Financial Stress: ಇಎಂಐ ಮತ್ತು ಸಾಲದ ಹೊರೆಯಿಂದ ಕಂಗಾಲಾಗಿದ್ದೀರಾ? ಮಂಗಳವಾರ ಈ ಒಂದು ಕೆಲಸ ಮಾಡಿ

ಆಧುನಿಕ ಜೀವನದಲ್ಲಿ ಹೋಮ್ ಲೋನ್, ಪರ್ಸನಲ್ ಲೋನ್ ಮತ್ತು ಕ್ರೆಡಿಟ್ ಕಾರ್ಡ್ ಇಎಂಐಗಳಿಂದ ಉಂಟಾಗುವ ಆರ್ಥಿಕ ಬಿಕ್ಕಟ್ಟು ಮತ್ತು ಮಾನಸಿಕ ಒತ್ತಡಕ್ಕೆ 'ಋಣ ವಿಮೋಚನ ಅಂಗಾರಕ ಸ್ತೋತ್ರ' ಜ್ಯೋತಿಷ್ಯ ಪರಿಹಾರವಾಗಿದೆ. ಮಂಗಳವಾರದಂದು ಹನುಮಂತ ಮತ್ತು ಮಂಗಳ ಗ್ರಹಕ್ಕೆ ಸಮರ್ಪಿತವಾದ ಈ ಸ್ತೋತ್ರವನ್ನು ಭಕ್ತಿಯಿಂದ ಪಠಿಸುವುದರಿಂದ ಸಾಲದ ಹೊರೆ ಕಡಿಮೆಯಾಗಿ ಆರ್ಥಿಕ ಸ್ವಾತಂತ್ರ್ಯ ಮತ್ತು ಶಾಂತಿಯುತ ಜೀವನವನ್ನು ಪಡೆಯಬಹುದು.

Financial Stress: ಇಎಂಐ ಮತ್ತು ಸಾಲದ ಹೊರೆಯಿಂದ ಕಂಗಾಲಾಗಿದ್ದೀರಾ? ಮಂಗಳವಾರ ಈ ಒಂದು ಕೆಲಸ ಮಾಡಿ
ಸಾಲದ ಹೊರೆ
Image Credit source: Pinterest

Updated on: Jun 16, 2026 | 12:04 PM

ಇಂದಿನ ಆಧುನಿಕ ಜೀವನದಲ್ಲಿ ಹೋಮ್ ಲೋನ್​, ವೈಯಕ್ತಿಕ ಸಾಲ (Personal Loan), ಮತ್ತು ಕ್ರೆಡಿಟ್ ಕಾರ್ಡ್ ಇಎಂಐಗಳ ಸುಳಿಗೆ ಸಿಲುಕದವರೇ ಇಲ್ಲ. ಈ ಸಾಲದ ಕಂತುಗಳು ಕೇವಲ ಜೇಬಿಗೆ ಕತ್ತರಿ ಹಾಕುವುದು ಮಾತ್ರವಲ್ಲದೆ, ತೀವ್ರ ಮಾನಸಿಕ ಅಶಾಂತಿ ಮತ್ತು ಕೌಟುಂಬಿಕ ಒತ್ತಡಕ್ಕೂ ಕಾರಣವಾಗುತ್ತವೆ. ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಕಠಿಣ ಪರಿಶ್ರಮದ ಜೊತೆಗೆ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪರಿಹಾರಗಳ ಮೊರೆ ಹೋಗುವವರಿಗಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂದು ವಿಶೇಷ ಮಾರ್ಗವನ್ನು ಸೂಚಿಸಲಾಗಿದೆ. ಅದೇ ‘ಋಣ ವಿಮೋಚನ ಅಂಗಾರಕ ಸ್ತೋತ್ರ’.

