TV9 Kannada Spiritual according to garuda purana if you do this work daily happiness and prosperity will remain in your family and life
Garuda Purana: ಪ್ರತಿನಿತ್ಯ ಹೀಗೆ ಮಾಡಿ, ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಅದೃಷ್ಟ ಹರಿದುಬರುತ್ತದೆ!
ದಿನವನ್ನು ಹೇಗೆ ಪ್ರಾರಂಭಿಸುವುದು ತಿಳಿಸುತ್ತಾ ಹಾಗೆ ಮಾಡದಿದ್ದರೆ ದಿನವನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ ಎನ್ನಲಾಗಿದೆ. ಇಂತಹ ಕೆಲಸಗಳನ್ನು ನಿಯಮಿತವಾಗಿ ಮಾಡುವುದರಿಂದ ವ್ಯಕ್ತಿಯು ದಿನವಿಡೀ ಕ್ಷೆಮದಿಂದ ಶುಭಪ್ರದವಾಗಿರುತ್ತಾನೆ
ಪ್ರತಿನಿತ್ಯ ಹೀಗೆ ಮಾಡಿ, ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಅದೃಷ್ಟ ಸುರಿದುಬರುತ್ತದೆ!
ಒಟ್ಟು 4 ವೇದಗಳು ಮತ್ತು 18 ಮಹಾಪುರಾಣಗಳನ್ನು ನಮಗೆ ವಿವರಿಸಿ ಹೇಳಲಾಗಿದೆ. ಈ ವೇದಗಳು ಮತ್ತು ಪುರಾಣಗಳಲ್ಲಿ ಜ್ಞಾನ ಮತ್ತು ಜೀವನದ ಸಾರ ಅಡಗಿದೆ ಎಂದು ಹೇಳಲಾಗುತ್ತದೆ. 18 ಮಹಾಪುರಾಣಗಳಲ್ಲಿ ಗರುಡ ಪುರಾಣವೂ (Garuda Purana) ಒಂದು. ಇದು ವಿಷ್ಣು ಮತ್ತು ಅವನ ವಾಹನ ಗರುಡ (ಪಕ್ಷಿ) ನಡುವಿನ ಸಂಭಾಷಣೆಯನ್ನು ವಿವರಿಸುತ್ತದೆ. ಉತ್ತಮ ಜೀವನ, ಸಾವು ಮತ್ತು ಮರಣಾನಂತರದ ಘಟನೆಗಳನ್ನು ವಿವರಿಸುತ್ತದೆ. ಇದಲ್ಲದೇ ದಿನನಿತ್ಯದ ಜೀವನದ ವಿಶೇಷ ವಿಷಯಗಳನ್ನೂ ಗರುಡಪುರಾಣದಲ್ಲಿ (spiritual) ಉಲ್ಲೇಖಿಸಲಾಗಿದೆ.
ದಿನವನ್ನು ಹೇಗೆ ಪ್ರಾರಂಭಿಸುವುದು ತಿಳಿಸುತ್ತಾ ಹಾಗೆ ಮಾಡದಿದ್ದರೆ ದಿನವನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ ಎನ್ನಲಾಗಿದೆ. ಇಂತಹ ಕೆಲಸಗಳನ್ನು ನಿಯಮಿತವಾಗಿ ಮಾಡುವುದರಿಂದ ವ್ಯಕ್ತಿಯು ದಿನವಿಡೀ ಕ್ಷೆಮದಿಂದ ಶುಭಪ್ರದವಾಗಿರುತ್ತಾನೆ (prosperity). ಹಾಗೆ ಮಾಡಿದರೆ ಜೀವನದಲ್ಲಿ ಎದುರಾದ ಅನೇಕ ಸಮಸ್ಯೆಗಳನ್ನು ನೀವು ಸರಳವಾಗಿ ತೊಡೆದುಹಾಕುತ್ತೀರಿ. ಸಂತೋಷದ ಜೀವನವನ್ನು ನಡೆಸುತ್ತೀರಿ ಎಂದು ಪುರಾಣಗಳು ಹೇಳುತ್ತವೆ. ಇವುಗಳನ್ನು ಅನುಸರಿಸುವುದರಿಂದ ಜೀವನದಲ್ಲಿ (family) ಸಂತೋಷವು ನಿಮ್ಮನ್ನು ಹಿಂಬಾಲಿಸುತ್ತದೆ. ಸಂತೋಷದಿಂದ ಅದೃಷ್ಟ ಹೆಚ್ಚಾಗುತ್ತದೆ. ಈ ಕೆಲಸಗಳನ್ನು ಮಾಡುವುದರಿಂದ ಮಾತ್ರ ಮನುಷ್ಯ ಜನುಮ ಮರಣಾನಂತರ ಮೋಕ್ಷವನ್ನು ಪಡೆಯಬಹುದು.
