AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shravan Maas 2023: ಅಧಿಕ ಶ್ರಾವಣ ಮಾಸದಲ್ಲಿ ಸೋಮವಾರದ ವ್ರತಾಚರಣೆಯ ಫಲಗಳೇನು? ಯಾವ ಮಂತ್ರವನ್ನು ಪಠಿಸಬೇಕು?

ಅಧಿಕ ಶ್ರಾವಣ ಮಾಸದ ಸೋಮವಾರ ಶಿವನಿಗೆ ಅರ್ಪಿತವಾಗಿರುವುದರಿಂದ ವಿಶೇಷ ಮಹತ್ವವನ್ನು ಹೊಂದಿದೆ. ಭಕ್ತರು ಈ ದಿನ ಉಪವಾಸ ಮಾಡುತ್ತಾರೆ ಮತ್ತು ತಮ್ಮ ತಮ್ಮ ಆಸೆಗಳನ್ನು ಈಡೇರಿಸುವಂತೆ ಆಶೀರ್ವಾದ ಕೋರಿ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಾರೆ.

Shravan Maas 2023: ಅಧಿಕ ಶ್ರಾವಣ ಮಾಸದಲ್ಲಿ ಸೋಮವಾರದ ವ್ರತಾಚರಣೆಯ ಫಲಗಳೇನು? ಯಾವ ಮಂತ್ರವನ್ನು ಪಠಿಸಬೇಕು?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Aug 05, 2023 | 4:17 PM

Share

ಈ ಬಾರಿಯ ಶ್ರಾವಣ ತುಂಬಾ ವಿಶೇಷ. ಏಕೆಂದರೆ ಅಧಿಕ ಶ್ರಾವಣ ಬಂದಿದೆ. ಅದರಲ್ಲಿಯೂ ವ್ರತಾಚರಣೆ ಮಾಡುವವರಿಗೆ ಈ ದಿನ ತುಂಬಾ ಉತ್ತಮ. ಪೂಜೆ ಪುನಸ್ಕಾರ ಮಾಡಿ, ಭಕ್ತಿಯಿಂದ ದೇವರನ್ನು ಬೇಡುವವರು ಹಲವಾರು ವ್ರತಗಳನ್ನು ಈ ಮಾಸದಲ್ಲಿ ಮಾಡಬಹುದು. ಇನ್ನು ಅಧಿಕ ಶ್ರಾವಣ ಮಾಸದ ಸೋಮವಾರ ಶಿವನಿಗೆ ಅರ್ಪಿತವಾಗಿರುವುದರಿಂದ ವಿಶೇಷ ಮಹತ್ವವನ್ನು ಹೊಂದಿದೆ. ಭಕ್ತರು ಈ ದಿನ ಉಪವಾಸ ಮಾಡುತ್ತಾರೆ ಮತ್ತು ತಮ್ಮ ತಮ್ಮ ಆಸೆಗಳನ್ನು ಈಡೇರಿಸುವಂತೆ ಆಶೀರ್ವಾದ ಕೋರಿ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಾರೆ. ಧಾರ್ಮಿಕ ಗ್ರಂಥಗಳಲ್ಲಿಯೂ ಶ್ರಾವಣ ಮಾಸವನ್ನು ಅತ್ಯುತ್ತಮ ಮಾಸವೆಂದು ಪರಿಗಣಿಸಲಾಗಿದ್ದು ಶಿವನ ನೆಚ್ಚಿನ ಮಾಸವೆಂದೇ ಪ್ರಖ್ಯಾತಗೊಂಡಿದೆ.

ಶ್ರಾವಣ ಮಾಸದಲ್ಲಿ ಸೋಮವಾರ ವ್ರತಾಚರಣೆಯ ಫಲಗಳೇನು?

