AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology: ಸಂಖ್ಯಾಶಾಸ್ತ್ರದ ಪ್ರಕಾರ, ಈ 4 ತಾರೀಖುಗಳಲ್ಲಿ ಹುಟ್ಟಿದವರು ಸಾಕ್ಷಾತ್ ‘ಕುಬೇರನ ಸ್ವರೂಪ’!

ಸಂಖ್ಯಾಶಾಸ್ತ್ರದ ಪ್ರಕಾರ, 3, 12, 21, 30 ರಂದು ಜನಿಸಿದವರ ಮೂಲ ಸಂಖ್ಯೆ 3 ಆಗಿರುತ್ತದೆ. ದೇವಗುರು ಬೃಹಸ್ಪತಿಯ ಪ್ರಭಾವಕ್ಕೊಳಗಾದ ಇವರು ಕುಬೇರನ ಸ್ವರೂಪವೆಂದು ಪರಿಗಣಿಸಲ್ಪಟ್ಟಿದ್ದಾರೆ. ಈ ಅದೃಷ್ಟವಂತರು ತೀಕ್ಷ್ಣ ಬುದ್ಧಿ, ಆರ್ಥಿಕ ಪ್ರಗತಿ, ಉತ್ತಮ ಸಂಸ್ಕಾರ ಹಾಗೂ ಸದಾ ಹಸನ್ಮುಖಿ ಸ್ವಭಾವ ಹೊಂದಿರುತ್ತಾರೆ. ಇವರ ಜೀವನದಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ, ಮತ್ತು ಇವರು ಮಹತ್ವಾಕಾಂಕ್ಷೆಗಳೊಂದಿಗೆ ಸಾಧನೆ ಮಾಡುತ್ತಾರೆ.

Numerology: ಸಂಖ್ಯಾಶಾಸ್ತ್ರದ ಪ್ರಕಾರ, ಈ 4 ತಾರೀಖುಗಳಲ್ಲಿ ಹುಟ್ಟಿದವರು ಸಾಕ್ಷಾತ್ 'ಕುಬೇರನ ಸ್ವರೂಪ'!
ಸಾಕ್ಷಾತ್ 'ಕುಬೇರನ ಸ್ವರೂಪ'Image Credit source: Pinterest
ಅಕ್ಷತಾ ವರ್ಕಾಡಿ
|

Updated on: Jun 03, 2026 | 10:20 AM

Share

ಸಂಖ್ಯಾಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿ ಜನಿಸಿದ ದಿನಾಂಕವು ಆತನ ಸ್ವಭಾವ, ಭವಿಷ್ಯ ಮತ್ತು ಆತನ ಅದೃಷ್ಟದ ಮೇಲೆ ಅಪಾರ ಪ್ರಭಾವ ಬೀರುತ್ತದೆ. ಕೆಲವು ದಿನಾಂಕಗಳಲ್ಲಿ ಜನಿಸಿದವರು ಹುಟ್ಟುತ್ತಲೇ ತಮ್ಮೊಂದಿಗೆ ಅಪಾರ ಅದೃಷ್ಟವನ್ನು ಹೊತ್ತು ತರುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳಿನ 3, 12, 21 ಅಥವಾ 30 ನೇ ತಾರೀಖಿನಂದು ಜನಿಸಿದ ಮಕ್ಕಳನ್ನು ಸಾಕ್ಷಾತ್ ‘ಕುಬೇರನ ಸ್ವರೂಪ’ ಅಥವಾ ಕುಬೇರನ ಅವತಾರ ಎಂದು ಪರಿಗಣಿಸಲಾಗುತ್ತದೆ.

