AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shani Amavasya 2025: ಆಗಸ್ಟ್ 23 ಶನಿ ಅಮಾವಾಸ್ಯೆ; ಅಪ್ಪಿ ತಪ್ಪಿಯೂ ಈ ಕೆಲಸ ಮಾಡಬೇಡಿ

ಆಗಸ್ಟ್ 23 ರ ಭಾದ್ರಪದ ಅಮವಾಸ್ಯೆಯು ಶನಿವಾರ ಬಂದಿರುವುದರಿಂದ ಅದನ್ನು ಶನಿ ಅಮವಾಸ್ಯೆ ಎಂದೂ ಕರೆಯಲ್ಪಡುತ್ತದೆ. ಶನಿ ದೋಷ, ಸಾಡೇಸಾತಿಯಿಂದ ಮುಕ್ತಿ ಪಡೆಯಲು ಈ ದಿನ ತುಂಬಾ ವಿಶೇಷ. ಆದರೆ ಅಮವಾಸ್ಯೆಯ ರಾತ್ರಿ ನಕಾರಾತ್ಮಕ ಶಕ್ತಿಯಿಂದ ಕೂಡಿರುತ್ತದೆ. ಈ ದಿನ ಉಗುರು/ಕೂದಲು ಕತ್ತರಿಸುವುದು, ತಡವಾಗಿ ಮಲಗುವುದು, ಉಪ್ಪು/ಎಣ್ಣೆ/ಕಬ್ಬಿಣ ಖರೀದಿಸುವುದು, ಮಾಂಸಾಹಾರ ಸೇವಿಸುವುದು, ಮತ್ತು ಪ್ರಾಣಿಗಳಿಗೆ ಹಾನಿ ಮಾಡುವುದು ತಪ್ಪು. ಧನಾತ್ಮಕತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ.

Shani Amavasya 2025: ಆಗಸ್ಟ್ 23 ಶನಿ ಅಮಾವಾಸ್ಯೆ; ಅಪ್ಪಿ ತಪ್ಪಿಯೂ ಈ ಕೆಲಸ ಮಾಡಬೇಡಿ
ಶನಿ ಅಮಾವಾಸ್ಯೆ
ಅಕ್ಷತಾ ವರ್ಕಾಡಿ
|

Updated on: Aug 22, 2025 | 8:15 AM

Share

ಈ ಬಾರಿ ಭಾದ್ರಪದ ಅಮಾವಾಸ್ಯೆಯು ಆಗಸ್ಟ್ 23 ರ ಶನಿವಾರ ಬರುವುದರಿಂದ, ಇದನ್ನು ಶನಿ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಭಾದ್ರಪದ ಅಮಾವಾಸ್ಯೆ ತಿಥಿ ಆಗಸ್ಟ್ 22, ಶುಕ್ರವಾರ ಬೆಳಿಗ್ಗೆ 11:55 ಕ್ಕೆ ಪ್ರಾರಂಭವಾಗಿ ಆಗಸ್ಟ್ 23, ಶನಿವಾರ ಬೆಳಿಗ್ಗೆ 11:35 ಕ್ಕೆ ಕೊನೆಗೊಳ್ಳುತ್ತದೆ. ಶನಿ ದೋಷ, ಸಾಡೇಸಾತಿ ಮತ್ತು ಧೈಯ್ಯಾಗಳಿಂದ ಮುಕ್ತಿ ಪಡೆಯಲು ಈ ದಿನವು ಬಹಳ ವಿಶೇಷವಾಗಿದೆ, ಆದರೆ ಅಮಾವಾಸ್ಯೆ ರಾತ್ರಿಯನ್ನು ಭಯಾನಕವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಈ ದಿನದಂದು ಚಂದ್ರ ಕಣ್ಮರೆಯಾಗುತ್ತಾನೆ ಮತ್ತು ನಕಾರಾತ್ಮಕ ಶಕ್ತಿಯು ಸಕ್ರಿಯವಾಗಿರುತ್ತದೆ. ಅಲ್ಲದೆ, ಶನಿಯು ಬಹಳ ಪ್ರಭಾವಶಾಲಿ ಗ್ರಹ, ಆದ್ದರಿಂದ ಶನಿ ಅಮವಾಸ್ಯೆಯ ದಿನದಂದು ಯಾವುದೇ ತಪ್ಪುಗಳನ್ನು ಮಾಡಬಾರದು, ಇಲ್ಲದಿದ್ದರೆ ಜೀವನದುದ್ದಕ್ಕೂ ಅದರ ಕೆಟ್ಟ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.