ಶ್ರಾವಣ ಮಾಸದಲ್ಲಿ ಬರುವ ಸೋಮವಾರಗಳಲ್ಲಿ ವ್ರತ ಮಾಡುವುದರಿಂದ ಶಿವನ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ಸೋಮವಾರವೂ ಚಂದ್ರನ ದಿನವಾಗಿದ್ದು, ಆ ದಿನ ಉಪವಾಸ ವ್ರತ ಮಾಡುವುದರಿಂದ ನಿಮ್ಮ ಜಾತಕದಲ್ಲಿ ದೋಷಗಳಿದ್ದಲ್ಲಿ ಅದನ್ನು ನಿವಾರಣೆ ಮಾಡಿ ಚಂದ್ರನ ಸ್ಥಾನವನ್ನು ಬಲಪಡಿಸುತ್ತದೆ. ಶಿವ ಪುರಾಣದ ಪ್ರಕಾರ ಶ್ರಾವಣ ಸೋಮವಾರದಂದು ಉಪವಾಸ ಮಾಡುವುದರಿಂದ ಜೀವನದಲ್ಲಿ ಬಂದ ಕಷ್ಟ ದೂರವಾಗಿ ಯಾವ ಕೊರತೆಯೂ ಆಗುವುದಿಲ್ಲ. ಜೊತೆಗೆ ನಿಮ್ಮ ಭಕ್ತಿಗೆ ಶಿವನು ಅಸ್ತು ಎಂದು ನಿಮ್ಮ ತೊಂದರೆಗಳನ್ನು ನಿವಾರಿಸುತ್ತಾನೆ ಎಂಬ ನಂಬಿಕೆ ಇದೆ. ಹಿಂದೆ ಪಾರ್ವತಿ ದೇವಿ ಶಿವನನ್ನು ವರಿಸಲು ಶ್ರಾವಣ ಮಾಸದಲ್ಲಿ ಕಠಿಣ ಉಪವಾಸ ಮಾಡಿದಳು. ಆಗ ಶಿವ, ಪಾರ್ವತಿಯ ತಪಸ್ಸನ್ನು ಮೆಚ್ಚಿ ಆಕೆಯನ್ನು ಮದುವೆಯಾದ ಎಂಬ ಪೌರಾಣಿಕ ಕತೆಯಿದೆ. ಹಾಗಾಗಿ ಮದುವೆಯಾದ ಮಹಿಳೆಯರು ಈ ವ್ರತವನ್ನು ಭಕ್ತಿ ಶ್ರದ್ದೆಯಿಂದ ಆಚರಣೆ ಮಾಡುತ್ತಾರೆ. ಅದರಲ್ಲಿಯೂ ಈ ಬಾರಿ ಹಲವು ವರ್ಷಗಳ ಬಳಿಕ ಅಧಿಕ ಶ್ರಾವಣ ಮಾಸ ಬಂದಿರುವುದು ವಿಶೇಷವಾಗಿದೆ.

ಇದನ್ನೂ ಓದಿ: ಅಧಿಕ ಮಾಸದಲ್ಲಿ ಯಾವ ದಾನ ಮಾಡಿದರೆ ಶ್ರೇಷ್ಠ ಫಲ? ಇಲ್ಲಿದೆ ವ್ರತಾಚರಣೆಯ ನಿಯಮಗಳು

ಶ್ರಾವಣ ಸೋಮವಾರದಂದು ಯಾವ ಮಂತ್ರಗಳನ್ನು ಪಠಿಸಬೇಕು?

1.ಪಂಚಾಕ್ಷರಿ ಮಂತ್ರ – ಓಂ ನಮಃ ಶಿವಾಯಃ

2. ಮಹಾ ಮೃತ್ಯುಂಜಯ ಮಂತ್ರ – ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ| ಊರ್ವಾರುಕಂವಾ ಬಂಧನಾ ಮೃತ್ಯೋರ್-ಮುಕ್ಷೀಯ ಮಾಮೃತಾತ್||

3. ರುದ್ರ ಮಂತ್ರ – ಓಂ ನಮೋ ಭಗವತೇ ರುದ್ರಾಯ

4. ಶಿವ ಗಾಯತ್ರಿ ಮಂತ್ರ – ಓಂ ಮಹಾದೇವಾಯ ವಿದ್ಮಹೇ ರುದ್ರಮೂರ್ತಯೇ ಧೀಮಹಿ ತನ್ನಃ ಶಿವಃ ಪ್ರಚೋದಯಾತ್

ಈ ವ್ರತವನ್ನು ಯಾವ ರೀತಿಯಲ್ಲಿ ಆಚರಣೆ ಮಾಡಬೇಕು?

ಮಾಂಸಾಹಾರ ಸೇವನೆ ಮಾಡದೆಯೇ ಪ್ರತಿ ಶ್ರಾವಣ ಸೋಮವಾರದಂದು ಉಪವಾಸವಿದ್ದು ಶಿವನಿಗೆ ಅಭಿಷೇಕ ಮಾಡಬೇಕು. ಅಥವಾ ಶಿವನ ದೇವಸ್ಥಾನಗಳಿಗೆ ಹೋಗಿ ದರ್ಶನ ಮಾಡಿ ಬರಬೇಕು. ಭಕ್ತರು ಬಿಲ್ವಪತ್ರೆ ಎಲೆಗಳನ್ನು ಶಿವನಿಗೆ ಅರ್ಪಿಸಿ ಶಿವನ ಮಂತ್ರಗಳ ಪಠಣೆ ಮಾಡುವುದರಿಂದ ಅಧಿಕ ಫಲ ಲಭ್ಯವಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