Kannada News » Spiritual » Kashi Vishwanath Temple: 6 Most Interesting Facts To Know About Kashi Vishwanath Temple in Varanasi
Kashi Vishwanath Temple: ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಬಗೆಗಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ
TV9kannada Web Team | Edited By: Sushma Chakre
Updated on: Jul 14, 2022 | 12:36 PM
ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನ ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. ಕಾಶಿಗೆ ಹೋಗಿ ಬಂದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಹೀಗಾಗಿಯೇ ಕಾಶಿ ಅನಾದಿ ಕಾಲದಿಂದಲೇ ಪ್ರಮುಖ ತೀರ್ಥಯಾತ್ರೆಯ ಕ್ಷೇತ್ರವಾಗಿದೆ. ಪವಿತ್ರವಾದ ಗಂಗಾನದಿ ಇರುವ ಈ ಸ್ಥಳದ ಬಗೆಗಿನ ಅನೇಕ ಕುತೂಹಲಕಾರಿ ಮಾಹಿತಿ ಇಲ್ಲಿದೆ.
Jul 14, 2022 | 12:36 PM
ಕಾಶಿಯಲ್ಲಿರುವ ಈ ಶಿವನ ದೇವಾಲಯವು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಹಾಗೇ, ವಾರಣಾಸಿಯಲ್ಲಿ ಅತಿ ಹೆಚ್ಚು ಜನರು ಭೇಟಿ ನೀಡುವ ದೇವಾಲಯವಾಗಿದೆ. ಕಾಶಿ ವಿಶ್ವನಾಥ ದೇವಾಲಯವು ಮೊಘಲರ ಆಳ್ವಿಕೆಯಲ್ಲಿ ಹಲವಾರು ಬಾರಿ ದಾಳಿಗೊಳಗಾಗಿದೆ. ಅಕ್ಬರ್ ಚಕ್ರವರ್ತಿಯು ರಾಜಾ ಮಾನ್ಸಿಂಗ್ಗೆ ಈ ದೇವಾಲಯ ಕಟ್ಟಲು ಅನುಮತಿ ನೀಡಿದ್ದ. ಆದರೆ, ಆತನ ಮರಿ ಮಗ ಔರಂಗಜೇಬ್ ತನ್ನ ಆಡಳಿತದ ಅವಧಿಯಲ್ಲಿ ಈ ದೇವಾಲಯವನ್ನು ಉರುಳಿಸಲು ಆದೇಶ ನೀಡಿದ್ದ. ಹಾಗೇ, ಈ ಸ್ಥಳದಲ್ಲಿ ಗ್ಯಾನವಾಪಿ ಮಸೀದಿಯನ್ನೂ ನಿರ್ಮಿಸಿದ.
1 / 7
ಕೊನೆಯ ಬಾರಿಗೆ ಮತ್ತೆ 1780ರಲ್ಲಿ ಕಾಶಿ ದೇವಾಲಯವನ್ನು ಪುನರ್ ನಿರ್ಮಿಸಿದಾಕೆ ಇಂದೋರ್ನ ರಾಣಿ ಅಹಲ್ಯಾ ಬಾಯಿ ಹೋಲ್ಕರ್. ಶಿವನು ರಾಣಿಯ ಕನಸಿನಲ್ಲಿ ಬಂದು ದೇವಸ್ಥಾನ ಮರು ನಿರ್ಮಾಣಕ್ಕೆ ಸೂಚನೆ ಕೊಟ್ಟ ಎಂಬ ಪ್ರತೀತಿ ಇದೆ. ನಂತರ ಇಂಧೋರ್ನ ಮಹಾರಾಜ ರಂಜಿತ್ ಸಿಂಗ್ ಕೂಡಾ ಈ ದೇವಾಲಯದ 4 ಚಿನ್ನದ ಕಂಬಗಳಿಗಾಗಿ ಸುಮಾರು 10 ಟನ್ನಷ್ಟು ಬಂಗಾರವನ್ನು ನೀಡಿದರು.