ಶನಿ ಅಮವಾಸ್ಯೆಯಂದು ಈ ಕೆಲಸಗಳನ್ನು ಮಾಡಬೇಡಿ:

  • ಶನಿ ಅಮಾವಾಸ್ಯೆಯ ದಿನ ತಡವಾಗಿ ಮಲಗಬಾರದು, ಉಗುರು ಅಥವಾ ಕೂದಲನ್ನು ಕತ್ತರಿಸಬಾರದು, ಇದು ಅದೃಷ್ಟವನ್ನು ದುರದೃಷ್ಟವಾಗಿ ಪರಿವರ್ತಿಸುತ್ತದೆ ಎಂದು ನಂಬಲಾಗಿದೆ.
  • ಶನಿ ಅಮಾವಾಸ್ಯೆಯಂದು, ಬಡವರು, ಕಾರ್ಮಿಕರು, ನಿರ್ಗತಿಕರು, ನಾಯಿ ಅಥವಾ ಕಾಗೆ ನಿಮ್ಮ ಮನೆ ಬಾಗಿಲಿಗೆ ಬಂದರೆ ಆಹಾರ ನೀಡಿ. ಈ ದಿನ ಪ್ರಾಣಿಗಳಿಗೆ ಹಾನಿ ಮಾಡಿದರೆ ಶನಿಯ ಕೋಪಕ್ಕೆ ನೀವು ಗುರಿಯಾಗುತ್ತೀರಿ.
  • ಶನಿ ಅಮವಾಸ್ಯೆಯಂದು ಉಪ್ಪು, ಎಣ್ಣೆ, ಕಬ್ಬಿಣ ಖರೀದಿಸುವುದು ಅಶುಭ, ಅದು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು.
  • ಅಮವಾಸ್ಯೆಯ ರಾತ್ರಿ ನಕಾರಾತ್ಮಕ ಶಕ್ತಿಗಳು ಹೆಚ್ಚಿರುತ್ತದೆ. ಆದ್ದರಿಂದ ಅಮವಾಸ್ಯೆಯ ರಾತ್ರಿ ಸ್ಮಶಾನಅಥವಾ ನಿರ್ಜನ ಸ್ಥಳಕ್ಕೆ ಹೋಗಬೇಡಿ.
  • ಶನಿ ಅಮಾವಾಸ್ಯೆಯಂದು ಮಾದಕ ದ್ರವ್ಯಗಳು ಮತ್ತು ಮಾಂಸಾಹಾರ ಸೇವಿಸುವುದನ್ನು ನಿಷೇಧಿಸಲಾಗಿದೆ.
  • ಈ ದಿನದಂದು, ಯಾರನ್ನೂ ತಪ್ಪಾಗಿ ಮಾನಸಿಕವಾಗಿ ಅಥವಾ ದೈಹಿಕವಾಗಿ ನೋಯಿಸಬೇಡಿ. ಮರಗಳನ್ನು ಕಡಿಯಬೇಡಿ. ಇದು ಪಿತೃ ದೋಷಕ್ಕೆ ಕಾರಣವಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
6,6,6,6,6.. ವಾರೆ ವ್ಹಾ ವೈಭವ್ ಸೂರ್ಯವಂಶಿ
6,6,6,6,6.. ವಾರೆ ವ್ಹಾ ವೈಭವ್ ಸೂರ್ಯವಂಶಿ
ತಂಡದಿಂದ ಹೊರಹಾಕಿದ ಸಿಎಸ್​ಕೆ ವಿರುದ್ಧ ಮಿಂಚಿದ ಜಡೇಜಾ
ತಂಡದಿಂದ ಹೊರಹಾಕಿದ ಸಿಎಸ್​ಕೆ ವಿರುದ್ಧ ಮಿಂಚಿದ ಜಡೇಜಾ
BJP ರೋಡ್ ಶೋಗೆ ಕಾಂಗ್ರೆಸ್ ಧ್ವಜ ಹಿಡಿದು 'ಕೈ' ಕಾರ್ಯಕರ್ತರ ಎಂಟ್ರಿ!
