AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Year 2022: ಹೊಸ ವರ್ಷದ ಹೊಸ್ತಿಲಲ್ಲಿ ಈ ಸರಳ ಮಾರ್ಗಗಳ ಅನುಸರಿಸಿ ಸಾಲದಿಂದ ಮುಕ್ತರಾಗಿ, ಧನ ಸಂಕಷ್ಟದಿಂದ ದೂರವಾಗಿ

ಈಗಂತೂ ಎಲ್ಲೆಲ್ಲೂ ಹಣಕ್ಕೆ ಹಾಹಾಕಾರವಿದೆ. ಅದರಲ್ಲೂ ಈ ಕೊರೊನಾಘಾತದಿಂದ ತತ್ತರಿಸಿರುವ ಜನಕ್ಕೆ ಆರ್ಥಿಕ ಬವಣೆಹೆಚ್ಚಾಗಿದೆ. ಸಾಲ ಸೋಲ ಮಾಡುವುದು ಅನಿವಾರ್ಯವಾಗಿದೆ. ಸಾಲ ಮಾಡುವುದೇನೂ ಸರಿ. ಆದರೆ ಅದನ್ನು ಹಾಗೆಯೇ ಪ್ರಾಮಾಣಿಕವಾಗಿ ಚುಕ್ತಾ ಮಾಡುವುದೂ ನಮ್ಮ ಆದ್ಯ ಕರ್ತವ್ಯವಾಗಬೇಕು.

New Year 2022: ಹೊಸ ವರ್ಷದ ಹೊಸ್ತಿಲಲ್ಲಿ ಈ ಸರಳ ಮಾರ್ಗಗಳ ಅನುಸರಿಸಿ ಸಾಲದಿಂದ ಮುಕ್ತರಾಗಿ, ಧನ ಸಂಕಷ್ಟದಿಂದ ದೂರವಾಗಿ
New Year 2022: ಹೊಸ ವರ್ಷದ ಹೊಸ್ತಿಲಲ್ಲಿ ಈ ಸರಳ ಮಾರ್ಗಗಳ ಅನುಸರಿಸಿ ಸಾಲದಿಂದ ಮುಕ್ತರಾಗಿ, ಧನ ಸಂಕಷ್ಟದಿಂದ ದೂರವಾಗಿ
TV9 Web
| Edited By: |

Updated on: Dec 24, 2021 | 6:06 AM

Share

ಹೊಸ ವರ್ಷದ ಹೊಸ್ತಿಲಲ್ಲಿ ಧನ ಸಂಕಷ್ಟದಿಂದ ದೂರವಾಗಲು ಈ ನಿರ್ಣಯಗಳನ್ನು ಕೈಗೊಳ್ಳಿ. ಸಾಲದಿಂದ ಮುಕ್ತವಾಗಲು ಈ ಸರಳ ಮಾರ್ಗಗಳನ್ನು ಅನುಸರಿಸಿ. ಅದಕ್ಕೂ ಮುನ್ನ ಫ್ಲಾಷ್​ ಬ್ಯಾಕ್​​ನಲ್ಲಿ ಈ ಮಾತುಗಳನ್ನು ಬಗ್ಗೆ ಗಮನ ನೀಡಿ. ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗರು ಕೊಂಡು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ! ಇದೊಂದು ಸಾರ್ವತ್ರಿಕ, ಸಾರ್ವಕಾಲಿಕ ಸತ್ಯದ ಮಾತು. ಸಾಲ ಪಡೆಯುವುದು ತುಂಬಾ ಸುಲಭ. ಅದಕ್ಕೇನೂ ’ಖರ್ಚು’ ಮಾಡಬೇಕಾದ್ದಿಲ್ಲ. ಅದೇ ನಾವು ಆ ಸಾಲವನ್ನು ತೀರಿಸಬೇಕು, ಋಣಮುಕ್ತರಾಗಬೇಕು ಅಂದರೆ ಅದು ನಿಜಕ್ಕೂ ಕಷ್ಟ ಕಷ್ಟ. ಮಾನಸಿಕವಾಗಿ ಆಘಾತಗೊಳ್ಳುತ್ತೇವೆ. ಈ ಹಿನ್ನೆಲೆಯಲ್ಲಿ ಸಾಲದಿಂದ ಹೊರಬರುವಂತಾಗಲು ಈನ ಸರಳ ಮಾರ್ಗೋಪಾಯಗಳನ್ನು ಪಾಲಿಸಿ.

