AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದ್ಗುರು ‘ಭೈರವ’ ಕಲೆಯಿಂದ ಕೊವಿಡ್​ ಪರಿಹಾರಕ್ಕೆ ಸಿಕ್ತು 9 ಕೋಟಿ ರೂ!

ದೇಶದಲ್ಲೆಡೆ ಹಬ್ಬಿರುವ ಕೊರೊನಾದಿಂದ ತತ್ತರಿಸಿ ಹೋಗಿರುವ ರಾಜ್ಯಗಳಲ್ಲಿ ತಮಿಳುನಾಡು ಸಹ ಒಂದು. ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ಈ ರಾಜ್ಯವು ಸಾಕಷ್ಟು ಸಾವು ನೋವು ಅನುಭವಿಸಿದೆ. ಈ ಮಧ್ಯೆ ವಿಶ್ವವಿಖ್ಯಾತ ಇಶಾ ಪ್ರತಿಷ್ಠಾನವು ಕೊವಿಡ್​ ವಿರುದ್ಧದ ಹೋರಾಟಕ್ಕೆ ಸಹಾಯ ಹಸ್ತವನ್ನ ಚಾಚಿದೆ. ಸದ್ಗುರು ಜಗ್ಗಿ ವಾಸುದೇವ್​ ತಮ್ಮ ಕೈಯಾರೇ ಬಿಡಿಸಿರುವ ಎರಡು ಅದ್ಭುತವಾದ ಚಿತ್ರಕಲೆಗಳ ಮಾರಾಟದಿಂದ ಬರೋಬ್ಬರಿ 9 ಕೋಟಿ ರೂಪಾಯಿ ಸಂಗ್ರಹವಾಗಿದೆ. ಅದನ್ನು ಸದ್ಗುರು ಇಶಾ ಔಟ್​ರೀಚ್​ ಸಂಸ್ಥೆಯು ಕೊವಿಡ್​ನಿಂದ ಸಂಕಷ್ಟ ಎದುರಿಸುತ್ತಿರೋರ ನೆರವಿಗೆ ಬಳಸಿಕೊಳ್ಳಲು ಮುಂದಾಗಿದೆ. […]

ಸದ್ಗುರು ‘ಭೈರವ’ ಕಲೆಯಿಂದ ಕೊವಿಡ್​ ಪರಿಹಾರಕ್ಕೆ ಸಿಕ್ತು 9 ಕೋಟಿ ರೂ!
KUSHAL V
| Edited By: |

Updated on:Jul 06, 2020 | 5:49 PM

Share

ದೇಶದಲ್ಲೆಡೆ ಹಬ್ಬಿರುವ ಕೊರೊನಾದಿಂದ ತತ್ತರಿಸಿ ಹೋಗಿರುವ ರಾಜ್ಯಗಳಲ್ಲಿ ತಮಿಳುನಾಡು ಸಹ ಒಂದು. ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ಈ ರಾಜ್ಯವು ಸಾಕಷ್ಟು ಸಾವು ನೋವು ಅನುಭವಿಸಿದೆ. ಈ ಮಧ್ಯೆ ವಿಶ್ವವಿಖ್ಯಾತ ಇಶಾ ಪ್ರತಿಷ್ಠಾನವು ಕೊವಿಡ್​ ವಿರುದ್ಧದ ಹೋರಾಟಕ್ಕೆ ಸಹಾಯ ಹಸ್ತವನ್ನ ಚಾಚಿದೆ.

ಸದ್ಗುರು ಜಗ್ಗಿ ವಾಸುದೇವ್​ ತಮ್ಮ ಕೈಯಾರೇ ಬಿಡಿಸಿರುವ ಎರಡು ಅದ್ಭುತವಾದ ಚಿತ್ರಕಲೆಗಳ ಮಾರಾಟದಿಂದ ಬರೋಬ್ಬರಿ 9 ಕೋಟಿ ರೂಪಾಯಿ ಸಂಗ್ರಹವಾಗಿದೆ. ಅದನ್ನು ಸದ್ಗುರು ಇಶಾ ಔಟ್​ರೀಚ್​ ಸಂಸ್ಥೆಯು ಕೊವಿಡ್​ನಿಂದ ಸಂಕಷ್ಟ ಎದುರಿಸುತ್ತಿರೋರ ನೆರವಿಗೆ ಬಳಸಿಕೊಳ್ಳಲು ಮುಂದಾಗಿದೆ.

ಇದನ್ನು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಲಾಕ್​ಡೌನ್​ನಿಂದ ಸಂಕಷ್ಟ ಎದುರಿಸುತ್ತಿರೋರಿಗೆ ಆಹಾರ ಪೂರೈಸಲು ಬಳಸಲಾಗುತ್ತಿದೆ. ಜೊತೆಗೆ, ವೈದ್ಯಕೀಯ ಸಿಬ್ಬಂದಿಗೆ PPE ಕಿಟ್​ ಹಾಗೂ ಕೊವಿಡ್​ ಆಸ್ಪತ್ರೆಗಳಿಗೆ ಇತರೆ ಸುರಕ್ಷತಾ ಪರಿಕರಗಳನ್ನು ನೀಡಲು ಸಹ ಬಳಸಲಾಗುತ್ತಿದೆ.

ಪರಿಪೂರ್ಣವಾಗಿ ಬಾಳೋಣ (To Live totally) ಎಂಬ ಶೀರ್ಷಿಕೆಯಡಿ ರಚಿಸಲಾಗಿದ್ದ ಆಯಿಲ್​ ಪೇಂಟಿಂಗ್ ಸರಿಸುಮಾರು 4.1 ಕೋಟಿ ರೂಪಾಯಿ ಗಳಿಸಿದ್ದರೆ, ಇತ್ತೀಚೆಗೆ ಏಪ್ರಿಲ್​ನಲ್ಲಿ ಅಗಲಿದೆ ನೆಚ್ಚಿನ ಹೋರಿ ಭೈರವನ ನೆನಪಿನಲ್ಲಿ ಗೋಮಯ, ಸುಣ್ಣ, ಅರಿಶಿನ ಮತ್ತು ಕಲ್ಲಿದ್ದಲನ್ನು ಬಳಸಿ ಸದ್ಗುರು ಬಿಡಿಸಿರುವ ಅಮೋಘವಾದ ‘ಭೈರವ’ ಚಿತ್ರಕಲೆ ಬರೋಬ್ಬರಿ 5.1 ಕೋಟಿ ಗಳಿಸಿದೆ.

#BeatTheVirus ಎಂಬ ಹೆಸರಿನಲ್ಲಿ ಇಶಾ ಔಟ್​ರೀಚ್​ ಸಂಸ್ಥೆಯು ನಡೆಸುತ್ತಿರುವ ಅಭಿಯಾನಕ್ಕೆ ನನ್ನ ಅಳಿಲು ಸೇವೆ ಎಂದು ಸದ್ಗುರು ಜಗ್ಗಿ ವಾಸುದೇವ್​ ಹಂಚಿಕೊಂಡಿದ್ದಾರೆ. ಕೊರೊನಾದಿಂದ ಕಂಗಾಲಾಗಿರುವ ಸಾವಿರಾರು ಜನರ ಹಸಿವು ನೀಗಿಸಲು ಇದರ ಸದ್ಬಳಕೆಯಾಗಿರೋದಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

Published On - 5:39 pm, Mon, 6 July 20

Follow Us
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ
ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