BJP ರೋಡ್ ಶೋಗೆ ಕಾಂಗ್ರೆಸ್ ಧ್ವಜ ಹಿಡಿದು 'ಕೈ' ಕಾರ್ಯಕರ್ತರ ಎಂಟ್ರಿ!
ಕೈ ಮುಖಂಡನ ಹತ್ಯೆ ಯತ್ನ: ಚಾಕುವಿನಿಂದ ಚುಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕೈ ಮುಖಂಡನ ಹತ್ಯೆ ಯತ್ನ: ಚಾಕುವಿನಿಂದ ಚುಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಗ್ಯಾಸ್ ರೀಫಿಲ್ ಮಾಡುವಾಗ ಏಕಾಏಕಿ ಸಿಲಿಂಡರ್​ ಸ್ಫೋಟ: ಮನೆ ಛಿದ್ರಛಿದ್ರ
ಗ್ಯಾಸ್ ರೀಫಿಲ್ ಮಾಡುವಾಗ ಏಕಾಏಕಿ ಸಿಲಿಂಡರ್​ ಸ್ಫೋಟ: ಮನೆ ಛಿದ್ರಛಿದ್ರ
ಐಪಿಎಲ್ ಮ್ಯಾಚ್ ನೋಡಲು ಹೋಗುವ ಕ್ರಿಕೆಟ್ ಅಭಿಮಾನಿಗಳೇ ಈ ಮಹಿಳೆಯ ಮಾತು ಕೇಳಿ
ಐಪಿಎಲ್ ಮ್ಯಾಚ್ ನೋಡಲು ಹೋಗುವ ಕ್ರಿಕೆಟ್ ಅಭಿಮಾನಿಗಳೇ ಈ ಮಹಿಳೆಯ ಮಾತು ಕೇಳಿ
ಸೇತುವೆಯಿಂದ ಹಳ್ಳಕ್ಕೆ ಬಿದ್ದ ಬಸ್‌: ಪ್ರಯಾಣಿಕರು ಬದುಕುಳಿದಿದ್ದೇ ಪವಾಡ
ಸೇತುವೆಯಿಂದ ಹಳ್ಳಕ್ಕೆ ಬಿದ್ದ ಬಸ್‌: ಪ್ರಯಾಣಿಕರು ಬದುಕುಳಿದಿದ್ದೇ ಪವಾಡ
ಅಪಘಾತದಲ್ಲಿ ನವ ದಂಪತಿ ಸ್ಥಳದಲ್ಲೇ ದುರ್ಮರಣ: ಆಪ್ತರ ನೋವಿನ ಮಾತು
ಅಪಘಾತದಲ್ಲಿ ನವ ದಂಪತಿ ಸ್ಥಳದಲ್ಲೇ ದುರ್ಮರಣ: ಆಪ್ತರ ನೋವಿನ ಮಾತು
ಹೋಟೆಲ್​​ ಮಾಲೀಕರಿಗೆ ಗುಡ್​​ನ್ಯೂಸ್​​ ಕೊಟ್ಟ ಸಚಿವ ಮುನಿಯಪ್ಪ
ಹೋಟೆಲ್​​ ಮಾಲೀಕರಿಗೆ ಗುಡ್​​ನ್ಯೂಸ್​​ ಕೊಟ್ಟ ಸಚಿವ ಮುನಿಯಪ್ಪ
ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ 5 ದಿನ ಕ್ಯಾಂಪೇನ್​​​ಗೆ ಶ್ರೀರಾಮುಲು ವ್ಯಂಗ್ಯ
ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ 5 ದಿನ ಕ್ಯಾಂಪೇನ್​​​ಗೆ ಶ್ರೀರಾಮುಲು ವ್ಯಂಗ್ಯ