AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದ್ಗುರು ‘ಭೈರವ’ ಕಲೆಯಿಂದ ಕೊವಿಡ್​ ಪರಿಹಾರಕ್ಕೆ ಸಿಕ್ತು 9 ಕೋಟಿ ರೂ!

ದೇಶದಲ್ಲೆಡೆ ಹಬ್ಬಿರುವ ಕೊರೊನಾದಿಂದ ತತ್ತರಿಸಿ ಹೋಗಿರುವ ರಾಜ್ಯಗಳಲ್ಲಿ ತಮಿಳುನಾಡು ಸಹ ಒಂದು. ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ಈ ರಾಜ್ಯವು ಸಾಕಷ್ಟು ಸಾವು ನೋವು ಅನುಭವಿಸಿದೆ. ಈ ಮಧ್ಯೆ ವಿಶ್ವವಿಖ್ಯಾತ ಇಶಾ ಪ್ರತಿಷ್ಠಾನವು ಕೊವಿಡ್​ ವಿರುದ್ಧದ ಹೋರಾಟಕ್ಕೆ ಸಹಾಯ ಹಸ್ತವನ್ನ ಚಾಚಿದೆ. ಸದ್ಗುರು ಜಗ್ಗಿ ವಾಸುದೇವ್​ ತಮ್ಮ ಕೈಯಾರೇ ಬಿಡಿಸಿರುವ ಎರಡು ಅದ್ಭುತವಾದ ಚಿತ್ರಕಲೆಗಳ ಮಾರಾಟದಿಂದ ಬರೋಬ್ಬರಿ 9 ಕೋಟಿ ರೂಪಾಯಿ ಸಂಗ್ರಹವಾಗಿದೆ. ಅದನ್ನು ಸದ್ಗುರು ಇಶಾ ಔಟ್​ರೀಚ್​ ಸಂಸ್ಥೆಯು ಕೊವಿಡ್​ನಿಂದ ಸಂಕಷ್ಟ ಎದುರಿಸುತ್ತಿರೋರ ನೆರವಿಗೆ ಬಳಸಿಕೊಳ್ಳಲು ಮುಂದಾಗಿದೆ. […]

ಸದ್ಗುರು ‘ಭೈರವ’ ಕಲೆಯಿಂದ ಕೊವಿಡ್​ ಪರಿಹಾರಕ್ಕೆ ಸಿಕ್ತು 9 ಕೋಟಿ ರೂ!
KUSHAL V
| Edited By: |

Updated on:Jul 06, 2020 | 5:49 PM

Share

ದೇಶದಲ್ಲೆಡೆ ಹಬ್ಬಿರುವ ಕೊರೊನಾದಿಂದ ತತ್ತರಿಸಿ ಹೋಗಿರುವ ರಾಜ್ಯಗಳಲ್ಲಿ ತಮಿಳುನಾಡು ಸಹ ಒಂದು. ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ಈ ರಾಜ್ಯವು ಸಾಕಷ್ಟು ಸಾವು ನೋವು ಅನುಭವಿಸಿದೆ. ಈ ಮಧ್ಯೆ ವಿಶ್ವವಿಖ್ಯಾತ ಇಶಾ ಪ್ರತಿಷ್ಠಾನವು ಕೊವಿಡ್​ ವಿರುದ್ಧದ ಹೋರಾಟಕ್ಕೆ ಸಹಾಯ ಹಸ್ತವನ್ನ ಚಾಚಿದೆ.

ಸದ್ಗುರು ಜಗ್ಗಿ ವಾಸುದೇವ್​ ತಮ್ಮ ಕೈಯಾರೇ ಬಿಡಿಸಿರುವ ಎರಡು ಅದ್ಭುತವಾದ ಚಿತ್ರಕಲೆಗಳ ಮಾರಾಟದಿಂದ ಬರೋಬ್ಬರಿ 9 ಕೋಟಿ ರೂಪಾಯಿ ಸಂಗ್ರಹವಾಗಿದೆ. ಅದನ್ನು ಸದ್ಗುರು ಇಶಾ ಔಟ್​ರೀಚ್​ ಸಂಸ್ಥೆಯು ಕೊವಿಡ್​ನಿಂದ ಸಂಕಷ್ಟ ಎದುರಿಸುತ್ತಿರೋರ ನೆರವಿಗೆ ಬಳಸಿಕೊಳ್ಳಲು ಮುಂದಾಗಿದೆ.

ಇದನ್ನು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಲಾಕ್​ಡೌನ್​ನಿಂದ ಸಂಕಷ್ಟ ಎದುರಿಸುತ್ತಿರೋರಿಗೆ ಆಹಾರ ಪೂರೈಸಲು ಬಳಸಲಾಗುತ್ತಿದೆ. ಜೊತೆಗೆ, ವೈದ್ಯಕೀಯ ಸಿಬ್ಬಂದಿಗೆ PPE ಕಿಟ್​ ಹಾಗೂ ಕೊವಿಡ್​ ಆಸ್ಪತ್ರೆಗಳಿಗೆ ಇತರೆ ಸುರಕ್ಷತಾ ಪರಿಕರಗಳನ್ನು ನೀಡಲು ಸಹ ಬಳಸಲಾಗುತ್ತಿದೆ.

ಪರಿಪೂರ್ಣವಾಗಿ ಬಾಳೋಣ (To Live totally) ಎಂಬ ಶೀರ್ಷಿಕೆಯಡಿ ರಚಿಸಲಾಗಿದ್ದ ಆಯಿಲ್​ ಪೇಂಟಿಂಗ್ ಸರಿಸುಮಾರು 4.1 ಕೋಟಿ ರೂಪಾಯಿ ಗಳಿಸಿದ್ದರೆ, ಇತ್ತೀಚೆಗೆ ಏಪ್ರಿಲ್​ನಲ್ಲಿ ಅಗಲಿದೆ ನೆಚ್ಚಿನ ಹೋರಿ ಭೈರವನ ನೆನಪಿನಲ್ಲಿ ಗೋಮಯ, ಸುಣ್ಣ, ಅರಿಶಿನ ಮತ್ತು ಕಲ್ಲಿದ್ದಲನ್ನು ಬಳಸಿ ಸದ್ಗುರು ಬಿಡಿಸಿರುವ ಅಮೋಘವಾದ ‘ಭೈರವ’ ಚಿತ್ರಕಲೆ ಬರೋಬ್ಬರಿ 5.1 ಕೋಟಿ ಗಳಿಸಿದೆ.

#BeatTheVirus ಎಂಬ ಹೆಸರಿನಲ್ಲಿ ಇಶಾ ಔಟ್​ರೀಚ್​ ಸಂಸ್ಥೆಯು ನಡೆಸುತ್ತಿರುವ ಅಭಿಯಾನಕ್ಕೆ ನನ್ನ ಅಳಿಲು ಸೇವೆ ಎಂದು ಸದ್ಗುರು ಜಗ್ಗಿ ವಾಸುದೇವ್​ ಹಂಚಿಕೊಂಡಿದ್ದಾರೆ. ಕೊರೊನಾದಿಂದ ಕಂಗಾಲಾಗಿರುವ ಸಾವಿರಾರು ಜನರ ಹಸಿವು ನೀಗಿಸಲು ಇದರ ಸದ್ಬಳಕೆಯಾಗಿರೋದಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

Published On - 5:39 pm, Mon, 6 July 20

Follow Us
KUSHAL V
KUSHAL V
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