AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lord Ganesha: ಈ ಗಣಪತಿ ದೇವಾಲಯಗಳಿಗೆ ಭೇಟಿ ನೀಡಿ ಗಣೇಶನ ದರ್ಶನ ಮಾಡಿದ್ರೆ ನಿಮ್ಮ ದುಃಖ ನಿವಾರಣೆಯಾಗಿ ಇಷ್ಟಾರ್ಥಗಳು ಈಡೇರುತ್ತವೆ

ಏಕದಂತ, ವಕ್ರತುಂಡ, ಗಣಮುಖ, ಸರ್ವ ವಿಘ್ನ ನಿವಾರಕ ಈ ರೀತಿ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಭಗವಾನ್ ಗಣೇಶ(Lord Ganesha)ನನ್ನು ಯಾವುದೇ ಶುಭ ಕಾರ್ಯಗಳನ್ನು ಆರಂಭಿಸುವ ಮುನ್ನ ಪ್ರಥಮ ಪೂಜಿತನಾಗಿ ಪೂಜಿಸಲಾಗುತ್ತೆ. ಸನಾತನ ಸಂಪ್ರದಾಯದ ಪ್ರಕಾರ, ಭಗವಾನ್ ಶ್ರೀ ಗಣೇಶನ ಆರಾಧನೆ ಮಾಡುವುದರಿಂದ ನಮ್ಮಲ್ಲಿರುವ ಎಲ್ಲಾ ದುಃಖ ಮತ್ತು ತೊಂದರೆಗಳು ನಿವಾರಣೆಯಾಗುತ್ತವೆ. ಹಾಗೂ ಸಂತೋಷ ಮತ್ತು ಅದೃಷ್ಟ ಬಲಿದು ಬರುತ್ತದೆ ಎನ್ನಲಾಗಿದೆ. ದೇಶದಲ್ಲಿ ಗಣೇಶನ ಅನೇಕ ಪ್ರಸಿದ್ಧ ದೇವಾಲಯಗಳಿವೆ. ಅಲ್ಲಿ ದೇಶ ಮತ್ತು ವಿದೇಶಗಳಿಂದ ಸಾವಿರಾರು ಮತ್ತು ಲಕ್ಷ ಭಕ್ತರು ದರ್ಶನಕ್ಕಾಗಿ ಪ್ರತಿದಿನ ಭೇಟಿ ನೀಡುತ್ತಾರೆ. ನೀವು ಕೂಡ ಐಶ್ವರ್ಯ ಮತ್ತು ಲಾಭದ ದೇವರು ಎಂದು ಪರಿಗಣಿಸಲ್ಪಟ್ಟಿರುವ ಗಣಪತಿಯ ಕೃಪೆಗೆ ಪಾತ್ರರಾಗಬೇಕಿದೆಯಾ? ಹಾಗಾದ್ರೆ ಇಲ್ಲಿವೆ ಗಣಪತಿಯ ಪ್ರಸಿದ್ದ ದೇವಾಲಯಗಳು.

TV9 Web
| Updated By: ಆಯೇಷಾ ಬಾನು|

Updated on:Feb 24, 2022 | 9:53 AM

Share
ಮಹಾರಾಷ್ಟ್ರದ ಅಷ್ಟವಿನಾಯಕ (Maharashtra Ashtavinayak Temple): ದೇಶದ ಪ್ರಸಿದ್ಧ ಗಣಪತಿ ದೇವಾಲಯಗಳಲ್ಲಿ ಮಹಾರಾಷ್ಟ್ರದ ಅಷ್ಟವಿನಾಯಕನಿಗೆ ಪ್ರಮುಖ ಸ್ಥಾನವಿದೆ. ದೇಶದಲ್ಲಿ ಶಿವನ ಆರಾಧನೆಗಾಗಿ 12 ಜ್ಯೋತಿರ್ಲಿಂಗಗಳು ಮತ್ತು ಶಕ್ತಿಯ ಆರಾಧನೆಗಾಗಿ 51 ಶಕ್ತಿಪೀಠಗಳು ಇವೆ, ಹಾಗೆಯೇ ಇವು ಗಣಪತಿಯ ಎಂಟು ಪವಿತ್ರ ಸ್ಥಳಗಳಾಗಿವೆ. ಮಹಾರಾಷ್ಟ್ರದಲ್ಲಿ 8 ಗಣೇಶನ ದೇವಾಲಯಗಳಿದ್ದು ಗಣಪತಿಯ ಭಕ್ತರು ಅಷ್ಟವಿನಾಯಕ ಎಂಬ ಹೆಸರಿನಿಂದ ಕರೆಯುತ್ತಾರೆ. ಪುಣೆಯ ಮಯೂರೇಶ್ವರ ದೇವಾಲಯ, ಅಹ್ಮದ್ ನಗರದ ಸಿದ್ಧಿವಿನಾಯಕ ದೇವಾಲಯ, ಪಾಲಿಯ ಬಲ್ಲಾಳೇಶ್ವರ ದೇವಾಲಯ, ರಾಯಗಢದ ವರದ್ವಿನಾಯಕ ದೇವಾಲಯ, ಪುಣೆಯ ಚಿಂತಾಮಣಿ ಮತ್ತು ಗಿರಿಜಾತ್ಮಜ್ ಅಷ್ಟವಿನಾಯಕ ದೇವಾಲಯ, ಓಝಾರ್‌ನ ವಿಘ್ನೇಶ್ವರ ಅಷ್ಟವಿನಾಯಕ ದೇವಾಲಯ ಮತ್ತು ರಾಜಗಾಂವ್‌ನ ಮಹಾಗಣಪತಿ ದೇವಾಲಯ.

