AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವರಾತ್ರಿ 2021 ಎಂಟನೇ ದಿನ: ಈ ದಿನ ಸಾಕ್ಷಾತ್ ಪರಮೇಶ್ವರನಿಗೆೇ ಶಕ್ತಿ ನೀಡಿದ ಮಹಾನ್ ತಾಯಿಯನ್ನು ಆರಾಧಿಸಲಾಗುತ್ತೆ

Navratri 2021: ಚತುರ್ಭುಜಗಳುಳ್ಳ ಮಹಾಗೌರಿ ಅಭಯಮುದ್ರೆ, ತ್ರಿಶೂಲ, ಡಮರುಗ, ವರಮುದ್ರೆ ಸ್ವರೂಪಿ. ನೋಡಲು ಸುಂದರರೂಪಿಯಾಗಿ ಕಾಣ್ತಾಳೆ. ಮಹಾಗೌರಿ ಶುಂಭ-ನಿಶುಂಭರ ವಧೆ ಮಾಡಿ, ದೇವಾನುದೇವತೆಗಳನ್ನು ರಕ್ಷಿಸ್ತಾಳೆ.

ನವರಾತ್ರಿ 2021 ಎಂಟನೇ ದಿನ: ಈ ದಿನ ಸಾಕ್ಷಾತ್ ಪರಮೇಶ್ವರನಿಗೆೇ ಶಕ್ತಿ ನೀಡಿದ ಮಹಾನ್ ತಾಯಿಯನ್ನು ಆರಾಧಿಸಲಾಗುತ್ತೆ
ಮಹಾಗೌರಿ
TV9 Web
| Edited By: |

Updated on: Oct 14, 2021 | 7:23 AM

Share

ನವದುರ್ಗೆಯರಲ್ಲಿ ಮಹಾಗೌರಿಯದ್ದು ಎಂಟನೇ ರೂಪ. ಈಕೆ ಸಾಕ್ಷಾತ್ ಪರಮೇಶ್ವರನಿಗೆೇ ಶಕ್ತಿ ನೀಡಿದ ಮಹಾನ್ ತಾಯಿ. ಪಾರ್ವತಿಯ ರೂಪದಲ್ಲಿ ಶಿವನನ್ನು ಪತಿಯಾಗಿ ಪಡೆಯಲು ತಪಸ್ಸು ಮಾಡಿದ್ದಳು. ಮಹಾಗೌರಿಯನ್ನು ಆದಿಶಕ್ತಿಯ ಪ್ರತಿರೂಪ ಎನ್ನಲಾಗುತ್ತೆ.

ಈ ದೇವಿಯ ರೂಪ ಅತ್ಯಂತ ವಿಶೇಷ. ಶಾಂತ ಸ್ವರೂಪಿಯಾದ ಈಕೆ ವೃಷಭವಾಹನೆ. ಶ್ವೇತವರ್ಣೆಯಾಗಿ ಕಂಗೊಳಿಸೋ ಈ ದೇವಿ ಬಿಳಿಯ ವಸ್ತ್ರಾಭರಣಗಳನ್ನು ತೊಟ್ಟಿರ್ತಾಳೆ. ಚತುರ್ಭುಜಗಳುಳ್ಳ ಮಹಾಗೌರಿ ಅಭಯಮುದ್ರೆ, ತ್ರಿಶೂಲ, ಡಮರುಗ, ವರಮುದ್ರೆ ಸ್ವರೂಪಿ. ನೋಡಲು ಸುಂದರರೂಪಿಯಾಗಿ ಕಾಣ್ತಾಳೆ. ಮಹಾಗೌರಿ ಶುಂಭ-ನಿಶುಂಭರ ವಧೆ ಮಾಡಿ, ದೇವಾನುದೇವತೆಗಳನ್ನು ರಕ್ಷಿಸ್ತಾಳೆ. ನವರಾತ್ರಿಯ ಎಂಟನೇ ದಿನ ಅಂದ್ರೆ ದುರ್ಗಾಷ್ಟಮಿಯಂದು ಮಹಾಗೌರಿ ಪೂಜೆಗೆ ವಿಶೇಷ ಮಹತ್ವ ಇದೆ. ಈ ದಿನ ಮಹಾಗೌರಿಯನ್ನು ಮಂತ್ರಸಹಿತವಾಗಿ ಪೂಜಿಸಿದ್ರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ ಅನ್ನೋ ನಂಬಿಕೆ ಧರ್ಮಶಾಸ್ತ್ರದಲ್ಲಿದೆ.

ಮಹಾಗೌರಿ ಮಂತ್ರ ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರ ಧರಾ ಶುಚಿಃ ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ ದುರ್ಗಾಷ್ಟಮಿಯ ದಿನ ಮಹಾಗೌರಿಯನ್ನು ಉಪಾಸನೆ ಮಾಡುವ ಪರಂಪರೆ ಅನಾದಿಕಾಲದಿಂದಲೂ ಇದೆ. ಈ ದೇವಿಯ ಆರಾಧನೆ, ಕೃಪೆಯಿಂದ ಲೌಕಿಕ ಮತ್ತು ಅಲೌಕಿಕ ಸುಖ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆ.

