Daily Devotional: ನಮ್ಮ ನೆರಳನ್ನು ನಾವೇ ತುಳಿಯಬಾರದು ಯಾಕೆ ಗೊತ್ತಾ? ಜ್ಯೋತಿಷ್ಯ ಸಲಹೆ ಇಲ್ಲಿದೆ
ನಮ್ಮ ನೆರಳು ಹುಟ್ಟಿನಿಂದ ಸಾವಿನವರೆಗೆ ನಮ್ಮ ಜೊತೆಗಿರುವ ಮೌನ ಸಾಕ್ಷಿ. ಇದು ನಮ್ಮ ದೇಹದ ಪ್ರತಿಬಿಂಬ ಮಾತ್ರವಲ್ಲದೆ, ನಮ್ಮ ಪಾಪ-ಪುಣ್ಯಗಳನ್ನು ಗಮನಿಸುತ್ತದೆ ಮತ್ತು ಯಮನಿಗೆ ಲೆಕ್ಕ ಒಯ್ಯುತ್ತದೆ ಎಂದು ನಂಬಲಾಗಿದೆ. ನೆರಳಿನ ಆಧ್ಯಾತ್ಮಿಕ ಮಹತ್ವವನ್ನು ಅರಿತು, ಧನಾತ್ಮಕ ಜೀವನ ನಡೆಸುವ ಮೂಲಕ ಒಳ್ಳೆಯದಕ್ಕೆ ಪ್ರಯತ್ನಿಸಬೇಕು ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

ನಮ್ಮ ಜೀವನದುದ್ದಕ್ಕೂ, ಹುಟ್ಟಿನಿಂದ ಮರಣದ ತನಕ ನಮ್ಮೊಂದಿಗೆ ಸದಾ ಇರುವ ಏಕೈಕ ಸಂಗಾತಿ ನಮ್ಮ ನೆರಳು. ಅಪ್ಪ-ಅಮ್ಮ, ಕುಟುಂಬದವರು ಸಹ ಒಂದು ಹಂತದ ನಂತರ ನಮ್ಮಿಂದ ದೂರವಾಗಬಹುದು, ಆದರೆ ನೆರಳು ಸದಾ ನಮ್ಮ ಜೊತೆಗೇ ಇರುತ್ತದೆ. ನಾವು ಇದನ್ನು ಕಡೆಗಣಿಸಿದ್ದರೂ, ಇದರ ಆಧ್ಯಾತ್ಮಿಕ ಮಹತ್ವ ಅಪಾರ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.
ಗುರೂಜಿಯವರು ಹೇಳುವಂತೆ, ನೆರಳು ಕೇವಲ ಭೌತಿಕ ಪ್ರತಿಬಿಂಬವಲ್ಲ. ಇದು ಯುಗ ಯುಗಗಳಿಂದಲೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ನೆರಳು ನಮ್ಮ ದೇಹದಲ್ಲಿ ಪಾಪ-ಪುಣ್ಯಗಳು ಹೆಚ್ಚಾದಾಗ ಎಚ್ಚರಿಸುತ್ತದೆ. ಅಕಸ್ಮಿಕ ಕಂಟಕಗಳು, ಸೆರೆವಾಸ, ಅಪವಾದ, ಅಥವಾ ಮರಣದಂಡನೆಯಂತಹ ಘಟನೆಗಳು ಸಂಭವಿಸುವ ಮೊದಲು, ನೆರಳು ಪರೋಕ್ಷವಾಗಿ ಸೂಚನೆಗಳನ್ನು ನೀಡುತ್ತದೆ. ಆದರೂ ನಾವು ಅದನ್ನು ಸಾಮಾನ್ಯವಾಗಿ ಗಮನಿಸುವುದಿಲ್ಲ. ನಮ್ಮ ನೆರಳು ಮೃತ್ಯುವಿನ ತನಕ ನಮ್ಮೊಂದಿಗಿದ್ದು, ಮರಣ ಸಮೀಪಿಸಿದಾಗ ಅದು ಪಂಚಭೂತಗಳಲ್ಲಿ ಸೇರಿ ಕಣ್ಮರೆಯಾಗುತ್ತದೆ. ನೆರಳು ಕಣ್ಮರೆಯಾಗುವುದು ಅಥವಾ ಅದನ್ನು ನೋಡುವುದು ಶುಭವಲ್ಲ ಎಂದು ಹೇಳಲಾಗುತ್ತದೆ. ಮೃತ್ಯು ಆವರಿಸಿದಾಗ ದೇಹವು ನಿಶಕ್ತಿಗೊಂಡು, ನೆರಳು ಸಹ ಅಲ್ಲಿಂದ ಹೊರಟುಹೋಗುತ್ತದೆ. ಯಮನ ಪ್ರತೀಕದಂತೆ ಕಾಣುವ ಈ ಕಪ್ಪು ಆಕೃತಿಯು ಶನಿಯ ಪ್ರತೀಕವೂ ಆಗಿರಬಹುದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!
ನೆರಳು ನಮ್ಮ ಎಲ್ಲಾ ಲೆಕ್ಕಾಚಾರಗಳನ್ನು ಯಮನಿಗೆ ತಲುಪಿಸುತ್ತದೆ ಎಂದು ನಂಬಲಾಗಿದೆ. ಹೀಗಾಗಿ, ನಾವು ಧನಾತ್ಮಕವಾಗಿ ವರ್ತಿಸುವುದು ಅತ್ಯಗತ್ಯ. ದೈವಭೀತಿ, ಪಾಪಭೀತಿ ಮತ್ತು ಧರ್ಮಭೀತಿಯನ್ನು ಇಟ್ಟುಕೊಂಡಾಗ ನಮ್ಮ ಜೀವನ ಸುಂದರವಾಗಿರುತ್ತದೆ. ನಮ್ಮ ನೆರಳನ್ನು ಒಳ್ಳೆಯ ಮಾರ್ಗದಲ್ಲಿ ನಡೆಸಲು ಮತ್ತು ಸತ್ಕಾರ್ಯಗಳನ್ನು ಮಾಡಲು ಪ್ರಯತ್ನಿಸೋಣ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
