AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವರಾತ್ರಿ 2021: ಸಿದ್ಧಿದಾತ್ರಿ ದೇವಿಯ ಆರಾಧನೆ, ಪೂಜೆಗೆ ಇಲ್ಲಿದೆ ಮಂತ್ರ

Navratri 2021: ಇವಳು ಕಮಲದ ಮೇಲೆ ಕುಳಿತಿದ್ದಾಳೆ, ಸಿದ್ಧಿದಾತ್ರಿಗೆ ಚತುರ್ಭುಜಗಳಿವೆ, ಮೇಲಿನ ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಖ ಹಿಡಿದಿದ್ದಾಳೆ, ಕೆಳಗಿನ ಬಲಗೈಯಲ್ಲಿ ಗದೆ, ಎಡಗೈಯಲ್ಲಿ ಕಮಲವಿದೆ. ಸಿದ್ಧಿದಾತ್ರಿ ಮಹಾಲಕ್ಷ್ಮೀಯ ಸ್ವರೂಪ.

ನವರಾತ್ರಿ 2021: ಸಿದ್ಧಿದಾತ್ರಿ ದೇವಿಯ ಆರಾಧನೆ, ಪೂಜೆಗೆ ಇಲ್ಲಿದೆ ಮಂತ್ರ
ಸಿದ್ಧಿದಾತ್ರಿ
TV9 Web
| Updated By: shivaprasad.hs|

Updated on:Oct 15, 2021 | 7:32 AM

Share

ನವರಾತ್ರಿಯ ಕೊನೆಯ ದಿನ ಸಿದ್ಧಿದಾತ್ರಿ ಆರಾಧನೆಗೆ ಪ್ರಶಸ್ತವಾದ ದಿನ. ನವದುರ್ಗೆಯರಲ್ಲಿ ಸಿದ್ಧಿದಾತ್ರಿ ಕೊನೆಯವಳು. ಮಾರ್ಕಂಡೇಯ ಪುರಾಣದ ಪ್ರಕಾರ, ಸಿದ್ಧಿದಾತ್ರಿ ಎಲ್ಲ ರೀತಿಯ ಸಿದ್ಧಿಗಳನ್ನು ಕರುಣಿಸುವವಳು. ಆದ್ದರಿಂದಲೇ ಇವಳನ್ನು ಸಿದ್ಧಿದಾತ್ರಿ ಎನ್ನಲಾಗುತ್ತೆ. ನವಮಿ ದಿನವು ನವರಾತ್ರಿ ಹಬ್ಬದ ಕೊನೆಯ ದಿನವಾಗಿದೆ. ಈ ದಿನ ಸಿದ್ಧಿದಾತ್ರಿ ದೇವಿಯ ಆರಾಧನೆ ಮೂಲಕ ನವರಾತ್ರಿ ಮುಕ್ತಾಯವಾಗುತ್ತೆ.

ಇವಳು ಕಮಲದ ಮೇಲೆ ಕುಳಿತಿದ್ದಾಳೆ, ಸಿದ್ಧಿದಾತ್ರಿಗೆ ಚತುರ್ಭುಜಗಳಿವೆ, ಮೇಲಿನ ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಖ ಹಿಡಿದಿದ್ದಾಳೆ, ಕೆಳಗಿನ ಬಲಗೈಯಲ್ಲಿ ಗದೆ, ಎಡಗೈಯಲ್ಲಿ ಕಮಲವಿದೆ. ಸಿದ್ಧಿದಾತ್ರಿ ಮಹಾಲಕ್ಷ್ಮೀಯ ಸ್ವರೂಪ. ಭಕ್ತಿಯಿಂದ ಈ ದೇವಿಯ ಬಳಿ ಬೇಡಿದ್ರೆ ಪ್ರಸನ್ನಳಾಗಿ ವರ ಕೊಡ್ತಾಳೆ ಎಂಬ ನಂಬಿಕೆ ಇದೆ. ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರಿಯನ್ನು ಮಂತ್ರ ಸಹಿತವಾಗಿ ಪೂಜಿಸುವುದು ಶ್ರೇಯಸ್ಕರ ಎನ್ನಲಾಗುತ್ತೆ.

