Sign In

By signing in or creating an account, you agree with Associated Broadcasting Company's Terms & Conditions and Privacy Policy.

Garuda Purana 2023: ಗರುಡ ಪುರಾಣದ ಪ್ರಕಾರ, ಹೀಗೆಲ್ಲ ಮಾಡಿದರೆ ಮನೆಯಲ್ಲಿ ಬಹಳಷ್ಟು ಕಷ್ಟ-ದುಃಖಗಳು ಎದುರಾಗುತ್ತವೆ

ಗರುಡ ಪುರಾಣ: ಮನ- ಮನೆಯಲ್ಲಿ ನಮಗೆ ದುಃಖವನ್ನು ಉಂಟುಮಾಡುವ ಕೆಲವು ಕಾರ್ಯಗಳ ಬಗ್ಗೆ ಗರುಡ ಪುರಾಣದಲ್ಲಿ ಹೇಳಲಾಗಿದೆ. ಜೊತೆಗೆ ಈ ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿ ಬಡತನವು ನೆಲೆಸಲು ಪ್ರಾರಂಭಿಸುತ್ತದೆ ಎಂಬುದೂ ಗಮನಾರ್ಹ. ಆ ಕೆಲಸಗಳು ಯಾವುವು ಬನ್ನೀ ತಿಳಿಯೋಣ.

Garuda Purana 2023: ಗರುಡ ಪುರಾಣದ ಪ್ರಕಾರ, ಹೀಗೆಲ್ಲ ಮಾಡಿದರೆ ಮನೆಯಲ್ಲಿ ಬಹಳಷ್ಟು ಕಷ್ಟ-ದುಃಖಗಳು ಎದುರಾಗುತ್ತವೆ
ಗರುಡ ಪುರಾಣ 2023
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 14, 2023 | 3:22 PM

ಗರುಡ ಪುರಾಣ, ಭಗವಾನ್ ವಿಷ್ಣುವಿನ ನೀತಿಗಳು: ಗರುಡ ಪುರಾಣವು (Garuda Purana) 18 ಮಹಾಪುರಾಣಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಹಿಂದೂ ಧರ್ಮದ ಮಹತ್ವದ ಪುಸ್ತಕವಾಗಿದೆ. ಗರುಡ ಪುರಾಣದಲ್ಲಿ ಹೇಳಲಾದ ಜ್ಞಾನ ಮತ್ತು ನೀತಿಗಳನ್ನು ಅನುಸರಿಸುವ ವ್ಯಕ್ತಿಯು ಜೀವನದಲ್ಲಿ ಯಾವುದೇ ಕಷ್ಟವನ್ನು ಎದುರಿಸುವುದಿಲ್ಲ. ಗರುಡ ಪುರಾಣದಲ್ಲಿ, ಭಗವಾನ್ ವಿಷ್ಣುವು (Lord Vishnu) ಯಾವ ಕೆಲಸವು ಕರ್ಮ ಮತ್ತು ಧರ್ಮಕ್ಕೆ ಹೊಂದಿಕೆಯಾಗುತ್ತದೆ ಮತ್ತು ಯಾವುದು ಅಲ್ಲ ಎಂಬುದನ್ನು ವಿವರಿಸಲಾಗಿದೆ. ಧರ್ಮ ಮತ್ತು ಕರ್ಮ, ನೀತಿ ಅನೀತಿಗಳ ಮಧ್ಯೆ ಗರುಡ ಪುರಾಣವು ಯಮಲೋಕದ ಪ್ರಯಾಣ ಮತ್ತು ಮರಣಾನಂತರದ ಸ್ವರ್ಗ-ನರಕದ ಬಗ್ಗೆಯೂ ಸೂಕ್ಷ್ಮವಾಗಿ ಹೇಳಿದೆ. ಗರುಡ ಪುರಾಣದ ಬೋಧನೆಗಳನ್ನು ಅನುಸರಿಸುವ ಮೂಲಕ ಯಾವುದೆ ವ್ಯಕ್ತಿ ತನ್ನ ಸರಿ ಮತ್ತು ತಪ್ಪು ಕ್ರಿಯೆಗಳ ನಡುವಿನ ವ್ಯತ್ಯಾಸವನ್ನು ಕಲಿಯುತ್ತಾರೆ. ಇದರಿಂದ ಜನ ಕರ್ಮ ಧರ್ಮದ ಮಾರ್ಗವನ್ನು ಅನುಸರಿಸಿ ಉತ್ತಮ ಜೀವನವನ್ನು ನಡೆಸಬಹುದು. ಇದರಿಂದ ಒಬ್ಬ ವ್ಯಕ್ತಿಯು ಜೀವನದಲ್ಲಿ ಸಂತೋಷವಾಗಿರುವುದು ಮಾತ್ರವಲ್ಲದೆ ಸಾವಿನ ನಂತರ ಮೋಕ್ಷವನ್ನು (Spiritual) ಪಡೆಯುತ್ತಾನೆ.

