Daily Devotional: ಅಧಿಕ ಮಾಸದಲ್ಲಿ ಮಕ್ಕಳು ಹುಟ್ಟಿದರೆ ಶುಭನಾ? ಶಾಸ್ತ್ರಗಳು ಹೇಳುವುದೇನು?

ಪ್ರಸ್ತುತ ಅಧಿಕ ಮಾಸ ನಡೆಯುತ್ತಿದೆ. ಅಧಿಕ ಮಾಸದಲ್ಲಿ ಮಕ್ಕಳು ಜನಿಸಬಾರದೇ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿದೆ. ಈ ಗೊಂದಲಕ್ಕೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭವಿಷ್ಯ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

Daily Devotional: ಅಧಿಕ ಮಾಸದಲ್ಲಿ ಮಕ್ಕಳು ಹುಟ್ಟಿದರೆ ಶುಭನಾ? ಶಾಸ್ತ್ರಗಳು ಹೇಳುವುದೇನು?
ಅಧಿಕ ಮಾಸ
Image Credit source: Pinterest

Updated on: Jun 10, 2026 | 7:19 AM

ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ಅಧಿಕ ಮಾಸದಲ್ಲಿ ಜನಿಸಿದ ಮಕ್ಕಳ ಭವಿಷ್ಯದ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಅಧಿಕ ಮಾಸವು ಪುರುಷೋತ್ತಮ ಮಾಸವೆಂದು ಪರಿಗಣಿತವಾಗಿದ್ದು, ವಿಷ್ಣುವಿಗೆ ಪ್ರಿಯವಾದ ಮಾಸವಾಗಿದೆ. “ಅಧಿಕಸ್ಯ ಅಧಿಕ ಫಲಂ” ಎಂಬ ಮಾತಿನಂತೆ, ಈ ಮಾಸದಲ್ಲಿ ಮಾಡುವ ಜಪ, ತಪ, ದಾನಗಳಿಗೆ ವಿಶೇಷ ಫಲ ಸಿಗುತ್ತದೆ. ಇತ್ತೀಚೆಗೆ ಅನೇಕರು ಅಧಿಕ ಮಾಸದಲ್ಲಿ ಮಕ್ಕಳ ಜನನದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ನಿರ್ದಿಷ್ಟವಾಗಿ, ಅಧಿಕ ಮಾಸದಲ್ಲಿ ಸೋಮವಾರ, ಬುಧವಾರ ಮತ್ತು ಶನಿವಾರದಂದು ಜನಿಸಿದ ಮಕ್ಕಳು ಹೆಚ್ಚು ಚತುರತೆ, ಚಾಕಚಕ್ಯತೆ ಮತ್ತು ವಿಷಯಗಳನ್ನು ಬೇಗ ಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರದಂದು ಜನಿಸಿದ ಮಕ್ಕಳು ತಾಳ್ಮೆ ಮತ್ತು ಸಹಿಷ್ಣುತೆಗೆ ಹೆಸರಾಗಿರುತ್ತಾರೆ. ಆಮೆ ಮತ್ತು ನರಿಯ ಕಥೆಯಲ್ಲಿ ಆಮೆಯು ಗೆಲ್ಲುವಂತೆ, ಈ ಮಕ್ಕಳು ತಮ್ಮ ತಾಳ್ಮೆಯಿಂದ ಯಶಸ್ಸನ್ನು ಸಾಧಿಸುತ್ತಾರೆ.

ಅಧಿಕ ಮಾಸದಲ್ಲಿ ಜನಿಸಿದ ಮಕ್ಕಳು ಹೆಚ್ಚಿನ ಚುರುಕುತನ ಹೊಂದಿರುತ್ತಾರೆ. ಅವರು ವೈದ್ಯರು, ಸಾಫ್ಟ್‌ವೇರ್ ಇಂಜಿನಿಯರ್‌ಗಳು, ಹಾಗೆಯೇ ಐಎಎಸ್, ಐಪಿಎಸ್‌ನಂತಹ ಉನ್ನತ ಮಟ್ಟದ ಉದ್ಯೋಗಗಳನ್ನು ಪಡೆಯುವ ಯೋಗವನ್ನು ಹೊಂದಿರುತ್ತಾರೆ. ಇವರಿಗೆ ಆಡಳಿತದ ಬಗ್ಗೆ ವಿಶೇಷ ಒಲವಿರುತ್ತದೆ. ಅವರು ಎಂದಿಗೂ ಇನ್ನೊಬ್ಬರ ಪರಾವಲಂಬಿಗಳಾಗಿರುವುದಿಲ್ಲ, ಬದಲಾಗಿ ಸ್ವಾಲಂಬಿಗಳಾಗಿರುತ್ತಾರೆ. ಸ್ವಂತ ಸಾಮರ್ಥ್ಯ ಮತ್ತು ನಿರ್ವಹಣೆಯ ಶಕ್ತಿ ಇವರಲ್ಲಿ ಅತಿ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಆದ್ದರಿಂದ, ಅಧಿಕ ಮಾಸದಲ್ಲಿ ಜನಿಸಿದ ಮಕ್ಕಳಿಗೆ ಯಾವುದೇ ದೋಷವಿಲ್ಲ. ಯಾವುದೇ ರೀತಿಯ ಪರಿಹಾರಗಳು, ಹೋಮಗಳು ಅಗತ್ಯವಿಲ್ಲ. ಈ ಮಕ್ಕಳು ವಿಶೇಷ ಪ್ರತಿಭೆ ಮತ್ತು ಅದೃಷ್ಟವನ್ನು ಹೊಂದಿರುತ್ತಾರೆ. ಭಗವಂತನ ಕೃಪೆ ಮತ್ತು ಆಶೀರ್ವಾದದೊಂದಿಗೆ, ಈ ಮಕ್ಕಳು ಕೀರ್ತಿ ಮತ್ತು ಪ್ರತಿಷ್ಠೆಗೆ ಭಾಜನರಾಗುತ್ತಾರೆ. ಸ್ಥಿತಿಕಾರಕನಾಗಿರುವ ವಿಷ್ಣುವಿನ ಅನುಗ್ರಹದಿಂದ, ಇವರು ಅತಿ ಹೆಚ್ಚು ಚುರುಕುತನ ಮತ್ತು ಅದ್ಭುತವಾದ ನಿರ್ವಹಣಾ ಶಕ್ತಿಯನ್ನು ಹೊಂದಿರುತ್ತಾರೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:19 am, Wed, 10 June 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us