ಇಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಮೈಸೂರಿನ ಚಾಮುಂಡೇಶ್ವರಿ ಅಮ್ಮನವರ ವರ್ಧಂತ್ಯುತ್ಸವದ ಶುಭ ದಿನ ಹಾಗೂ ಬಾಲಗಂಗಾಧರ ತಿಲಕರ ಜಯಂತಿ ಆಗಿದ್ದು, ಈ ದಿನದ 12 ರಾಶಿಗಳ ಭವಿಷ್ಯ ಹಾಗೂ ಪರಿಹಾರ ಮಂತ್ರಗಳನ್ನು ಖ್ಯಾತ ಜ್ಯೋತಿಷಿ, ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ‘ಟಿವಿ9 ಡಿಜಿಟಲ್’ನ ‘ದಿನಭವಿಷ್ಯ’ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.
ಇಂದು ಆಗಸ್ಟ್ 4, 2026ರ ಮಂಗಳವಾರ, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷದ ಷಷ್ಠಿ ತಿಥಿ ಹಾಗೂ ರೇವತಿ ನಕ್ಷತ್ರದ ಈ ದಿನವು ಸಾಕ್ಷಾತ್ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹ ಪಡೆಯಲು ವಿಶೇಷವಾಗಿದೆ. ಇಂದು ಬಾಲಗಂಗಾಧರ ತಿಲಕರ ಜಯಂತಿ ಹಾಗೂ ಮೈಸೂರಿನ ಚಾಮುಂಡೇಶ್ವರಿ ಅಮ್ಮನವರ ವರ್ಧಂತ್ಯುತ್ಸವದ ಶುಭ ದಿನವೂ ಹೌದು. ಇಂದಿನ ರಾಹುಕಾಲ ಮಧ್ಯಾಹ್ನ 3:34 ರಿಂದ ಸಂಜೆ 5:09 ರವರೆಗೆ ಇರಲಿದ್ದು, ಮಧ್ಯಾಹ್ನ 12:25 ರಿಂದ 1:58 ರವರೆಗೆ ಸರ್ವಸಿದ್ಧಿ ಹಾಗೂ ಸಂಕಲ್ಪದ ಶುಭಕಾಲವಾಗಿದೆ. ‘ಟಿವಿ9 ಡಿಜಿಟಲ್’ ವಾಹಿನಿಯ ‘ದಿನಭವಿಷ್ಯ’ ಕಾರ್ಯಕ್ರಮದಲ್ಲಿ ಪ್ರಸಿದ್ಧ ಜ್ಯೋತಿಷಿ ಡಾ. ಬಸವರಾಜ್ ಗುರೂಜಿ ಅವರು ಇಂದಿನ ದ್ವಾದಶ ರಾಶಿಗಳ ಫಲಗಳನ್ನು ವಿವರಿಸಿದ್ದಾರೆ.
Follow Us
Latest Videos

