AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಪಂಚಾಯತನ ಪೂಜೆ ಎಂದರೇನು? ಏನಿದರ ವಿಶೇಷತೆ?

ಪಂಚಾಯತನ ಪೂಜೆಯು ಹಿಂದೂ ಧರ್ಮದಲ್ಲಿ ವಿಶೇಷವಾದ ಐದು ದೇವತೆಗಳ (ಶಿವ, ವಿಷ್ಣು, ದುರ್ಗಾ, ಗಣೇಶ, ಸೂರ್ಯ) ಏಕಕಾಲಿಕ ಆರಾಧನೆಯಾಗಿದೆ. ಶಂಕರಾಚಾರ್ಯರ ಪ್ರಾರಂಭಿಕ ವಿಧಾನವಾಗಿರುವ ಇದು ಪಂಚಭೂತಗಳನ್ನು ಪ್ರತಿನಿಧಿಸುತ್ತದೆ. ಪಂಚೋಪಚಾರ ಅಥವಾ ಶೋಡಶೋಪಚಾರದಿಂದ ನಡೆಸಬಹುದು. ನಿತ್ಯ ಪೂಜೆಯಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ಡಾ. ಬಸವರಾಜ್ ಗುರೂಜಿ ಮಾಹಿತಿ ನೀಡಿದ್ದಾರೆ.

Daily Devotional: ಪಂಚಾಯತನ ಪೂಜೆ ಎಂದರೇನು? ಏನಿದರ ವಿಶೇಷತೆ?
ಪಂಚಾಯತನ ಪೂಜೆ
ಅಕ್ಷತಾ ವರ್ಕಾಡಿ
|

Updated on: Sep 16, 2025 | 7:18 AM

Share

ಹಿಂದೂ ಧರ್ಮದಲ್ಲಿ ಅನೇಕ ರೀತಿಯ ಪೂಜಾ ವಿಧಾನಗಳಿವೆ. ಅವುಗಳಲ್ಲಿ ಪಂಚಾಯತನ ಪೂಜೆ ವಿಶೇಷವಾದದ್ದು. ಈ ಪೂಜೆಯ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಪಂಚಾಯತನ ಪೂಜೆಯು ಏಕಕಾಲದಲ್ಲಿ ಐದು ದೇವತೆಗಳಾದ ಶಿವ, ವಿಷ್ಣು, ದುರ್ಗಾ ದೇವಿ, ಗಣೇಶ ಮತ್ತು ಸೂರ್ಯ ದೇವರ ಆರಾಧನೆಯನ್ನು ಒಳಗೊಂಡಿದೆ. ಶಂಕರಾಚಾರ್ಯರು ಪ್ರಾರಂಭಿಸಿದ ಈ ಪೂಜಾ ವಿಧಾನವು ಪಂಚಭೂತಗಳಾದ ಭೂಮಿ, ಅಗ್ನಿ, ಆಕಾಶ, ವಾಯು ಮತ್ತು ಜಲದ ಪ್ರತಿನಿಧಿಗಳಾಗಿ ಈ ಐದು ದೇವತೆಗಳನ್ನು ಪೂಜಿಸುವುದನ್ನು ಒಳಗೊಂಡಿದೆ.

ಗಣಪತಿಯನ್ನು ಜಲತತ್ವದ ಪ್ರತಿನಿಧಿಯಾಗಿ, ದುರ್ಗಾದೇವಿಯನ್ನು ಅಗ್ನಿ ತತ್ವದ ಪ್ರತಿನಿಧಿಯಾಗಿ, ಶಿವನನ್ನು ಭೂಮಿ ತತ್ವದ ಪ್ರತಿನಿಧಿಯಾಗಿ, ವಿಷ್ಣುವನ್ನು ಆಕಾಶ ತತ್ವದ ಪ್ರತಿನಿಧಿಯಾಗಿ ಮತ್ತು ಸೂರ್ಯನನ್ನು ವಾಯು ತತ್ವದ ಪ್ರತಿನಿಧಿಯಾಗಿ ಪೂಜಿಸಲಾಗುತ್ತದೆ. ಈ ಪೂಜೆಯನ್ನು ಪಂಚೋಪಚಾರ (ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ) ಅಥವಾ ಶೋಡಶೋಪಚಾರ ಪೂಜೆಯ ರೀತಿಯಲ್ಲಿ ನಡೆಸಬಹುದು. ಸ್ತೋತ್ರಗಳು, ಅಷ್ಟೋತ್ತರಗಳು ಅಥವಾ ಸಹಸ್ರನಾಮ ಪಠಣೆಯನ್ನು ಸೇರಿಸಿಕೊಳ್ಳಬಹುದು ಎಂದು ಗುರೂಜಿ ತಿಳಿಸಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಹಳೆಯದ್ದು​​​ ಬಿಸಾಕಿ ಹೊಸ ಪರ್ಸ್ ತೆಗೆದುಕೊಳ್ಳುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ

ಪಂಚಾಯತನ ಪೂಜೆಯನ್ನು ನಡೆಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ದೊರೆಯುತ್ತದೆ ಎಂದು ನಂಬಲಾಗಿದೆ. ವಾರಕ್ಕೆ ಎರಡು ಬಾರಿ ಅಥವಾ ತಿಂಗಳಿಗೆ ಐದು ಬಾರಿ ಈ ಪೂಜೆಯನ್ನು ನಡೆಸುವುದು ಶುಭಕರ ಎಂದು ಹೇಳಲಾಗುತ್ತದೆ. ಬುಧವಾರದ ದಿನ ಪಂಚಾಯತನ ಪೂಜೆ ಮಾಡುವುದು ಅತ್ಯಂತ ಶ್ರೇಷ್ಠ ಎಂದು ಕೆಲವರು ನಂಬುತ್ತಾರೆ. ಪೂಜಾ ವಿಧಾನದಲ್ಲಿ ಐದು ದೇವತೆಗಳ ವಿಗ್ರಹಗಳನ್ನು ಬಳಸುವುದು ಸಾಂಪ್ರದಾಯಿಕವಾಗಿದೆ ಆದರೆ ಮಾನಸಿಕ ಪೂಜೆಯನ್ನು ಸಹ ಮಾಡಬಹುದು. ಯಾವ ರೀತಿಯಲ್ಲಿ ಪೂಜೆಯನ್ನು ಮಾಡಿದರೂ, ಭಕ್ತಿಯಿಂದ ಮಾಡಿದ ಪೂಜೆಯೇ ಮುಖ್ಯ ಎಂಬುದನ್ನು ನೆನಪಿನಲ್ಲಿಡಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