ಸಿದ್ಧಿದಾತ್ರಿ ಮಂತ್ರ ಸಿದ್ಧಗಂಧರ್ವ ಯಕ್ಷಾದ್ಯೈಹಸುರೈಹಮರೈಹಪಿ ಸೇವ್ಯಮಾನಾ ಸದಾ ಭೂಯಾತ್‌ ಸಿದ್ಧಿದಾ ಸಿದ್ಧಿದಾಯಿನೀ ಪ್ರತಿಯೊಬ್ಬ ಮನುಷ್ಯನೂ ತಾಯಿ ಸಿದ್ಧಿದಾತ್ರಿಯ ಕೃಪೆ ಪಡೆಯಲು ನಿರಂತರ ಪ್ರಯತ್ನ ಮಾಡಬೇಕು. ಈ ದೇವಿಯ ಉಪಾಸನೆಯಿಂದ ಭಕ್ತರ, ಸಾಧಕರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ಸಿದ್ಧಿದಾತ್ರಿ ಪೂಜೆ ವಿಧಾನ ಈ ದಿನದಂದು ಭಕ್ತರು ಬೇಗ ಎದ್ದು ಸ್ನಾನ ಮಾಡಿ ಶುದ್ಧ ಬಟ್ಟೆಗಳನ್ನು ಧರಿಸಿ ದೇವಿಯ ವಿಗ್ರಹವನ್ನು ಕಲಶದ ಬಳಿ ಇರಿಸಬೇಕು. ದೇವಿಗೆ ಎಲೆ ಅಡಿಕೆ ಅರ್ಪಿಸಬೇಕು. ಹೂವುಗಳು ಅದರಲ್ಲೂ ಗುಲಾಬಿ ಹೂವು ತಾಯಿಗೆ ಇಷ್ಟ. ವಿಗ್ರಹದ ಮುಂದೆ ತುಪ್ಪದ ದೀಪ ಬೆಳಗಿಸಿ ಶ್ರೀ ದುರ್ಗಾ ಸಪ್ತಶತಿ, ಸಿದ್ಧಿದಾತ್ರಿ ದೇವಿಯ ಮಂತ್ರಗಳನ್ನು ಪಠಿಸಬೇಕು. ತಾಯಿಗೆ ಆರತಿ ಮಾಡಿ ಪೂಜೆ ಪೂರ್ಣಗೊಳಿಸಿ. ಬೆಳಿಗ್ಗೆ ಹಾಗೂ ಸಂಜೆ ದೇವಿಗೆ ಭೋಗವನ್ನು ನೀಡಲಾಗುತ್ತದೆ. ಅನೇಕ ಭಕ್ತರು ಈ ದಿನ ಹವನ ಮಾಡುತ್ತಾರೆ. ಕೆಲವರು ಉಪವಾಸ ಮಾಡುತ್ತಾರೆ. ಇನ್ನು ಈ ದಿನ ಕನ್ಯಾ ಪೂಜೆಯನ್ನು ಕೂಡ ಮಾಡಲಾಗುತ್ತದೆ.

ಸಿದ್ಧಿದಾತ್ರಿ ಪೂಜೆಯ ಫಲಗಳು * ಈಕೆ ಸರ್ವಸಿದ್ಧಿಗಳನ್ನು ಕೊಡುವ ದೇವಿ * ಇವಳ ಆರಾಧನೆಯಿಂದ ಅಷ್ಟಸಿದ್ಧಿಗಳು ಪ್ರಾಪ್ತಿ * ಇವಳ ಪೂಜೆ ಮಾಡಿದ್ರೆ ರಕ್ಷಣೆ ಸಿಗುತ್ತೆ * ಸರ್ವಕಾರ್ಯಗಳಲ್ಲೂ ವಿಜಯ ಪ್ರಾಪ್ತಿಯಾಗುತ್ತೆ * ದುಃಖವನ್ನು ದೂರ ಮಾಡ್ತಾಳೆ * ಸುಖ ಭೋಗಗಳನ್ನು ಕರುಣಿಸ್ತಾಳೆ * ಮೋಕ್ಷ ದಯ ಪಾಲಿಸ್ತಾಳೆ ನವರಾತ್ರಿಯಲ್ಲಿ ನವದುರ್ಗೆಯರನ್ನು ಪೂಜಿಸುವ ಪದ್ಧತಿ ಅತ್ಯಂತ ವಿಶೇಷ. ಒಂಬತ್ತು ದಿನಗಳ ಕಾಲ ಒಂಬತ್ತು ದೇವಿಯರ ಪೂಜೆಯನ್ನು ನಿಷ್ಟೆಯಿಂದ ಮಾಡಿದ್ರೆ ಯಶಸ್ಸು ಸಿಗೋದು ಖಚಿತ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಮಹಾನ್ ಶಕ್ತಿ ಸ್ವರೂಪಿಣಿಯರ ಆಶೀರ್ವಾದ ನಮ್ಮ ಮೇಲಿದ್ರೆ ಜೀವನದಲ್ಲಿ ಕಷ್ಟಗಳು ಎದುರಾಗಲ್ಲ, ಶತ್ರುಗಳ ಭಯವಿರಲ್ಲ, ಸಾಧನೆಗೆ ಬೇಕಾದ ಶಕ್ತಿ ದೊರೆಯುತ್ತೆ ಅನ್ನೋ ನಂಬಿಕೆ ಅನಾದಿಕಾಲದಿಂದಲೂ ಇದೆ.

ಇದನ್ನೂ ಓದಿ: ನವರಾತ್ರಿ 2021 ಎಂಟನೇ ದಿನ: ಈ ದಿನ ಸಾಕ್ಷಾತ್ ಪರಮೇಶ್ವರನಿಗೆೇ ಶಕ್ತಿ ನೀಡಿದ ಮಹಾನ್ ತಾಯಿಯನ್ನು ಆರಾಧಿಸಲಾಗುತ್ತೆ

Published On - 7:23 am, Fri, 15 October 21

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