AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಣಕ್ಯ ನೀತಿ : ಅಪ್ಪಿತಪ್ಪಿಯೂ ಈ 5 ಕಡೆ ಮನೆ ಕಟ್ಟಬೇಡಿ, ಮಹತ್ವದ ವಿವರಗಳು ಇಲ್ಲಿವೆ

ದಯಾಮಯಿ ಮತ್ತು ದಾನಶೀಲರು ವಾಸಿಸುವ ಪ್ರದೇಶದಲ್ಲಿ ಮನೆ ನಿರ್ಮಿಸಬೇಕು. ಅಂತಹ ಸ್ಥಳದಲ್ಲಿ ವಾಸಿಸುವುದು ನಿಮ್ಮಲ್ಲೂ ಅದೇ ಭಾವ ಮೂಡುತ್ತದೆ.

ಚಾಣಕ್ಯ ನೀತಿ : ಅಪ್ಪಿತಪ್ಪಿಯೂ ಈ 5 ಕಡೆ ಮನೆ ಕಟ್ಟಬೇಡಿ, ಮಹತ್ವದ ವಿವರಗಳು ಇಲ್ಲಿವೆ
Chanakya Niti ಚಾಣಕ್ಯ ನೀತಿ
ಸಾಧು ಶ್ರೀನಾಥ್​
|

Updated on: Jun 21, 2023 | 10:55 AM

Share

Chanakya Niti: ಆಚಾರ್ಯ ಚಾಣಕ್ಯ ತಮ್ಮ ನೀತಿಶಾಸ್ತ್ರದಲ್ಲಿ ವ್ಯಕ್ತಿಯ ಜೀವನದಲ್ಲಿ ಅನುಸರಿಸಬೇಕಾದ ನೀತಿಗಳು, ಜೀವನ ಪಾಠಗಳು ಮತ್ತು ಇನ್ನೂ ನಾನಾ ಕ್ಷೇತ್ರಗಳ ಬಗ್ಗೆ ವಿವರಿಸಿದ್ದಾರೆ. ಜೀವನದಲ್ಲಿ ನಮ್ಮ ಪ್ರಗತಿಗೆ ಚಾಣಕ್ಯನ ಈ ವಿಧಾನಗಳು ತುಂಬಾ ಸಹಾಯಕವಾಗಿವೆ. ಒಬ್ಬ ವ್ಯಕ್ತಿ ಮನೆ ಕಟ್ಟಬೇಕೆಂದಿದ್ದರೆ ಈ 5 ಕಡೆ ಅಪ್ಪಿತಪ್ಪಿಯೂ ಕಟ್ಟಬಾರದು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಜೀವನೋಪಾಯದ ವಿಧಾನಗಳು: ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಜೀವನೋಪಾಯ ಪ್ರಾಪ್ತಿಯಿರುವ ಪ್ರದೇಶದಲ್ಲಿ ಮಾತ್ರವೇ ಮನೆ ನಿರ್ಮಿಸಬೇಕೆಂದು ಉಲ್ಲೇಖಿಸುತ್ತಾನೆ. ಉದ್ಯೋಗ ಇಲ್ಲದ ಕಡೆ ಮನೆ ಕಟ್ಟಿದರೆ ಜೀವನ ಪೂರ್ತಿ ಕೆಲಸ ಹುಡುಕಬೇಕಾಗುತ್ತದೆ.

ಮೌಲ್ಯ ಇಲ್ಲದ ಕಡೆ ಬೇಡ: ಸರಕಾರ, ಕಾನೂನು, ಸಮಾಜಕ್ಕೆ ಬೆಲೆ ಇಲ್ಲದ ಕಡೆ ಮನೆ ಕಟ್ಟಬಾರದು. ಅಂತಹ ಸ್ಥಳಗಳಲ್ಲಿ ಮನೆ ನಿರ್ಮಿಸುವುದು ಕಷ್ಟಗಳಿಗೆ ಕಾರಣವಾಗುತ್ತದೆ. ಅಲ್ಲಿನ ಜನರು ನಿರಂಕುಶ ಮತ್ತು ಅರಾಜಕತೆ ಹೊಂದಿರುತ್ತಾರೆ. ಅದಕ್ಕೇ.. ಭಯ, ಮೌಲ್ಯಗಳು ಇಲ್ಲದ ಮನೆ ಕಟ್ಟಬೇಡಿ.

ಸಹಾನುಭೂತಿ ಮತ್ತು ದಾನ: ದಾನ ಧರ್ಮ ಮತ್ತು ದಯಾ ಗುಣ ಹೊಂದಿರುವ ಜನರಿಂದ ಸುತ್ತುವರೆದಿರುವ ಪ್ರದೇಶದಲ್ಲಿ ಮನೆಯನ್ನು ನಿರ್ಮಿಸಬಹುದು. ಸನಾತನ ಧರ್ಮದಲ್ಲಿ ದಾನ ಧರ್ಮಗಳು ಬಹಳ ಮುಖ್ಯವಾಗಿವೆ. ದಾನ ಮಾಡುವುದರಿಂದ ಪಾಪಗಳು ನಾಶವಾಗುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ಅಂಥವರು ಇರುವ ಜಾಗದಲ್ಲಿ ಮನೆ ಕಟ್ಟಬೇಕು.

ತ್ಯಾಗ: ದಯಾಮಯಿ ಮತ್ತು ದಾನಶೀಲರು ವಾಸಿಸುವ ಪ್ರದೇಶದಲ್ಲಿ ಮನೆ ನಿರ್ಮಿಸಬೇಕು. ಅಂತಹ ಸ್ಥಳದಲ್ಲಿ ವಾಸಿಸುವುದು ನಿಮ್ಮಲ್ಲೂ ಅದೇ ಭಾವ ಮೂಡುತ್ತದೆ.

ಗೌರವ ಇರುವ ಜಾಗ: ಎಲ್ಲಿ ಗೌರವವಿದೆಯೋ, ಎಲ್ಲಿ ಅವಮಾನದ ಭಯವಿಲ್ಲವೋ ಅಲ್ಲಿ ಮನೆ ಕಟ್ಟಿಕೊಳ್ಳಿ ಎಂದು ಆಚಾರ್ಯ ಚಾಣಕ್ಯ ಸಲಹೆ ನೀಡಿದರು. ಅವಮಾನವಾಗುವ ಕಡೆಗಳಲ್ಲಿ ಮನೆ ಕಟ್ಟಬಾರದು. ಇಂತಹ ಸ್ಥಳಗಳಲ್ಲಿ ಮನೆ ಕಟ್ಟಿದರೆ ನೆಮ್ಮದಿಯಿಂದ, ನಿರ್ಭಯವಾಗಿ ಬದುಕಲು ಸಾಧ್ಯವಾಗುವುದಿಲ್ಲ.

ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​