Indias Most Visit and Famous miraculous temples

1 / 4
ಸಿದ್ಧಿವಿನಾಯಕ್, ಮುಂಬೈ(Siddhivinayak Temple Mumbai): ಸಿದ್ಧಿವಿನಾಯಕನ ದೇವಾಲಯವು ಮುಂಬೈನ ಪ್ರಭಾದೇವಿಯಲ್ಲಿದೆ. ಇದನ್ನು ಭಾರತದ ಆರ್ಥಿಕ ರಾಜಧಾನಿ ಎಂದು ಕರೆಯಲಾಗುತ್ತದೆ. ಗಣಪತಿಯ ಈ ಪವಿತ್ರ ದೇವಾಲಯವು ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರದ ಅಷ್ಟವಿನಾಯಕನಲ್ಲಿಲ್ಲದಿರುವುದಕ್ಕಿಂತ, ಈ ದೇವಾಲಯದ ಮಹಿಮೆ ದೇಶದ ಯಾವುದೇ ಪ್ರಸಿದ್ಧ ಗಣೇಶ ದೇವಾಲಯಗಳಿಗಿಂತ ಕಡಿಮೆಯಿಲ್ಲ. ಈ ಪುಣ್ಯ ಗಣಪತಿಯ ದರ್ಶನಕ್ಕೆ ದೇಶ-ವಿದೇಶಗಳಿಂದ ಅಪಾರ ಸಂಖ್ಯೆಯ ಭಕ್ತರು ಪ್ರತಿದಿನ ಆಗಮಿಸುತ್ತಾರೆ.

Indias Most Visit and Famous miraculous temples

2 / 4
ಖಜ್ರಾನಾದ ಪ್ರಸಿದ್ಧ ಗಣೇಶ ದೇವಾಲಯ(Khajrana Ganesh Temple): ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಖಜರಾನಾದ ಗಣಪತಿಯ ವೈಭವ ದೇಶ ವಿದೇಶಗಳಲ್ಲಿ ಹಬ್ಬಿದೆ. ಈ ಗಣಪತಿಯ ದೇವಸ್ಥಾನಕ್ಕೆ ಬರುವ ಭಕ್ತರು ಇಲ್ಲಿ ಕೇವಲ ಗಣಪತಿಯ ದರ್ಶನದಿಂದ ಎಲ್ಲಾ ದುಃಖಗಳು ದೂರವಾಗುತ್ತವೆ ಎಂದು ನಂಬುತ್ತಾರೆ. ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ನಿರ್ಮಿಸಿದ ಈ ದೇವಾಲಯಕ್ಕೆ ಭೇಟಿ ನೀಡುವ ಯಾವುದೇ ವ್ಯಕ್ತಿ ಗಣಪತಿಯ ಆಶೀರ್ವಾದವಿಲ್ಲದೆ ಹೋಗುವುದಿಲ್ಲ. ಶ್ರೀ ಗಣೇಶನು ರಿದ್ಧಿ-ಸಿದ್ಧಿಯೊಂದಿಗೆ ಇಲ್ಲಿ ಕುಳಿತಿದ್ದಾನೆ.