ಸಾಲ ಪರಿಹಾರಕ್ಕೆ ಮಂಗಳವಾರದ ಮಹತ್ವ:

ಸನಾತನ ಸಂಪ್ರದಾಯದಲ್ಲಿ ಮಂಗಳವಾರವನ್ನು ಸಂಕಟಹರ ಹನುಮಂತ ಮತ್ತು ಮಂಗಳ ಗ್ರಹದ (ಕುಜ) ಪೂಜೆಗೆ ಅತ್ಯಂತ ಶ್ರೇಷ್ಠ ದಿನವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಜಾತಕದಲ್ಲಿ ಮಂಗಳ ಗ್ರಹವು ಅಶುಭ ಸ್ಥಾನದಲ್ಲಿದ್ದರೆ ಅಥವಾ ದುರ್ಬಲನಾಗಿದ್ದರೆ, ಆ ವ್ಯಕ್ತಿ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ ಮತ್ತು ಆರ್ಥಿಕ ನಷ್ಟಗಳನ್ನು ಅನುಭವಿಸುತ್ತಾನೆ. ಅಂತಹ ಸಂದರ್ಭಗಳಲ್ಲಿ ಹನುಮಂತನನ್ನು ಹಾಗೂ ಮಂಗಳ ದೇವನನ್ನು ಆರಾಧಿಸುವುದರಿಂದ ಜಾತಕದಲ್ಲಿನ ಕುಜ ದೋಷದ ನಕಾರಾತ್ಮಕ ಪ್ರಭಾವಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ.

ಋಣ ಮುಕ್ತಿ ಅಂಗಾರಕ ಸ್ತೋತ್ರದ ಶಕ್ತಿ:

‘ಋಣ ವಿಮೋಚನ ಅಂಗಾರಕ ಸ್ತೋತ್ರ’ ಅಥವಾ ‘ಋಣ ಮಂಗಳ ಮುಕ್ತಿ ಸ್ತೋತ್ರ’ವು ಆರ್ಥಿಕ ಸಂಕಷ್ಟಗಳನ್ನು ದೂರ ಮಾಡುವಲ್ಲಿ ಅತ್ಯಂತ ಪರಿಣಾಮಕಾರಿ ಎಂದು ನಂಬಲಾಗಿದೆ. ಹನುಮಂತ ಮತ್ತು ಮಂಗಳ ಗ್ರಹಕ್ಕೆ ಸಮರ್ಪಿತವಾಗಿರುವ ಈ ಸ್ತೋತ್ರವನ್ನು ಭಕ್ತಿಯಿಂದ ಪಠಿಸುವುದರಿಂದ ಸಾಲದ ಹೊರೆ ತ್ವರಿತವಾಗಿ ಕರಗುತ್ತದೆ, ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಮತ್ತು ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ ಎಂಬುದು ಭಕ್ತರ ದೃಢ ವಿಶ್ವಾಸವಾಗಿದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಸ್ತೋತ್ರ ಪಠಿಸುವ ಸರಿಯಾದ ವಿಧಾನ:

  • ಈ ಸಾಲ ವಿಮೋಚನಾ ಸ್ತೋತ್ರವನ್ನು ಪ್ರತಿದಿನ ಅಥವಾ ಕನಿಷ್ಠ ಪ್ರತಿ ಮಂಗಳವಾರದಂದಾದರೂ ನಿಯಮಬದ್ಧವಾಗಿ ಪಠಿಸಬೇಕು.
  • ಮುಂಜಾನೆ ಸ್ನಾನ ಮಾಡಿದ ನಂತರ, ಶುಚಿಯಾದ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಬೇಕು.
  • ಪೂಜಾ ಕೋಣೆಯಲ್ಲಿ ಕೆಂಪು ಆಸನದ ಮೇಲೆ ಕುಳಿತು ಹನುಮಂತನಿಗೆ ಮತ್ತು ಮಂಗಳ ದೇವನಿಗೆ ದೀಪ ಬೆಳಗಿ ಆರಾಧಿಸಬೇಕು.
  • ತದನಂತರ ಪೂರ್ಣ ಶ್ರದ್ಧೆಯಿಂದ ಈ ಅಂಗಾರಕ ಸ್ತೋತ್ರವನ್ನು ಕನಿಷ್ಠ 11 ಬಾರಿ ಪಠಿಸುವುದು ಒಳ್ಳೆಯದು.
  • ಹೆಚ್ಚಿನ ಫಲಿತಾಂಶಕ್ಕಾಗಿ ಈ ನಿಯಮವನ್ನು ಸತತವಾಗಿ 21 ಅಥವಾ 40 ದಿನಗಳವರೆಗೆ ನಿರಂತರವಾಗಿ ಪಾಲಿಸಲು ಸಲಹೆ ನೀಡಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us