AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲು ಉತ್ಪಾದನೆಯಲ್ಲಿ ನಾಡಿಗೆ ಸ್ಪೂರ್ತಿಯಾಗುತ್ತಿದೆ ಮಾರ್ಕಂಡಪುರದ ಮಹಿಳೆಯರ ಮಾದರಿ

ಸ್ರ್ತೀ ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದು ತಲೆ ತಲಾಂತರದಿಂದ ಸಾಬೀತಾಗುತ್ತಲೇ ಇದೆ. ಗಂಗೆಯನ್ನು ಭೂಮಿಗಿಳಿಸಿದ ಭಗೀರಥನ ಕಥೆ ಕೇಳಿದ ನಮಗೆ ಮಾರ್ಕಂಡಪುರದ ಮಹಿಳೆಯರ ಮಾದರಿ ಸ್ಪೂರ್ತಿಯಾಗುತ್ತದೆ.

ಹಾಲು ಉತ್ಪಾದನೆಯಲ್ಲಿ ನಾಡಿಗೆ ಸ್ಪೂರ್ತಿಯಾಗುತ್ತಿದೆ ಮಾರ್ಕಂಡಪುರದ ಮಹಿಳೆಯರ ಮಾದರಿ
ಹಾಲು ಉತ್ಪಾದಕ ಸಂಘದ ಕೆಲಸದಲ್ಲಿ ನಿರತರಾದ ಮಹಿಳೆಯರು
guruganesh bhat
| Updated By: ಸಾಧು ಶ್ರೀನಾಥ್​|

Updated on: Dec 17, 2020 | 11:37 AM

Share

ಕೋಲಾರ: ಮಹಿಳೆ ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದು ತಲೆತಲಾಂತರದಿಂದ ಸಾಬೀತಾಗುತ್ತಲೇ ಇದೆ. ಗಂಗೆಯನ್ನು ಭೂಮಿಗಿಳಿಸಿದ ಭಗೀರಥನ ಕಥೆ ಕೇಳಿದ ನಮಗೆ ಮಾರ್ಕಂಡಪುರದ ಮಹಿಳೆಯರ ಮಾದರಿ ಸ್ಪೂರ್ತಿಯಾಗುತ್ತದೆ.

ಕೋಲಾರದ ಕೆಲವೆಡೆ ಅಂತರ್ಜಲವೇ ಬತ್ತಿಹೋಗಿದೆ. ಮಾರ್ಕಂಡಪುರವೂ ಅಂತದ್ದೇ ಒಂದು ಗ್ರಾಮ. ಗ್ರಾಮದ ಜನರು ಕುಡಿಯಲೂ ನೀರಿಲ್ಲದೆ ಊರು ಬಿಡುವ ಸ್ಥಿತಿಗೆ ತಲುಪಿದ್ದರು. ಕಳೆದ ಎಂಟು ವರ್ಷಗಳಿಂದ ಮಳೆಯನ್ನೇ ಕಾಣದೆ ಕೃಷಿ ಮಾಡುವುದು ಅಸಾಧ್ಯವೆಂಬ ಸ್ಥಿತಿಗೆ ತಲುಪಿತ್ತು. ಗ್ರಾಮಸ್ಥರು ಮಾಡಲು ಏನೂ ತೋಚದೇ ತಲೆ ಮೇಲೆ ಕೈಹೊತ್ತು ಕುಳಿತರು. ಆದರೆ, ಗ್ರಾಮದ ಮಹಿಳೆಯರು ಧೃತಿಗೆಡಲಿಲ್ಲ.