ಖಜ್ರಾನಾದ ಪ್ರಸಿದ್ಧ ಗಣೇಶ ದೇವಾಲಯ(Khajrana Ganesh Temple): ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಖಜರಾನಾದ ಗಣಪತಿಯ ವೈಭವ ದೇಶ ವಿದೇಶಗಳಲ್ಲಿ ಹಬ್ಬಿದೆ. ಈ ಗಣಪತಿಯ ದೇವಸ್ಥಾನಕ್ಕೆ ಬರುವ ಭಕ್ತರು ಇಲ್ಲಿ ಕೇವಲ ಗಣಪತಿಯ ದರ್ಶನದಿಂದ ಎಲ್ಲಾ ದುಃಖಗಳು ದೂರವಾಗುತ್ತವೆ ಎಂದು ನಂಬುತ್ತಾರೆ. ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ನಿರ್ಮಿಸಿದ ಈ ದೇವಾಲಯಕ್ಕೆ ಭೇಟಿ ನೀಡುವ ಯಾವುದೇ ವ್ಯಕ್ತಿ ಗಣಪತಿಯ ಆಶೀರ್ವಾದವಿಲ್ಲದೆ ಹೋಗುವುದಿಲ್ಲ. ಶ್ರೀ ಗಣೇಶನು ರಿದ್ಧಿ-ಸಿದ್ಧಿಯೊಂದಿಗೆ ಇಲ್ಲಿ ಕುಳಿತಿದ್ದಾನೆ.

3 / 4
ಆಂಧ್ರಪ್ರದೇಶದ ಗಣಪತಿ ದೇವಸ್ಥಾನ(Andhra Pradesh Ganesh Temple): ಆಂಧ್ರಪ್ರದೇಶದಲ್ಲಿರುವ ಈ ಗಣೇಶನ ದೇವಾಲಯವು ಪರ್ವತದ ಮಡಿಲಲ್ಲಿದೆ. ಸುಮಾರು 350 ವರ್ಷಗಳ ಹಿಂದೆ ವಿನಾಯಕ ಚತುರ್ಥಿ ಪೌಷ ಮಾಸದ ಶುಕ್ಲ ಚತುರ್ಥಿಯ ದಿನ ಗಣಪತಿ ಭಕ್ತನೊಬ್ಬ ವಿನಾಕಾರಣ ಪೂಜೆ ಮಾಡಿ ಜೈ ಸಿದ್ಧಿ ವಿನಾಯಕ ಎಂದು ನೆಲದ ಮೇಲೆ ಕೈ ಹಾಕಿದ ಎಂಬ ಪ್ರತೀತಿ ಇದೆ. ಆ ಕ್ಷಣವೇ ಸಿದ್ಧಿ ವಿನಾಯಕನ ವಿಗ್ರಹವು ಇಲ್ಲಿ ಕಾಣಿಸಿಕೊಂಡಿತು ಎಂದು ನಂಬಲಾಗಿದೆ. ನಂತರ ಗಣಪತಿ ಭಕ್ತರು ಇಲ್ಲೊಂದು ಮಂದಿರ ಕಟ್ಟಿ ಪೂಜಿಸುವ ಮೂಲಕ ಇಲ್ಲಿ ಸ್ಥಾಪಿಸಲಾಯಿತು. ಶ್ರೀ ಗಣೇಶನ ಈ ದೇವಾಲಯಕ್ಕೆ ಪ್ರತಿದಿನ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ.

ಆಂಧ್ರಪ್ರದೇಶದ ಗಣಪತಿ ದೇವಸ್ಥಾನ(Andhra Pradesh Ganesh Temple): ಆಂಧ್ರಪ್ರದೇಶದಲ್ಲಿರುವ ಈ ಗಣೇಶನ ದೇವಾಲಯವು ಪರ್ವತದ ಮಡಿಲಲ್ಲಿದೆ. ಸುಮಾರು 350 ವರ್ಷಗಳ ಹಿಂದೆ ವಿನಾಯಕ ಚತುರ್ಥಿ ಪೌಷ ಮಾಸದ ಶುಕ್ಲ ಚತುರ್ಥಿಯ ದಿನ ಗಣಪತಿ ಭಕ್ತನೊಬ್ಬ ವಿನಾಕಾರಣ ಪೂಜೆ ಮಾಡಿ ಜೈ ಸಿದ್ಧಿ ವಿನಾಯಕ ಎಂದು ನೆಲದ ಮೇಲೆ ಕೈ ಹಾಕಿದ ಎಂಬ ಪ್ರತೀತಿ ಇದೆ. ಆ ಕ್ಷಣವೇ ಸಿದ್ಧಿ ವಿನಾಯಕನ ವಿಗ್ರಹವು ಇಲ್ಲಿ ಕಾಣಿಸಿಕೊಂಡಿತು ಎಂದು ನಂಬಲಾಗಿದೆ. ನಂತರ ಗಣಪತಿ ಭಕ್ತರು ಇಲ್ಲೊಂದು ಮಂದಿರ ಕಟ್ಟಿ ಪೂಜಿಸುವ ಮೂಲಕ ಇಲ್ಲಿ ಸ್ಥಾಪಿಸಲಾಯಿತು. ಶ್ರೀ ಗಣೇಶನ ಈ ದೇವಾಲಯಕ್ಕೆ ಪ್ರತಿದಿನ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ.

4 / 4

Published On - 6:30 am, Wed, 23 February 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