ಈಗಂತೂ ಎಲ್ಲೆಲ್ಲೂ ಹಣಕ್ಕೆ ಹಾಹಾಕಾರವಿದೆ. ಅದರಲ್ಲೂ ಈ ಕೊರೊನಾಘಾತದಿಂದ ತತ್ತರಿಸಿರುವ ಜನಕ್ಕೆ ಮನೆಯಿಂದ ಹೊರಗೆ ಹೋಗುವುದೇ ದುಸ್ತರವಾಗಿದೆ. ಕೈ ಖಾಲಿಯಾಗಿದ್ದು, ದೈನಂದಿನ ಜೀವನದ ಖರ್ಚು ಹೊಂದಾಣಿಕೆ ಮಾಡುವುದು ಕಷ್ಟ ಕಷ್ಟವಾಗಿದೆ. ಅಲ್ಲಿ ಇಲ್ಲಿ ಸಾಲ ಸೋಲ ಮಾಡುವುದು ಅನಿವಾರ್ಯವಾಗಿದೆ. ಸಾಲ ಮಾಡುವುದೇನೂ ಸರಿ. ಆದರೆ ಅದನ್ನು ಹಾಗೆಯೇ ಪ್ರಾಮಾಣಿಕವಾಗಿ ಚುಕ್ತಾ ಮಾಡುವುದೂ ನಮ್ಮ ಆದ್ಯ ಕರ್ತವ್ಯವಾಗಬೇಕು. ಆದರೆ ಅದುವೇ ಕಷ್ಟದ ಕೆಲಸ, ಅದು ದುರ್ಗಮದ ಹಾದಿ. ಈ ಪರಿಸ್ಥಿತಿಗಳ ಸಮ್ಮುಖದಲ್ಲಿ ಇಲ್ಲಿ ಒಂದಷ್ಟು ಸಾಲ ತೀರುವಳಿಗಾಗಿ ಒಂದಷ್ಟು ಸರಣ ಮಾರ್ಗಗಗಳನ್ನು ಸೂಚಿಸಿಲಾಗಿದೆ. ಅದನ್ನು ಅನುಸರಿಸಿ.

1. ವಿನಾಯಕನನ್ನು ವಿಘ್ನನಿವಾರಕ ಎಂದು ಆರಾಧಿಸುತ್ತೇವೆ. ಯಾವುದಾದರೂ ಶುಕ್ಲ ಪಕ್ಷದಲ್ಲಿ ಬುಧವಾರದ ದಿನ ಗಣೇಶನ ಸ್ತ್ರೋತ್ರವನ್ನು ಪಠಿಸಿ. ಅದಾದ ಮೇಲೆ ದಿನಾ ಅದನ್ನು ಅಭ್ಯಾಸ ಮಾಡಿಕೊಳ್ಳಿ. ಹಾಗೆಯೇ ಗಣಪತಿಗೆ ಸಿಹಿ ತಿನಿಸನ್ನು ನೈವೇದ್ಯಕ್ಕೆ ಇಡಿ.

2. ಇನ್ನು, ಆಂಜನೇಯ ಸ್ವಾಮಿಯನ್ನು ಸಂಕಟಮೋಚಕ ಎಂದು ಕರೆಯುತ್ತಾರೆ. ಪರ್ವತದಷ್ಟು ದೊಡ್ಡ ಕಷ್ಟವೇ ಎದುರಾಗಿದ್ದರೂ ಭಕ್ತಿ ಭಾವದಿಂದ ಹನುಮಂತನನ್ನು ನೆನೆದು, ಋಣಮೋಚಕ ಮಂಗಳ ಸ್ತ್ರೋತ್ರವನ್ನು ಪಠಿಸಬೇಕು. ಇದನ್ನು ಮಂಗಳವಾರ ಅಥವಾ ಶನಿವಾರದಂದು ಆರಂಭಿಸಿ. ಪ್ರತಿ ಮಂಗಳವಾರದಂದು ವಾನರರಿಗೆ ಬೆಲ್ಲ ಮತ್ತು ಬಾಳೆಹಣ್ಣನ್ನು ನೀಡುತ್ತಾ ಬನ್ನೀ.

3. ಸಾಲದಿಂದ ಮುಕ್ತರಾಗಲು ಶಿವನ ಧ್ಯಾನವನ್ನೂ ಮಾಡಬಹುದು. ಪ್ರತಿ ಸೋಮವಾರ ಶಿವ ಮಂದಿರಕ್ಕೆ ತೆರಳಿ ಭಕ್ತಿ ಭಾವದಿಂದ ಶಿರ ಬಾಗಿ ಶಿವಲಿಂಗಕ್ಕೆ ನಮಸ್ಕರಿಸಿ. ಆ ಸಮಯದಲ್ಲಿಓಂ ಋಣಮುಕ್ತೇಶ್ವರ ಮಹಾದೇವಯಾ ನಮಃ ಎಂದು ಜಪಿಸಿ. ನಿಮ್ಮ ಶಕ್ತ್ಯಾನುಸಾರ ದೇವಸ್ಥಾನಕ್ಕೆ ಬಂದಿರುವ ಭಕ್ತ ಗಣಕ್ಕೆ ಕಡಲೆ ಕಾಳು ಉಸಲಿ ಪ್ರಸಾದ ನೀಡಿ.

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್