ಅನ್ನದಾನ.. ಅನ್ನದಾನ ಮಾಡುವುದು ಮಾನವನ ಜೀವನದಲ್ಲಿ ಅತ್ಯಂತ ದೊಡ್ಡ ಪುಣ್ಯ ಎಂದು ಹೇಳಲಾಗುತ್ತದೆ. ಗರುಡ ಪುರಾಣದ ಪ್ರಕಾರ ಪ್ರತಿದಿನ ಹಸಿದವರಿಗೆ ಮತ್ತು ಬಡವರಿಗೆ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅನ್ನದಾನ ಮಾಡಿದರೆ ನಿಮ್ಮ ಪುಣ್ಯವು ಹೆಚ್ಚಾಗುತ್ತದೆ. ದಾನವು ಕುಟುಂಬದಲ್ಲಿ ಆಶೀರ್ವಾದವನ್ನು ತರುತ್ತದೆ.
ಧ್ಯಾನ.. ಒಬ್ಬ ವ್ಯಕ್ತಿಯು ಚಿಂತೆಯಿಂದ ಮುಕ್ತವಾಗಿರಬೇಕು ಎಂದು ಹೇಳಲಾಗುತ್ತದೆ. ಏಕೆಂದರೆ ಧ್ಯಾನವು ನಿಮ್ಮ ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆದರೆ ಗರುಡ ಪುರಾಣದ ಪ್ರಕಾರ ಧ್ಯಾನ ಎಂದರೆ ಪಠಣ. ಶಾಂತ ಮನಸ್ಸಿನಿಂದ ಪ್ರತಿದಿನ ಸ್ವಲ್ಪ ಸಮಯ ಧ್ಯಾನ ಮಾಡಬೇಕು. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ದೇವರಿಗೆ ನೈವೇದ್ಯ.. ಅಡುಗೆ ಮಾಡಿದ ನಂತರ ಕೆಲವರು ಸ್ವತಃ ಊಟ ಬಡಿಸಿ ತಿನ್ನಲು ಪ್ರಾರಂಭಿಸುತ್ತಾರೆ. ಆದರೆ ಗರುಡ ಪುರಾಣದಲ್ಲಿ ಏನು ಹೇಳಲಾಗಿದೆ ಅಂದರೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ಮೊದಲು ದೇವರಿಗೆ ಅರ್ಪಿಸಬೇಕು. ಇದರಿಂದ ಲಕ್ಷ್ಮಿ ದೇವಿಯ ಕೃಪೆಯು ಮನೆಯಲ್ಲಿ ನೆಲೆಸುತ್ತದೆ ಮತ್ತು ಅನ್ನಪೂರ್ಣೆ ನೆಲೆಸುತ್ತಾಳೆ. ಆದರೆ, ಯಾವಾಗಲೂ ದೇವರಿಗೆ ಶುದ್ಧವಾದ ಆಹಾರವನ್ನು ಅರ್ಪಿಸಲು ಮರೆಯದಿರಿ.