
ಹಿಂದೂ ಸಂಪ್ರದಾಯದಲ್ಲಿ ವಾಸ್ತು ಶಾಸ್ತ್ರಕ್ಕೆ ಪ್ರಾಮುಖ್ಯತೆ ಇದೆ. ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಹಲವಾರು ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.. ಎಂದು ಪರಿಣತರು ಹೇಳುತ್ತಾರೆ. ಬಹಳಷ್ಟು ಜನರು ಇದನ್ನು ನಂಬುತ್ತಾರೆ ಮತ್ತು ಜೀವನದಲ್ಲಿ ಅನುಸರಿಸುತ್ತಾರೆ. ಈ ರೀತಿ ಕೆಲವು ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿನ ಅನೇಕ ದೋಷಗಳು ಕಡಿಮೆಯಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಜನ ತಾವು ಮಲಗುವಾಗ ಸೆಲ್ ಫೋನ್ ಅನ್ನು ದಿಂಬಿನ ಕೆಳಗೆ ಇಟ್ಟುಕೊಳ್ಳುತ್ತಾರೆ . ಆದರೆ ನೀವು ಈ ಬಾರಿ ಮಲಗುವಾಗ ರೂಪಾಯಿಯನ್ನೂ ದಿಂಬಿನ ಕೆಳಗೆ ಇಟ್ಟುಕೊಳ್ಳಿ. ಅದ್ಯಾಕೆ ಅಂತಾ ಆಶ್ಚರ್ಯದಿಂದ ಕೇಳ್ತಾ ಇದೀರಾ...

ಹಿಂದೂ ಸಂಪ್ರದಾಯದಲ್ಲಿ ವಾಸ್ತು ಶಾಸ್ತ್ರಕ್ಕೆ ಪ್ರಾಮುಖ್ಯತೆ ಇದೆ. ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಹಲವಾರು ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.. ಎಂದು ಪರಿಣತರು ಹೇಳುತ್ತಾರೆ. ಬಹಳಷ್ಟು ಜನರು ಇದನ್ನು ನಂಬುತ್ತಾರೆ ಮತ್ತು ಜೀವನದಲ್ಲಿ ಅನುಸರಿಸುತ್ತಾರೆ. ಈ ರೀತಿ ಕೆಲವು ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿನ ಅನೇಕ ದೋಷಗಳು ಕಡಿಮೆಯಾಗುತ್ತವೆ.

ಮಲಗುವಾಗ ಸಾಮಾನ್ಯವಾಗಿ ನಮ್ಮ ದಿಂಬಿನ ಕುಡಿಯಲು ನೀರು, ಸೆಲ್ ಫೋನ್ ಅನ್ನು ಇಟ್ಟುಕೊಳ್ಳುತ್ತೇವೆ. ಆದರೆ ಇಂದಿನಿಂದ ರಾತ್ರಿ ಮಲಗುವಾಗ ರೂಪಾಯಿಯನ್ನೂ ಇಟ್ಟುಕೊಳ್ಳಿ. ಅದ್ಯಾಕೆ ಅಂತಾ ಆಶ್ಚರ್ಯದಿಂದ ಕೇಳ್ತಾ ಇದೀರಾ... ವಾಸ್ತು ಶಾಸ್ತ್ರದಲ್ಲಿ ರೂಪಾಯಿಗೆ ಹೆಚ್ಚು ಮೌಲ್ಯ ನೀಡಲಾಗಿದೆ. ವಾಸ್ತು ಶಾಸ್ತ್ರದಲ್ಲಿ ರೂಪಾಯಿ ನಾಣ್ಯ ಪರಿಹಾರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ.

ನೀವು ಮಲಗುವಾಗ ಪ್ರತಿ ಬಾರಿ ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿಕೊಳ್ಳಿ. ಈ ಕಾರಣದಿಂದಾಗಿ, ನಕಾರಾತ್ಮಕ ಶಕ್ತಿ ಮತ್ತು ದುಷ್ಟ ಶಕ್ತಿಗಳ ಪ್ರಭಾವವು ದೂರವಾಗುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಇನ್ನಿತರ ರೀತಿಯ ಸಮಸ್ಯೆಗಳಿಂದಲೂ ವಾಸ್ತು ಶಾಸ್ತ್ರವು ಮುಕ್ತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ದಿಂಬಿನ ಕೆಳಗೆ ರೂಪಾಯಿ ನಾಣ್ಯಗಳನ್ನು ಇಟ್ಟುಕೊಂಡು ಮಲಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಹಣಕಾಸಿನ ಸಮಸ್ಯೆಯೂ ದೂರವಾಗುತ್ತದೆ.. ಹಣ ಮನೆಗೆ ಮರಳುತ್ತದೆ. ಹೀಗೆ ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳೂ ದೂರವಾಗುತ್ತವೆ.

ಈ ಪರಿಹಾರವನ್ನು ತಿಂಗಳಿಗೊಮ್ಮೆ ಮಾಡಬಹುದು. ರಾತ್ರಿ ಮಲಗುವಾಗ ದಿಂಬಿನ ಕೆಳಗೆ ಒಂದು ರೂಪಾಯಿ ನಾಣ್ಯ ಇಟ್ಟುಕೊಳ್ಳಬೇಕು. ಮರುದಿನ, ಬೆಳಗ್ಗೆ ಎದ್ದಾಗ ಆ ನಾಣ್ಯಗಳನ್ನು ಹರಿಯುವ ನದಿ, ಕೆರೆ, ಮುಂತಾದ ನಿರ್ಜನ ಜಾಗಗಳಲ್ಲಿ ಬಿಸಾಡಬೇಕು.