AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Year Resolution | ಅಷ್ಟೋಇಷ್ಟೋ ಹಣ ಉಳಿಸಿಕೊಳ್ತೀನಿ, ಸರ್ಕಾರದಿಂದ ನಿರೀಕ್ಷೆ ಕಡಿಮೆ ಮಾಡಿಕೊಳ್ತೀನಿ

ಹೊಸ ವರ್ಷದಲ್ಲಿ ವೈಯಕ್ತಿಕ ಬದುಕು ಮತ್ತು ಸಮಾಜದಲ್ಲಿ ನಿರೀಕ್ಷಿಸುವ ಬದಲಾವಣೆಗಳ ಬಗ್ಗೆ ಹೋಟೆಲ್ ಕಾರ್ಮಿಕ ಸುರೇಶ್​ ಕುಮಾರ್​ ಅವರ ಅನಿಸಿಕೆ ಇಲ್ಲಿದೆ.

New Year Resolution | ಅಷ್ಟೋಇಷ್ಟೋ ಹಣ ಉಳಿಸಿಕೊಳ್ತೀನಿ, ಸರ್ಕಾರದಿಂದ ನಿರೀಕ್ಷೆ ಕಡಿಮೆ ಮಾಡಿಕೊಳ್ತೀನಿ
ಸುರೇಶ್​ ಕುಮಾರ್​, ಹೋಟೆಲ್ ಕಾರ್ಮಿಕ
Lakshmi Hegde
| Edited By: |

Updated on:Dec 31, 2020 | 7:29 PM

Share

ಹೊಸ ವರ್ಷದಲ್ಲಿ ವೈಯಕ್ತಿಕ ಬದುಕು ಮತ್ತು ಸಮಾಜದಲ್ಲಿ ನಿರೀಕ್ಷಿಸುವ ಬದಲಾವಣೆಗಳ ಬಗ್ಗೆ ಹೋಟೆಲ್ ಕಾರ್ಮಿಕ ಸುರೇಶ್​ ಕುಮಾರ್​ ಅವರ ಅನಿಸಿಕೆ ಇಲ್ಲಿದೆ.

ನಾನು ಮಾಡುತ್ತಿರುವ ಉದ್ಯೋಗದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಣಬೇಕು ಎಂಬುದು ಆಸೆ. ಬೇರೆ ಕೆಲಸ ಶುರು ಮಾಡುವ ಯೋಜನೆಯೇನೂ ಇಲ್ಲ. ಈಗ ಮಾಡುತ್ತಿರುವ ಕೆಲಸದಲ್ಲೇ ಇನ್ನೂ ಪ್ರಗತಿ ಕಾಣಬೇಕು. ಬ್ಯುಸಿನೆಸ್ ಪಿಕ್​ಅಪ್​ ಆಗಬೇಕು.

ಸಮಾಜ, ದೇಶ, ರಾಜ್ಯದಲ್ಲಿ ಕಾಣ ಬಯಸುವ ಬದಲಾವಣೆ 2020ರಲ್ಲಿ ಕೊರೊನಾ ನಮಗೆ ಸರಿಯಾದ ಹೊಡೆತ ಕೊಟ್ಟಿತ್ತು. ಮುಂದಿನ ವರ್ಷದಲ್ಲಿ ಈ ಕಾಯಿಲೆಯೆಲ್ಲ ಸಂಪೂರ್ಣವಾಗಿ ನಾಶವಾಗಲಿ. ಹೊರದೇಶಗಳಂತೆ ನಮ್ಮ ದೇಶವೂ ಅಭಿವೃದ್ಧಿಯಾಗಬೇಕು. ಜನರು ದುಡಿದಿದ್ದು ಜನರಿಗೇ ಉಳಿಯುವಂತಾಗಬೇಕು. ರೈತರಿಗೆ ಒಳ್ಳೆಯ ಬೆಳೆ-ಬೆಲೆ ಸಿಗಲಿ. ಸರ್ಕಾರಗಳು ರೈತರಿಗೆ ಬೆಂಬಲ ನೀಡುವಂತಾಗಬೇಕು. ಹಾಗೇ ಸರ್ಕಾರಗಳಿಗೂ ಯಾವ ಸಮಸ್ಯೆಯೂ ಎದುರಾಗಬಾರದು. ಕೊರೊನಾ ಮುಕ್ತವಾಗಬೇಕು. ಒಟ್ಟಿನಲ್ಲಿ 2021ನೇ ವರ್ಷದಲ್ಲಿ ಎಲ್ಲವೂ ಸುಲಲಿತವಾಗಿ, ಒಳ್ಳೆಯದಾಗಿ ಇರಬೇಕು.

ಸಮಾಜದಲ್ಲಿ ಬದಲಾವಣೆ ಕಾಣಲು ನಾನು ಏನು ಮಾಡಬಲ್ಲೆ? ನಾನು ಸಂಪಾದನೆ ಮಾಡಿದ್ದನ್ನು ಆಷ್ಟೋಇಷ್ಟೋ ಉಳಿಸಿಕೊಂಡು ನನ್ನ ವೈಯಕ್ತಿಕ ಪ್ರಗತಿಯತ್ತ ಗಮನ ಹರಿಸುತ್ತೇನೆ. ಸರ್ಕಾರದ ಬಳಿ ಕೇಳುವುದು, ಸರ್ಕಾರವೇ ಮಾಡಲಿ ಎಂದು ಬಯಸುವುದನ್ನು ಆದಷ್ಟು ಕಡಿಮೆ ಮಾಡುತ್ತೇನೆ. ನನ್ನ ಜವಾಬ್ದಾರಿಯನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಈ ಮೂಲಕ ಸಮಾಜಕ್ಕೂ ಪೂರಕವಾಗಿ ಇರುತ್ತೇನೆ.

Published On - 6:22 pm, Thu, 31 December 20

Follow Us
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