ಕೇರಳದ ಪ್ರವಾಹದಲ್ಲಿ ಮಣಪ್ಪುರಂ ಶಿವ ದೇವಾಲಯ ಮುಳುಗಡೆ
ಕೇರಳದಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಕೇರಳದಲ್ಲಿ ಮುಂದುವರಿದಿರುವ ಭಾರಿ ಮುಂಗಾರು ಮಳೆಯಿಂದಾಗಿ ಪೆರಿಯಾರ್ ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗಿದ್ದು, ಎರ್ನಾಕುಲಂ ಜಿಲ್ಲೆಯ ಪ್ರಸಿದ್ಧ ಆಲುವಾ ಮಣಪ್ಪುರಂ ಶ್ರೀ ಮಹಾದೇವ ದೇವಾಲಯವು (ಆಲುವಾ ಶಿವ ದೇವಾಲಯ) ಸಂಪೂರ್ಣ ಜಲಾವೃತಗೊಂಡಿದೆ. ಪೆರಿಯಾರ್ ನದಿಯ ಪ್ರವಾಹದ ನೀರು ದೇವಾಲಯದ ಆವರಣ ಮತ್ತು ನದಿಯ ದಂಡೆಗೆ ನುಗ್ಗಿದ್ದು, ದೇವಾಲಯದ ಶಿವಲಿಂಗ ಮತ್ತು ಗರ್ಭಗುಡಿಯ ಭಾಗಗಳು ನೀರಿನಲ್ಲಿ ಮುಳುಗಿವೆ.
ಎರ್ನಾಕುಲಂ, ಆಗಸ್ಟ್ 3: ಕೇರಳದಲ್ಲಿ ಭಾರೀ ಪ್ರವಾಹ (Kerala Flood) ಉಂಟಾಗಿದೆ. ಕೇರಳದಲ್ಲಿ ಮುಂದುವರಿದಿರುವ ಭಾರಿ ಮುಂಗಾರು ಮಳೆಯಿಂದಾಗಿ ಪೆರಿಯಾರ್ ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗಿದ್ದು, ಎರ್ನಾಕುಲಂ ಜಿಲ್ಲೆಯ ಪ್ರಸಿದ್ಧ ಆಲುವಾ ಮಣಪ್ಪುರಂ ಶ್ರೀ ಮಹಾದೇವ ದೇವಾಲಯವು (ಆಲುವಾ ಶಿವ ದೇವಾಲಯ) ಸಂಪೂರ್ಣ ಜಲಾವೃತಗೊಂಡಿದೆ. ಪೆರಿಯಾರ್ ನದಿಯ ಪ್ರವಾಹದ ನೀರು ದೇವಾಲಯದ ಆವರಣ ಮತ್ತು ನದಿಯ ದಂಡೆಗೆ ನುಗ್ಗಿದ್ದು, ದೇವಾಲಯದ ಶಿವಲಿಂಗ ಮತ್ತು ಗರ್ಭಗುಡಿಯ ಭಾಗಗಳು ನೀರಿನಲ್ಲಿ ಮುಳುಗಿವೆ. ಪೆರಿಯಾರ್ ನದಿಯ ದಂಡೆಯಲ್ಲಿರುವ ಜನರಿಗೆ ಮತ್ತು ಭಕ್ತಾದಿಗಳಿಗೆ ನದಿ ತೀರಕ್ಕೆ ತೆರಳದಂತೆ ಮತ್ತು ಜಾಗರೂಕರಾಗಿರುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

