AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hindu Rituals: ಶುಭಕಾರ್ಯಗಳಲ್ಲಿ ಪುರುಷರು ಭುಜದ ಮೇಲೆ ಶಾಲು ಧರಿಸುವುದೇಕೆ? ಇದರ ಹಿಂದಿನ ಆಧ್ಯಾತ್ಮಿಕ ರಹಸ್ಯ ಇಲ್ಲಿದೆ

ಪೂಜೆ, ಹೋಮ, ವಿವಾಹದಂತಹ ಶುಭಕಾರ್ಯಗಳಲ್ಲಿ ಪುರುಷರು ಭುಜದ ಮೇಲೆ ಅಂಗವಸ್ತ್ರ(ಶಾಲು) ಧರಿಸುವುದು ಅನಾದಿಕಾಲದಿಂದಲೂ ಬಂದ ಸಂಪ್ರದಾಯ. ಇದು ಸಂಕಲ್ಪ, ಏಕಾಗ್ರತೆ, ಮನಸ್ಸಿನ ನಿರ್ಮಲತೆ ಹಾಗೂ ಸಕಾರಾತ್ಮಕ ಶಕ್ತಿಯ ಸಂಕೇತವಾಗಿದೆ. ಬಿಳಿ ಮತ್ತು ಕೇಸರಿ ಬಣ್ಣದ ಅಂಗವಸ್ತ್ರಗಳಿಗೆ ತನ್ನದೇ ಆದ ಮಹತ್ವವಿದೆ. ಈ ವಸ್ತ್ರವು ಸಾತ್ವಿಕ ಗುಣಗಳನ್ನು ವೃದ್ಧಿಸಿ ಭಕ್ತಿ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ಡಾ. ಬಸವರಾಜ್ ಗುರೂಜಿ ತಿಳಿಸಿದ್ದಾರೆ.

Hindu Rituals: ಶುಭಕಾರ್ಯಗಳಲ್ಲಿ ಪುರುಷರು ಭುಜದ ಮೇಲೆ ಶಾಲು ಧರಿಸುವುದೇಕೆ? ಇದರ ಹಿಂದಿನ ಆಧ್ಯಾತ್ಮಿಕ ರಹಸ್ಯ ಇಲ್ಲಿದೆ
ಅಂಗವಸ್ತ್ರImage Credit source: Pinterest
ಅಕ್ಷತಾ ವರ್ಕಾಡಿ
|

Updated on: Mar 10, 2026 | 11:05 AM

Share

ಅನಾದಿಕಾಲದಿಂದಲೂ ಪೂಜಾ ಸಮಯ, ಹೋಮ, ಹವನ, ವಿವಾಹ ಹಾಗೂ ಇತರ ಶುಭಕಾರ್ಯಗಳಲ್ಲಿ ಪುರುಷರು ಭುಜದ ಮೇಲೆ ಅಂಗವಸ್ತ್ರ(ಶಾಲು) ವನ್ನು ಧರಿಸುತ್ತಾ ಬಂದಿದ್ದಾರೆ. ಇದು ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿರುವ ಒಂದು ಸಾಂಸ್ಕೃತಿಕ ಸಂಪ್ರದಾಯವಾಗಿದೆ. ಶುಭಕಾರ್ಯಕ್ಕೆ ಸಿದ್ಧರಾಗಿದ್ದೇವೆ ಎಂಬುದರ ಸಂಕೇತವಾಗಿ ಈ ವಸ್ತ್ರವನ್ನು ಧರಿಸಲಾಗುತ್ತದೆ. ಇದು ನಾವು ಒಂದು ಸಂಕಲ್ಪವನ್ನು ತೊಟ್ಟಿದ್ದೇವೆ, ವ್ರತಧಾರಿಗಳಾಗಿದ್ದೇವೆ ಮತ್ತು ಒಂದು ನಿರ್ದಿಷ್ಟ ಗುರಿಯನ್ನು ಹೊಂದಿದ್ದೇವೆ ಎಂಬುದರ ಸೂಚಕವಾಗಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ

ಗುರೂಜಿಯವರು ಹೇಳುವಂತೆ, ಅಂಗವಸ್ತ್ರವು ಕೇವಲ ಸಾಂಪ್ರದಾಯಿಕ ಸಂಕೇತವಲ್ಲ. ಭುಜದ ಮೇಲೆ ಧರಿಸುವ ಈ ವಸ್ತ್ರವು ಸೂರ್ಯ ಮತ್ತು ಚಂದ್ರರ ಶಕ್ತಿಯನ್ನು ಜಾಗೃತಗೊಳಿಸುತ್ತದೆ ಎಂದು ನಂಬಲಾಗಿದೆ. ಕಾರ್ಯಕ್ರಮಗಳಲ್ಲಿ ಅಂಗವಸ್ತ್ರವನ್ನು ಧರಿಸಿ ಕುಳಿತಾಗ, ಅದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ, ಶಿಸ್ತನ್ನು ವೃದ್ಧಿಸುತ್ತದೆ. ಇದರಿಂದ ಮನಸ್ಸು ನಿರ್ಮಲವಾಗಿ ಉಳಿಯುತ್ತದೆ ಮತ್ತು ಚಂಚಲತೆ ಕಡಿಮೆಯಾಗುತ್ತದೆ. ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ದೇವರ ಗುಡಿಯ ಮುಂದೆ ಅಂಗವಸ್ತ್ರ ಧರಿಸಿ ಕುಳಿತಾಗ, ನಮಗರಿವಿಲ್ಲದಂತೆಯೇ ಸಾತ್ವಿಕ ಗುಣಗಳು ನಮ್ಮಲ್ಲಿ ಹೆಚ್ಚು ಪ್ರಕಟವಾಗುತ್ತವೆ.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ಅಂಗವಸ್ತ್ರದ ಬಣ್ಣಗಳಿಗೂ ವಿಶೇಷ ಮಹತ್ವವಿದೆ. ಬಿಳಿಯ ವಸ್ತ್ರವು ಚಂದ್ರನ ಸಂಕೇತವಾಗಿದೆ, ಇದು ಶುಭ್ರತೆ ಮತ್ತು ಶಾಂತಿಯನ್ನು ಸೂಚಿಸುತ್ತದೆ. ಕೇಸರಿ ವಸ್ತ್ರವು ಕುಜನ ಸಂಕೇತವಾಗಿದೆ. ಕೆಲವು ನಿರ್ದಿಷ್ಟ ಕಾರ್ಯಕ್ರಮಗಳಲ್ಲಿ ಕೆಂಪು ಅಥವಾ ಕೇಸರಿ ವಸ್ತ್ರವನ್ನು ಧರಿಸುವ ಪದ್ಧತಿ ಇದೆ. ಆದರೆ ಸಾಮಾನ್ಯವಾಗಿ, ಎಲ್ಲಾ ಶುಭಕಾರ್ಯಗಳಲ್ಲೂ ಬಿಳಿಯ ವಸ್ತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತದೆ, ಏಕೆಂದರೆ ಬಿಳಿ ಬಣ್ಣವನ್ನು ಶುಭ್ರ ಮತ್ತು ಪವಿತ್ರ ಬಣ್ಣವೆಂದು ಪರಿಗಣಿಸಲಾಗುತ್ತದೆ.

ಹೋಮ, ಹವನ, ಪೂಜೆ ಮತ್ತು ಇತರ ಶುಭಕಾರ್ಯಗಳಲ್ಲಿ ಅಂಗವಸ್ತ್ರವನ್ನು ಧರಿಸಿದಾಗ, ಅದು ಕೇವಲ ಪೂಜೆಗೆ ಕುಳಿತುಕೊಳ್ಳುವವರಿಗೆ ಮಾತ್ರವಲ್ಲದೆ, ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವವರಿಗೂ ಅನುಕೂಲಕರವಾಗಿರುತ್ತದೆ. ಇದು ಏಕಾಗ್ರತೆ, ಶಕ್ತಿ ಮತ್ತು ಭಕ್ತಿಯನ್ನು ತರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us