2 / 7
ಭೂಮಿಯು ರೂಪುಗೊಂಡಾದ ಮೇಲೆ ಸೂರ್ಯನ ಮೊದಲ ರಶ್ಮಿ ಬಿದ್ದಿದ್ದು ಕಾಶಿಯ ಮೇಲೆ ಎಂಬ ನಂಬಿಕೆ ಇದೆ. ಶಿವನು ಈ ದೇವಾಲಯದಲ್ಲಿ ಕೆಲ ಕಾಲ ನೆಲೆಸಿದ್ದ ಎನ್ನಲಾಗುತ್ತದೆ. ಇಡೀ ನಗರದ ಕಾವಲಾಗಿ ಈಗಲೂ ಶಿವ ನಿಂತಿದ್ದಾನೆ ಎಂಬ ನಂಬಿಕೆಯಿಂದಲೇ ಕಾಶಿಯನ್ನು ಶಿವ್ ಕಿ ನಗ್ರಿ ಎನ್ನಲಾಗುತ್ತದೆ. ಈ ದೇವಾಲಯದ ಮೇಲ್ಭಾಗದಲ್ಲಿ ಚಿನ್ನದ ಛಾತ್ರಾ ಇದೆ. ಇದರ ಸೌಂದರ್ಯದ ಹೊರತಾಗಿಯೂ ಛಾತ್ರಕ್ಕೆ ಅದರದೇ ಆದ ಪ್ರಾಮುಖ್ಯತೆ ಇದೆ.
3 / 7
ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿ ಪೂಜಿಸಲ್ಪಟ್ಟಿರುವ ಈ ದೇವಾಲಯವು ಹಿಂದೂಗಳಿಗೆ ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. ಶಿವನು ನಿಜವಾಗಿ ಇಲ್ಲಿ ಕೆಲವು ಕಾಲ ಇದ್ದನು ಎಂಬ ಜನಪ್ರಿಯ ನಂಬಿಕೆ ಇದೆ.
4 / 7
ದಾಖಲೆಗಳ ಪ್ರಕಾರ, ಕಾಶಿ ವಿಶ್ವನಾಥ ದೇವಾಲಯವು 1490ರಲ್ಲಿ ನಿರ್ಮಾಣವಾಗಿದೆ. ಕಾಶಿಯು ಅನೇಕ ರಾಜರ ಆಳ್ವಿಕೆಯಲ್ಲಿ ಪ್ರಸಿದ್ಧವಾಗಿತ್ತು. ಈ ದೇವಾಲಯಗಳನ್ನು ಮೊಘಲರು ಮತ್ತೆ ಮತ್ತೆ ಲೂಟಿ ಮಾಡಿದರು. ಮೂಲ ದೇವಾಲಯಗಳನ್ನು ಪುನರ್ನಿರ್ಮಿಸಲಾಯಿತು, ನಂತರ ನಾಶಪಡಿಸಲಾಯಿತು ಆಮೇಲೆ ಮತ್ತೆ ಪುನರ್ನಿರ್ಮಿಸಲಾಯಿತು.
5 / 7
ವಾರಾಣಸಿ 80ಕ್ಕೂ ಹೆಚ್ಚು ಘಾಟ್ಗಳನ್ನು ಹೊಂದಿದೆ. ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದವು ದಶಾಶ್ವಮೇಧ ಘಾಟ್, ಮಣಿಕರ್ಣಿಕಾ ಘಾಟ್, ಚೇತ್ ಸಿಂಗ್ ಘಾಟ್, ಸಿಂಧಿಯಾ ಘಾಟ್ ಮತ್ತು ಅಸ್ಸಿ ಘಾಟ್. ಇವುಗಳಲ್ಲಿ ಕೆಲವು ಘಾಟ್ಗಳು ಶವಸಂಸ್ಕಾರಕ್ಕೆ ಮಾತ್ರ ಮೀಸಲಾಗಿವೆ.
6 / 7
ಮಣಿಕರ್ಣಿಕಾ ಘಾಟ್ ಬಳಿ ಇರುವ ಕಾಲುದಾರಿಗಳು ಅತ್ಯಂತ ಅಧಿಕೃತ ಮತ್ತು ಸ್ಥಳೀಯ ಸ್ಮರಣಿಕೆಗಳು ಮತ್ತು ರೇಷ್ಮೆ ಪೂರೈಕೆಗೆ ಹೆಸರುವಾಸಿಯಾಗಿದೆ. ಆದರೆ ಈ ಘಾಟ್ನ ಅತ್ಯಂತ ಆಸಕ್ತಿದಾಯಕ ಸಂಗತಿಯೆಂದರೆ, ಇದು ಶವಸಂಸ್ಕಾರಕ್ಕಾಗಿ 24 ಗಂಟೆಗಳ ಕಾಲವೂ ತೆರೆದಿರುತ್ತದೆ. ಇದು ಶವಸಂಸ್ಕಾರಕ್ಕಾಗಿ ಅತ್ಯಂತ ಪವಿತ್ರವಾದ ಘಾಟ್ಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವುದರಿಂದ, ಸತ್ತವರಿಗೆ ಮೋಕ್ಷವನ್ನು ಪಡೆಯುವ ಸ್ಥಳವಾಗಿದೆ.