ಮಹಾಗೌರಿ ಪೂಜೆ ಮಾಡುವುದು ಹೇಗೆ? ದುರ್ಗಾಷ್ಟಮಿಯ ದಿನದಂದು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಮರದ ಹಲಗೆಯ ಮೇಲೆ ಮಹಾಗೌರಿ ದೇವಿಯ ಪ್ರತಿಮೆ ಅಥವಾ ಫೋಟೋವನ್ನು ಸ್ಥಾಪಿಸಿ ಗಂಗಾಜಲವನ್ನು ಸಿಂಪಡಿಸ ಬೇಕು. ಬಳಿಕ ಬೆಳ್ಳಿ, ತಾಮ್ರ ಅಥವಾ ಮಣ್ಣಿನ ಹೂಜಿಯಲ್ಲಿ ನೀರು ತುಂಬಿದ ಬಳಿಕ, ಅದರ ಮೇಲೆ ತೆಂಗಿನಕಾಯಿಯನ್ನು ಇರಿಸಿ ಮತ್ತು ಕಲಶವನ್ನು ಸ್ಥಾಪಿಸ ಬೇಕು. ಇದಾದ ನಂತರ ಗಣೇಶ, ವರುಣ, ನವಗ್ರಹ, ಷೋಡಶ ಮಾತೃಕಾ (16 ದೇವತೆಗಳು), ಸಪ್ತ ಘೃತ ಮಾತೃಕಾ ಇತ್ಯಾದಿಗಳನ್ನು ಮರದ ಹಲಗೆಯ ಮೇಲೆ ಇರಿಸಿ. ಮಹಾಷ್ಟಮಿ ಅಥವಾ ದುರ್ಗಾಷ್ಟಮಿ ವ್ರತದ ಪ್ರತಿಜ್ಞೆಯನ್ನು ತೆಗೆದುಕೊಳ್ಳ ಬೇಕು. ಮತ್ತು ಮಂತ್ರಗಳನ್ನು ಪಠಿಸುವಾಗ, ಮಹಾಗೌರಿ ಸೇರಿದಂತೆ ಎಲ್ಲಾ ದೇವತೆಗಳನ್ನು ಧ್ಯಾನಿಸ ಬೇಕು.

ಮಹಾಗೌರಿಗೆ ಆಸನ, ಅಧ್ಯಾ, ಆಚಮನ, ಸ್ನಾನ, ಬಟ್ಟೆ, ಅದೃಷ್ಟ ಸೂತ್ರ, ಶ್ರೀಗಂಧ, ಕುಂಕುಮ, ಅರಿಶಿನ, ಸಿಂಧೂರ, ದುರ್ವಾ, ಆಭರಣ, ಹೂಗಳು, ಧೂಪ-ದೀಪ, ಹಣ್ಣು, ಪಾನ್, ದಕ್ಷಿಣೆ, ಆರತಿ, ಮಂತ್ರ ಇತ್ಯಾದಿಗಳ ನಂತರ ಪ್ರಸಾದವನ್ನು ವಿತರಿಸ ಬೇಕು. ಮಹಾ ಅಷ್ಟಮಿಯ ಪೂಜೆಯ ನಂತರ ಹೆಣ್ಣು ಮಕ್ಕಳಿಗೆ ಆಹಾರ ನೀಡುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಇದನ್ನು ಮಾಡುವುದರಿಂದ, ಮಹಾಗೌರಿಯು ಶುಭ ಫಲಿತಾಂಶಗಳನ್ನು ನೀಡುತ್ತಾಳೆ ಎಂದು ಹೇಳಲಾಗುತ್ತದೆ.

ಮಹಾಗೌರಿ ಪೂಜೆಯ ಫಲಗಳು * ಈಕೆ ಶೀಘ್ರ ಫಲದಾಯಿನಿ * ದುಃಖ ದೂರ ಮಾಡ್ತಾಳೆ * ಭಕ್ತರಲ್ಲಿರುವ ಕೆಟ್ಟ ಬುದ್ಧಿಯನ್ನು ಹೋಗಲಾಡಿಸ್ತಾಳೆ * ಪೂರ್ವಜನ್ಮದ ಪಾಪ ಪರಿಹರಿಸ್ತಾಳೆ * ಭಕ್ತರ ಕಷ್ಟ ದೂರ ಮಾಡ್ತಾಳೆ * ಇವಳ ಕೃಪೆಯಿಂದ ಸಾಧ್ಯವಿಲ್ಲದ ಕಾರ್ಯಗಳು ನೆರವೇರುತ್ತವೆ * ದುಷ್ಟಶಕ್ತಿಗಳನ್ನು ನಾಶಮಾಡ್ತಾಳೆ ದುರ್ಗಾಷ್ಟಮಿ ಜಗಜ್ಜನನಿಯಾದ ಮಹಾಗೌರಿಗೆ ವಿಶೇಷ ದಿನ. ಇಂದು ಮಹಾಗೌರಿಯ ಧ್ಯಾನ, ಸ್ಮರಣೆ, ಪೂಜೆ-ಆರಾಧನೆ ಮಾಡುವುದು ಅತ್ಯಂತ ಶ್ರೇಯಸ್ಕರ. ಇವಳ ಮಹಿಮೆಯನ್ನು ಪುರಾಣಗಳಲ್ಲಿ ಹಾಡಿ ಹೊಗಳಿದ್ದಾರೆ. ಯಾರು ಮಹಾಗೌರಿಯನ್ನು ಪೂಜಿಸ್ತಾರೋ ಅವರು ಸಕಲ ಸುಖ-ಸಂಪತ್ತನ್ನು ಪಡೆಯಬಹುದು ಎಂಬ ಉಲ್ಲೇಖ ಪುರಾಣಗಳಲ್ಲಿ ಇದೆ.

ಇದನ್ನೂ ಓದಿ: ನವರಾತ್ರಿ ಸಂಭ್ರಮ: ಕೋಲಾರದ ಬಂಗಾರಪೇಟೆಯಲ್ಲಿ ಗಮನ ಸೆಳೆಯುತ್ತಿದೆ ಗುಜರಾತಿ ಸಮುದಾಯದ ದಾಂಡಿಯಾ ನೃತ್ಯ ವೈಭವ

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