AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾರ್ ರೋಡ್ ಆದ್ರೂ ಸೈ.. ಕಲ್ಲು ಮಣ್ಣಿನ ರಸ್ತೆಗೂ ಸೈ.. ಮಲೆನಾಡ್ ಬೀದಿಗಳಲ್ಲಿ ಗ್ರೇಟ್ ಮಲ್ನಾಡ್ ಚಾಲೆಂಜ್​ನ ಸೈಕಲ್ ಸವಾರಿ

ಬೈಕ್ ಱಲಿ. ಜೀಪ್ ಱಲಿ.. ಕಾರ್ ಱಲಿಗಳನ್ನ ನೋಡಿ ಇರ್ತಿರಾ.. ಹಾಗೇ ಸೈಕಲ್ ಱಲಿ, ರೇಸ್ ಕೂಡ ನೋಡಿ ಇರ್ತಿರಾ.. ನೂರಾರು ಕೀಲೋಮೀಟರ್ ಸೈಕಲ್ ಹೊಡೆಯೋ ಸೈಕಲ್ ಚಾಲೆಂಜ್‌ ನೋಡಿದ್ದೀರಾ, ಮಲೆನಾಡಿನ ಬೆಟ್ಟ-ಗುಡ್ಡ, ನದಿ-ಝರಿ, ಗದ್ದೆ-ಕಾಫಿತೋಟಗಳ ಮಧ್ಯೆ ಸಾಗೋ ಸೈಕಲ್ ಸವಾರಿ ನಿಜಕ್ಕೂ ರೋಮಾಂಚನಕಾರಿ.

ಟಾರ್ ರೋಡ್ ಆದ್ರೂ ಸೈ.. ಕಲ್ಲು ಮಣ್ಣಿನ ರಸ್ತೆಗೂ ಸೈ.. ಮಲೆನಾಡ್ ಬೀದಿಗಳಲ್ಲಿ ಗ್ರೇಟ್ ಮಲ್ನಾಡ್ ಚಾಲೆಂಜ್​ನ ಸೈಕಲ್ ಸವಾರಿ
ಮಲೆನಾಡ್ ಬೀದಿಗಳಲ್ಲಿ ಗ್ರೇಟ್ ಮಲ್ನಾಡ್ ಚಾಲೆಂಜ್​ನ ಸೈಕಲ್ ಸವಾರಿ
ಆಯೇಷಾ ಬಾನು
|

Updated on: Dec 01, 2020 | 7:01 AM

Share

ಚಿಕ್ಕಮಗಳೂರು: ಹಸಿರು ಹೊದ್ದು ಮಲಗಿರೋ ಕಾಫಿ ತೋಟದ ಮಧ್ಯದ ದಾರಿಯಲ್ಲಿ ಸಾಗ್ತಿರೋ ಸೈಕಲ್ ಸವಾರಿ. ಎಷ್ಟೇ ಸುಸ್ತಾದ್ರೂ ನಿಲ್ಸೋ ಮಾತೇ ಇಲ್ಲ, ಪೆಡಲ್‌ ತುಳೀತಾ ಇರೋದೇ, ಗುರಿಯ ಕಡೆ ಸಾಗ್ತಾ ಹೋಗ್ತಾ ಇರೋದೇ. ಪ್ಯಾಟೇ ರೋಡ್ ಆದ್ರೂ ಸರಿ, ಹಳ್ಳಿ ರೋಡ್ ಆದ್ರೂ ಸರಿ ಸವಾರಿ ಮಾಡ್ತಾ ಇರೋದೇ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇಂತಹ ರೋಮಾಂಚನಕಾರಿ ಸೈಕಲ್ ಪಯಣ ಕಂಡುಬಂದಿದೆ.

ಬೆಂಗಳೂರಿನ ಮಂದಿಯಿಂದ ಗ್ರೇಟ್ ಮಲ್ನಾಡ್ ಚಾಲೆಂಜ್: ಬೆಂಗಳೂರಿನ Eye Cycle.in (ಐ ಸೈಕಲ್.ಇನ್) ಟೀಂ ಮಲೆನಾಡಿನಲ್ಲಿ ಗ್ರೇಟ್ ಮಲ್ನಾಡ್ ಚಾಲೆಂಜ್ ಅನ್ನೋ ಈವೆಂಟ್‌ ಅನ್ನ ಆಯೋಜನೆ ಮಾಡಿದ್ದು, ಚಿಕ್ಕಮಗಳೂರಿನಿಂದ ಕುಂದಾಪುರದವರೆಗೆ ಈ ಸೈಕಲ್ ಸವಾರಿ ಸಾಗಲಿದೆ. ಮೊನ್ನೆ ಚಿಕ್ಕಮಗಳೂರಿನಿಂದ ಶುರುವಾದ ಈ ಸೈಕಲ್ ಪಯಣ, ಕಾಫಿನಾಡನ್ನ ಮೂರು ದಿನ ಸುತ್ತಿ ಆ ಬಳಿಕ ಕುಂದಾಪುರದತ್ತ ಸೈಕ್ಲಿಸ್ಟ್‌ಗಳು ಹೋಗಲಿದ್ದಾರೆ. ಕಾಫಿತೋಟ, ಗದ್ದೆ, ಜೆಲ್ಲಿ ರೋಡ್, ಟಾರ್ ರೋಡ್, ಅಪ್, ಡೌನ್‌ ಹೀಗೆ ಎಲ್ಲಾ ಅಡೆ ತಡೆಗಳನ್ನ ದಾಟಿ ಸೈಕಲ್ ಸವಾರರು ಎಂಜಾಯ್ ಮಾಡುತ್ತಲೇ ಸಾಗುತ್ತಿದ್ದಾರೆ.

ಪ್ರಕೃತಿಯನ್ನ ಉಳಿಸಲು ಜೊತೆ ಜೊತೆಗೆ ಸೈಕಲ್ ಸವಾರಿ ಮಾಡೋದ್ರಿಂದ ಆರೋಗ್ಯವೂ ಉತ್ತಮವಾಗಿರುತ್ತೆ ಅನ್ನೋ ಮಹತ್ವವನ್ನ ಸಾರುವ ಉದ್ದೇಶದಿಂದ ಈ ಸೈಕ್ಲಿಂಗ್ ಯಾನ ನಡೀತಾ ಇದೆ. 7 ದಿನಗಳ ಕಾಲ ಬರೋಬ್ಬರಿ 500 ಕೀಲೋ ಮೀಟರ್ ದೂರ ಈ ಮಲ್ನಾಡ್ ಸಾಹಸದಲ್ಲಿ 30 ಮಂದಿ ಸೈಕ್ಲಿಸ್ಟ್‌ಗಳು ಭಾಗಿಯಾಗಿದ್ದಾರೆ. ಕೇವಲ ಯುವಕರಲ್ಲದೇ ಯುವತಿಯರು, ಮಹಿಳೆಯರೂ ಕೂಡ ಈ ಚಾಲೆಂಜ್‌ನನ್ನ ಸ್ವೀಕರಿಸಿ ಸೈಕಲ್ ಏರಿದ್ದಾರೆ.

ಒಟ್ಟಿನಲ್ಲಿ ಪ್ರಕೃತಿಯನ್ನ ಉಳಿಸಲು, ಆರೋಗ್ಯದ ಮಹತ್ವವನ್ನ ಸಾರಲು ಹೊರಟಿರುವ ಈ ಸೈಕಲ್‌ ಪಯಣಕ್ಕೆ ನಮ್ಮ ಕಡೆಯಿಂದಲೂ ಆಲ್ ದಿ ಬೆಸ್ಟ್.

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