ಈ ದಿನಾಂಕಗಳ ಮೊತ್ತವನ್ನು ಕೂಡಿಸಿದಾಗ (ಉದಾಹರಣೆಗೆ: 1+2=3, 2+1=3, 3+0=3) ಕೊನೆಗೆ ಬರುವ ಸಂಖ್ಯೆ 3. ಆದ್ದರಿಂದ ಇವರ ಮೂಲ ಸಂಖ್ಯೆ (Radix/Mulank) ‘3’ ಆಗಿರುತ್ತದೆ. ಈ ಸಂಖ್ಯೆಯ ಅಧಿಪತಿ ದೇವಗುರು ಬೃಹಸ್ಪತಿ (ಗುರು ಗ್ರಹ). ಇಂತಹ ಮಕ್ಕಳಲ್ಲಿ ಕಂಡುಬರುವ ವಿಶೇಷ ಗುಣಗಳು ಮತ್ತು ಅವರ ಅದೃಷ್ಟದ ರಹಸ್ಯ ಇಲ್ಲಿದೆ ನೋಡಿ:

ಮನೆಯಲ್ಲಿ ಲಕ್ಷ್ಮಿ-ಕುಬೇರರ ತಾಂಡವ (ಆರ್ಥಿಕ ಪ್ರಗತಿ):

ಮೂಲ ಸಂಖ್ಯೆ 3 ರ ಅಡಿಯಲ್ಲಿ ಜನಿಸಿದ ಮಕ್ಕಳನ್ನು ಕುಬೇರನ ಸ್ವರೂಪ ಎನ್ನಲು ಪ್ರಮುಖ ಕಾರಣವಿದೆ. ಈ ಮಕ್ಕಳು ಹುಟ್ಟಿದ ತಕ್ಷಣವೇ ಇವರ ಇಡೀ ಕುಟುಂಬದ ಆರ್ಥಿಕ ಸ್ಥಿತಿ ಬದಲಾಗತೊಡಗುತ್ತದೆ. ತಂದೆ-ತಾಯಿಯ ಆದಾಯ ಹೆಚ್ಚಾಗುತ್ತದೆ, ಮನೆಯಲ್ಲಿದ್ದ ಸಾಲದ ಬಾಧೆಗಳು ದೂರವಾಗಿ ನೆಮ್ಮದಿ ನೆಲೆಸುತ್ತದೆ. ಇವರು ಹೆಜ್ಜೆ ಇಟ್ಟ ಕಡೆ ಧನ-ಧಾನ್ಯದ ಮಳೆ ಸುರಿಯುತ್ತದೆ ಎಂಬ ನಂಬಿಕೆಯಿದೆ. ಇವರು ಬೆಳೆದು ದೊಡ್ಡವರಾದ ಮೇಲೂ ಜೀವನದಲ್ಲಿ ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ.

ತೀಕ್ಷ್ಣ ಬುದ್ಧಿಶಕ್ತಿ ಹಾಗೂ ಅದ್ಭುತ ಜ್ಞಾಪಕಶಕ್ತಿ:

ಗುರು ಗ್ರಹದ ಪ್ರಭಾವದಿಂದಾಗಿ ಈ ಮಕ್ಕಳು ಹುಟ್ಟುತ್ತಲೇ ಅಪ್ರತಿಮ ಬುದ್ಧಿವಂತರಾಗಿರುತ್ತಾರೆ. ಇವರ ಗ್ರಹಣ ಶಕ್ತಿ ಎಷ್ಟು ತೀಕ್ಷ್ಣವಾಗಿರುತ್ತದೆ ಎಂದರೆ, ಯಾವುದೇ ವಿಷಯವನ್ನು ಒಮ್ಮೆ ನೋಡಿದರೆ ಅಥವಾ ಕೇಳಿದರೆ ತಕ್ಷಣವೇ ಗ್ರಹಿಸಿ ಕಲಿಯುತ್ತಾರೆ. ಸಾಮಾನ್ಯವಾಗಿ ಇವರು ಓದು-ಬರಹದಲ್ಲಿ ತುಂಬಾ ಆಸಕ್ತಿ ಹೊಂದಿರುತ್ತಾರೆ ಮತ್ತು ಶಾಲಾ-ಕಾಲೇಜುಗಳಲ್ಲಿ ಯಾವಾಗಲೂ ತರಗತಿಗೆ ತಾವೇ ಮುಂಚೂಣಿಯಲ್ಲಿರುತ್ತಾರೆ (ಟಾಪರ್ಸ್). ಅತಿ ಸಣ್ಣ ವಯಸ್ಸಿನಲ್ಲೇ ತಮ್ಮದೇ ಆದ ಒಂದು ವಿಶಿಷ್ಟ ಗುರುತನ್ನು ಸಮಾಜದಲ್ಲಿ ಸೃಷ್ಟಿಸಿಕೊಳ್ಳುತ್ತಾರೆ.

