Centipede: ಮನೆಯಲ್ಲಿ ಜರಿ ಹುಳು ಕಾಣಿಸಿಕೊಂಡರೆ ಏನರ್ಥ? ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?

ಮನೆಯಲ್ಲಿ ಜರಿ (Centipede) ಕಾಣಿಸುವುದು ಕೇವಲ ಕೀಟವಲ್ಲ, ಅದು ಜ್ಯೋತಿಷ್ಯದಲ್ಲಿ ರಾಹು ಗ್ರಹದ ಸಂಕೇತ. ಇದರ ಶುಭ-ಅಶುಭ ಫಲಗಳು ಕಾಣಿಸುವ ಸ್ಥಳ ಮತ್ತು ಸ್ಥಿತಿಯನ್ನು ಅವಲಂಬಿಸಿವೆ. ಪೂಜಾ ಕೋಣೆಯಲ್ಲಿ ಕಂಡರೆ ಧನಲಾಭ, ಅಡುಗೆಮನೆಯಲ್ಲಿ ಕಂಡರೆ ಆರೋಗ್ಯ ಸಮಸ್ಯೆ. ಆದ್ದರಿಂದ, ಜರಿ ಕಂಡಾಗ ಅದನ್ನು ಕೊಲ್ಲದೆ ಜಾಗರೂಕತೆಯಿಂದ ಪೊರಕೆ ಅಥವಾ ಯಾವುದಾದರೂ ವಸ್ತುವಿನ ಸಹಾಯದಿಂದ ಯಾರಿಗೂ ಕಚ್ಚದಂತೆ ಮನೆಯಿಂದ ಹೊರಗೆ ಹಾಕುವುದು ಅತ್ಯುತ್ತಮ ಪರಿಹಾರವಾಗಿದೆ.

Centipede: ಮನೆಯಲ್ಲಿ ಜರಿ ಹುಳು ಕಾಣಿಸಿಕೊಂಡರೆ ಏನರ್ಥ? ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?
ಮನೆಯಲ್ಲಿ ಜರಿ ಕಾಣಿಸಿಕೊಂಡರೆ ಶುಭವೋ?
Image Credit source: Pinterest

Updated on: Jun 16, 2026 | 10:17 AM

ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಜರಿ ಹುಳು (Centipede) ಕಾಣಿಸಿಕೊಳ್ಳುವುದು ಕೇವಲ ಒಂದು ಸಾಧಾರಣ ಕೀಟದ ಭೇಟಿಯಲ್ಲ. ಜನಪದದಲ್ಲಿ ಇದನ್ನು “ಲಕ್ಷ್ಮಿ ಚೇಳು” ಎಂದೂ ಕರೆಯಲಾಗುತ್ತದೆಯಾದರೂ, ಜ್ಯೋತಿಷ್ಯದಲ್ಲಿ ಇದನ್ನು ಮುಖ್ಯವಾಗಿ ರಾಹು ಗ್ರಹದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಜರಿ ಕಾಣಿಸಿಕೊಂಡರೆ ಅದು ಶುಭವೇ ಅಥವಾ ಅಶುಭವೇ ಎಂಬುದು ಅದು ಮನೆಯ ಯಾವ ಜಾಗದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಯಾವ ಸ್ಥಿತಿಯಲ್ಲಿದೆ ಎಂಬುದರ ಮೇಲೆ ಸಂಪೂರ್ಣವಾಗಿ ನಿರ್ಧಾರವಾಗುತ್ತದೆ.

ಸಾಮಾನ್ಯವಾಗಿ ಮನೆಯ ನೆಲದ ಮೇಲೆ ಜರಿ ಹುಳು ಓಡಾಡುವುದು ಕಂಡರೆ ಅದನ್ನು ಅದೃಷ್ಟದ ಸಂಕೇತ ಎನ್ನಲಾಗುತ್ತದೆ. ಅದರಲ್ಲೂ ವಿಶೇಷವಾಗಿ ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ ಅಥವಾ ದೇವರ ಕೋಣೆಯಲ್ಲಿ ಜರಿ ಕಂಡುಬಂದರೆ, ಅದು ಅತ್ಯಂತ ಶುಭ ಮುನ್ಸೂಚನೆಯಾಗಿದೆ. ಇದು ಮನೆಯಲ್ಲಿ ಧನ-ಧಾನ್ಯ ವೃದ್ಧಿಯಾಗುವುದನ್ನು ಮತ್ತು ಶೀಘ್ರದಲ್ಲೇ ಲಕ್ಷ್ಮಿ ದೇವಿಯ ಕೃಪೆಯಿಂದ ಆರ್ಥಿಕ ಸುಧಾರಣೆಯಾಗುವುದನ್ನು ತೋರ್ಪಡಿಸುತ್ತದೆ. ಒಂದು ವೇಳೆ ಜರಿ ಕಣ್ಣಿಗೆ ಬಿದ್ದು, ನೀವು ಅದನ್ನು ಹೊರಗೆ ಹಾಕುವ ಮುನ್ನವೇ ಅದು ತಾನಾಗಿಯೇ ಮಾಯವಾದರೆ, ನಿಮ್ಮ ಜಾತಕದಲ್ಲಿ ರಾಹು ಶುಭನಾಗಿದ್ದಾನೆ ಮತ್ತು ನಿಂತುಹೋಗಿರುವ ಕೆಲಸಗಳು ಯಶಸ್ವಿಯಾಗಲಿವೆ ಎಂದರ್ಥ.

ಆದರೆ, ಇದೇ ಜರಿ ಮನೆಯ ಕೆಲವು ನಿರ್ದಿಷ್ಟ ಜಾಗಗಳಲ್ಲಿ ಕಾಣಿಸಿಕೊಂಡರೆ ಅದು ಅಶುಭ ಫಲಗಳನ್ನು ನೀಡುತ್ತದೆ. ಉದಾಹರಣೆಗೆ, ಅಡುಗೆ ಮನೆಯಲ್ಲಿ ಜರಿ ಕಂಡರೆ ಅದು ಮನೆಯ ಸದಸ್ಯರ ಆರೋಗ್ಯದಲ್ಲಿ ಏರುಪೇರಾಗುವುದನ್ನು ಮತ್ತು ವಾಸ್ತು ದೋಷವನ್ನು ಎತ್ತಿ ತೋರಿಸುತ್ತದೆ. ಅದೇ ರೀತಿ ಶೌಚಾಲಯ ಅಥವಾ ಸ್ನಾನದ ಗೃಹದಲ್ಲಿ ಜರಿ ಕಾಣಿಸಿಕೊಂಡರೆ, ಜಾತಕದಲ್ಲಿ ರಾಹುವಿನ ಪ್ರಭಾವ ದುರ್ಬಲವಾಗಿದ್ದು, ಅನಗತ್ಯ ಧನಹಾನಿ ಮತ್ತು ಮಾನಸಿಕ ಒತ್ತಡ ಎದುರಾಗಬಹುದು ಎಂದು ಜ್ಯೋತಿಷ್ಯ ಹೇಳುತ್ತದೆ. ಇನ್ನು ಜರಿ ಗೋಡೆಯಿಂದ ಕೆಳಗೆ ಬಿದ್ದರೆ ಅಥವಾ ಮುಖ್ಯ ದ್ವಾರದ ಬಳಿ ಕಂಡರೆ, ಅದು ಆಸ್ಪತ್ರೆ ಖರ್ಚುಗಳು ಹೆಚ್ಚಾಗುವ ಮುನ್ಸೂಚನೆಯಾಗಿದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಜ್ಯೋತಿಷ್ಯ ಶಾಸ್ತ್ರದಲ್ಲಿ ಇರುವ ಅತ್ಯಂತ ಮುಖ್ಯವಾದ ನಿಯಮವೆಂದರೆ, ಮನೆಯೊಳಗೆ ಜರಿ ಕಂಡಾಗ ಅದನ್ನು ಯಾವುದೇ ಕಾರಣಕ್ಕೂ ಕೊಲ್ಲಬಾರದು. ಜರಿಯನ್ನು ರಾಹುವಿನ ರೂಪವೆಂದು ನಂಬುವುದರಿಂದ, ಅದನ್ನು ಸಾಯಿಸಿದರೆ ಜಾತಕದಲ್ಲಿ ರಾಹು ದೋಷ ಉಂಟಾಗಿ ಕಷ್ಟಗಳು ಮತ್ತು ಮಾನಸಿಕ ನೆಮ್ಮದಿ ಭಂಗವಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ, ಜರಿ ಕಂಡಾಗ ಅದನ್ನು ಕೊಲ್ಲದೆ ಜಾಗರೂಕತೆಯಿಂದ ಪೊರಕೆ ಅಥವಾ ಯಾವುದಾದರೂ ವಸ್ತುವಿನ ಸಹಾಯದಿಂದ ಯಾರಿಗೂ ಕಚ್ಚದಂತೆ ಮನೆಯಿಂದ ಹೊರಗೆ ಹಾಕುವುದು ಅತ್ಯುತ್ತಮ ಪರಿಹಾರವಾಗಿದೆ.

ಗಮನಿಸಿ: ಧಾರ್ಮಿಕ ಮತ್ತು ಜ್ಯೋತಿಷ್ಯ ನಂಬಿಕೆಗಳು ಏನೇ ಇದ್ದರೂ, ಜರಿ ಒಂದು ವಿಷಪೂರಿತ ಕೀಟವಾಗಿರುವುದರಿಂದ ಪ್ರಾಯೋಗಿಕವಾಗಿ ಎಚ್ಚರಿಕೆ ವಹಿಸುವುದು ಅಗತ್ಯ. ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ ಅಥವಾ ಸುರಕ್ಷತೆಯ ದೃಷ್ಟಿಯಿಂದ ಮನೆ ಸ್ವಚ್ಛವಾಗಿಟ್ಟುಕೊಂಡು ಜರಿಗಳು ಬರದಂತೆ ತಡೆಯುವುದು ಮುಖ್ಯ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:01 am, Tue, 16 June 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us