Garuda Purana 2023: ಗರುಡ ಪುರಾಣದ ಪ್ರಕಾರ, ಹೀಗೆಲ್ಲ ಮಾಡಿದರೆ ಮನೆಯಲ್ಲಿ ಬಹಳಷ್ಟು ಕಷ್ಟ-ದುಃಖಗಳು ಎದುರಾಗುತ್ತವೆ

ಗರುಡ ಪುರಾಣ: ಮನ- ಮನೆಯಲ್ಲಿ ನಮಗೆ ದುಃಖವನ್ನು ಉಂಟುಮಾಡುವ ಕೆಲವು ಕಾರ್ಯಗಳ ಬಗ್ಗೆ ಗರುಡ ಪುರಾಣದಲ್ಲಿ ಹೇಳಲಾಗಿದೆ. ಜೊತೆಗೆ ಈ ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿ ಬಡತನವು ನೆಲೆಸಲು ಪ್ರಾರಂಭಿಸುತ್ತದೆ ಎಂಬುದೂ ಗಮನಾರ್ಹ. ಆ ಕೆಲಸಗಳು ಯಾವುವು ಬನ್ನೀ ತಿಳಿಯೋಣ.

Garuda Purana 2023: ಗರುಡ ಪುರಾಣದ ಪ್ರಕಾರ, ಹೀಗೆಲ್ಲ ಮಾಡಿದರೆ ಮನೆಯಲ್ಲಿ ಬಹಳಷ್ಟು ಕಷ್ಟ-ದುಃಖಗಳು ಎದುರಾಗುತ್ತವೆ
ಗರುಡ ಪುರಾಣ 2023
Follow us
| Updated By: ಸಾಧು ಶ್ರೀನಾಥ್​

Updated on:Mar 14, 2023 | 3:22 PM

ಗರುಡ ಪುರಾಣ, ಭಗವಾನ್ ವಿಷ್ಣುವಿನ ನೀತಿಗಳು: ಗರುಡ ಪುರಾಣವು (Garuda Purana) 18 ಮಹಾಪುರಾಣಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಹಿಂದೂ ಧರ್ಮದ ಮಹತ್ವದ ಪುಸ್ತಕವಾಗಿದೆ. ಗರುಡ ಪುರಾಣದಲ್ಲಿ ಹೇಳಲಾದ ಜ್ಞಾನ ಮತ್ತು ನೀತಿಗಳನ್ನು ಅನುಸರಿಸುವ ವ್ಯಕ್ತಿಯು ಜೀವನದಲ್ಲಿ ಯಾವುದೇ ಕಷ್ಟವನ್ನು ಎದುರಿಸುವುದಿಲ್ಲ. ಗರುಡ ಪುರಾಣದಲ್ಲಿ, ಭಗವಾನ್ ವಿಷ್ಣುವು (Lord Vishnu) ಯಾವ ಕೆಲಸವು ಕರ್ಮ ಮತ್ತು ಧರ್ಮಕ್ಕೆ ಹೊಂದಿಕೆಯಾಗುತ್ತದೆ ಮತ್ತು ಯಾವುದು ಅಲ್ಲ ಎಂಬುದನ್ನು ವಿವರಿಸಲಾಗಿದೆ. ಧರ್ಮ ಮತ್ತು ಕರ್ಮ, ನೀತಿ ಅನೀತಿಗಳ ಮಧ್ಯೆ ಗರುಡ ಪುರಾಣವು ಯಮಲೋಕದ ಪ್ರಯಾಣ ಮತ್ತು ಮರಣಾನಂತರದ ಸ್ವರ್ಗ-ನರಕದ ಬಗ್ಗೆಯೂ ಸೂಕ್ಷ್ಮವಾಗಿ ಹೇಳಿದೆ. ಗರುಡ ಪುರಾಣದ ಬೋಧನೆಗಳನ್ನು ಅನುಸರಿಸುವ ಮೂಲಕ ಯಾವುದೆ ವ್ಯಕ್ತಿ ತನ್ನ ಸರಿ ಮತ್ತು ತಪ್ಪು ಕ್ರಿಯೆಗಳ ನಡುವಿನ ವ್ಯತ್ಯಾಸವನ್ನು ಕಲಿಯುತ್ತಾರೆ. ಇದರಿಂದ ಜನ ಕರ್ಮ ಧರ್ಮದ ಮಾರ್ಗವನ್ನು ಅನುಸರಿಸಿ ಉತ್ತಮ ಜೀವನವನ್ನು ನಡೆಸಬಹುದು. ಇದರಿಂದ ಒಬ್ಬ ವ್ಯಕ್ತಿಯು ಜೀವನದಲ್ಲಿ ಸಂತೋಷವಾಗಿರುವುದು ಮಾತ್ರವಲ್ಲದೆ ಸಾವಿನ ನಂತರ ಮೋಕ್ಷವನ್ನು (Spiritual) ಪಡೆಯುತ್ತಾನೆ.

