AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kumbh Sankranti 2025: ಈ ವರ್ಷ ಕುಂಭ ಸಂಕ್ರಾಂತಿ ಯಾವಾಗ? ಈ ದಿನದ ಮಹತ್ವ, ಪೂಜಾ ವಿಧಾನ ಇಲ್ಲಿದೆ

ಹಿಂದೂ ಧರ್ಮದಲ್ಲಿ ಕುಂಭ ಸಂಕ್ರಾಂತಿಗೆ ವಿಶೇಷ ಮಹತ್ವವಿದೆ. ಈ ವರ್ಷ ಫೆಬ್ರವರಿ 13 ರಂದು ಕುಂಭ ಸಂಕ್ರಾಂತಿ ಬಂದಿದೆ. ಈ ದಿನ ಪವಿತ್ರ ನದಿಯಲ್ಲಿ ಸ್ನಾನ, ಸೂರ್ಯನಿಗೆ ಅರ್ಪಣೆ, ಪೂಜೆ ಮತ್ತು ದಾನ ಮಾಡುವುದು ಮಂಗಳಕರ ಎಂದು ಪರಿಗಣಿಸಲಾಗಿದೆ. ಪುಣ್ಯಕಾಲ ಮತ್ತು ಮಹಾಪುಣ್ಯಕಾಲದ ಸಮಯಗಳನ್ನು ತಿಳಿದುಕೊಳ್ಳುವುದು ಮುಖ್ಯ. ದಾನ ಮಾಡುವುದರಿಂದ ಪುಣ್ಯ ಲಭಿಸುತ್ತದೆ ಎಂದು ನಂಬಲಾಗಿದೆ.

Kumbh Sankranti 2025: ಈ ವರ್ಷ ಕುಂಭ ಸಂಕ್ರಾಂತಿ ಯಾವಾಗ? ಈ ದಿನದ ಮಹತ್ವ, ಪೂಜಾ ವಿಧಾನ ಇಲ್ಲಿದೆ
Kumbh Sankranti
ಅಕ್ಷತಾ ವರ್ಕಾಡಿ
|

Updated on: Jan 23, 2025 | 7:30 AM

Share

ಹಿಂದೂ ಧರ್ಮದಲ್ಲಿ ಕುಂಭ ಸಂಕ್ರಾಂತಿಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ದಿನ ಸ್ನಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಸೂರ್ಯನು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸಿದ ನಂತರ ಕುಂಭ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಫಾಲ್ಗುಣ ಮಾಸದಲ್ಲಿ ಸೂರ್ಯನು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ವರ್ಷ ಕುಂಭ ಸಂಕ್ರಾಂತಿ ಯಾವಾಗ ಎಂದು ಇಲ್ಲಿ ತಿಳಿದುಕೊಳ್ಳಿ.

ಈ ವರ್ಷ ಕುಂಭ ಸಂಕ್ರಾಂತಿ ಯಾವಾಗ?

ಈ ವರ್ಷ ಸೂರ್ಯನು ಫೆಬ್ರವರಿ 12 ರಂದು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಫೆಬ್ರವರಿ 12 ರಂದು ರಾತ್ರಿ 10:03 ಕ್ಕೆ ಸೂರ್ಯನು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಉದಯತಿಥಿ ಪ್ರಕಾರ ಈ ವರ್ಷ ಕುಂಭ ಸಂಕ್ರಾಂತಿಯನ್ನು ಫೆಬ್ರವರಿ 13 ರಂದು ಆಚರಿಸಲಾಗುವುದು.

ಕುಂಭ ಸಂಕ್ರಾಂತಿಯಂದು ಪುಣ್ಯ ಮತ್ತು ಮಹಾ ಪುಣ್ಯ ಕಾಲ:

ಪಂಚಾಂಗದ ಪ್ರಕಾರ ಕುಂಭ ಸಂಕ್ರಾಂತಿಯ ದಿನ ಮಧ್ಯಾಹ್ನ 12.36ಕ್ಕೆ ಪುಣ್ಯ ಕಾಲ ಆರಂಭವಾಗಲಿದೆ. ಈ ಶುಭ ಮುಹೂರ್ತ ಸಂಜೆ 6:10ಕ್ಕೆ ಮುಕ್ತಾಯವಾಗಲಿದೆ. ಈ ದಿನ ಸಂಜೆ 4.19ಕ್ಕೆ ಮಹಾ ಪುಣ್ಯ ಕಾಲ ಆರಂಭವಾಗಲಿದೆ. ಸಂಜೆ 6.10ಕ್ಕೆ ಈ ಮಹಾಶುಭ ಮುಹೂರ್ತ ನಡೆಯಲಿದೆ. ಈ ಬಾರಿಯ ಕುಂಭ ಸಂಕ್ರಾಂತಿಯಂದು ಪುಣ್ಯ ಕಾಲ 5 ಗಂಟೆ 34 ನಿಮಿಷಗಳು, ಮಹಾಪುಣ್ಯ ಕಾಲ 2 ಗಂಟೆ 51 ನಿಮಿಷಗಳು.

ಕುಂಭ ಸಂಕ್ರಾಂತಿಯಂದು ಪೂಜಾ ವಿಧಾನ:

  • ಕುಂಭ ಸಂಕ್ರಾಂತಿಯ ದಿನದಂದು ಬ್ರಹ್ಮ ಮುಹೂರ್ತದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡಬೇಕು. ಹಾಗೆ ಮಾಡಲು ಸಾಧ್ಯವಾಗದಿದ್ದರೆ ಮನೆಯಲ್ಲಿ ಸ್ನಾನದ ನೀರಿನಲ್ಲಿ ಗಂಗಾಜಲವನ್ನು ಬೆರೆಸಿ ಸ್ನಾನ ಮಾಡಬೇಕು.
  • ಸ್ನಾನದ ನಂತರ ಗಂಗಾಜಲ ಮತ್ತು ಎಳ್ಳನ್ನು ನೀರಿನಲ್ಲಿ ಬೆರೆಸಿ ಸೂರ್ಯನಿಗೆ ಅರ್ಪಿಸಬೇಕು.
  • ಇದರ ನಂತರ, ಸೂರ್ಯ ದೇವನ ಮಂತ್ರಗಳನ್ನು ಪಠಿಸಬೇಕು.
  • ಇದಾದ ನಂತರ ಮನೆಯ ದೇವಸ್ಥಾನದಲ್ಲಿ ದೀಪ ಹಚ್ಚಬೇಕು.
  • ಪೂಜೆಯ ನಂತರ, ಒಬ್ಬ ನಿರ್ಗತಿಕ ವ್ಯಕ್ತಿ ಅಥವಾ ಅರ್ಚಕನಿಗೆ ದಾನ ಮಾಡಬೇಕು.

ಇದನ್ನೂ ಓದಿ: ಮಹಾಕುಂಭದ ಕೊನೆಯ ಸ್ನಾನ ಯಾವಾಗ, ಈ ದಿನದ ವಿಶೇಷತೆ ಏನು?

ಕುಂಭ ಸಂಕ್ರಾಂತಿಯ ದಿನದ ದಾನದ ಮಹತ್ವ:

ಕುಂಭ ಸಂಕ್ರಾಂತಿಯಂದು ದಾನವನ್ನೂ ಮಾಡಲಾಗುತ್ತದೆ. ಕುಂಭ ಸಂಕ್ರಾಂತಿಯ ದಿನದಂದು ಪುಣ್ಯಕಾಲ ಅಥವಾ ಮಹಾಪುಣ್ಯಕಾಲದಲ್ಲಿ ದಾನ ಮಾಡಬೇಕು. ಈ ದಿನದಂದು ಬಡವರು ಮತ್ತು ನಿರ್ಗತಿಕರಿಗೆ ಬಟ್ಟೆ, ಆಹಾರ ಮತ್ತು ಹೊದಿಕೆಗಳನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಡಿಎಂಕೆ ಪರ ನಿಂತ ಕಾಂಗ್ರೆಸ್ ವಿರುದ್ಧ ಜೆಡಿಎಸ್​​ ಕಿಡಿ: ಕಾರಣ ಇಲ್ಲಿದೆ
ಡಿಎಂಕೆ ಪರ ನಿಂತ ಕಾಂಗ್ರೆಸ್ ವಿರುದ್ಧ ಜೆಡಿಎಸ್​​ ಕಿಡಿ: ಕಾರಣ ಇಲ್ಲಿದೆ
ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
ಜೋಧ್​ಪುರದ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ
ಜೋಧ್​ಪುರದ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ
ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ
‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ
‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ
ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು! ಹೇಗೆ ಗೊತ್ತಾ?
ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು! ಹೇಗೆ ಗೊತ್ತಾ?