ಗರುಡ ಪುರಾಣದಲ್ಲಿ ಇಂತಹ ಕೆಲವು ಕೆಲಸಗಳನ್ನು ಹೇಳಲಾಗಿದೆ. ಅದನ್ನು ಅಪ್ಪಿತಪ್ಪಿಯೂ ಮಾಡಬಾರದು. ಅದರಲ್ಲೂ ಮನೆಯಲ್ಲಿ ಮಹಿಳೆಯರು ಈ ಕೆಲಸವನ್ನು ಮಾಡಲೇಬಾರದು. ಈ ಕೆಲಸಗಳು ಮನೆಯಲ್ಲಿ ದುಃಖ ಮತ್ತು ಬಡತನವನ್ನು ಉಂಟುಮಾಡುತ್ತವೆ. ಆ ಕೆಲಸ ಏನೆಂದು ತಿಳಿಯಿರಿ.

ಅನ್ನದಾನ ಮಾಡದಿರುವುದು: ಅನ್ನದಾನ ಮಾಡುವುದು ಅತ್ಯಂತ ಪುಣ್ಯದ ಕಾರ್ಯ. ಅನ್ನದಾನ ಮಾಡುವುದರಿಂದ ನಿಮಗೆ ಮಾತ್ರವಲ್ಲದೆ ಏಳು ತಲೆಮಾರುಗಳಿಗೂ ಲಾಭವಾಗುತ್ತದೆ. ಅದಕ್ಕಾಗಿಯೇ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆಹಾರವನ್ನು ದಾನ ಮಾಡಿ ಮತ್ತು ಹಸಿದವರಿಗೆ ಮತ್ತು ಅಗತ್ಯವಿರುವವರಿಗೆ ಆಹಾರವನ್ನು ನೀಡಿ.

ಇದನ್ನೂ ಓದಿ:

Spiritual: ಪ್ರೀತಿಯಿಂದ ಶುದ್ಧಭಾವದಿಂದ ಕೆಲಸ ಕಾರ್ಯವನ್ನು ಮಾಡಬೇಕು ಯಾಕೆ? ಭಾವಕ್ಕೆ ತಕ್ಕಂತೆ ಫಲ

ಗಂಡನಿಂದ ದೂರವಿರಬಾರದು: ಹೆಂಡತಿಯು ಗಂಡನ ಉತ್ತಮ ಅರ್ಧ ಭಾಗದವಳಾಗಿದ್ದಾಳೆ. ಅಂದರೆ ನಾವು ನೀವೆಲ್ಲ ಕೇಳಿರುವಂತೆ ಅರ್ಧಾಂಗಿ. ಅಂದ್ರೆ ಗಂಡನ ದೇಹದ ಅರ್ಧ ಭಾಗ ಅವಳೇ ಎಂದರ್ಥ. ಗರುಡ ಪುರಾಣದ ಪ್ರಕಾರ ಯಾವುದೇ ಹೆಂಡತಿ ತನ್ನ ಗಂಡನಿಂದ ದೂರ ಇರಬಾರದು. ಸುಖ ದಾಂಪತ್ಯ ಜೀವನಕ್ಕೆ ಪತಿ-ಪತ್ನಿ ಒಟ್ಟಿಗೆ ಬಾಳುವುದು ಬಹಳ ಮುಖ್ಯ. ಇಬ್ಬರ ನಡುವೆ ಭಿನ್ನಾಭಿಪ್ರಾಯವಿದ್ದರೂ ಪತಿಯಿಂದ ದೂರ ಉಳಿಯಬೇಡಿ. ಪತಿ-ಪತ್ನಿಯಿಂದ ದೀರ್ಘ ಕಾಲ ದೂರ ಉಳಿಯುವುದರಿಂದ ಸಂಬಂಧದಲ್ಲಿ ಬಿರುಕು ಉಂಟಾಗಿ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುತ್ತವೆ.

ಯಾರನ್ನೂ ಅವಮಾನಿಸಬೇಡಿ: ಯಾರನ್ನೂ ಅವಮಾನಿಸಬೇಡಿ. ನಿಮ್ಮ ಬಾಯಿಂದ ಅಂತಹ ಕಟುವಾದ ಮಾತುಗಳನ್ನು ಮಾತನಾಡಬೇಡಿ. ಅದಕ್ಕಾಗಿ ನಿಮಗಿಂತ ಚಿಕ್ಕವರು ಅಥವಾ ಹಿರಿಯರು, ಎಲ್ಲರೊಂದಿಗೆ ಸೌಜನ್ಯದಿಂದ ಮಾತನಾಡಿ ಮತ್ತು ತಪ್ಪು ಪದಗಳನ್ನು ಬಳಸಬೇಡಿ.

ಇನ್ನಷ್ಟು ಅಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:17 pm, Tue, 14 March 23

ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
ಮಂತ್ರಿಗಳಿದ್ದಾರೆ, ಅವರಿಗೆ ಪ್ರಶ್ನೆ ಕೇಳಿ ಎಂದ ಡೆಪ್ಯುಟಿ ಸ್ಪೀಕರ್ ಲಮಾಣಿ
ಮಂತ್ರಿಗಳಿದ್ದಾರೆ, ಅವರಿಗೆ ಪ್ರಶ್ನೆ ಕೇಳಿ ಎಂದ ಡೆಪ್ಯುಟಿ ಸ್ಪೀಕರ್ ಲಮಾಣಿ