AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷದ ಕೊನೆಯ ಚಂದ್ರಗ್ರಹಣ ಇಂದು ಯಾವ ಸಮಯಕ್ಕೆ ಗೋಚರ..? ಮುಂದಿನ ಚಂದ್ರಗ್ರಹಣ ಯಾವಾಗ ಗೊತ್ತಾ?

2020ರಲ್ಲಿ ಮೊದಲು ಜನವರಿ 10, ಎರಡನೇ ಬಾರಿ ಜೂನ್ 5 ಹಾಗೂ ಜುಲೈ 5 ರಂದು ಮೂರನೇ ಬಾರಿ ಚಂದ್ರ ಗ್ರಹಣ ಗೋಚರವಾಗಿತ್ತು. ಅದನ್ನು ಬಿಟ್ಟು ಇಂದು (ನವೆಂಬರ್ 30) ಗೋಚರವಾಗುವ ಪೆನಂಬ್ರಲ್ ಚಂದ್ರ ಗ್ರಹಣ ನಾಲ್ಕನೇ ಬಾರಿಯಾಗಿದ್ದು, ಮುಂದಿನ ಚಂದ್ರ ಗ್ರಹಣ 2021ರ ಮೇ 26ರಂದು ನಡೆಯುತ್ತದೆ.

ವರ್ಷದ ಕೊನೆಯ ಚಂದ್ರಗ್ರಹಣ ಇಂದು ಯಾವ ಸಮಯಕ್ಕೆ ಗೋಚರ..? ಮುಂದಿನ ಚಂದ್ರಗ್ರಹಣ ಯಾವಾಗ ಗೊತ್ತಾ?
ಗ್ರಹಣದ ವೇಳೆಯಲ್ಲಿ ದಿಗಂತದ ಕೆಳಗೆ ಚಂದ್ರ ಇರುವ ಕಾರಣ ಭಾರತದಲ್ಲಿ ಗೋಚರವಾಗುವುದಿಲ್ಲ.
Follow us
sandhya thejappa
| Updated By: ಸಾಧು ಶ್ರೀನಾಥ್​

Updated on:Nov 30, 2020 | 12:38 PM

ಇಂದು ಮಧ್ಯಾಹ್ನ 1 ಗಂಟೆ 4 ನಿಮಿಷಕ್ಕೆ ಆರಂಭವಾಗಿ ಸಂಜೆ 5 ಗಂಟೆ 22 ನಿಮಿಷಕ್ಕೆ ಮುಗಿಯುವ ಚಂದ್ರಗ್ರಹಣ ವರ್ಷದ ನಾಲ್ಕನೇ ಹಾಗೂ ಕೊನೆಯ ಗ್ರಹಣವಾಗಿದ್ದು, ಗ್ರಹಣದ ವೇಳೆಯಲ್ಲಿ ದಿಗಂತದ ಕೆಳಗೆ ಚಂದ್ರ ಇರುವ ಕಾರಣ ಭಾರತದಲ್ಲಿ ಗೋಚರವಾಗುವುದಿಲ್ಲ.

2020ರಲ್ಲಿ ಮೊದಲು ಜನವರಿ 10, ಎರಡನೇ ಬಾರಿ ಜೂನ್ 5 ಹಾಗೂ ಜುಲೈ 5 ರಂದು ಮೂರನೇ ಬಾರಿ ಚಂದ್ರಗ್ರಹಣ ಗೋಚರವಾಗಿತ್ತು. ಅದನ್ನು ಬಿಟ್ಟು ಇಂದು (ನವೆಂಬರ್ 30) ಗೋಚರವಾಗುವ ಪೆನಂಬ್ರಲ್ ಚಂದ್ರಗ್ರಹಣ ನಾಲ್ಕನೇ ಬಾರಿಯಾಗಿದ್ದು, ಮುಂದಿನ ಚಂದ್ರಗ್ರಹಣ 2021ರ ಮೇ 26ರಂದು ನಡೆಯುತ್ತದೆ.

ಚಂದ್ರಗ್ರಹಣಕ್ಕೆ ಕಾರಣ?

