AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದ್ಗುರು ‘ಭೈರವ’ ಕಲೆಯಿಂದ ಕೊವಿಡ್​ ಪರಿಹಾರಕ್ಕೆ ಸಿಕ್ತು 9 ಕೋಟಿ ರೂ!

ದೇಶದಲ್ಲೆಡೆ ಹಬ್ಬಿರುವ ಕೊರೊನಾದಿಂದ ತತ್ತರಿಸಿ ಹೋಗಿರುವ ರಾಜ್ಯಗಳಲ್ಲಿ ತಮಿಳುನಾಡು ಸಹ ಒಂದು. ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ಈ ರಾಜ್ಯವು ಸಾಕಷ್ಟು ಸಾವು ನೋವು ಅನುಭವಿಸಿದೆ. ಈ ಮಧ್ಯೆ ವಿಶ್ವವಿಖ್ಯಾತ ಇಶಾ ಪ್ರತಿಷ್ಠಾನವು ಕೊವಿಡ್​ ವಿರುದ್ಧದ ಹೋರಾಟಕ್ಕೆ ಸಹಾಯ ಹಸ್ತವನ್ನ ಚಾಚಿದೆ. ಸದ್ಗುರು ಜಗ್ಗಿ ವಾಸುದೇವ್​ ತಮ್ಮ ಕೈಯಾರೇ ಬಿಡಿಸಿರುವ ಎರಡು ಅದ್ಭುತವಾದ ಚಿತ್ರಕಲೆಗಳ ಮಾರಾಟದಿಂದ ಬರೋಬ್ಬರಿ 9 ಕೋಟಿ ರೂಪಾಯಿ ಸಂಗ್ರಹವಾಗಿದೆ. ಅದನ್ನು ಸದ್ಗುರು ಇಶಾ ಔಟ್​ರೀಚ್​ ಸಂಸ್ಥೆಯು ಕೊವಿಡ್​ನಿಂದ ಸಂಕಷ್ಟ ಎದುರಿಸುತ್ತಿರೋರ ನೆರವಿಗೆ ಬಳಸಿಕೊಳ್ಳಲು ಮುಂದಾಗಿದೆ. […]

ಸದ್ಗುರು ‘ಭೈರವ’ ಕಲೆಯಿಂದ ಕೊವಿಡ್​ ಪರಿಹಾರಕ್ಕೆ ಸಿಕ್ತು 9 ಕೋಟಿ ರೂ!
KUSHAL V
| Updated By: |

Updated on:Jul 06, 2020 | 5:49 PM

Share

ದೇಶದಲ್ಲೆಡೆ ಹಬ್ಬಿರುವ ಕೊರೊನಾದಿಂದ ತತ್ತರಿಸಿ ಹೋಗಿರುವ ರಾಜ್ಯಗಳಲ್ಲಿ ತಮಿಳುನಾಡು ಸಹ ಒಂದು. ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ಈ ರಾಜ್ಯವು ಸಾಕಷ್ಟು ಸಾವು ನೋವು ಅನುಭವಿಸಿದೆ. ಈ ಮಧ್ಯೆ ವಿಶ್ವವಿಖ್ಯಾತ ಇಶಾ ಪ್ರತಿಷ್ಠಾನವು ಕೊವಿಡ್​ ವಿರುದ್ಧದ ಹೋರಾಟಕ್ಕೆ ಸಹಾಯ ಹಸ್ತವನ್ನ ಚಾಚಿದೆ.

ಸದ್ಗುರು ಜಗ್ಗಿ ವಾಸುದೇವ್​ ತಮ್ಮ ಕೈಯಾರೇ ಬಿಡಿಸಿರುವ ಎರಡು ಅದ್ಭುತವಾದ ಚಿತ್ರಕಲೆಗಳ ಮಾರಾಟದಿಂದ ಬರೋಬ್ಬರಿ 9 ಕೋಟಿ ರೂಪಾಯಿ ಸಂಗ್ರಹವಾಗಿದೆ. ಅದನ್ನು ಸದ್ಗುರು ಇಶಾ ಔಟ್​ರೀಚ್​ ಸಂಸ್ಥೆಯು ಕೊವಿಡ್​ನಿಂದ ಸಂಕಷ್ಟ ಎದುರಿಸುತ್ತಿರೋರ ನೆರವಿಗೆ ಬಳಸಿಕೊಳ್ಳಲು ಮುಂದಾಗಿದೆ.

ಇದನ್ನು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಲಾಕ್​ಡೌನ್​ನಿಂದ ಸಂಕಷ್ಟ ಎದುರಿಸುತ್ತಿರೋರಿಗೆ ಆಹಾರ ಪೂರೈಸಲು ಬಳಸಲಾಗುತ್ತಿದೆ. ಜೊತೆಗೆ, ವೈದ್ಯಕೀಯ ಸಿಬ್ಬಂದಿಗೆ PPE ಕಿಟ್​ ಹಾಗೂ ಕೊವಿಡ್​ ಆಸ್ಪತ್ರೆಗಳಿಗೆ ಇತರೆ ಸುರಕ್ಷತಾ ಪರಿಕರಗಳನ್ನು ನೀಡಲು ಸಹ ಬಳಸಲಾಗುತ್ತಿದೆ.

ಪರಿಪೂರ್ಣವಾಗಿ ಬಾಳೋಣ (To Live totally) ಎಂಬ ಶೀರ್ಷಿಕೆಯಡಿ ರಚಿಸಲಾಗಿದ್ದ ಆಯಿಲ್​ ಪೇಂಟಿಂಗ್ ಸರಿಸುಮಾರು 4.1 ಕೋಟಿ ರೂಪಾಯಿ ಗಳಿಸಿದ್ದರೆ, ಇತ್ತೀಚೆಗೆ ಏಪ್ರಿಲ್​ನಲ್ಲಿ ಅಗಲಿದೆ ನೆಚ್ಚಿನ ಹೋರಿ ಭೈರವನ ನೆನಪಿನಲ್ಲಿ ಗೋಮಯ, ಸುಣ್ಣ, ಅರಿಶಿನ ಮತ್ತು ಕಲ್ಲಿದ್ದಲನ್ನು ಬಳಸಿ ಸದ್ಗುರು ಬಿಡಿಸಿರುವ ಅಮೋಘವಾದ ‘ಭೈರವ’ ಚಿತ್ರಕಲೆ ಬರೋಬ್ಬರಿ 5.1 ಕೋಟಿ ಗಳಿಸಿದೆ.

#BeatTheVirus ಎಂಬ ಹೆಸರಿನಲ್ಲಿ ಇಶಾ ಔಟ್​ರೀಚ್​ ಸಂಸ್ಥೆಯು ನಡೆಸುತ್ತಿರುವ ಅಭಿಯಾನಕ್ಕೆ ನನ್ನ ಅಳಿಲು ಸೇವೆ ಎಂದು ಸದ್ಗುರು ಜಗ್ಗಿ ವಾಸುದೇವ್​ ಹಂಚಿಕೊಂಡಿದ್ದಾರೆ. ಕೊರೊನಾದಿಂದ ಕಂಗಾಲಾಗಿರುವ ಸಾವಿರಾರು ಜನರ ಹಸಿವು ನೀಗಿಸಲು ಇದರ ಸದ್ಬಳಕೆಯಾಗಿರೋದಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

Published On - 5:39 pm, Mon, 6 July 20

ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್