್: ಬೆಂಗಳೂರಿನ Eye Cycle.in (ಐ ಸೈಕಲ್.ಇನ್) ಟೀಂ ಮಲೆನಾಡಿನಲ್ಲಿ ಗ್ರೇಟ್ ಮಲ್ನಾಡ್ ಚಾಲೆಂಜ್ ಅನ್ನೋ ಈವೆಂಟ್‌ ಅನ್ನ ಆಯೋಜನೆ ಮಾಡಿದ್ದು, ಚಿಕ್ಕಮಗಳೂರಿನಿಂದ ಕುಂದಾಪುರದವರೆಗೆ ಈ ಸೈಕಲ್ ಸವಾರಿ ಸಾಗಲಿದೆ. ಮೊನ್ನೆ ಚಿಕ್ಕಮಗಳೂರಿನಿಂದ ಶುರುವಾದ ಈ ಸೈಕಲ್ ಪಯಣ, ಕಾಫಿನಾಡನ್ನ ಮೂರು ದಿನ ಸುತ್ತಿ ಆ ಬಳಿಕ ಕುಂದಾಪುರದತ್ತ ಸೈಕ್ಲಿಸ್ಟ್‌ಗಳು ಹೋಗಲಿದ್ದಾರೆ. ಕಾಫಿತೋಟ, ಗದ್ದೆ, ಜೆಲ್ಲಿ ರೋಡ್, ಟಾರ್ ರೋಡ್, ಅಪ್, ಡೌನ್‌ ಹೀಗೆ ಎಲ್ಲಾ ಅಡೆ ತಡೆಗಳನ್ನ ದಾಟಿ ಸೈಕಲ್ ಸವಾರರು ಎಂಜಾಯ್ ಮಾಡುತ್ತಲೇ ಸಾಗುತ್ತಿದ್ದಾರೆ.

ಪ್ರಕೃತಿಯನ್ನ ಉಳಿಸಲು ಜೊತೆ ಜೊತೆಗೆ ಸೈಕಲ್ ಸವಾರಿ ಮಾಡೋದ್ರಿಂದ ಆರೋಗ್ಯವೂ ಉತ್ತಮವಾಗಿರುತ್ತೆ ಅನ್ನೋ ಮಹತ್ವವನ್ನ ಸಾರುವ ಉದ್ದೇಶದಿಂದ ಈ ಸೈಕ್ಲಿಂಗ್ ಯಾನ ನಡೀತಾ ಇದೆ. 7 ದಿನಗಳ ಕಾಲ ಬರೋಬ್ಬರಿ 500 ಕೀಲೋ ಮೀಟರ್ ದೂರ ಈ ಮಲ್ನಾಡ್ ಸಾಹಸದಲ್ಲಿ 30 ಮಂದಿ ಸೈಕ್ಲಿಸ್ಟ್‌ಗಳು ಭಾಗಿಯಾಗಿದ್ದಾರೆ. ಕೇವಲ ಯುವಕರಲ್ಲದೇ ಯುವತಿಯರು, ಮಹಿಳೆಯರೂ ಕೂಡ ಈ ಚಾಲೆಂಜ್‌ನನ್ನ ಸ್ವೀಕರಿಸಿ ಸೈಕಲ್ ಏರಿದ್ದಾರೆ.

ಒಟ್ಟಿನಲ್ಲಿ ಪ್ರಕೃತಿಯನ್ನ ಉಳಿಸಲು, ಆರೋಗ್ಯದ ಮಹತ್ವವನ್ನ ಸಾರಲು ಹೊರಟಿರುವ ಈ ಸೈಕಲ್‌ ಪಯಣಕ್ಕೆ ನಮ್ಮ ಕಡೆಯಿಂದಲೂ ಆಲ್ ದಿ ಬೆಸ್ಟ್.

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!