ಗರುಡ ಪುರಾಣದಲ್ಲಿ ಇಂತಹ ಕೆಲವು ಕೆಲಸಗಳನ್ನು ಹೇಳಲಾಗಿದೆ. ಅದನ್ನು ಅಪ್ಪಿತಪ್ಪಿಯೂ ಮಾಡಬಾರದು. ಅದರಲ್ಲೂ ಮನೆಯಲ್ಲಿ ಮಹಿಳೆಯರು ಈ ಕೆಲಸವನ್ನು ಮಾಡಲೇಬಾರದು. ಈ ಕೆಲಸಗಳು ಮನೆಯಲ್ಲಿ ದುಃಖ ಮತ್ತು ಬಡತನವನ್ನು ಉಂಟುಮಾಡುತ್ತವೆ. ಆ ಕೆಲಸ ಏನೆಂದು ತಿಳಿಯಿರಿ.

ಅನ್ನದಾನ ಮಾಡದಿರುವುದು: ಅನ್ನದಾನ ಮಾಡುವುದು ಅತ್ಯಂತ ಪುಣ್ಯದ ಕಾರ್ಯ. ಅನ್ನದಾನ ಮಾಡುವುದರಿಂದ ನಿಮಗೆ ಮಾತ್ರವಲ್ಲದೆ ಏಳು ತಲೆಮಾರುಗಳಿಗೂ ಲಾಭವಾಗುತ್ತದೆ. ಅದಕ್ಕಾಗಿಯೇ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆಹಾರವನ್ನು ದಾನ ಮಾಡಿ ಮತ್ತು ಹಸಿದವರಿಗೆ ಮತ್ತು ಅಗತ್ಯವಿರುವವರಿಗೆ ಆಹಾರವನ್ನು ನೀಡಿ.

ಇದನ್ನೂ ಓದಿ:

Spiritual: ಪ್ರೀತಿಯಿಂದ ಶುದ್ಧಭಾವದಿಂದ ಕೆಲಸ ಕಾರ್ಯವನ್ನು ಮಾಡಬೇಕು ಯಾಕೆ? ಭಾವಕ್ಕೆ ತಕ್ಕಂತೆ ಫಲ

ಗಂಡನಿಂದ ದೂರವಿರಬಾರದು: ಹೆಂಡತಿಯು ಗಂಡನ ಉತ್ತಮ ಅರ್ಧ ಭಾಗದವಳಾಗಿದ್ದಾಳೆ. ಅಂದರೆ ನಾವು ನೀವೆಲ್ಲ ಕೇಳಿರುವಂತೆ ಅರ್ಧಾಂಗಿ. ಅಂದ್ರೆ ಗಂಡನ ದೇಹದ ಅರ್ಧ ಭಾಗ ಅವಳೇ ಎಂದರ್ಥ. ಗರುಡ ಪುರಾಣದ ಪ್ರಕಾರ ಯಾವುದೇ ಹೆಂಡತಿ ತನ್ನ ಗಂಡನಿಂದ ದೂರ ಇರಬಾರದು. ಸುಖ ದಾಂಪತ್ಯ ಜೀವನಕ್ಕೆ ಪತಿ-ಪತ್ನಿ ಒಟ್ಟಿಗೆ ಬಾಳುವುದು ಬಹಳ ಮುಖ್ಯ. ಇಬ್ಬರ ನಡುವೆ ಭಿನ್ನಾಭಿಪ್ರಾಯವಿದ್ದರೂ ಪತಿಯಿಂದ ದೂರ ಉಳಿಯಬೇಡಿ. ಪತಿ-ಪತ್ನಿಯಿಂದ ದೀರ್ಘ ಕಾಲ ದೂರ ಉಳಿಯುವುದರಿಂದ ಸಂಬಂಧದಲ್ಲಿ ಬಿರುಕು ಉಂಟಾಗಿ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುತ್ತವೆ.

ಯಾರನ್ನೂ ಅವಮಾನಿಸಬೇಡಿ: ಯಾರನ್ನೂ ಅವಮಾನಿಸಬೇಡಿ. ನಿಮ್ಮ ಬಾಯಿಂದ ಅಂತಹ ಕಟುವಾದ ಮಾತುಗಳನ್ನು ಮಾತನಾಡಬೇಡಿ. ಅದಕ್ಕಾಗಿ ನಿಮಗಿಂತ ಚಿಕ್ಕವರು ಅಥವಾ ಹಿರಿಯರು, ಎಲ್ಲರೊಂದಿಗೆ ಸೌಜನ್ಯದಿಂದ ಮಾತನಾಡಿ ಮತ್ತು ತಪ್ಪು ಪದಗಳನ್ನು ಬಳಸಬೇಡಿ.

ಇನ್ನಷ್ಟು ಅಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:17 pm, Tue, 14 March 23

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