ಭಾರತೀಯರಿಗೆ ಅತಿಪ್ರಿಯವಾಗಿರುವ ತಿನಿಸ್ಯಾವುದು ಗೊತ್ತಾ?

ಕೊರೊನಾ ವೈರಸ್ ತನ್ನ ಕಬಂಧ ಬಾಹುಗಳನ್ನು ದೇಶಾದ್ಯಂತ ಚಾಚಿ ಜನರನ್ನು ಬಲಿ ಪಡೆಯುವುದು ಶುರುವಾದ ನಂತರ ಅದನ್ನು ನಿಯಂತ್ರಿಸಲು ಇತರ ದೇಶಗಳಂತೆ ಭಾರತಯದಲ್ಲೂ ಲಾಕ್​ಡೌನ್ ಹೇರಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಅವಧಿಯಲ್ಲಿ ಹೋಟೆಲ್​ಗಳು ಮುಚ್ಚಿದ್ದವಾದರೂ ಆನಲೈನ್ ಸರ್ವಿಸ್, ಹೋಮ್ ಡೆಲಿವರಿ ಜಾರಿಯಲ್ಲಿತ್ತು. ಲಕ್ಷಾಂತರ ಜನ ಮನೆಗಳಲ್ಲೇ ಕೂತು ತಿಂಡಿ, ಲಂಚ್ ಮತ್ತು ಡಿನ್ನರ್​ಗಳನ್ನು ಆರ್ಡರ್ ಮಾಡಿ ರುಚಿಕರವಾದ ಭಕ್ಷ್ಯಗಳನ್ನು ಭುಜಿಸಿದರು.. ಅಂದಹಾಗೆ, ಈ ಲಾಕ್​ಡೌನ್ ಅವಧಿಯಲ್ಲಿ ಜನರು ಅತಿಹೆಚ್ಚು ಆರ್ಡರ್ ಮಾಡಿದ ತಿಂಡಿ ಅಥವಾ ಭಕ್ಷ್ಯ […]

ಭಾರತೀಯರಿಗೆ ಅತಿಪ್ರಿಯವಾಗಿರುವ ತಿನಿಸ್ಯಾವುದು ಗೊತ್ತಾ?
ಅರುಣ್​ ಕುಮಾರ್​ ಬೆಳ್ಳಿ Edited By: ಆಯೇಷಾ ಬಾನು

Updated on: Nov 23, 2020 | 12:07 PM

ಕೊರೊನಾ ವೈರಸ್ ತನ್ನ ಕಬಂಧ ಬಾಹುಗಳನ್ನು ದೇಶಾದ್ಯಂತ ಚಾಚಿ ಜನರನ್ನು ಬಲಿ ಪಡೆಯುವುದು ಶುರುವಾದ ನಂತರ ಅದನ್ನು ನಿಯಂತ್ರಿಸಲು ಇತರ ದೇಶಗಳಂತೆ ಭಾರತಯದಲ್ಲೂ ಲಾಕ್​ಡೌನ್ ಹೇರಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಅವಧಿಯಲ್ಲಿ ಹೋಟೆಲ್​ಗಳು ಮುಚ್ಚಿದ್ದವಾದರೂ ಆನಲೈನ್ ಸರ್ವಿಸ್, ಹೋಮ್ ಡೆಲಿವರಿ ಜಾರಿಯಲ್ಲಿತ್ತು. ಲಕ್ಷಾಂತರ ಜನ ಮನೆಗಳಲ್ಲೇ ಕೂತು ತಿಂಡಿ, ಲಂಚ್ ಮತ್ತು ಡಿನ್ನರ್​ಗಳನ್ನು ಆರ್ಡರ್ ಮಾಡಿ ರುಚಿಕರವಾದ ಭಕ್ಷ್ಯಗಳನ್ನು ಭುಜಿಸಿದರು..

ಅಂದಹಾಗೆ, ಈ ಲಾಕ್​ಡೌನ್ ಅವಧಿಯಲ್ಲಿ ಜನರು ಅತಿಹೆಚ್ಚು ಆರ್ಡರ್ ಮಾಡಿದ ತಿಂಡಿ ಅಥವಾ ಭಕ್ಷ್ಯ (ಆಹಾರ ಪದಾರ್ಥ) ಯಾವುದು ಅಂತ ನಿಮಗೆ ಗೊತ್ತಾ?

