ವರ್ಷದ ಕೊನೆಯ ಚಂದ್ರಗ್ರಹಣ ಇಂದು ಯಾವ ಸಮಯಕ್ಕೆ ಗೋಚರ..? ಮುಂದಿನ ಚಂದ್ರಗ್ರಹಣ ಯಾವಾಗ ಗೊತ್ತಾ?

2020ರಲ್ಲಿ ಮೊದಲು ಜನವರಿ 10, ಎರಡನೇ ಬಾರಿ ಜೂನ್ 5 ಹಾಗೂ ಜುಲೈ 5 ರಂದು ಮೂರನೇ ಬಾರಿ ಚಂದ್ರ ಗ್ರಹಣ ಗೋಚರವಾಗಿತ್ತು. ಅದನ್ನು ಬಿಟ್ಟು ಇಂದು (ನವೆಂಬರ್ 30) ಗೋಚರವಾಗುವ ಪೆನಂಬ್ರಲ್ ಚಂದ್ರ ಗ್ರಹಣ ನಾಲ್ಕನೇ ಬಾರಿಯಾಗಿದ್ದು, ಮುಂದಿನ ಚಂದ್ರ ಗ್ರಹಣ 2021ರ ಮೇ 26ರಂದು ನಡೆಯುತ್ತದೆ.

ವರ್ಷದ ಕೊನೆಯ ಚಂದ್ರಗ್ರಹಣ ಇಂದು ಯಾವ ಸಮಯಕ್ಕೆ ಗೋಚರ..? ಮುಂದಿನ ಚಂದ್ರಗ್ರಹಣ ಯಾವಾಗ ಗೊತ್ತಾ?
ಗ್ರಹಣದ ವೇಳೆಯಲ್ಲಿ ದಿಗಂತದ ಕೆಳಗೆ ಚಂದ್ರ ಇರುವ ಕಾರಣ ಭಾರತದಲ್ಲಿ ಗೋಚರವಾಗುವುದಿಲ್ಲ.
Follow us
| Updated By: ಸಾಧು ಶ್ರೀನಾಥ್​

Updated on:Nov 30, 2020 | 12:38 PM

ಇಂದು ಮಧ್ಯಾಹ್ನ 1 ಗಂಟೆ 4 ನಿಮಿಷಕ್ಕೆ ಆರಂಭವಾಗಿ ಸಂಜೆ 5 ಗಂಟೆ 22 ನಿಮಿಷಕ್ಕೆ ಮುಗಿಯುವ ಚಂದ್ರಗ್ರಹಣ ವರ್ಷದ ನಾಲ್ಕನೇ ಹಾಗೂ ಕೊನೆಯ ಗ್ರಹಣವಾಗಿದ್ದು, ಗ್ರಹಣದ ವೇಳೆಯಲ್ಲಿ ದಿಗಂತದ ಕೆಳಗೆ ಚಂದ್ರ ಇರುವ ಕಾರಣ ಭಾರತದಲ್ಲಿ ಗೋಚರವಾಗುವುದಿಲ್ಲ.

2020ರಲ್ಲಿ ಮೊದಲು ಜನವರಿ 10, ಎರಡನೇ ಬಾರಿ ಜೂನ್ 5 ಹಾಗೂ ಜುಲೈ 5 ರಂದು ಮೂರನೇ ಬಾರಿ ಚಂದ್ರಗ್ರಹಣ ಗೋಚರವಾಗಿತ್ತು. ಅದನ್ನು ಬಿಟ್ಟು ಇಂದು (ನವೆಂಬರ್ 30) ಗೋಚರವಾಗುವ ಪೆನಂಬ್ರಲ್ ಚಂದ್ರಗ್ರಹಣ ನಾಲ್ಕನೇ ಬಾರಿಯಾಗಿದ್ದು, ಮುಂದಿನ ಚಂದ್ರಗ್ರಹಣ 2021ರ ಮೇ 26ರಂದು ನಡೆಯುತ್ತದೆ.

ಚಂದ್ರಗ್ರಹಣಕ್ಕೆ ಕಾರಣ?

ಚಂದ್ರ ಸ್ವಂತ ಬೆಳಕನ್ನು ಹೊಂದಿಲ್ಲ. ಸೂರ್ಯನ ಬೆಳಕಿನಿಂದ ಚಂದ್ರ ಪ್ರತಿದಿನ ಗೋಚರವಾಗುವುದು. ಚಂದ್ರಗ್ರಹಣದ ಸಮಯದಲ್ಲಿ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ. ಸೂರ್ಯನ ಬೆಳಕು ಚಂದ್ರನನ್ನು ತಲುಪಲು ಭೂಮಿ ಅಡ್ಡವಾಗಿರುವುದರಿಂದ ಚಂದ್ರನ ಅರ್ಧ ಭಾಗ ಅಥವಾ ಸಂಪೂರ್ಣವಾಗಿ ಮುಚ್ಚುತ್ತದೆ. ಪೆನಂಬ್ರಲ್ ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ಭೂಮಿಯ ನೆರಳಿನ ಹೊರ ಭಾಗದ ಮೂಲಕ ಚಲಿಸುವುದರಿಂದ ಬಹಳ ಮುಸುಕಾಗಿರುತ್ತದೆ.

ಮುಂಬರುವ ಪೆನಂಬ್ರಲ್ ಚಂದ್ರಗ್ರಹಣ ಯುರೋಪ್ ಮತ್ತು ಅಮೇರಿಕ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಗೋಚರವಾಗುತ್ತದೆ. ನವೆಂಬರ್ ಚಂದ್ರಗ್ರಹಣವನ್ನು ವಿಶ್ವದ ಹಲವು ಕಡೆಗಳಲ್ಲಿ ಬೀವರ್ ಮೂನ್ ಎಂದು ಕರೆದರೆ, ಇನ್ನೂ ಕೆಲವು ಕಡೆಗಳಲ್ಲಿ ಫ್ರಾಸ್ಟಿ ಮೂನ್ ಅಥವಾ ಓಕ್ ಮೂನ್ ಎಂದು ಕರೆಯುತ್ತಾರೆ.

ಇದನ್ನೂ ಓದಿ:  ಅರೆ ನೆರಳು ಚಂದ್ರಗ್ರಹಣದಿಂದ ಕಾದಿದಿಯಾ ಮಹಾ ಕಂಟಕ?

Published On - 12:31 pm, Mon, 30 November 20

ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