AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Navami 2022: ರಾಮ ನವಮಿ ಆಚರಣೆ ಹೇಗಿರಬೇಕು? ಇಲ್ಲಿದೆ ಮಾಹಿತಿ

Ram Navami: ರಾಮ ನವಮಿ ಏಪ್ರಿಲ್​ 10 ರಂದು 1:32 ಕ್ಕೆ ಪ್ರಾರಂಭವಾಗಿ ಏಪ್ರಿಲ್ 11 ರಂದು 3:15 ಕ್ಕೆ ರಾಮ ನವಮಿ ಮುಕ್ತಾಯಗೊಳ್ಳಲಿದೆ. ರಾಮನವಮಿ ಆಚರಣೆ ಹೇಗಿರಬೇಕು? ಇಲ್ಲಿದೆ ಮಾಹಿತಿ.

Ram Navami 2022: ರಾಮ ನವಮಿ ಆಚರಣೆ ಹೇಗಿರಬೇಕು? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
TV9 Web
| Updated By: shivaprasad.hs|

Updated on: Apr 09, 2022 | 11:34 AM

Share

ದುರ್ಗಾ ದೇವಿಯ ಭಕ್ತಿ ಚೈತ್ರ ನವರಾತ್ರಿಯನ್ನು ಈ ಬಾರಿ ಏಪ್ರಿಲ್ 2ರಿಂದ- ಏಪ್ರಿಲ್ 11ರವರೆಗೆ ಆಚರಿಸಲಾಗುತ್ತದೆ. ಒಂಬತ್ತು ದಿನಗಳ ಉಪವಾಸ ಮತ್ತು ಭಕ್ತಿ ಚೈತ್ರ ನವರಾತ್ರಿಯು ಮುಕ್ತಾಯಗೊಳ್ಳುವ 9ನೇ ದಿನವನ್ನು ರಾಮ ನವಮಿ (Sri Rama Navami) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನವರಾತ್ರಿ ವರ್ಷಕ್ಕೆ ಎರಡು ಬಾರಿ ಆಚರಿಸಲಾಗುತ್ತದೆ. ಇದು ಚೈತ್ರ ನವರಾತ್ರಿಯಾದರೆ, ಅಕ್ಟೋಬರ್- ನವೆಂಬರ್ ಸಂದರ್ಭದಲ್ಲಿ ಶಾರದೀಯ ನವರಾತ್ರಿಯನ್ನು ಆಚರಿಸಲಾಗುತ್ತದೆ. ಶಾರದೀಯ ನವರಾಥ್ರಿಯು ವಿಜಯದಶಮಿಯೊಂದಿಗೆ ಮುಕ್ತಾಯವಾದರೆ, ಚೈತ್ರ ನವರಾತ್ರಿಯು ರಾಮ ನವಮಿಯೊಂದಿಗೆ ಮುಕ್ತಾಯವಾಗುತ್ತದೆ. ನಮ್ಮಲ್ಲಿ ಚೈತ್ರ ನವರಾತ್ರಿಗಿಂತ ರಾಮ ನವಮಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಏಪ್ರಿಲ್​ 10 ರಂದು 1:32 ಕ್ಕೆ ಪ್ರಾರಂಭವಾಗಿ ಏಪ್ರಿಲ್ 11 ರಂದು 3:15 ಕ್ಕೆ ರಾಮ ನವಮಿ ಮುಕ್ತಾಯಗೊಳ್ಳಲಿದೆ. ರಾಮ ನವಮಿ ಆಚರಣೆ ಹೇಗಿರಬೇಕು? ಇಲ್ಲಿದೆ ಮಾಹಿತಿ.

ರಾಮನವಮಿ ಆಚರಣೆ ಹೀಗಿರಲಿ:

  1. ದಶಮಿಯವರೆಗೆ ಎಲ್ಲಾ ನವರಾತ್ರಿ ದಿನಗಳಲ್ಲಿ ಅಖಂಡ ದೀಪವನ್ನು ಬೆಳಗಿಸಿ. ಇದು ನಿಮ್ಮಿಂದ ಸಾಧ್ಯವಾಗದಿದ್ದರೆ, ಹಬ್ಬ ಮುಗಿಯುವವರೆಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಆರತಿಯನ್ನು ನಡೆಸಬಹುದು.
  2. ಎಲ್ಲಾ ನವರಾತ್ರಿ ದಿನಗಳಲ್ಲಿ ದುರ್ಗಾ ಚಾಲೀಸಾ ಮತ್ತು ದುರ್ಗಾ ಸಪ್ತಶತಿ ಪಠಿಸಬಹುದು.
  3. ಉಪವಾಸ ಮಾಡುವಾಗ ದೇಹವನ್ನು ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳಬೇಕು. ಇದಕ್ಕೆ ನಿಂಬೆ ರಸ, ಎಳನೀರು, ಮಜ್ಜಿಗೆ ಮತ್ತು ಗ್ರೀನ್ ಟೀ ಉತ್ತಮ ಆಯ್ಕೆ.
  4. ನೀವು ಕೆಲಸ ಮಾಡುತ್ತಿದ್ದರೆ, ಬಾದಾಮಿ, ವಾಲ್‌ನಟ್ಸ್ ಮತ್ತು ಪಿಸ್ತಾಗಳಂತಹ ಡ್ರೈಫ್ರೂಟ್ಸ್ ತಿನ್ನಬಹುದು.
  5. ತಪ್ಪಾದ ನಡೆನುಡಿಗಳನ್ನು ಮಾಡದೇ ಆದಷ್ಟು ಶ್ರದ್ಧೆಯಿಂದ, ಭಕ್ತಿಯಿಂದ ನಡೆದುಕೊಳ್ಳಿ.

ಆಚರಣೆಯಲ್ಲಿ ಹೀಗೆ ಮಾಡಬೇಡಿ:

  1. ತಾಮಸ ಆಹಾರ ಮತ್ತು ದುಶ್ಚಟಗಳಿಂದ ದೂರವಿರಿ.
  2. ಈರುಳ್ಳಿ ಮತ್ತು ಬೆಳ್ಳುಳ್ಳಿ ಹಬ್ಬದ ಸಂದರ್ಭಗಳಲ್ಲಿ ತಿನ್ನದೇ ಇರುವುದು ದೀರ್ಘಕಾಲದಿಂದ ನಡೆದುಕೊಂಡ ಬಂದ ನಂಬಿಕೆ. ಅದನ್ನು ಅನುಸರಿಸಲು ಯತ್ನಿಸಿ.
  3. ಸಾಮಾನ್ಯವಾಗಿ ಹಬ್ಬದ ಸಂದರ್ಭಗಳಲ್ಲಿ ಕೂದಲು ಕತ್ತರಿಸುವುದು, ಶೇವ್ ಮಾಡುವುದು, ಟ್ರಿಮ್ ಮಾಡುವುದನ್ನು ಮಾಡುವುದಿಲ್ಲ. ಈ ನವರಾತ್ರಿಯಲ್ಲೂ ಇದನ್ನು ಅನುಸರಿಸಿ.
  4. ಸಾತ್ವಿಕ ಜೀವನಶೈಲಿಯನ್ನು ರೂಢಿಸಿಕೊಳ್ಳಿ. ಇತರರ ಟೀಕೆ, ನಿಂದನೆ ಮೊದಲಾದವುಗಳಿಂದ ದೂರವಿದ್ದು, ನಿಮ್ಮ ಪೂಜೆಯಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಿ.

(ವಿ.ಸೂ.: ಸಾಮಾನ್ಯ ನಂಬಿಕೆಗಳು ಹಾಗೂ ರೂಡಿಯಲ್ಲಿರುವ ವಿಚಾರಗಳನ್ನು ಆಧರಿಸಿ ಈ ಮಾಹಿತಿ ನೀಡಲಾಗಿದೆ)

ಇದನ್ನೂ ಓದಿ: Ram Navami 2022: ಶ್ರೀ ರಾಮ ನವಮಿಯ ಆಧ್ಯಾತ್ಮಿಕ ಮಹತ್ವ, ಪೂಜಾ ಮುಹೂರ್ತ, ಆಯೋಧ್ಯೆಯ ಅರ್ಥವೂ ವಿವರಿಸಲಾಗಿದೆ

Chanakya Niti: ನಾವು ಬಯಸಿದರೆ ನಾಯಿಯಿಂದಲೂ ಬಹಳಷ್ಟು ಕಲಿಯಬಹುದು, ನಾಯಿಯ 4 ವಿಶೇಷ ಗುಣಗಳಿವು- ಚಾಣಕ್ಯ ನೀತಿ

ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು