AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಮಕ್ಕಳ ಪರೀಕ್ಷಾ ಆತಂಕ ದೂರ ಮಾಡುವ ಶಕ್ತಿಶಾಲಿ ಮಂತ್ರವಿದು; ಜ್ಯೋತಿಷ್ಯ ಸಲಹೆ ಇಲ್ಲಿದೆ

ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಆತಂಕ ಸಾಮಾನ್ಯ. ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಜ್ಞಾಪಕಶಕ್ತಿ ಸುಧಾರಿಸಲು, ಗಣಪತಿ, ಸರಸ್ವತಿ ಮತ್ತು ಹಯಗ್ರೀವ ದೇವತೆಗಳ ಮಂತ್ರಗಳನ್ನು ಪ್ರತಿದಿನ ಪಠಿಸುವುದು ಉಪಯುಕ್ತ. ರಾತ್ರಿ ಜೇನುತುಪ್ಪವನ್ನಿಟ್ಟು ಬೆಳಿಗ್ಗೆ ಸೇವಿಸುವ ವಿಧಾನ, ಗೋವಿನ ದರ್ಶನ ಮತ್ತು ಗೋಮೂತ್ರ ಸ್ನಾನದಂತಹ ಸಲಹೆಗಳು ಯಶಸ್ಸಿಗೆ ಸಹಕಾರಿ ಎಂದು ಡಾ. ಬಸವರಾಜ್ ಗುರೂಜಿ ತಿಳಿಸಿದ್ದಾರೆ.

Daily Devotional: ಮಕ್ಕಳ ಪರೀಕ್ಷಾ ಆತಂಕ ದೂರ ಮಾಡುವ ಶಕ್ತಿಶಾಲಿ ಮಂತ್ರವಿದು; ಜ್ಯೋತಿಷ್ಯ ಸಲಹೆ ಇಲ್ಲಿದೆ
ಮಕ್ಕಳಲ್ಲಿ ಪರೀಕ್ಷಾ ಆತಂಕ
ಅಕ್ಷತಾ ವರ್ಕಾಡಿ
|

Updated on:Dec 09, 2025 | 10:12 AM

Share

ಮಕ್ಕಳ ವಿದ್ಯಾಭ್ಯಾಸ ಮತ್ತು ಅವರ ಪ್ರಗತಿ ಪ್ರತಿಯೊಬ್ಬ ಪೋಷಕರಿಗೂ ಒಂದು ಪ್ರಮುಖ ಗುರಿಯಾಗಿರುತ್ತದೆ. ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗಳಂತಹ ಪ್ರಮುಖ ಸಮಯದಲ್ಲಿ ಆತಂಕ, ದುಗುಡ ಮತ್ತು ಭಯಕ್ಕೆ ಒಳಗಾಗುವುದು ಸಹಜ. ಇಂತಹ ಸಂದರ್ಭಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಮತ್ತು ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳಲು ಸನಾತನ ಸಂಸ್ಕೃತಿಯಲ್ಲಿ ಕೆಲವು ಆಧ್ಯಾತ್ಮಿಕ ಮಾರ್ಗಗಳನ್ನು ಸೂಚಿಸಲಾಗಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ನೀಡಿರುವ ಮಾಹಿತಿ ಇಲ್ಲಿದೆ.

ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಧೈರ್ಯ ಮತ್ತು ಸ್ಥೈರ್ಯದಿಂದ ಇರಲು ವಿದ್ಯೆಯ ಅಧಿದೇವತೆಗಳಾದ ಗಣಪತಿ, ಸರಸ್ವತಿ ಮತ್ತು ಹಯಗ್ರೀವ ದೇವತೆಗಳನ್ನು ಸ್ಮರಿಸುವುದು ಉತ್ತಮ ಎಂದು ಗುರೂಜಿ ಹೇಳಿದ್ದಾರೆ. ಈ ದೇವತೆಗಳ ಸ್ಮರಣೆಯಿಂದ ಪರೀಕ್ಷೆಯಲ್ಲಿ ಹೆಚ್ಚಿನ ಯಶಸ್ಸು, ಧೈರ್ಯ ಮತ್ತು ಉತ್ತಮ ಆರೋಗ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ.

ವಿಡಿಯೋ ಇಲ್ಲಿದೆ ನೋಡಿ:

ಪರೀಕ್ಷೆ ಹತ್ತಿರ ಬಂದಾಗ ವಿದ್ಯಾರ್ಥಿಗಳು ಭಯಪಡುವ ಬದಲು ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಬೇಕು. ಇದಕ್ಕಾಗಿ ಪ್ರತಿದಿನ ಗಣಪತಿ, ಸರಸ್ವತಿ ಮತ್ತು ಹಯಗ್ರೀವ ದೇವತೆಗಳ ಬೀಜಾಕ್ಷರ ಮಂತ್ರಗಳನ್ನು ಪಠಿಸಬಹುದು. ಗಣಪತಿಗೆ ಓಂ ಗಂ ಗಣಪತಯೇ ನಮಃ ಮಂತ್ರವನ್ನೂ, ಸರಸ್ವತಿಗೆ ಓಂ ಐಂ ಸರಸ್ವತ್ಯೈ ನಮಃ ಮಂತ್ರವನ್ನೂ, ಮತ್ತು ಹಯಗ್ರೀವರಿಗೆ ಓಂ ಹಯಗ್ರೀವಾಯ ನಮಃ ಮಂತ್ರವನ್ನೂ ಪಠಿಸಬಹುದು. ಈ ಮಂತ್ರಗಳನ್ನು ಹೇಳಲು ಯಾವುದೇ ಸಂಕೀರ್ಣ ಸ್ತೋತ್ರಗಳ ಅಗತ್ಯವಿಲ್ಲ.

ಇದನ್ನೂ ಓದಿ: ವಾಸ್ತು ಪ್ರಕಾರ ಫ್ರಿಡ್ಜ್ ಮೇಲೆ ಈ ವಸ್ತುಗಳನ್ನು ಇಡಲೇಬಾರದು; ಸಮಸ್ಯೆ ತಪ್ಪಿದ್ದಲ್ಲ

ಈ ಮಂತ್ರಗಳ ಪಠನದ ಜೊತೆಗೆ ಒಂದು ವಿಶಿಷ್ಟ ಆಚರಣೆಯನ್ನು ಪಾಲಿಸಬಹುದಾಗಿದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ನಿಮ್ಮ ದೇವರ ಮನೆಯಲ್ಲಿ ವೀಳ್ಯದೆಲೆಯ ಮೇಲೆ ಒಂದು ಚೂರು ಶುದ್ಧ ಜೇನುತುಪ್ಪವನ್ನು ಇಡಬೇಕು. ನಂತರ ಓಂ ಗಂ ಗಣಪತಯೇ ನಮಃ, ಓಂ ಐಂ ಸರಸ್ವತ್ಯೈ ನಮಃ, ಓಂ ಹಯಗ್ರೀವಾಯ ನಮಃ ಎಂಬ ಮೂರು ಮಂತ್ರಗಳನ್ನು ಜಪಿಸಿ, ಆ ಜೇನುತುಪ್ಪವನ್ನು ದೇವರಿಗೆ ನೈವೇದ್ಯ ಮಾಡಿ, ಆರತಿಯನ್ನು ಮಾಡಬೇಕು. ಪ್ರಾರ್ಥನೆ ಸಲ್ಲಿಸಿದ ನಂತರ ಮಲಗಬೇಕು. ಮರುದಿನ ಬೆಳಿಗ್ಗೆ ಎದ್ದು ಕೈ-ಕಾಲು, ಮುಖ ತೊಳೆದುಕೊಂಡು ಅಥವಾ ಸ್ನಾನ ಮಾಡಿ, ಪ್ರಸಾದ ರೂಪದಲ್ಲಿ ಆ ಒಂದು ತೊಟ್ಟು ಜೇನುತುಪ್ಪವನ್ನು ನಾಲಿಗೆಗೆ ಸ್ಪರ್ಶಿಸಬೇಕು. ಈ ಅಭ್ಯಾಸದಿಂದ ಜ್ಞಾಪಕಶಕ್ತಿ ವೃದ್ಧಿಯಾಗಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿ ಪಡೆಯಲು ಸಹಕಾರಿಯಾಗುತ್ತದೆ ಎಂಬ ನಂಬಿಕೆ ಇದೆ.

ಪರೀಕ್ಷೆಗೆ ಮೂರು ದಿನ ಅಥವಾ ಇನ್ನಷ್ಟು ಹತ್ತಿರ ಬಂದಾಗ, ಸಾಧ್ಯವಾದರೆ ಗೋವಿನ ದರ್ಶನ ಮಾಡುವುದು ಕೂಡ ಶುಭವೆಂದು ಪರಿಗಣಿಸಲಾಗುತ್ತದೆ. ಗೋವಿಗೆ ಬೆಲ್ಲ, ಅಕ್ಕಿ ಅಥವಾ ಬಾಳೆಹಣ್ಣನ್ನು ನೀಡಿ, ಅದನ್ನು ಮುಟ್ಟಿಕೊಂಡು ಹೋದರೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ. ಅಲ್ಲದೆ, ಗೋಮೂತ್ರವನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸಿನ ಶುದ್ಧಿಯಾಗುತ್ತದೆ, ಇದು ಸ್ಮರಣಾಶಕ್ತಿ ಸುಧಾರಣೆಗೆ ಸಹಕಾರಿ ಎಂದು ಕೆಲವರು ನಂಬುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:11 am, Tue, 9 December 25