AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲು ಉತ್ಪಾದನೆಯಲ್ಲಿ ನಾಡಿಗೆ ಸ್ಪೂರ್ತಿಯಾಗುತ್ತಿದೆ ಮಾರ್ಕಂಡಪುರದ ಮಹಿಳೆಯರ ಮಾದರಿ

ಸ್ರ್ತೀ ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದು ತಲೆ ತಲಾಂತರದಿಂದ ಸಾಬೀತಾಗುತ್ತಲೇ ಇದೆ. ಗಂಗೆಯನ್ನು ಭೂಮಿಗಿಳಿಸಿದ ಭಗೀರಥನ ಕಥೆ ಕೇಳಿದ ನಮಗೆ ಮಾರ್ಕಂಡಪುರದ ಮಹಿಳೆಯರ ಮಾದರಿ ಸ್ಪೂರ್ತಿಯಾಗುತ್ತದೆ.

ಹಾಲು ಉತ್ಪಾದನೆಯಲ್ಲಿ ನಾಡಿಗೆ ಸ್ಪೂರ್ತಿಯಾಗುತ್ತಿದೆ ಮಾರ್ಕಂಡಪುರದ ಮಹಿಳೆಯರ ಮಾದರಿ
ಹಾಲು ಉತ್ಪಾದಕ ಸಂಘದ ಕೆಲಸದಲ್ಲಿ ನಿರತರಾದ ಮಹಿಳೆಯರು
guruganesh bhat
| Edited By: |

Updated on: Dec 17, 2020 | 11:37 AM

Share

ಕೋಲಾರ: ಮಹಿಳೆ ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದು ತಲೆತಲಾಂತರದಿಂದ ಸಾಬೀತಾಗುತ್ತಲೇ ಇದೆ. ಗಂಗೆಯನ್ನು ಭೂಮಿಗಿಳಿಸಿದ ಭಗೀರಥನ ಕಥೆ ಕೇಳಿದ ನಮಗೆ ಮಾರ್ಕಂಡಪುರದ ಮಹಿಳೆಯರ ಮಾದರಿ ಸ್ಪೂರ್ತಿಯಾಗುತ್ತದೆ.

ಕೋಲಾರದ ಕೆಲವೆಡೆ ಅಂತರ್ಜಲವೇ ಬತ್ತಿಹೋಗಿದೆ. ಮಾರ್ಕಂಡಪುರವೂ ಅಂತದ್ದೇ ಒಂದು ಗ್ರಾಮ. ಗ್ರಾಮದ ಜನರು ಕುಡಿಯಲೂ ನೀರಿಲ್ಲದೆ ಊರು ಬಿಡುವ ಸ್ಥಿತಿಗೆ ತಲುಪಿದ್ದರು. ಕಳೆದ ಎಂಟು ವರ್ಷಗಳಿಂದ ಮಳೆಯನ್ನೇ ಕಾಣದೆ ಕೃಷಿ ಮಾಡುವುದು ಅಸಾಧ್ಯವೆಂಬ ಸ್ಥಿತಿಗೆ ತಲುಪಿತ್ತು. ಗ್ರಾಮಸ್ಥರು ಮಾಡಲು ಏನೂ ತೋಚದೇ ತಲೆ ಮೇಲೆ ಕೈಹೊತ್ತು ಕುಳಿತರು. ಆದರೆ, ಗ್ರಾಮದ ಮಹಿಳೆಯರು ಧೃತಿಗೆಡಲಿಲ್ಲ.

ಮಹಿಳೆಯರ ಮೊಗದಲ್ಲಿ ಸ್ವಾವಲಂಬನೆಯ ನಗು

ನೀರಿಲ್ಲದಿದ್ದರೇನು..ಹಾಲು ಬೆಳೆಯಬಹುದಲ್ಲ!? ಕೃಷಿ ಮಾಡಲಾಗದೇ ದಿಕ್ಕೆಟ್ಟು ಕೂತಿದ್ದ ಪುರುಷರಿಗೆ ಮಹಿಳೆಯರ ಬದುಕು ನಡೆಸುವ ಇನ್ನೊಂದು ಆಯಾಮ ತೋರಿಸಿದರು. ಮಹಿಳೆಯರೇ ಸೇರಿಕೊಂಡು, ಸ್ವಸಹಾಯ ಗುಂಪು ನಿರ್ಮಿಸಿದರು. ಮನೆಯ ಜಾನುವಾರಿಗೆ ಕೈಮುಗಿದು ಹೈನುಗಾರಿಕೆ ಪ್ರಾರಂಭಿಸಿದರು.

ಅಂದು 50 ಲೀಟರ್ ಹಾಲಿನಿಂದ ಆರಂಭವಾದ ಸಂಘ ಇಂದು 500 ಲೀ ಹಾಲು ಉತ್ಪಾದನೆ ಮಾಡುತ್ತಿದೆ. ನಿರಂತರ ಶ್ರಮ ಮತ್ತು ಆಸಕ್ತಿಗೆ ಜಿಲ್ಲೆಯೇ ಮಾರ್ಕಂಡಪುರದತ್ತ ತಿರುಗಿನೋಡುತ್ತಿದೆ. ಮಹಿಳೆಯರೇ ನಡೆಸುತ್ತಿರುವ ಸಹಕಾರಿ ಸಂಘ ಇತರ ಗ್ರಾಮಗಳಿಗೂ ಮಾದರಿಯಾಗಿದೆ.

ಈಗ ಹಸುಗಳಿಗೂ ಮಾರ್ಕಂಡಪುರದ ಮಹಿಳೆಯರಿಗೂ ಬೆಳೆದಿದೆ ಬಿಡಿಸಲಾರದ ನಂಟು

ಮಹಿಳೆಯರ ಶ್ರ,ಮಕ್ಕೆ ಸಂದ ಗೌರವ

ಇಲ್ಲಿ ಮಹಿಳೆಯರೇ ಬಾಸ್ ಹಸು ಮೇಯಿಸಿ, ಹಾಲು ಕರೆದು, ಪೇಟೆಯಿಂದ ದನಕರುಗಳಿಗೆ ಮೇವು ತರುವುದರಿಂದ ಹಿಡಿದು ಡೈರಿಗೆ ಹಾಲು ಹಾಕಿ, ತಿಂಗಳಿಗೆ ಸಂಬಳ ಎಣಿಸುವವರೆಗೂ ಎಲ್ಲಾ ಕೆಲಸಗಳನ್ನೂ ಮಹಿಳೆಯರೇ ನಿರ್ವಹಿಸುತ್ತಾರೆ. ಸಂಘದ ಮೂಲಕ ಬಡ ಮಹಿಳೆಯರಿಗೆ ಸಾಲ ಸೌಲಭ್ಯಗಳನ್ನ ಕಲ್ಪಿಸಿ, ಆರ್ಥಿಕವಾಗಿ ಸಬಲರಾಗುವಂತೆ ಮಾಡಲಾಗಿದೆ.

ಇಡೀ ಕುಟುಂಬವನ್ನು ಪೋಷಿಸಬಲ್ಲ ಶಕ್ತಿ ಮಹಿಳೆಗಿದೆ ಎಂಬುದಕ್ಕೆ ತಾಜಾ ನಿದರ್ಶನವಾಗಿ ಮಾರ್ಕಂಡಪುರದ ಮಹಿಳೆಯರು ನಮ್ಮೆದುರಿಗಿದ್ದಾರೆ. ಇತರ ಗ್ರಾಮಗಳ ಮಹಿಳೆಯರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.

-ರಾಜೇಂದ್ರ ಸಿಂಹ

ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್