ಚಂದ್ರ ಸ್ವಂತ ಬೆಳಕನ್ನು ಹೊಂದಿಲ್ಲ. ಸೂರ್ಯನ ಬೆಳಕಿನಿಂದ ಚಂದ್ರ ಪ್ರತಿದಿನ ಗೋಚರವಾಗುವುದು. ಚಂದ್ರಗ್ರಹಣದ ಸಮಯದಲ್ಲಿ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ. ಸೂರ್ಯನ ಬೆಳಕು ಚಂದ್ರನನ್ನು ತಲುಪಲು ಭೂಮಿ ಅಡ್ಡವಾಗಿರುವುದರಿಂದ ಚಂದ್ರನ ಅರ್ಧ ಭಾಗ ಅಥವಾ ಸಂಪೂರ್ಣವಾಗಿ ಮುಚ್ಚುತ್ತದೆ. ಪೆನಂಬ್ರಲ್ ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ಭೂಮಿಯ ನೆರಳಿನ ಹೊರ ಭಾಗದ ಮೂಲಕ ಚಲಿಸುವುದರಿಂದ ಬಹಳ ಮುಸುಕಾಗಿರುತ್ತದೆ.

ಮುಂಬರುವ ಪೆನಂಬ್ರಲ್ ಚಂದ್ರಗ್ರಹಣ ಯುರೋಪ್ ಮತ್ತು ಅಮೇರಿಕ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಗೋಚರವಾಗುತ್ತದೆ. ನವೆಂಬರ್ ಚಂದ್ರಗ್ರಹಣವನ್ನು ವಿಶ್ವದ ಹಲವು ಕಡೆಗಳಲ್ಲಿ ಬೀವರ್ ಮೂನ್ ಎಂದು ಕರೆದರೆ, ಇನ್ನೂ ಕೆಲವು ಕಡೆಗಳಲ್ಲಿ ಫ್ರಾಸ್ಟಿ ಮೂನ್ ಅಥವಾ ಓಕ್ ಮೂನ್ ಎಂದು ಕರೆಯುತ್ತಾರೆ.

ಇದನ್ನೂ ಓದಿ:  ಅರೆ ನೆರಳು ಚಂದ್ರಗ್ರಹಣದಿಂದ ಕಾದಿದಿಯಾ ಮಹಾ ಕಂಟಕ?

Published On - 12:31 pm, Mon, 30 November 20

ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ
ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ
ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು
ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು
ಚಿಕ್ಕಮಗಳೂರು: ಹಾಲಿನ ಟ್ಯಾಂಕರ್ ಪಲ್ಟಿ, ಹರಿಯಿತು ಹಾಲಿನ ಹೊಳೆ
ಚಿಕ್ಕಮಗಳೂರು: ಹಾಲಿನ ಟ್ಯಾಂಕರ್ ಪಲ್ಟಿ, ಹರಿಯಿತು ಹಾಲಿನ ಹೊಳೆ
ಕಬಿನಿ ಜಲಾಶಯಕ್ಕೆ ಶಿವಣ್ಣ-ಗೀತಕ್ಕ ಭೇಟಿ, ಮಕ್ಕಳೊಂದಿಗೆ ಬೆರೆತ ದಂಪತಿ
ಕಬಿನಿ ಜಲಾಶಯಕ್ಕೆ ಶಿವಣ್ಣ-ಗೀತಕ್ಕ ಭೇಟಿ, ಮಕ್ಕಳೊಂದಿಗೆ ಬೆರೆತ ದಂಪತಿ
ಮಗನಿಗಾಗಿ ಶಬರಿಯಂತೆ ಕಾಯ್ದ ತಾಯಿ, ದೈವದ ಮೊರೆ ಹೊಕ್ಕಿದ್ದ ಕುಟುಂಬ
ಮಗನಿಗಾಗಿ ಶಬರಿಯಂತೆ ಕಾಯ್ದ ತಾಯಿ, ದೈವದ ಮೊರೆ ಹೊಕ್ಕಿದ್ದ ಕುಟುಂಬ