ಅದು ಬಿರಿಯಾನಿ!

ನಿಸ್ಸಂದೇಹವಾಗಿಯೂ ಹೌದು. ಅತಿ ಹೆಚ್ಚು ಆರ್ಡರ್ ಪಡೆದ ಆಹಾರಗಳಲ್ಲಿ ಬಿರಿಯಾನಿಗೆ ನಂಬರ್ 1 ಸ್ಥಾನ. ಆನ್​ಲೈನ್ ಆಹಾರ ವಿತರಕ ಪ್ಲಾಟ್​ಫಾರ್ಮ್​ಗಳಲ್ಲಿ ಮುಂಚೂಣಿಯಲ್ಲಿರುವ ಸ್ವಿಗ್ಗಿ ಇತ್ತೀಚಿಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಈ ಸಂಸ್ಥೆಯು, ಲಾಕ್​ಡೌನ್ ಸಮಯದಲ್ಲಿ ಐದೂವರೆ ಲಕ್ಷ ಬಿರಿಯಾನಿ ಆರ್ಡರ್​ಗಳನ್ನು ಮನೆಮನೆಗಳಿಗೆ ತಲುಪಿಸಿದೆಯಂತೆ.

ಮತ್ತೊಂದು ಪ್ಲಾಟ್​ಫಾರ್ಮ್ ಜೊಮ್ಯಾಟೊ ಗೊತ್ತಲ್ಲ? ಈ ಸಂಸ್ಥೆ ನೀಡಿರುವ ಅಂಕಿಅಂಶಗಳನ್ನು ಗಮನಿಸಿದರೆ ಭಾರತೀಯರಲ್ಲಿ ಬಿರಿಯಾನಿ ಬಗ್ಗೆ ಎಷ್ಟು ಪ್ರೀತಿಯಿದೆಯೆನ್ನುವುದು ಸ್ಪಷ್ಟವಾಗುತ್ತದೆ. ಜೊಮ್ಯಾಟೊ, ಮಾರ್ಚ್​ನಿಂದ ಜೂನ್ ನಡುವಿನ ಅವಧಿಯಲ್ಲಿ 44,30,008 ಬಿರಿಯಾನಿ ಆರ್ಡರ್​ಗಳನ್ನು ಗ್ರಾಹಕರಿಗೆ ತಲುಪಿಸಿದೆಯಂತೆ.

ವ್ಹಾಹ್ ಬಿರಿಯಾನಿ ವ್ಹಾಹ್! ಏನು ನೀನು ಮಾಡಿರುವ ಮಾಯೆ!?

ಈ ಮೂರು ತಿಂಗಳ ಅವಧಿಯಲ್ಲಿ ಜೊಮ್ಯಾಟೊ ಸ್ವೀಕರಿಸಿದ್ದು ಹೆಚ್ಚುಕಡಿಮೆ 2.15 ಕೋಟಿ ಆರ್ಡರ್​ಗಳಂತೆ.

ಅಂದಹಾಗೆ, ಈ ಸಂಸ್ಥೆಗಳು ನೀಡಿರುವ ಮಾಹಿತಿ ಪ್ರಕಾರ ಚಿಕನ್ ಬಿರಿಯಾನಿ ಭಾರತೀಯರಿಗೆ ಅತಿಹೆಚ್ಚು ಇಷ್ದವಾಗುವ ಆಹಾರ ತಿನಿಸಂತೆ. ಸತತವಾಗಿ ನಾಲ್ಕನೇ ಬಾರಿ ಚಿಕನ್ ಬಿರಿಯಾನಿ ಗ್ರಾಹಕರು ಮನಸಾರೆ ಬಯಸುವ ಸ್ವಾದಿಷ್ಟ ಊಟಗಳಲ್ಲಿ ಮೊದಲ ಸ್ಥಾನ ಗಳಿಸಿದೆ.

Published On - 4:01 pm, Wed, 26 August 20

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us