ಸಂಸ್ಕಾರ ಮತ್ತು ಶಿಸ್ತಿನ ಸಿಪಾಯಿಗಳು:

ದೇವಗುರು ಬೃಹಸ್ಪತಿಯ ಆಶೀರ್ವಾದ ಇವರ ಮೇಲಿರುವುದರಿಂದ, ಇವರಲ್ಲಿ ಬಾಲ್ಯದಿಂದಲೇ ಉತ್ತಮ ಸಂಸ್ಕಾರಗಳು ರಕ್ತಗತವಾಗಿ ಬಂದಿರುತ್ತವೆ. ವಯಸ್ಸಿನಲ್ಲಿ ಹಿರಿಯರಾದವರನ್ನು ಗೌರವಿಸುವುದು, ತಂದೆ-ತಾಯಿಯ ಮಾತನ್ನು ಪಾಲಿಸುವುದು ಇವರ ರಕ್ತದಲ್ಲೇ ಇರುತ್ತದೆ. ಶಿಸ್ತುಬದ್ಧ ಜೀವನ ಇವರಿಗೆ ಇಷ್ಟ. ಕೇವಲ ಓದು ಅಷ್ಟೇ ಅಲ್ಲದೆ, ಚಿತ್ರಕಲೆ (Drawing), ಬರವಣಿಗೆ (Writing) ಯಂತಹ ಸೃಜನಶೀಲ ಹವ್ಯಾಸಗಳಲ್ಲೂ ಇವರು ಅಪಾರ ಸಾಧನೆ ಮಾಡುತ್ತಾರೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಸದಾ ಹಸನ್ಮುಖಿ ಸ್ವಭಾವ:

ಮೂಲ ಸಂಖ್ಯೆ 3 ರ ಮಕ್ಕಳು ಯಾವಾಗಲೂ ಹಸನ್ಮುಖಿಯಾಗಿರುತ್ತಾರೆ. ಇವರ ಮುಖದಲ್ಲಿ ಒಂದು ರೀತಿಯ ದೈವಿಕ ಕಳೆ ಇರುತ್ತದೆ. ಇವರ ಸಕಾರಾತ್ಮಕ ಗುಣ ಮತ್ತು ಮಾತಿನ ಶೈಲಿಯಿಂದಾಗಿ ಸುತ್ತಮುತ್ತಲಿನ ಜನರನ್ನು ಇವರು ಸುಲಭವಾಗಿ ಆಕರ್ಷಿಸುತ್ತಾರೆ. ಇವರು ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಧೃತಿಗೆಡದೆ ನಗುನಗುತ್ತಾ ಎದುರಿಸುವ ಶಕ್ತಿಯನ್ನು ಹೊಂದಿರುತ್ತಾರೆ.

ದೊಡ್ಡ ಕನಸುಗಳು, ಕಠಿಣ ಪರಿಶ್ರಮ:

ಈ ತಾರೀಖುಗಳಲ್ಲಿ ಹುಟ್ಟಿದವರು ತುಂಬಾ ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಇವರು ಬಾಲ್ಯದಿಂದಲೇ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಾರೆ ಮತ್ತು ಕೇವಲ ಕನಸು ಕಾಣುವುದಷ್ಟೇ ಅಲ್ಲದೆ, ಅದನ್ನು ನನಸು ಮಾಡಲು ಕಠಿಣ ಪರಿಶ್ರಮ ಪಡುತ್ತಾರೆ. ಅಲ್ಲದೆ, ಇವರು ಧಾರ್ಮಿಕ ಪ್ರವೃತ್ತಿಯವರೂ ಆಗಿರುತ್ತಾರೆ. ತೀರ್ಥಯಾತ್ರೆಗಳನ್ನು ಮಾಡುವುದು ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದು ಇವರಿಗೆ ಅತೀವ ಆನಂದವನ್ನು ನೀಡುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More