AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲು ಉತ್ಪಾದನೆಯಲ್ಲಿ ನಾಡಿಗೆ ಸ್ಪೂರ್ತಿಯಾಗುತ್ತಿದೆ ಮಾರ್ಕಂಡಪುರದ ಮಹಿಳೆಯರ ಮಾದರಿ

ಸ್ರ್ತೀ ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದು ತಲೆ ತಲಾಂತರದಿಂದ ಸಾಬೀತಾಗುತ್ತಲೇ ಇದೆ. ಗಂಗೆಯನ್ನು ಭೂಮಿಗಿಳಿಸಿದ ಭಗೀರಥನ ಕಥೆ ಕೇಳಿದ ನಮಗೆ ಮಾರ್ಕಂಡಪುರದ ಮಹಿಳೆಯರ ಮಾದರಿ ಸ್ಪೂರ್ತಿಯಾಗುತ್ತದೆ.

ಹಾಲು ಉತ್ಪಾದನೆಯಲ್ಲಿ ನಾಡಿಗೆ ಸ್ಪೂರ್ತಿಯಾಗುತ್ತಿದೆ ಮಾರ್ಕಂಡಪುರದ ಮಹಿಳೆಯರ ಮಾದರಿ
ಹಾಲು ಉತ್ಪಾದಕ ಸಂಘದ ಕೆಲಸದಲ್ಲಿ ನಿರತರಾದ ಮಹಿಳೆಯರು
guruganesh bhat
| Edited By: ಸಾಧು ಶ್ರೀನಾಥ್​|

Updated on: Dec 17, 2020 | 11:37 AM

Share

ಕೋಲಾರ: ಮಹಿಳೆ ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದು ತಲೆತಲಾಂತರದಿಂದ ಸಾಬೀತಾಗುತ್ತಲೇ ಇದೆ. ಗಂಗೆಯನ್ನು ಭೂಮಿಗಿಳಿಸಿದ ಭಗೀರಥನ ಕಥೆ ಕೇಳಿದ ನಮಗೆ ಮಾರ್ಕಂಡಪುರದ ಮಹಿಳೆಯರ ಮಾದರಿ ಸ್ಪೂರ್ತಿಯಾಗುತ್ತದೆ.

ಕೋಲಾರದ ಕೆಲವೆಡೆ ಅಂತರ್ಜಲವೇ ಬತ್ತಿಹೋಗಿದೆ. ಮಾರ್ಕಂಡಪುರವೂ ಅಂತದ್ದೇ ಒಂದು ಗ್ರಾಮ. ಗ್ರಾಮದ ಜನರು ಕುಡಿಯಲೂ ನೀರಿಲ್ಲದೆ ಊರು ಬಿಡುವ ಸ್ಥಿತಿಗೆ ತಲುಪಿದ್ದರು. ಕಳೆದ ಎಂಟು ವರ್ಷಗಳಿಂದ ಮಳೆಯನ್ನೇ ಕಾಣದೆ ಕೃಷಿ ಮಾಡುವುದು ಅಸಾಧ್ಯವೆಂಬ ಸ್ಥಿತಿಗೆ ತಲುಪಿತ್ತು. ಗ್ರಾಮಸ್ಥರು ಮಾಡಲು ಏನೂ ತೋಚದೇ ತಲೆ ಮೇಲೆ ಕೈಹೊತ್ತು ಕುಳಿತರು. ಆದರೆ, ಗ್ರಾಮದ ಮಹಿಳೆಯರು ಧೃತಿಗೆಡಲಿಲ್ಲ.