ಮಹಿಳೆಯರ ಮೊಗದಲ್ಲಿ ಸ್ವಾವಲಂಬನೆಯ ನಗು

ನೀರಿಲ್ಲದಿದ್ದರೇನು..ಹಾಲು ಬೆಳೆಯಬಹುದಲ್ಲ!? ಕೃಷಿ ಮಾಡಲಾಗದೇ ದಿಕ್ಕೆಟ್ಟು ಕೂತಿದ್ದ ಪುರುಷರಿಗೆ ಮಹಿಳೆಯರ ಬದುಕು ನಡೆಸುವ ಇನ್ನೊಂದು ಆಯಾಮ ತೋರಿಸಿದರು. ಮಹಿಳೆಯರೇ ಸೇರಿಕೊಂಡು, ಸ್ವಸಹಾಯ ಗುಂಪು ನಿರ್ಮಿಸಿದರು. ಮನೆಯ ಜಾನುವಾರಿಗೆ ಕೈಮುಗಿದು ಹೈನುಗಾರಿಕೆ ಪ್ರಾರಂಭಿಸಿದರು.

ಅಂದು 50 ಲೀಟರ್ ಹಾಲಿನಿಂದ ಆರಂಭವಾದ ಸಂಘ ಇಂದು 500 ಲೀ ಹಾಲು ಉತ್ಪಾದನೆ ಮಾಡುತ್ತಿದೆ. ನಿರಂತರ ಶ್ರಮ ಮತ್ತು ಆಸಕ್ತಿಗೆ ಜಿಲ್ಲೆಯೇ ಮಾರ್ಕಂಡಪುರದತ್ತ ತಿರುಗಿನೋಡುತ್ತಿದೆ. ಮಹಿಳೆಯರೇ ನಡೆಸುತ್ತಿರುವ ಸಹಕಾರಿ ಸಂಘ ಇತರ ಗ್ರಾಮಗಳಿಗೂ ಮಾದರಿಯಾಗಿದೆ.

ಈಗ ಹಸುಗಳಿಗೂ ಮಾರ್ಕಂಡಪುರದ ಮಹಿಳೆಯರಿಗೂ ಬೆಳೆದಿದೆ ಬಿಡಿಸಲಾರದ ನಂಟು

ಮಹಿಳೆಯರ ಶ್ರ,ಮಕ್ಕೆ ಸಂದ ಗೌರವ

ಇಲ್ಲಿ ಮಹಿಳೆಯರೇ ಬಾಸ್ ಹಸು ಮೇಯಿಸಿ, ಹಾಲು ಕರೆದು, ಪೇಟೆಯಿಂದ ದನಕರುಗಳಿಗೆ ಮೇವು ತರುವುದರಿಂದ ಹಿಡಿದು ಡೈರಿಗೆ ಹಾಲು ಹಾಕಿ, ತಿಂಗಳಿಗೆ ಸಂಬಳ ಎಣಿಸುವವರೆಗೂ ಎಲ್ಲಾ ಕೆಲಸಗಳನ್ನೂ ಮಹಿಳೆಯರೇ ನಿರ್ವಹಿಸುತ್ತಾರೆ. ಸಂಘದ ಮೂಲಕ ಬಡ ಮಹಿಳೆಯರಿಗೆ ಸಾಲ ಸೌಲಭ್ಯಗಳನ್ನ ಕಲ್ಪಿಸಿ, ಆರ್ಥಿಕವಾಗಿ ಸಬಲರಾಗುವಂತೆ ಮಾಡಲಾಗಿದೆ.

ಇಡೀ ಕುಟುಂಬವನ್ನು ಪೋಷಿಸಬಲ್ಲ ಶಕ್ತಿ ಮಹಿಳೆಗಿದೆ ಎಂಬುದಕ್ಕೆ ತಾಜಾ ನಿದರ್ಶನವಾಗಿ ಮಾರ್ಕಂಡಪುರದ ಮಹಿಳೆಯರು ನಮ್ಮೆದುರಿಗಿದ್ದಾರೆ. ಇತರ ಗ್ರಾಮಗಳ ಮಹಿಳೆಯರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.

-ರಾಜೇಂದ್ರ ಸಿಂಹ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