ಮಹಿಳೆಯರ ಮೊಗದಲ್ಲಿ ಸ್ವಾವಲಂಬನೆಯ ನಗು

ನೀರಿಲ್ಲದಿದ್ದರೇನು..ಹಾಲು ಬೆಳೆಯಬಹುದಲ್ಲ!? ಕೃಷಿ ಮಾಡಲಾಗದೇ ದಿಕ್ಕೆಟ್ಟು ಕೂತಿದ್ದ ಪುರುಷರಿಗೆ ಮಹಿಳೆಯರ ಬದುಕು ನಡೆಸುವ ಇನ್ನೊಂದು ಆಯಾಮ ತೋರಿಸಿದರು. ಮಹಿಳೆಯರೇ ಸೇರಿಕೊಂಡು, ಸ್ವಸಹಾಯ ಗುಂಪು ನಿರ್ಮಿಸಿದರು. ಮನೆಯ ಜಾನುವಾರಿಗೆ ಕೈಮುಗಿದು ಹೈನುಗಾರಿಕೆ ಪ್ರಾರಂಭಿಸಿದರು.

ಅಂದು 50 ಲೀಟರ್ ಹಾಲಿನಿಂದ ಆರಂಭವಾದ ಸಂಘ ಇಂದು 500 ಲೀ ಹಾಲು ಉತ್ಪಾದನೆ ಮಾಡುತ್ತಿದೆ. ನಿರಂತರ ಶ್ರಮ ಮತ್ತು ಆಸಕ್ತಿಗೆ ಜಿಲ್ಲೆಯೇ ಮಾರ್ಕಂಡಪುರದತ್ತ ತಿರುಗಿನೋಡುತ್ತಿದೆ. ಮಹಿಳೆಯರೇ ನಡೆಸುತ್ತಿರುವ ಸಹಕಾರಿ ಸಂಘ ಇತರ ಗ್ರಾಮಗಳಿಗೂ ಮಾದರಿಯಾಗಿದೆ.

ಈಗ ಹಸುಗಳಿಗೂ ಮಾರ್ಕಂಡಪುರದ ಮಹಿಳೆಯರಿಗೂ ಬೆಳೆದಿದೆ ಬಿಡಿಸಲಾರದ ನಂಟು

ಮಹಿಳೆಯರ ಶ್ರ,ಮಕ್ಕೆ ಸಂದ ಗೌರವ

ಇಲ್ಲಿ ಮಹಿಳೆಯರೇ ಬಾಸ್ ಹಸು ಮೇಯಿಸಿ, ಹಾಲು ಕರೆದು, ಪೇಟೆಯಿಂದ ದನಕರುಗಳಿಗೆ ಮೇವು ತರುವುದರಿಂದ ಹಿಡಿದು ಡೈರಿಗೆ ಹಾಲು ಹಾಕಿ, ತಿಂಗಳಿಗೆ ಸಂಬಳ ಎಣಿಸುವವರೆಗೂ ಎಲ್ಲಾ ಕೆಲಸಗಳನ್ನೂ ಮಹಿಳೆಯರೇ ನಿರ್ವಹಿಸುತ್ತಾರೆ. ಸಂಘದ ಮೂಲಕ ಬಡ ಮಹಿಳೆಯರಿಗೆ ಸಾಲ ಸೌಲಭ್ಯಗಳನ್ನ ಕಲ್ಪಿಸಿ, ಆರ್ಥಿಕವಾಗಿ ಸಬಲರಾಗುವಂತೆ ಮಾಡಲಾಗಿದೆ.

ಇಡೀ ಕುಟುಂಬವನ್ನು ಪೋಷಿಸಬಲ್ಲ ಶಕ್ತಿ ಮಹಿಳೆಗಿದೆ ಎಂಬುದಕ್ಕೆ ತಾಜಾ ನಿದರ್ಶನವಾಗಿ ಮಾರ್ಕಂಡಪುರದ ಮಹಿಳೆಯರು ನಮ್ಮೆದುರಿಗಿದ್ದಾರೆ. ಇತರ ಗ್ರಾಮಗಳ ಮಹಿಳೆಯರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.

-ರಾಜೇಂದ್ರ ಸಿಂಹ

Follow Us
guruganesh bhat
guruganesh bhat
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!